ರಾಜ್ಯ ಸರ್ಕಾರವು ಕಾರ್ಮಿಕ ವರ್ಗದ ಜೀವನಮಟ್ಟವನ್ನು ಉತ್ತಮಗೊಳಿಸುವ ಉದ್ದೇಶದಿಂದ 15 ಪ್ರಮುಖ ಸಹಾಯಧನ ಸೌಲಭ್ಯಗಳನ್ನು(15 major Subsidy Schemes) ಘೋಷಿಸಿದೆ. ಕಟ್ಟಡ ಕಾರ್ಮಿಕರಿಂದ ಹಿಡಿದು ವಿವಿಧ ಶ್ರಮ ಕ್ಷೇತ್ರಗಳಲ್ಲಿ ತೊಡಗಿರುವ ನೋಂದಾಯಿತ ಕಾರ್ಮಿಕರಿಗೆ ಈ ಯೋಜನೆಗಳು ಆಶಾದೀಪವಾಗಿವೆ. ಸಾಮಾಜಿಕ ಭದ್ರತೆ, ಆರೋಗ್ಯ, ಶಿಕ್ಷಣ ಹಾಗೂ ವಸತಿ ಸೇರಿದಂತೆ ಜೀವನದ ಪ್ರತಿಯೊಂದು ಹಂತದಲ್ಲಿ ನೆರವಾಗುವ ರೀತಿಯಲ್ಲಿ ಈ ಸೌಲಭ್ಯಗಳನ್ನು ರೂಪಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಪಿಂಚಣಿ ಸೌಲಭ್ಯ:
ಮೂರು ವರ್ಷಗಳ ಸದಸ್ಯತ್ವದ ನಂತರ 60 ವರ್ಷ ವಯಸ್ಸು ಪೂರೈಸಿದ ಫಲಾನುಭವಿಗಳಿಗೆ ಮಾಸಿಕ ರೂ. 1,000/- ಪಿಂಚಣಿ ದೊರೆಯಲಿದೆ. ಇದು ವಯೋವೃದ್ಧ ಕಾರ್ಮಿಕರ ಜೀವನಕ್ಕೆ ಸ್ಥಿರತೆ ನೀಡುವ ಮಹತ್ವದ ಯೋಜನೆ.
ದುರ್ಬಲತೆ ಪಿಂಚಣಿ(Disability pension) ಮತ್ತು ಅನುಗ್ರಹ ಧನ:
ಕಾರ್ಮಿಕರು ಕೆಲಸದ ವೇಳೆ ಅಪಘಾತಕ್ಕೊಳಗಾದರೆ ಅಥವಾ ಅಂಗವಿಕಲರಾದರೆ, ತಿಂಗಳಿಗೆ ರೂ.1,000/- ಪಿಂಚಣಿ ಹಾಗೂ ಶೇಕಡಾವಾರು ದುರ್ಬಲತೆಯ ಆಧಾರದ ಮೇಲೆ ರೂ.2 ಲಕ್ಷದವರೆಗೆ ಸಹಾಯಧನ ದೊರೆಯಲಿದೆ.
ಟ್ರೈನಿಂಗ್-ಕಮ್-ಟೂಲ್ಕಿಟ್ ಸೌಲಭ್ಯ (ಶ್ರಮ ಸಾಮರ್ಥ್ಯ):
ತಮ್ಮ ಕೌಶಲ್ಯವನ್ನು ವೃದ್ಧಿಸಲು ಬಯಸುವ ಕಾರ್ಮಿಕರಿಗೆ ರೂ. 20,000/- ವರೆಗೆ ತರಬೇತಿ ಹಾಗೂ ಉಪಕರಣ ಸಹಾಯಧನ ನೀಡಲಾಗುತ್ತದೆ.
ವಸತಿ ಸೌಲಭ್ಯ (ಕಾರ್ಮಿಕ ಗೃಹ ಭಾಗ್ಯ):
ಸ್ವಂತ ಮನೆ ಕನಸನ್ನು ಸಾಕಾರಗೊಳಿಸಲು, ನೋಂದಾಯಿತ ಕಾರ್ಮಿಕರಿಗೆ ರೂ. 2,00,000/- ವರೆಗೆ ಮನೆ ನಿರ್ಮಾಣ ಮುಂಗಡ ಸಹಾಯಧನ ಲಭ್ಯ.
