ಬಿಗ್ ಬಾಸ್ ಮನೆಗೆ ಮರಳಿ ಬಂದ , ಡ್ರೋನ್ ಪ್ರತಾಪ್ & ಸಂಗೀತಾ, ಕಟುಕರಿಗೆ ಮಾರಿ ಹಬ್ಬದ ಸೂಚನೆ ಕೊಟ್ಟ ಕಿಚ್ಚ

sudeep class in bigboss

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆದ ಬಿಗ್ ಬಾಸ್ ಸೀಸನ್ 10(BigBoss season 10) ರಲ್ಲಿ ಮನೋರಂಜನೆಗಿಂತ ವಾದ ವಿವಾದಗಳು, ಕಿತ್ತಾಟಗಳು ಜಗಳಗಳೇ ಜಾಸ್ತಿಯಾಗಿವೆ. ರಾಕ್ಷಸರು ಹಾಗೂ ಗಂಧರ್ವರ ಆಟದಲ್ಲಿ ಹಲವಾರು ಸ್ಪರ್ಧೆಗಳು ರಾಕ್ಷಸರಂತೆಯೇ ನಡೆದುಕೊಂಡಿದ್ದಾರೆ. ಇದರಿಂದಾಗಿ ಸಂಗೀತ(Sangeeta) ಹಾಗೂ ಪ್ರತಾಪ್(Drone prathap) ಅವರು ಟಾಸ್ಕ್ ಒಂದರಲ್ಲಿ ಸೋಪಿನ ನೀರು ಕಣ್ಣಿಗೆ ಹೋಗಿ ಆಸ್ಪತ್ರೆಯನ್ನು ಸೇರಿದ್ದು ಎಲ್ಲರಿಗೂ ತಿಳಿದೇ ಇದೆ. ಇವತ್ತಿನ ಬಿಗ್ ಬಾಸ್ ಪ್ರೊಮೊದಲ್ಲಿ ಸಂಗೀತ ಹಾಗೂ ಡ್ರೋನ್ ಪ್ರತಾಪ್ ಅವರು ಕಪ್ಪು ಕನ್ನಡಕವನ್ನು ಧರಿಸಿ ಮನೆಗೆ ಮತ್ತೆ ಬಂದಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ವರದಿಯಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಆಸ್ಪತ್ರೆಯಿಂದ ಬಿಗ್ ಬಾಸ್ ಮನೆಗೆ ವಾಪಸ್ ಆದ ಸಂಗೀತ ಹಾಗೂ ಪ್ರತಾಪ್ :

sangeeta and prathap back from hospital

ಟಾಸ್ಕಿನಲ್ಲಿ ಗಂಧರ್ವರ ಗುಂಪಿನವರಾದ ಸಂಗೀತ ಹಾಗೂ ಪ್ರತಾಪ್ ಅವರಿಗೆ ರಾಕ್ಷಸರ ಗುಂಪಿನವರು ಸೋಪಿನ ನೀರನ್ನು ಎರಚಿದ ಕಾರಣ ಅದರಲ್ಲಿ ಇದ್ದ ಕೆಮಿಕಲ್ ನಿಂದ ಕಣ್ಣಿಗೆ ಅಪಾಯ ಉಂಟಾಗಿ ಆಸ್ಪತ್ರೆಯನ್ನು ತರಲಿದ್ದರು. ಒಂದು ದಿನ ಕಳೆದರೂ ಅವರಿಬ್ಬರು ಮತ್ತೆ ಮನೆಗೆ ಬರದಿದ್ದನ್ನು ನೋಡಿ ಎಲ್ಲರೂ ಏನಾಗಿರಬಹುದು ಎಂದು ಗಾಬರಿಗೊಂಡಿದ್ದರು. ಪ್ರೇಕ್ಷಕರಲ್ಲಿಯೂ ಕೂಡ ಇದು ಒಂದು ಕುತೂಹಲವನ್ನೇ ಉಂಟು ಮಾಡಿತ್ತು. ಆದರೆ ಇವತ್ತು ಸಂಗೀತ ಹಾಗೂ ಡ್ರೋನ್ ಪ್ರತಾಪ್ ಮತ್ತೆ ಮನೆಗೆ ಕಪ್ಪು ಕನ್ನಡಕವನ್ನು ಧರಿಸಿ ಬಂದಿದ್ದಾರೆ.
ಅವರಿಬ್ಬರೂ ಮನೆಯ ಒಳಗೆ ಬಂದ ತಕ್ಷಣ ಮನೆಯವರೆಲ್ಲ ಬಾಗಿಲ ಹತ್ತಿರ ಓಡಿ ಹೋಗಿ, ಈಗ ಹೇಗಿದೆ ಎಂದು ವಿಚಾರಿಸಿದ್ದಾರೆ. ಕನ್ನಡಕ ಹಾಕಿಕೊಂಡಿರುವುದರಿಂದ ಕಣ್ಣು ಸರಿಯಾಗಿ ಕಾಣುತ್ತಿದೆಯೇ ಎಂದು ಕೂಡ ಕೇಳಿತಕ್ಕೆ ಪ್ರತಾಪ್ ಅವರು ಕಾಣಿಸುತ್ತಿದೆ ಎಂದು ಹೇಳುತ್ತಾರೆ. ಸಂಗೀತ ಅವರು ಕೂಡ ಸ್ವಲ್ಪ ದಿನಗಳಲ್ಲಿ ಸರಿಯಾಗುತ್ತದೆ ಎಂದು ಉತ್ತರವನ್ನು ನೀಡಿದ್ದಾರೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಸುದೀಪ್ ಅವರ ಶನಿವಾರದ ಪಂಚಾಯಿತಿಗೆ ಕಾತುರದಿಂದ ಕಾಯುತ್ತಿರುವ ವೀಕ್ಷಕರು :

