Loan scheme: ಕೇಂದ್ರ ಸರ್ಕಾರದಿಂದ ಬೀದಿ ಬದಿ ವ್ಯಾಪಾರಿಗಳಿಗೆ 50,000/- ರೂ. ವರೆಗೆ ಸಾಲ ಸೌಲಭ್ಯ

svanidhi

ಬೀದಿ ಬದಿ ವ್ಯಾಪಾರ ಮತ್ತು ಸಣ್ಣ ಪುಟ್ಟ ವ್ಯಾಪಾರಗಳನ್ನು ಮಾಡುವ ನಾಗರಿಕರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ, ಹೌದು ಪ್ರಧಾನ ಮಂತ್ರಿ ಸ್ಟ್ರೀಟ್‌ ವೆಂಡರ್ಸ್‌ ಆತ್ಮನಿರ್ಭರ್‌ ನಿಧಿ (PM Street vendors Vendors Atmanirbhar Nidhi scheme) ಯೋಜನೆಯು ನಿಮ್ಮ ಕನಸುಗಳನ್ನು ಸಾಕಾರಗೊಳಿಸಲು 50,000 ರೂ.ಗಳವರೆಗೆ ಕಡಿಮೆ ಬಡ್ಡಿ ದರ (low interest rate)ದಲ್ಲಿ ಸಾಲ(loan) ನೀಡುವ ಒಂದು ಅದ್ಭುತ ಅವಕಾಶವಾಗಿದೆ. ಈ ಯೋಜನೆಯು ಕೇಂದ್ರ ಸರ್ಕಾರದಿಂದ ಬೆಂಬಲಿತವಾಗಿದೆ ಬೀದಿ ಬದಿಯ ಸಣ್ಣ ವ್ಯಾಪಾರಿಗಳಿಗೆ ಅವರ ವ್ಯವಹಾರಗಳನ್ನು ವಿಸ್ತರಿಸಲು ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರ ವಿಸ್ತರಿಸಲು 10,000 ದಿಂದ 50,000 ರವರೆಗೆ ಯಾವುದೇ ಗ್ಯಾರೆಂಟಿ ಇಲ್ಲದೆ ರಾಷ್ಟ್ರೀಕೃತ ಬ್ಯಾಂಕ್ ಗಳ ಸಹಯೋಗದೊಂದಿಗೆ ಸಾಲ ಸೌಲಭ್ಯವನ್ನು ಒದಗಿಸುತ್ತಿವೆ. ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ (PM SVANidhi schem):

ಪ್ರಧಾನ ಮಂತ್ರಿ ಸ್ವನಿಧಿ (PM SVANidhi) ಯೋಜನೆಯು ಭಾರತ ಸರ್ಕಾರದ ಒಂದು ಪ್ರಮುಖ ಉಪಕ್ರಮವಾಗಿದ್ದು, ಇದು ಬೀದಿ ಬದಿ ವ್ಯಾಪಾರಿಗಳಿಗೆ ಸ್ವಾವಲಂಬನೆಯತ್ತ ಒಂದು ಭದ್ರ ಹೆಜ್ಜೆಯನ್ನು ಒದಗಿಸುತ್ತದೆ. ಲಾಕ್‌ಡೌನ್‌ನಂತಹ ಸಂಕಷ್ಟಕರ ಸಂದರ್ಭಗಳಲ್ಲಿ ಈ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಯೋಜನೆಯನ್ನು 2020ರಲ್ಲಿ ಪ್ರಾರಂಭಿಸಲಾಯಿತು.

