ಸ್ನೇಹಿತ್ ಬಿಗ್ ಬಾಸ್ ಜರ್ನಿ ಇಂದಿಗೆ ಮುಕ್ತಾಯ, ಔಟ್ ಆಗಲು ಇಲ್ಲಿವೆ ಕಾರಣ

snehith out

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (BigBoss season 10) ನ ಭಾನುವಾರದ ಸಂಚಿಕೆಯು ತುಂಬಾ ಕುತೂಹಲಕಾರಿಯಾಗಿದೆ. ಈ ವಾರ ಮನೆಯಿಂದ ಯಾರು ಹೊರ ಹೋಗುತ್ತಾರೆ ಎಂಬುದನ್ನು ಎಲ್ಲರೂ ಕಾತುರದಿಂದ ತಿಳಿದುಕೊಳ್ಳಲು ಕಾಯುತ್ತಿರುತ್ತಾರೆ. ಭಾನುವಾರದ ಸಂಚಿಕೆಯಲ್ಲಿ ಏನೆಲ್ಲ ನಡೆಯಿತು ಹಾಗೂ ಮನೆಯಿಂದ ಹೊರಗಡೆ ಹೋದವರು ಯಾರು ಎಂಬುದನ್ನು ತಿಳಿದುಕೊಳ್ಳಲು ಈ ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈ ವಾರ ಮನೆಯಿಂದ ಹೋದವರು ಇವರೇ ನೋಡಿ :

bigboss namrata and snehith

ನಿನ್ನ ನಡೆದ ಸಂಚಿಕೆಯಲ್ಲಿ, ರಾಕ್ಷಸರು ಹಾಗೂ ಗಂಧರ್ವರ ಆಟದಲ್ಲಿ ಕಣ್ಣಿಗೆ ಸೋಪಿನ ಪುಡಿ ಬಿದ್ದು ಆಸ್ಪತ್ರೆಗೆ ತೆರಳಿದ್ದ ಸಂಗೀತ ಹಾಗೂ ಪ್ರತಾಪ್ ಅವರು ಮನೆಗೆ ವಾಪಸ್ ಆದರೂ, ಅವರನ್ನು ಕಿಚ್ಚ ಸುದೀಪ್ ಸೇವ್ ಮಾಡಿದ್ದಾರೆ. ಈ ದಿನದ ಸಂಚಿಕೆಯಲ್ಲಿ ಮೊದಲಿಗೆ ತನಿಷಾ ಅವರು ಸೇಫ್ ಆಗಿದ್ದಾರೆ. ಮುಂದುವರೆದು ಕಾರ್ತಿಕ್ ಅವರು ನೆಕ್ಸ್ಟ್ ಸೇಫ್ ಆಗಿದ್ದಾರೆ. ಕಾರ್ತಿಕ್ ನಂತರ ಸಿರಿ ಹಾಗೂ ಪವಿಯವರು ಸೇವ್ ಆದರೂ. ನಂತರ ಅವಿನಾಶ್ ಹಾಗೂ ಸ್ನೇಹಿತ್ ಇಬ್ಬರು ಉಳಿದುಕೊಂಡರು. ಇವರಲ್ಲಿ ಯಾರು ಮನೆಯಿಂದ ಹೊರಗೆ ಹೋಗಬಹುದು ಎಂದು ಕೇಳಿದಾಗ ಅನೇಕ ಜನರು ಅವಿನಾಶ್ ಎಂದು ಹೇಳಿದರು. ಆದರೆ ಸುದೀಪ್ ಅವರು ಮನೆಯಿಂದ ಹೊರಗೆ ಬರುವ ಹೆಸರನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳುತ್ತಾ ಸ್ನೇಹಿತ್ ಅವರು ಮನೆಯಿಂದ ಹೊರಗೆ ಬರುತ್ತಾರೆ ಎಂದು ಹೇಳಿದರು.

ಸ್ನೇಹಿತ್ ಮನೆಯಿಂದ ಹೊರಗೆ:

