ಭೋವಿ ಸಮಾಜಕ್ಕೆ ಅವಮಾನ, ತನಿಷಾ ಕ್ಷಮೆ ಕೇಳಲೇಬೇಕು – ಪಿ ಪದ್ಮ

tanisha bigboss gossip on pratham

ಕನ್ನಡದ ಬಹು ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ( Big Boss Season 10 ) ಈಗ ಸತತ ಹಲವು ದಿನಗಳನ್ನು ಯಶಸ್ವಿಯಾಗಿ ಕಳೆದಿದೆ. ಮತ್ತು ಬಿಗ್ ಬಾಸ್ ಮನೆಯಲ್ಲಿ ನಾವು ಹಲವಾರು ಅವಾಂತರಗಳನ್ನು ಕಂಡಿದ್ದೇವೆ. ಟಾಸ್ಕ್ ನಲ್ಲಿ ಜಗಳ, ಮಾತಿನ ಚಕಮಕಿ , ಅಷ್ಟೇ ಅಲ್ಲದೆ ಮನೆಯ ಸ್ಪರ್ಧಿಗಳ ಮೇಲೆ ಕೆಲವು ಆರೋಪಗಳು ಕಂಡುಬಂದಿವೆ. ಆದರೆ ಇದೀಗ ಮತ್ತೊಂದು ವಿಚಾರ ಸೋಷಿಯಲ್ ಮೀಡಿಯಾ ( Social media ) ದಲ್ಲಿ ಹರಿದಾಡುತ್ತಿದೆ. ಅದೇನೆಂದು ನೋಡೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್ ನ ತನಿಷಾ ಮೇಲೆ ಎಫ್ಐಆರ್ ದಾಖಲು :

ತನಿಷಾ ( Tanisha ) ಅವರು ಬಿಗ್ ಬಾಸ್ ಮನೆಯೊಳಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಬೋವಿ ಸಮಾಜದ ಅಧ್ಯಕ್ಷೆ ಪದ್ಮಾ ( Padma ) ಅವರು ಪೋಲಿಸರಿಗೆ ದೂರು ನೀಡಿದ್ದಾರೆ. ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ತನಿಷಾ ವಿರುದ್ಧ ಪ್ರಕರಣ ( ಎಸ್ ಸಿ, ಎಸ್ಟಿ ( ST / SC ) ಕಾಯ್ದೆಯಡಿ ಅಟ್ರಾಸಿಟಿ ಕೇಸ್ ) ದಾಖಲಾಗಿದೆ. ಹೌದು, ಬಿಗ್ ಬಾಸ್ ಮನೆಯ ಶೋ ನಲ್ಲಿ ತನಿಷಾ ಕುಪ್ಪಂಡ ಅವರು ವಡ್ಡ ಎಂಬ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪವನ್ನು ಇಟ್ಟುಕೊಂಡು ಅವರ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಹಾಗೆಯೇ ಅವರು ಮಾಧ್ಯಮದ ಜೊತೆ ಇದರ ಬಗ್ಗೆ ಮಾತನಾಡಿದ್ದಾರೆ.

ಟಾಸ್ಕ್ ವಿಚಾರಕ್ಕೆ ಒಮ್ಮೆ ಡ್ರೋನ್ ಪ್ರತಾಪ್ ( Drone Prathap ) ಅವರಿಗೆ ತನಿಷಾ ಅವರು ವಡ್ಡನ ತರ ಆಡಬೇಡ ಎಂದು ಹೇಳಿದ್ದಾರೆ. ವಡ್ಡ ( Vadda ) ಎನ್ನುವುದು ಒಂದು ಜಾತಿಯನ್ನು ಪ್ರತಿನಿಧಿಸುವ ಪದ. ಇದನ್ನು ಅವಹೇಳನಕಾರಿಯಾಗಿ ಬಳಸಲಾಗಿದೆ ಎಂದು ಬೋವಿ ಸಮಾಜದವರು ಬೇಸರ ಮಾಡಿಕೊಂಡಿದ್ದಾರೆ.

ಇನ್ನು ನೋಡುವುದಾದರೆ ಈ ಹಿಂದೆ ಕೂಡ ಬಿಗ್ ಬಾಸ್ ಶೋ ನಲ್ಲಿ ಸಿಹಿ ಕಹಿ ಚಂದ್ರು Sihi Kahi Chandru ) ಅವರು ವಡ್ಡ ಎಂಬ ಪದ ಬಳಕೆ ಮಾಡಿ ಆಮೇಲೆ ಕ್ಷಮೆ ಕೇಳಿದ್ರು. ನಟ ಉಪೇಂದ್ರ ( Upendra ) ಕೂಡ ಇತ್ತೀಚೆಗೆ ಗಾದೆ ಮಾತು ಬಳಸಿ ಮಾತನಾಡಿದ್ದಾರೆ. ಇದರಿಂದ ನಮ್ಮ ಸಮಾಜಕ್ಕೂ ನಮಗೂ ಬಹಳ ಬೇಸರ ಆಗಿದೆ ಎಂದು ಪದ್ಮಾ ಅವರು ಹೇಳಿದ್ದಾರೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ತನಿಷಾ ಅವರು ಕ್ಷಮೆ ಕೇಳಲೇಬೇಕು ಎಂದು ಒತ್ತಾಯ :

