ಭಾರತೀಯರ ಆಹಾರ ಸಂಸ್ಕೃತಿಯಲ್ಲಿ ಅನ್ನಕ್ಕೆ (Rice) ಪ್ರಮುಖ ಸ್ಥಾನ ಇದೆ. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಮೂರು ಹೊತ್ತಿನ ಊಟದಲ್ಲೂ ಅನೇಕರಿಗೆ ಅನ್ನವಿಲ್ಲದೆ ಊಟವೇ ಪೂರ್ಣವಾಗುವುದಿಲ್ಲ. ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಅನ್ನದ ಪ್ರಾಮುಖ್ಯತೆ ಅಷ್ಟರಮಟ್ಟಿಗೆ ಹೆಚ್ಚಾಗಿದೆ, ಅನೇಕರು ಒಂದು ದಿನವೂ ಅನ್ನವಿಲ್ಲದೆ ಇರಲಾರರು. ಆದರೆ ಇತ್ತೀಚಿನ ಕಾಲದಲ್ಲಿ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುತ್ತಾ ಜನರು, ಅನ್ನ ಸೇವನೆಯನ್ನು ಕಡಿಮೆ ಮಾಡುವುದು ಅಥವಾ ಸಂಪೂರ್ಣ ನಿಲ್ಲಿಸುವ ಪ್ರಯತ್ನಕ್ಕೆ ಮುಂದಾಗುತ್ತಿದ್ದಾರೆ. ಹಾಗಿದ್ದರೆ ಒಂದು ತಿಂಗಳು ಅನ್ನ ಸೇವನೆ ನಿಲ್ಲಿಸಿದರೆ ದೇಹದಲ್ಲಿ ಯಾವ ಬದಲಾವಣೆಗಳು ಆಗುತ್ತವೆ? ಆರೋಗ್ಯ ಸುಧಾರಿಸುತ್ತದೆಯಾ ಅಥವಾ ಬೇರೆ ಸಮಸ್ಯೆಗಳು ಎದುರಾಗುತ್ತವೆಯಾ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಅನ್ನ ತ್ಯಜಿಸುವುದರಿಂದ ಯಾವೆಲ್ಲ ತೊಂದರೆಗಳು ಆಗುತ್ತವೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ:
ಹಸಿವು ಮತ್ತು ಕಿರಿಕಿರಿ ಹೆಚ್ಚಾಗುವುದು:
ಅನ್ನವು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುವ ಪ್ರಮುಖ ಕಾರ್ಬೋಹೈಡ್ರೆಟ್ ಮೂಲವಾಗಿದೆ. ಅದನ್ನು ಇದ್ದಕ್ಕಿದ್ದಂತೆ ಬಿಟ್ಟುಬಿಟ್ಟರೆ ದೇಹ ತಕ್ಷಣ ಹೊಂದಿಕೊಳ್ಳುವುದಿಲ್ಲ. ಮೊದಲ ಕೆಲವು ದಿನಗಳಲ್ಲಿ ಹಸಿವು ಹೆಚ್ಚಾಗುವುದು, ದುರ್ಬಲತೆ ಅಥವಾ ತಲೆ ತಿರುಗುವ ಭಾವನೆ, ಕಿರಿಕಿರಿ ಅಥವಾ ಒತ್ತಡ ಹೆಚ್ಚಾಗುವುದು ಇಂತಹ ಸಮಯದಲ್ಲಿ ರಾಗಿ, ಬಾರ್ಲಿ (ಜೋಳ), ಕ್ವಿನೋವಾ, ಕುಂಬಳಕಾಯಿ ಬೀಜಗಳು ಮುಂತಾದ ಪರ್ಯಾಯ ಧಾನ್ಯಗಳನ್ನು ಸೇವಿಸುವುದು ಉತ್ತಮ.
ತೂಕ ಇಳಿಕೆ ಸಾಧ್ಯ:
ಅನ್ನದಲ್ಲಿ ಕಾರ್ಬೋಹೈಡ್ರೆಟ್ ಹೆಚ್ಚು, ಕ್ಯಾಲೊರಿಗಳ ಪ್ರಮಾಣವೂ ಅಧಿಕ. ಆದ್ದರಿಂದ ಅನ್ನ ಬಿಟ್ಟರೆ ದೇಹಕ್ಕೆ ಹೋಗುವ ಕ್ಯಾಲೊರಿಗಳು ಕಡಿಮೆಯಾಗುತ್ತವೆ. ಇದರಿಂದ ತೂಕ ನಿಧಾನವಾಗಿ ಇಳಿಯಬಹುದು, ದೇಹದ ಕೊಬ್ಬು ಪ್ರಮಾಣ ಕಡಿಮೆಯಾಗಬಹುದು ಹೀಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ನಿಯಂತ್ರಿತವಾಗಿ ಅನ್ನ ಸೇವನೆ ಮಾಡದೆ ಇರುವುದರಿಂದ ಪ್ರಯೋಜನ ಪಡೆಯಬಹುದು.