snehith eliminated

ಬಿಗ್​ಬಾಸ್​ ಆರಂಭದಿಂದಲೂ ಅಷ್ಟೇನೂ ಮನೆಯಲ್ಲಿ ಚೆನ್ನಾಗಿ ಆಡಿಕೊಂಡು ಬಂದಿಲ್ಲ. ಪ್ರತಿವಾರವೂ, ಈ ವಾರ ಮನೆಯಿಂದ ಯಾರು ಹೋಗಬಹುದು ಎಂದು ಯೋಚಿಸಿದರೆ ಪ್ರೇಕ್ಷಕರ ಮನಸ್ಸಿನಲ್ಲಿ ಮೊದಲು ಬರುತ್ತಿದ್ದ ಹೆಸರೇ ಸ್ನೇಹಿತ್. ಮೊದಲ ಎರಡು ವಾರಗಳನ್ನು ಬಿಟ್ಟರೆ ಉಳಿದ ವಾರಗಳು ತುಂಬಾ ಡಲ್ ಆಗಿಯೇ ಆಡಿದ್ದಾರೆ. ವಾರದ ಸಂಚಿಕೆಯಲ್ಲಿಯೂ ಸುದೀಪ ಅವರು ಇದರ ಬಗ್ಗೆ ತುಂಬಾನೇ ಹೇಳಿದ್ದರು. ಅದಾದ ನಂತರ ಸ್ವಲ್ಪ ರೀ ಸ್ಟಾರ್ಟ್ ಆಗಿದ್ದಂತೂ ನಿಜ ಆದರೂ ಕೂಡ 100% ಪ್ರಯತ್ನ ಇರಲಿಲ್ಲ ಎಂದು ಹೇಳಬಹುದು. ಅಷ್ಟೇ ಅಲ್ಲದೆ ಮತ್ತೆ ಕ್ಯಾಪ್ಟನ್ ಆದಾಗ ಬಯಾಸ್ಡ್ ಆಗಿ ಆಡಿರುವುದು ಅವರೇ ಒಪ್ಪಿಕೊಂಡಿದ್ದಾರೆ. ನಮ್ರತಾಗೆ ಎಷ್ಟೇ ಇಂಟರೆಸ್ಟ್ ಇಲ್ಲ ಅಂದರು ಅವರ ಹಿಂದಿದೆಯೇ ಸುತ್ತುತ್ತಿದ್ದರು. ಮನೆಯಿಂದ ಹೊರಗೆ ಹೋಗುವಾಗ ನಮ್ರತಾ ಅವರನ್ನು ತಬ್ಬಿಕೊಂಡು ಅತ್ತಿದ್ದಾರೆ. ಇಷ್ಟೆಲ್ಲ ಗಮನಿಸಿದ ಮೇಲೆ ಸ್ನೇಹಿತ್ ಅವರು ಮನೆಯಿಂದ ಹೋಗಿದ್ದು ಸರಿ ಎನಿಸುತ್ತದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಕಾರ್ತಿಕ್ ಹಾಗೂ ವಿನಯ್ ಮತ್ತೆ ಪ್ಯಾಚ್ ಅಪ್ :

ಸುದೀಪ್ ಅವರು ನಿಮಗೆ ಮನೆಯಲ್ಲಿ ಯಾರೊಂದಿಗಾದರೂ sorry ಕೇಳಿ ಮತ್ತೆ ನಿಮ್ಮ ಬಂಧವನ್ನು ಸರಿ ಮಾಡಿಕೊಳ್ಳಬೇಕೆನಿಸಿದರೆ ಬಿಳಿ ಹೂಗಳನ್ನು ನೀಡಿ ಸರಿಪಡಿಸಿಕೊಳ್ಳಬಹುದು ಎಂದು ಹೇಳಿದರು. ಆಗ ವಿನಯವರು ಕಾರ್ತಿಕ್ಕಿಗೆ ಬಿಳಿ ಹೂವನ್ನು ನೀಡಿ ಅವರ ಸ್ನೇಹವನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಟಾಸ್ಕ್ ವಿಚಾರಕ್ಕೆ ಇವರಿಬ್ಬರ ನಡುವೆ ಅನೇಕ ಕಿತ್ತಾಟಗಳು, ಜಗಳಗಳು ಆಗುತ್ತಲೇ ಇರುತ್ತದೆ. ಆದರೂ ಇವನ್ನೆಲ್ಲವನ್ನು ಬಿಟ್ಟು ಮನೆಯಿಂದ ಹೊರಗೆ ಹೋದ ಮೇಲೆ ಕೂಡ ಸ್ನೇಹಿತರಾಗಿ ಇರುತ್ತವೆ ಎಂದು ಹೇಳಿದ್ದಾರೆ. ಕಾರ್ತಿನ್‌, ನಾನು ನೀನು ತುಂಬ ವರ್ಷಗಳಿಂದ ಫ್ರೆಂಡ್ಸ್‌. ಯಾರೋ ಮೂರನೇಯವರಿಂದ ನಮ್ಮಿಬ್ಬರ ನಡುವೆ ಮಿಸ್‌ ಅಂಡರ್‌ಸ್ಟ್ಯಾಂಡಿಂಗ್‌ ಆಯ್ತು. ಇದೆಲ್ಲ ಆದಮೇಲೇ ನೀನು ನನ್ನನ್ನು ಫ್ರೆಂಡ್‌ ಆಗಿ ಟ್ರೀಟ್‌ ಮಾಡುತ್ತಿಯೋ ಇಲ್ಲವೋ ಗೊತ್ತಿಲ್ಲ, ನೀನು ಯಾವತ್ತಿದ್ದರೂ ನನ್ನ ಫ್ರೆಂಡ್‌ ಎಂದು ವಿನಯಾಗಲು ಹೇಳಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download


Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!