Bigg Boss Kannada- ಉಸ್ತುವಾರಿಯಲ್ಲಿ ಮತ್ತೆ ಎಡವಟ್ಟು ಮಾಡಿಕೊಂಡ್ರಾ ಸ್ನೇಹಿತ್.?

snehit vinay

ಕನ್ನಡದ ಅತಿ ದೊಡ್ಡ ಶೋ ಬಿಗ್ ಬಾಸ್ ಸೀಸನ್ 10 (Bigboss season 10) ನಲ್ಲಿ ಸ್ನೇಹಿತ ಅವರು ಎಲ್ಲರ ಗುರಿಯಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಸ್ನೇಹಿತ್(snehith) ಅವರನ್ನು ವಿನಯವರ ಚೇಲಾ ಎಂದು ಹೇಳುತ್ತಿದ್ದರು. ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿ ಸ್ವಲ್ಪ ಮಟ್ಟಿಗೆ ಸ್ನೇಹಿತರು ತನ್ನ ತನವನ್ನು ಮೆರೆದರು. ಆದರೆ ಸುದೀಪ್ ಅವರು ಸ್ನೇಹಿತ ಅವರನ್ನು ಉಳಿಸಿದ ನಂತರ ಈ ವಾರ ಮತ್ತೆ ಸ್ನೇಹಿತ್ ಚೇಲಾ ಆಗಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ನಮ್ರತಾ ಹಾಗೂ ವಿನಯ್ ಹೇಳಿದಂತೆ ಕೇಳುವ ಸ್ನೇಹಿತ್ :

snehit namrata

ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಹಲವಾರು ಬಾರಿ ನಮ್ರತಾ ಹಾಗೂ ವಿನಯ್ ಪರವಾಗಿ ಮಾತನಾಡಿದ ಸ್ನೇಹಿತ್ ಅವರು ಗಂಧರ್ವರು ಹಾಗೂ ರಾಕ್ಷಸರ ಟಾಸ್ಕ್ ನಲ್ಲಿಯೂ ಕೂಡ ವಿನಯ್ ಹಾಗೂ ನಮ್ರತಾ ಅವರ ಪರವಾಗಿ ಆಡುತ್ತಿದ್ದಾರೆ ಎಂದು ಸಂಗೀತ, ತನಿಷಾ ಹಾಗೂ ಕಾರ್ತಿಕ್ ಮಾತನಾಡಿಕೊಳ್ಳುತ್ತಿದ್ದಾರೆ.

ಈ ವಾರ ಸ್ನೇಹಿತರಿಗೆ ವಿಶೇಷ ಅಧಿಕಾರಗಳಿವೆ. ಎರಡು ಗುಂಪುಗಳಿಗೆ ಸದಸ್ಯರನ್ನು ವಿಂಗಡಿಸುವ ಜವಾಬ್ದಾರಿ ಸ್ನೇಹಿತ ಅವರದ್ದಾಗಿತ್ತು. ಬಿಗ್ ಬಾಸ್ 2 ಗುಂಪುಗಳಿಗೂ ಸಮನಾದ ಬಲಿಷ್ಠರನ್ನು ಸೇರಿಸುವಂತೆ ಹೇಳಿದ್ದರು. ಕೊನೆಯದಾಗಿ ಮೈಕಲ್ ಹಾಗೂ ಅವಿನಾಶ್ ಉಳಿದುಕೊಂಡರು. ಮೈಕಲ್ ಅವರನ್ನು ವರ್ತೂರ್ ಸಂತೋಷ್ ಅವರ ಗುಂಪಿಗೆ ಸೇರಿಸಿದ್ದಕ್ಕಾಗಿ ಸಂಗೀತ ಅವರು ಇದು ಅನ್ಯಾಯ ಎಂದು ಸ್ನೇಹಿತ್ ಅವರ ಜೊತೆ ಜಗಳವಾಡಿದರು. ಇಲ್ಲಿಯೂ ಕೂಡ ವಿನಯ್ ಹಾಗೂ ನಮ್ರತಾ ತಂಡಕ್ಕೆ ಪರವಾಗಿ ಆಡಿದಂತೆ ಕಾಣಿಸುತ್ತಿದೆ.