ಈ ಬಾರಿ ಬಿಗ್ ಬಾಸ್ ನಲ್ಲಿ ಗಲಾಟೆಯು ಜೋರಾಗಿಯೇ ನಡೆಯುತ್ತಿದೆ. ಈ ವಾರದ ಟಾಸ್ಕ್ಗಳಲ್ಲಂತೂ ಹಲವರು ರಾಕ್ಷಸರಂತೆಯೇ ವರ್ತಿಸಿದ್ದಾರೆ. ಪ್ರೇಕ್ಷಕರು ಇಷ್ಟು ಮಾನವೀಯತೆಯನ್ನು ಮರೆತು ಆಡುವುದು ಒಳ್ಳೆಯದೇ ಎಂದು ಪ್ರಶ್ನಿಸುತ್ತಿದ್ದಾರೆ. ಈ ವಾರದ ಆಟ ಎಷ್ಟರಮಟ್ಟಿಗೆ ಸದ್ದು ಮಾಡುತ್ತದೆ ಎಂದರೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ ಅವರು ಕೂಡ, ಕೆಮಿಕಲ್ ಪುಡಿಯನ್ನು ಹಾಕಿ ಮುಖಕ್ಕೆ ನೀರನ್ನು ಎರಚುವುದು ಕ್ರೂರ ಎನಿಸಿತು ಎಂದು ಹೇಳಿಕೆ ನೀಡಿದ್ದಾರೆ. ಇವೆಲ್ಲವನ್ನೂ ಕಂಡ ಮೇಲೆ ಶನಿವಾರದ ಸುದೀಪನ ಪಂಚಾಯಿತಿಯಲ್ಲಿ ಅವರು ಏನು ಹೇಳುತ್ತಾರೆ ಎಂಬುವುದನ್ನು ನೋಡಬೇಕಿದೆ.

ಸೋಪಿನ ಪುಡಿಯನ್ನು ಮುಖಕ್ಕೆ ಎರಚಿ ಆಟ ಆಡಿರುವುದರ ಬಗ್ಗೆ ಸುದೀಪ ಅವರು ಏನು ಹೇಳುತ್ತಾರೆ?, ಕಾರ್ತಿಕ್ ಅವರನ್ನು ಜೈಲಿಗೆ ಕಳುಹಿಸಿದರ ಬಗ್ಗೆ ಅವರ ಅಭಿಪ್ರಾಯವೇನು?, ಅಷ್ಟೇ ಅಲ್ಲದೆ ಕಾರ್ತಿಕ್ ಹಾಗೂ ವಿನಯ್ ನಡುವೆ ನಡೆದ ಚಪ್ಪಲಿಯ ವಿವಾದದ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ನೋಡಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಅಷ್ಟೇ ಅಲ್ಲದೆ ಬಿಗ್ ಬಾಸ್ ಮನೆಯಿಂದ ಈ ವಾರ ಯಾರು ಇರುತ್ತಾರೆ?, ಯಾರು ಹೋಗುತ್ತಾರೆ?, ಮೊದಲು ಯಾರು ಸೇಫ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download


Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!