ಈ ಯೋಜನೆಯು 2020ರಲ್ಲಿ ಪ್ರಾರಂಭವಾಯಿತು ಮತ್ತು ಈಗಾಗಲೇ ಗಮನಾರ್ಹ ಯಶಸ್ಸನ್ನು ಕಂಡಿದೆ. ಇದುವರೆಗೆ 76,78,830 ಅರ್ಹ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಮತ್ತು 60,03,816 ಪ್ರಕರಣಗಳಲ್ಲಿ ಸಾಲ ಮಂಜೂರಿ ಮಾಡಲಾಗಿದೆ. ಈ ಯೋಜನೆಯು ಸ್ವಯಂ ಉದ್ಯೋಗಿಗಳಿಗೆ ತಮ್ಮ ವ್ಯವಹಾರಗಳನ್ನು ಉತ್ತಮಗೊಳಿಸಲು ಮತ್ತು
ಅಭಿವೃದ್ಧಿಪಡಿಸಲು ಅಗತ್ಯವಿರುವ ಹಣಕಾಸಿನ ನೆರವು ನೀಡುತ್ತದೆ.

WhatsApp Image 2023 01 05 at 7.39.41 AM

ಹಾವೇರಿ ನಗರದ ಇಸ್ಮಾಯಿಲ್ ಜಬಿವುಲ್ಲಾ ಶಿವಮೊಗ್ಗ ಎನ್ನುವ ವ್ಯಾಪಾರಿ ಒಬ್ಬರು ಈ ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆ ಅಡಿಯಲ್ಲಿ 20 ಸಾವಿರ ರೂಪಾಯಿ ಸಾಲವನ್ನು ಪಡೆದು ತಮ್ಮ ವ್ಯಾಪಾರವನ್ನು ಪ್ರಾರಂಭ ಮಾಡಿದ್ದಾರೆ. 

ಸ್ವನಿಧಿ ಯೋಜನೆಯ ಪ್ರಮುಖ ಅಂಶಗಳು:

ಸಾಲದ ಮೊತ್ತ: ಆರಂಭಿಕ ಹಂತದಲ್ಲಿ ಸಾಲದ ಮೊತ್ತ ₹10,000 ಆಗಿರುತ್ತದೆ. ಸಕಾಲಕ್ಕೆ ಮರುಪಾವತಿಸಿದರೆ ₹20,000 ಮತ್ತು ₹50,000 ವರೆಗೆ ಸಾಲದ ಮೊತ್ತವನ್ನು ಹೆಚ್ಚಿಸಬಹುದು.

ಬಡ್ಡಿ ದರ(Interset): ಈ ಯೋಜನೆಯಲ್ಲಿ ಫಲನುಭವಿಗಳು 7% ವರೆಗೂ ಬಡ್ಡಿದರವನ್ನು ಪಡೆಯುತ್ತಾರೆ.

ಮರುಪಾವತಿ ಅವಧಿ: ₹10,000 ಸಾಲಕ್ಕೆ ಒಂದು ವರ್ಷ ಮತ್ತು ₹20,000 ಮತ್ತು ₹50,000 ಸಾಲಗಳಿಗೆ 2 ವರ್ಷ

whatss

PM SVANIDHI ಯೋಜನೆಗೆ ಅರ್ಹ ಅಭ್ಯರ್ಥಿಗಳು:

ಅರ್ಜಿದಾರರು ಭಾರತದ ನಿವಾಸಿಯಾಗಲು ಈ ಯೋಜನೆಯನ್ನು ಪಡೆಯುವುದು ಕಡ್ಡಾಯವಾಗಿದೆ. ಬೀದಿ ಬದಿ ವ್ಯಾಪಾರಿಗಳು ಮಾತ್ರ ಈ ಯೋಜನೆಗೆ ಅರ್ಹರು. ಕರೋನಾ ಸಾಂಕ್ರಾಮಿಕ ರೋಗದಿಂದ ವ್ಯಾಪಾರ ಹಾನಿಗೊಳಗಾದವರು ಈ ಯೋಜನೆಯನ್ನು ಪಡೆಯಬಹುದು.