ವಸತಿ ಸೌಲಭ್ಯ (ಕಾರ್ಮಿಕ ಗೃಹ ಭಾಗ್ಯ):
ಮಹಿಳಾ ಕಾರ್ಮಿಕರ ಮೊದಲ ಎರಡು ಮಕ್ಕಳಿಗೆ ಹೆಣ್ಣು ಮಗುವಿನ ಜನನಕ್ಕೆ ರೂ. 30,000/-, ಗಂಡು ಮಗುವಿಗೆ ರೂ. 20,000/- ಸಹಾಯಧನ ನೀಡಲಾಗುತ್ತದೆ.
ಅಂತ್ಯಕ್ರಿಯೆ ವೆಚ್ಚ ಹಾಗೂ ಅನುಗ್ರಹ ರಾಶಿ:
ಫಲಾನುಭವಿ ನಿಧನರಾದಲ್ಲಿ ಕುಟುಂಬಕ್ಕೆ ರೂ.4,000/- ಅಂತ್ಯಕ್ರಿಯೆ ವೆಚ್ಚ ಹಾಗೂ ರೂ.50,000/- ಅನುಗ್ರಹ ಧನ ನೀಡಲಾಗುತ್ತದೆ.
ಶೈಕ್ಷಣಿಕ ಸಹಾಯಧನ (ಕಲಿಕೆ ಭಾಗ್ಯ):
ಕಾರ್ಮಿಕರ ಮಕ್ಕಳಿಗೆ ಪ್ರಾಥಮಿಕದಿಂದ ಪಿಹೆಚ್ಡಿ ಮಟ್ಟದವರೆಗೆ ಸಹಾಯಧನ ಲಭ್ಯ:
1–3ನೇ – ತರಗತಿ₹2,000
4–6ನೇ – ತರಗತಿ₹3,000
7–8ನೇ – ತರಗತಿ₹4,000
9–10ನೇ – ತರಗತಿ / I PUC₹6,000
II PUC – ₹8,000
ಐಟಿಐ / ಡಿಪ್ಲೋಮಾ – ₹7,000 ಪ್ರತಿ ವರ್ಷ
ಪದವಿ – ₹10,000 ಪ್ರತಿ ವರ್ಷ
ಸ್ನಾತಕೋತ್ತರ – ₹20,000 ಸೇರ್ಪಡೆಗೆ + ₹10,000 ಪ್ರತಿ ವರ್ಷ
ಇಂಜಿನಿಯರಿಂಗ್ – ₹25,000 ಸೇರ್ಪಡೆಗೆ + ₹20,000 ಪ್ರತಿ ವರ್ಷ
ವೈದ್ಯಕೀಯ ಕೋರ್ಸ್ – ₹30,000 ಸೇರ್ಪಡೆಗೆ + ₹25,000 ಪ್ರತಿ ವರ್ಷ
ಪಿಹೆಚ್ಡಿ – ₹20,000ಪ್ರತಿ ವರ್ಷ + ಪ್ರಬಂಧ ನಂತರ ₹20,000 ಹೆಚ್ಚುವರಿ
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬೋನಸ್ ಸಹಾಯಧನ:
SSLC: ₹5,000
PUC: ₹7,000
ಪದವಿ: ₹10,000
ಸ್ನಾತಕೋತ್ತರ: ₹15,000
ವೈದ್ಯಕೀಯ ಸಹಾಯಧನ (ಕಾರ್ಮಿಕ ಆರೋಗ್ಯ ಭಾಗ್ಯ):
ಕಾರ್ಮಿಕರು ಹಾಗೂ ಅವರ ಕುಟುಂಬದವರಿಗೆ ₹300 ರಿಂದ ₹10,000 ವರೆಗೆ ವೈದ್ಯಕೀಯ ನೆರವು ದೊರೆಯಲಿದೆ.