ನಂತರ ಮುಂದುವರೆದು, ಗಂಧರ್ವರ ಮುಖಕ್ಕೆ ರಾಕ್ಷಸರು ನೀರನ್ನು ಎರಚಿ ಅಥವಾ ಬೇರೆ ರೀತಿಯಲ್ಲಿ ತೊಂದರೆಯನ್ನು ಕೊಟ್ಟು ಕುರ್ಚಿಯ ಮೇಲಿಂದ ಏಳಿಸುವ ಟಾಸ್ಕ್ ಇತ್ತು. ಅದರಲ್ಲಿ ವಸ್ತು ಸಂತೋಷ ಅವರು ಎದ್ದಿದ್ದಾರೆ ಎಂದು ಎಷ್ಟು ಬಾರಿ ಸಂಗೀತ ಅವರು ಹೇಳಿದರು ಕೂಡ ನಮ್ರತಾ ಅವರು ಎದ್ದಿಲ್ಲ ಎಂದು ವಾದ ಮಾಡಿದ ತಕ್ಷಣ ಸ್ನೇಹಿತ್ ಅವರು ಒಪ್ಪಿಗೆಯನ್ನು ಸೂಚಿಸಿದ್ದಾರೆ. ಇದಕ್ಕೆ ಸಂಗೀತದವರು ನಮ್ರತಾ ಅವರನ್ನು ಚೆನ್ನಾಗಿ ಇನ್ಫ್ಲುಯೆನ್ಸ್ ಮಾಡುತ್ತಿದ್ದೀರಾ ಎಂದು ಕೂಗಾಡಿದರು.

ನಾಮಿನೇಷನ್ ನಲ್ಲಿಯೂ ಕೂಡ ಅನ್ಯಾಯ ಮಾಡಿದ್ರಾ ಸ್ನೇಹಿತ್ :

snehit

ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿರುವ ಸ್ನೇಹಿತ್ ಅವರಿಗೆ, ಬಿಗ್ ಬಾಸ್ ವಿಶೇಷ ಅಧಿಕಾರವನ್ನು ನೀಡಿದ್ದರು. ಸ್ನೇಹಿತ್ ಅವರಿಗೆ ಮನೆಯವರನ್ನು ನಾಮಿನೇಟ್ ಮಾಡುವ ಅಧಿಕಾರ ಇತ್ತು. ಮನೆಯ ಎಲ್ಲಾ ಸದಸ್ಯರು ಸ್ನೇಹಿತ್ ಅವರನ್ನು ಕನ್ವಿನ್ಸ್ ಮಾಡಬೇಕಾಗಿತ್ತು. ಆಗಲೂ ಕೂಡ ವಿನಯ್ ಹಾಗೂ ನಮ್ರತಾ ಅವರನ್ನು ಸೇಫ್ ಮಾಡಿದ್ದಾರೆ. ಕಾರ್ತಿಕ್ ಸಂಗೀತ ಹಾಗೂ ತನಿಷಾ ಅವರನ್ನು ನಾಮಿನೇಟ್ ಮಾಡಿದ್ದಾರೆ. ಕ್ಯಾಪ್ಟನ್ ಆದಾಗಲೂ ಕೂಡ ಈ ಕ್ಯಾಪ್ಟನ್ ಸಿ ನಮ್ಮ ಅಣ್ಣ ವಿನಯವರಿಗೆ ಸಲ್ಲಬೇಕು ಎಂದು ಹೇಳಿಕೊಂಡಿದ್ದಾರೆ.

ಇದನ್ನೆಲ್ಲಾ ನೋಡುತ್ತಿದ್ದರೆ ಸ್ನೇಹಿತ್ ಅವರು ಈ ವಾರವೂ ಕೂಡ ತನ್ನನ್ನು ತಾವು ಪ್ರೂವ್ ಮಾಡಿಕೊಳ್ಳುವಲ್ಲಿ ಅಸಮರ್ಥರಾಗಿದ್ದಾರೆ ಎನ್ನಬಹುದು. ಇದನ್ನು ನೋಡುತ್ತಿದ್ದರೆ ಈ ವಾರ ಮನೆಯಿಂದ ಸ್ನೇಹಿತ್ ಅವರು ಹೊರಹೋಗುವ ಎಲ್ಲಾ ಸೂಚನೆಗಳು ಕಾಣುತ್ತಿವೆ. ಉಳಿದ ದಿನಗಳಲ್ಲಿ ಹೇಗೆ ನಡೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download


Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!