  1. ತರಕಾರಿ ಮಾರಾಟಗಾರ
  2. ಹಣ್ಣು ಮಾರಾಟಗಾರ
  3. ವ್ಯಾಪಾರಿಗಳು
  4. ಪುಸ್ತಕ ಲೇಖನ ಸಾಮಗ್ರಿಗಳು
  5. ಕ್ಷೌರಿಕ ಅಂಗಡಿಗಳು
  6. ಚಮ್ಮಾರ
  7. ಲಾಂಡ್ರಿ ಅಂಗಡಿಗಳು
  8. ಟೀ ಅಂಗಡಿ
  9. ಕುಶಲಕರ್ಮಿ ಉತ್ಪನ್ನಗಳು
  10. ಪಾನ್ ಅಂಗಡಿ

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

 

ಅರ್ಹತೆ(Eligibility):

ಈ ಯೋಜನೆಯಡಿ ಸಾಲವನ್ನು ಪಡೆಯಲು ಅರ್ಜಿದಾರರು ಸ್ಥಳೀಯ ಆಡಳಿತ ಸಂಸ್ಥೆಗಳಿಂದ ನೀಡಲಾದ ಗುರುತಿನ ಚೀಟಿ(ID card)ಯನ್ನು ಹೊಂದಿರಬೇಕು ಮತ್ತು ಸ್ಥಳೀಯಾಡಳಿತದ ಸರ್ವೇನಲ್ಲಿ ಗುರುತಿಸಿಕೊಂಡಿರಬೇಕು

ಯಾರು ಸಾಲ ಪಡೆಯಬಹುದು:

ತರಕಾರಿ, ಹಣ್ಣು, ದಿನೋಪಯೋಗಿ ವಸ್ತುಗಳು, ಆಟಿಕೆಗಳು, ಬಟ್ಟೆ, ಪುಸ್ತಕ, ಪೆನ್ನು ಮುಂತಾದ ವಸ್ತುಗಳನ್ನು ಮಾರಾಟ ಮಾಡುವವರು
ತಳ್ಳುವ ಗಾಡಿ, ಪಾನ್‌ ಶಾಪ್‌, ರಸ್ತೆ ಬದಿಯ ಸಲೂನ್‌, ಇಸ್ತ್ರಿ ಅಂಗಡಿ ನಡೆಸುವವರು ಈ ಯೋಜನೆಯಡಿ ಸಾಲವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಸಾಲ ನೀಡುವ ಸಂಸ್ಥೆಗಳು:

ಸಾರ್ವಜನಿಕ-ಖಾಸಗಿ ಬ್ಯಾಂಕ್‌ಗಳು
ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು
ಕಿರು ಹಣಕಾಸು ಬ್ಯಾಂಕ್‌ಗಳು
ಕೋಪರೇಟಿವ್‌ ಬ್ಯಾಂಕ್‌ಗಳು
ಎನ್‌ಬಿಎಫ್‌ಸಿಗಳು
ಎಸ್‌ಹೆಚ್‌ಜಿ ಬ್ಯಾಂಕ್‌ಗಳು

ಅಗತ್ಯ ದಾಖಲೆಗಳು(Required Documents):

ಆಧಾರ್‌ ಕಾರ್ಡ್‌ (Aadhar Card)(ಕಡ್ಡಾಯ)
ಮತದಾರರ ಗುರುತಿನ ಚೀಟಿ(Voter ID card)(ಕಡ್ಡಾಯ)
ವಾಹನ ಚಾಲನಾ ತರಬೇತಿ ಪರವಾನಗಿ
ನರೇಗಾ ಕಾರ್ಡ್‌(Narega Card)
ಪ್ಯಾನ್‌ ಕಾರ್ಡ್‌(PAN card)

ಈ ಸಾಲಕ್ಕೆ ಅರ್ಜಿಯನ್ನು ಸಲ್ಲಿಸುವ ವಿಧಾನ :