ರಕ್ತದಲ್ಲಿನ ಸಕ್ಕರೆ ಮಟ್ಟ ಸ್ಥಿರವಾಗುತ್ತದೆ:
ಬಿಳಿ ಅಕ್ಕಿ ಬೇಗನೆ ಜೀರ್ಣವಾಗುತ್ತದೆ ಮತ್ತು ತಕ್ಷಣವೇ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಮಧುಮೇಹಿಗಳಿಗೆ (Diabetics) ಸಮಸ್ಯೆ ಉಂಟಾಗಬಹುದು. ಆದರೆ ಒಂದು ತಿಂಗಳು ಅನ್ನ ಬಿಟ್ಟರೆ, ರಕ್ತದ ಸಕ್ಕರೆ ಮಟ್ಟ ಸಮತೋಲನವಾಗುತ್ತದೆ, ಇನ್ಸುಲಿನ್ ಪ್ರತಿಕ್ರಿಯೆ ಸುಧಾರಿಸುತ್ತದೆ ಹೀಗಾಗಿ, ಮಧುಮೇಹ ರೋಗಿಗಳಿಗೆ ಅನ್ನ ಬಿಟ್ಟು ಬೇರೆ ಧಾನ್ಯಗಳನ್ನು ಸೇವಿಸುವುದು ವೈದ್ಯಕೀಯ ದೃಷ್ಟಿಯಿಂದ ಪ್ರಯೋಜನಕಾರಿ.
ಜೀರ್ಣಕ್ರಿಯೆಯಲ್ಲಿ ಬದಲಾವಣೆಗಳು:
ಕೆಲವರಿಗೆ ಅನ್ನ ತಿಂದ ನಂತರ, ಹೊಟ್ಟೆ ಉಬ್ಬುವುದು, ಗ್ಯಾಸ್ಟ್ರಿಕ್, ಮಲಬದ್ಧತೆ ಸಮಸ್ಯೆಗಳು ಹಾಗಾದ ಉಂಟಾಗುತ್ತವೆ. ಜೊತೆಯಲ್ಲಿ ಅನ್ನ ಬಿಟ್ಟ ತಕ್ಷಣ ಕೆಲದಿನ ಜೀರ್ಣಕ್ರಿಯೆ ಅಸ್ತವ್ಯಸ್ತವಾಗಬಹುದು, ಆದರೆ ಹಣ್ಣು, ತರಕಾರಿ, ಹುರಿದ ಧಾನ್ಯಗಳನ್ನು ಹೆಚ್ಚಿಸುವುದರಿಂದ ಜೀರ್ಣಕ್ರಿಯೆ ಕ್ರಮೇಣ ಸುಧಾರಿಸುತ್ತದೆ.
ಪೌಷ್ಟಿಕಾಂಶ ಕೊರತೆಯ ಅಪಾಯ:
ಅಕ್ಕಿಯಲ್ಲಿ ವಿಟಮಿನ್ ಬಿ (Vitamin B Complex) ಇದೆ, ಇದು ಶಕ್ತಿನಿರ್ಮಾಣ ಮತ್ತು ಮೆಟಾಬಾಲಿಸಂಗೆ ಅಗತ್ಯ. ಅನ್ನ ಸೇವನೆ ದೀರ್ಘಕಾಲ ನಿಲ್ಲಿಸಿದರೆ ವಿಟಮಿನ್ ಬಿ ಕೊರತೆ, ಆಯಾಸ, ನರಬಲಹೀನತೆ, ಮನೋಸ್ಥಿತಿಯಲ್ಲಿ ಬದಲಾವಣೆಗಳು ಕಾಣಿಸಬಹುದು. ಈ ಕೊರತೆಯನ್ನು ತಡೆಗಟ್ಟಲು ಎಲೆ ತರಕಾರಿಗಳು (Spinach, Amaranth), ದ್ವಿದಳ ಧಾನ್ಯಗಳು (ಪಲ್ಯಗಳು, ಬೇಳೆ),ಮೊಟ್ಟೆ, ಹಾಲು ಮತ್ತು ಕಡಲೆಕಾಯಿ ಮೊದಲಾದ ಆಹಾರಗಳನ್ನು ಸೇವಿಸುವುದು ಅಗತ್ಯ.