ಅಷ್ಟೇ ಅಲ್ಲದೆ ಬಿಗ್ ಬಾಸ್ ಮನೆಯಿಂದ ತನಿಷಾ ಅವರನ್ನು ಹೊರಗಡೆ ಹಾಕಬೇಕು. ನವೆಂಬರ್ 8ನೇ ತಾರೀಖಿನ ಎಪಿಸೋಡ್‌ನಲ್ಲಿ ತನಿಷಾ ಅವರು ವಡ್ಡ ಎಂಬ ಪದವನ್ನು ಬಳಸಿದ್ದಾರೆ. ತನಿಷಾ ಅವರು ಕ್ಷಮೆ ಕೇಳಲೇಬೇಕು ಎಂದು ಪದ್ಮಾ ಅವರು ಹೇಳಿದ್ದಾರೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಇಲ್ಲದಿದ್ದರೆ ದೊಡ್ಡ ಹೋರಾಟ ಮಾಡ್ತೀವಿ , ಯಾಕೆ ಹೀಗೆ ಬಹಿರಂಗ ಪದಗಳನ್ನು ಸೆಲೆಬ್ರಿಟಿ ಗಳು ಬಳಸುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಪದೇ ಪದೇ ಹೀಗಾಗ್ತಿದೆ. ಈ ಬಗ್ಗೆ ಯಾಕೆ ಬಿಗ್ ಬಾಸ್ ಆಡಳಿತ ಮಂಡಳಿ ಯಾಕೆ ಗಮನಹರಿಸ್ತಿಲ್ಲ? ತನಿಷಾ ವಿರುದ್ಧ ಕ್ರಮ ಕೈಗೊಂಡಿಲ್ಲ ಅಂದರೆ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡ್ತೀವಿ. ಏನು ಮಾಡ್ತೀವಿ ಎನ್ನೋದನ್ನು ನಾವು ಮಾಧ್ಯಮದ ಮುಂದೆ ತಿಳಿಸಲಿದ್ದೇವೆ” ಎಂದು ಪದ್ಮಾ ಹೇಳಿದ್ದಾರೆ.

ಜಾಮೀನು ರಹಿತ ಕೇಸ್ ಹಾಕ್ತವಿ ಎಂದ ಪದ್ಮ :

ಇನ್ನು ತನಿಷಾ ಕುಪ್ಪಂಡ ಅವರ ವಿರುದ್ಧ ಜಾಮೀನುರಹಿತ ಕೇಸ್ ದಾಖಲಾಗಿದೆ. ಹಾಗಾಗಿ ತನಿಷಾ ಅವರನ್ನು ಅಧಿಕಾರಿಗಳು ವಿಚಾರಣೆ ಮಾಡಿ ನ್ಯಾಯಾಧೀಶರ ಮುಂದೆ ನಿಲ್ಲಿಸಬೇಕು. ಹೀಗಾಗಿ ಬಿಗ್ ಬಾಸ್ ಮನೆಯಿಂದ ತನಿಷಾ ಹೊರಗಡೆ ಬರುತ್ತಾರಾ ಇಲ್ಲವಾ ಎಂಬ ಪ್ರಶ್ನೆ ಎದ್ದಿದೆ.
ಮುಂದೆ ಬಿಗ್ ಬಾಸ್ ಮನೆಯಲ್ಲಿ ಏನಾಗುತ್ತದೆ ಎಂದು ಕಾದು ನೋಡೋಣ.

ಇದನ್ನೂ ಓದಿ – Bigg Boss Kannada- ನನ್ನ ಮಗ ಡ್ರಗ್ಸ್ ವ್ಯಸನಿ ಅಲ್ಲ, ಆರೋಪಗಳೆಲ್ಲ ಸುಳ್ಳು – ವರ್ತೂರ್ ತಾಯಿಯ ಸ್ಪಷ್ಟನೆ

ಇದನ್ನೂ ಓದಿ – Varthur Santhosh: ಸಂತೋಷ್ ಮದ್ವೆ ಆಗಿದೆ, ಒಂದು ಹೆಣ್ಣು ಮಗುವಿನ ತಂದೆ ವರ್ತೂರ್​ ಸಂತೋಷ್​!

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

Picsart 23 07 16 14 24 41 584 transformed 1

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!