ಈ ಯೋಜನೆಗೆ ಅರ್ಜಿ ಸಲ್ಲಿಸಲು, ನೀವು ಸರ್ಕಾರಿ ಬ್ಯಾಂಕ್‌ಗೆ ಹೋಗಬೇಕು. ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆ ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ಅದನ್ನು ಆಧಾರ್ ಕಾರ್ಡ್ ಜೊತೆಗೆ ಸಲ್ಲಿಸಬೇಕು. ಬ್ಯಾಂಕ್ ಸಾಮಾನ್ಯವಾಗಿ ಕಡಿಮೆ ಪರಿಶ್ರಮದ ನಂತರ ಸಾಲವನ್ನು ಅನುಮೋದಿಸುತ್ತದೆ. ಈ ಯೋಜನೆಯ ಹಣವು ಕಂತುಗಳಲ್ಲಿ ಲಭ್ಯವಿದೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ:

ಈ ಯೋಜನೆಯ ಲಾಭ ಪಡೆಯಲು ಆಸಕ್ತ ಅರ್ಜಿದಾರರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಪ್ರತ್ಯೇಕ ಪೋರ್ಟಲ್ ಅನ್ನು ಸರ್ಕಾರ ಬಿಡುಗಡೆ ಮಾಡಿದೆ. ಕೆಳಗೆ ನೀಡಲಾದ ಹಂತಗಳನ್ನು
ಅನುಸರಿಸುವ ಮೂಲಕ ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ನೀವು ಯಾವುದೇ ಶುಲ್ಕವನ್ನು ಪಾವತಿಸುವ ಅವಶ್ಯಕತೆ ಇಲ್ಲ ಉಚಿತವಾಗಿ ನಿಮ್ಮ ಮೊಬೈಲ್ ಫೋನ್ ಮೂಲಕ ಅರ್ಜಿ ಸಲ್ಲಿಸಬಹುದು

ಹಂತ 1: ಈ ಯೋಜನೆಯನ್ನು ಪಡೆಯಲು ಮೊದಲು ಅಧಿಕೃತ ವೆಬ್‌ಸೈಟ್ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ pmsvanidhi.mohua.gov.in

ಹಂತ 2: ಮುಖಪುಟಕ್ಕೆ ಹೋಗಿ ಅರ್ಜಿಯಲ್ಲಿ ರೂ.10 ಸಾವಿರ, ರೂ.20 ಸಾವಿರ ಮತ್ತು ರೂ.50 ಸಾವಿರ ಸಾಲವನ್ನು ಆಯ್ಕೆ ಮಾಡಿ.

ಹಂತ 3: ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ನಿಮ್ಮ ಸಂಖ್ಯೆಯಲ್ಲಿ ಸ್ವೀಕರಿಸಿದ OTP ಅನ್ನು ನಮೂದಿಸಿ.

ಹಂತ 4: OTP ನಂತರ ನೋಂದಣಿ ಫಾರ್ಮ್ ಕಾಣಿಸಿಕೊಳ್ಳುತ್ತದೆ. ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ, ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಮತ್ತು ಅಪ್ಲೋಡ್ ಮಾಡಿ.

ಹಂತ 5: ನಂತರ ಅದರ ಪ್ರಿಂಟ್ ಔಟ್ ತೆಗೆದುಕೊಳ್ಳಿ. ಕೇಂದ್ರ ಸರ್ಕಾರ ಸ್ಥಾಪಿಸಿರುವ ಸ್ವಯಂ ಧನಸಹಾಯ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಫಾರ್ಮ್ ಸೇರಿದಂತೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿ.

ಎಲ್ಲಾ ದಾಖಲೆ ಮತ್ತು ಅರ್ಜಿ ಪರಿಶೀಲನೆಯ ನಂತರ ಸ್ವಾನಿಧಿ ಯೋಜನೆಯಡಿ ಸಾಲದ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ನಗರ ಪಾಲಿಕೆಯನ್ನು ಸಂಪರ್ಕಿಸಬಹುದು

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!