ದೇಹದ ಶಕ್ತಿಯ ಮಟ್ಟ ಮತ್ತು ಮನೋಸ್ಥಿತಿ:
ಅನ್ನ ಬಿಟ್ಟ ನಂತರ ದೇಹದಲ್ಲಿ ಶಕ್ತಿಯ ಮಟ್ಟ ತಾತ್ಕಾಲಿಕವಾಗಿ ಕಡಿಮೆಯಾಗಬಹುದು. ಆದರೆ ಶೀಘ್ರದಲ್ಲೇ ದೇಹದ ಕೊಬ್ಬಿನಿಂದ ಶಕ್ತಿ ಉತ್ಪಾದನೆ ಹೆಚ್ಚಾಗಿ ಶಕ್ತಿಯ ಮಟ್ಟ ಸ್ಥಿರವಾಗುತ್ತದೆ. ಕೆಲವರಿಗೆ ಮನೋಸ್ಥಿತಿ ಸುಧಾರಣೆ ಕಾಣಬಹುದು ಏಕೆಂದರೆ ದೇಹದ ಇನ್ಸುಲಿನ್ ಬದಲಾವಣೆಗಳು ಕಡಿಮೆಯಾಗುತ್ತವೆ.
ಇನ್ನು, ಅನ್ನವನ್ನು ಸಂಪೂರ್ಣವಾಗಿ ಬಿಟ್ಟುಬಿಡುವುದು ಎಲ್ಲರಿಗೂ ಸೂಕ್ತವಲ್ಲ. ಆದರೆ ಕಡಿಮೆ ಮಾಡುವುದು, ಅಥವಾ ಬಿಳಿ ಅಕ್ಕಿಗೆ ಬದಲಿಗೆ ಬ್ರೌನ್ ರೈಸ್, ರಾಗಿ ಅಥವಾ ಮಿಲೆಟ್ಗಳನ್ನು ಸೇರಿಸುವುದು ಉತ್ತಮ ಆಯ್ಕೆ. ತೂಕ ಇಳಿಕೆ, ಮಧುಮೇಹ ನಿಯಂತ್ರಣ, ಮತ್ತು ಜೀರ್ಣಕ್ರಿಯೆ ಸುಧಾರಣೆ ಬಯಸುವವರಿಗೆ ಇದು ಪ್ರಯೋಜನಕಾರಿ. ಆದರೆ ಪೌಷ್ಟಿಕಾಂಶ ಕೊರತೆ ತಪ್ಪಿಸಲು ಪರ್ಯಾಯ ಆಹಾರಗಳಲ್ಲಿ ಸಮತೋಲನ ಕಾಪಾಡುವುದು ಅತಿ ಮುಖ್ಯ.
ಒಟ್ಟಾರೆಯಾಗಿ, ಒಂದು ತಿಂಗಳು ಅನ್ನ ಬಿಟ್ಟರೆ ದೇಹದಲ್ಲಿ ಹಲವಾರು ಬದಲಾವಣೆಗಳು ಖಂಡಿತವಾಗಿಯೂ ಆಗುತ್ತವೆ. ಕೆಲವರಿಗೆ ಪ್ರಯೋಜನಕಾರಿಯಾಗಬಹುದು, ಕೆಲವರಿಗೆ ಸವಾಲಿನಂತೆಯೂ ಇರಬಹುದು. ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

“ಕೃಷ್ಣಸಾಗರಿ ಅವರು NeedsOfPublic.in ನ ‘ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ’ (Job Updates & Career) ವಿಭಾಗದ ಮುಖ್ಯಸ್ಥರಾಗಿದ್ದಾರೆ. ಉದ್ಯೋಗ ಮಾಹಿತಿ ಕ್ಷೇತ್ರದಲ್ಲಿ 4 ವರ್ಷಗಳ ವೃತ್ತಿಪರ ಅನುಭವ ಹೊಂದಿರುವ ಇವರು, ಸರ್ಕಾರಿ ಉದ್ಯೋಗದ ಅಧಿಸೂಚನೆಗಳು (Govt Job Notifications), ಖಾಸಗಿ ವಲಯದ ನೇಮಕಾತಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಅಪ್ಡೇಟ್ಗಳನ್ನು ಒದಗಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಉದ್ಯೋಗಾಕಾಂಕ್ಷಿಗಳಿಗೆ ಕೇವಲ ಅಧಿಕೃತ ಮೂಲಗಳಿಂದ ಪರಿಶೀಲಿಸಿದ (verified) ಮತ್ತು ನಿಖರವಾದ ಉದ್ಯೋಗದ ಮಾಹಿತಿಯನ್ನು ಸಕಾಲದಲ್ಲಿ ತಲುಪಿಸುವುದು ಸಾಗರಿ ಅವರ ಪ್ರಮುಖ ಗುರಿಯಾಗಿದೆ.”


WhatsApp Group