ಅಪಘಾತ ಪರಿಹಾರ:
ಮರಣ: ₹5,00,000
ಶಾಶ್ವತ ದುರ್ಬಲತೆ: ₹2,00,000
ಭಾಗಶಃ ದುರ್ಬಲತೆ: ₹1,00,000
ಮುಖ್ಯ ವೈದ್ಯಕೀಯ ವೆಚ್ಚ ಸಹಾಯಧನ (ಕಾರ್ಮಿಕ ಚಿಕಿತ್ಸಾ ಭಾಗ್ಯ):
ಹೃದ್ರೋಗ, ಕ್ಯಾನ್ಸರ್, ಕಿಡ್ನಿ, ಶಸ್ತ್ರಚಿಕಿತ್ಸೆ ಮೊದಲಾದ ಗಂಭೀರ ರೋಗಗಳಿಗೆ ₹2,00,000 ವರೆಗೆ ಸಹಾಯಧನ ಲಭ್ಯ.
ಮದುವೆ ಸಹಾಯಧನ (ಗೃಹ ಲಕ್ಷ್ಮೀ ಬಾಂಡ್):
ಕಾರ್ಮಿಕ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ತಲಾ ₹50,000/- ಸಹಾಯಧನ ನೀಡಲಾಗುತ್ತದೆ.
LPG ಸಂಪರ್ಕ (ಕಾರ್ಮಿಕ ಅನಿಲ ಭಾಗ್ಯ):
ಅನಿಲ ಸಂಪರ್ಕದೊಂದಿಗೆ ಎರಡು ಬರ್ನರ್ ಸ್ಟವ್ ಸಹಿತ ಉಚಿತ ಸೌಲಭ್ಯ ಲಭ್ಯ.
ಬಿಎಂಟಿಸಿ ಬಸ್ ಪಾಸ್ ಸೌಲಭ್ಯ:
ಬೆಂಗಳೂರು ನಗರ ವ್ಯಾಪ್ತಿಯ ಕಾರ್ಮಿಕರಿಗೆ ಹಾಗೂ ನಗರದ ಹೊರವಲಯದಿಂದ ಕೆಲಸಕ್ಕೆ ಬರುವವರಿಗೆ ಬಿಎಂಟಿಸಿ ಬಸ್ ಪಾಸ್ ನೀಡಲಾಗುತ್ತದೆ.
ಕೆಎಸ್ಆರ್ಟಿಸಿ ಬಸ್ ಪಾಸ್ ಸೌಲಭ್ಯ:
ರಾಜ್ಯಾದ್ಯಂತ ವಿದ್ಯಾಭ್ಯಾಸದಲ್ಲಿರುವ ಕಾರ್ಮಿಕರ ಇಬ್ಬರು ಮಕ್ಕಳಿಗೆ ಉಚಿತ ಬಸ್ ಪಾಸ್ ಸೌಲಭ್ಯ ನೀಡಲಾಗುತ್ತದೆ.
ತಾಯಿ ಮಗು ಸಹಾಯ ಹಸ್ತ:
ಮಗುವಿನ ಪೌಷ್ಠಿಕತೆ ಹಾಗೂ ಶಾಲಾ ಪೂರ್ವ ಶಿಕ್ಷಣಕ್ಕಾಗಿ, ತಾಯಿ ಫಲಾನುಭವಿಗೆ ಮಗುವಿಗೆ ಪ್ರತಿ ವರ್ಷ ₹6,000/- (ಮೂರು ವರ್ಷಗಳವರೆಗೆ) ಸಿಗುತ್ತದೆ.
ಒಟ್ಟಾರೆ, ಈ ಸೌಲಭ್ಯಗಳು ಕೇವಲ ಆರ್ಥಿಕ ನೆರವಿನಷ್ಟೇ ಅಲ್ಲ; ಇದು ಕಾರ್ಮಿಕರ ಬದುಕನ್ನು ಮಾನವೀಯತೆ, ಗೌರವ ಮತ್ತು ಭದ್ರತೆಯೊಂದಿಗೆ ತುಂಬುವ ಸರ್ಕಾರದ ಹೆಜ್ಜೆಯಾಗಿದೆ. ಕೆಲಸಗಾರ ಸಮುದಾಯದ ಶ್ರಮಕ್ಕೆ ಸರ್ಕಾರದ ಗೌರವ ಮತ್ತು ಕೃತಜ್ಞತೆಯ ಪ್ರತೀಕವೇ ಈ ಯೋಜನೆಗಳು.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

“ಕೃಷ್ಣಸಾಗರಿ ಅವರು NeedsOfPublic.in ನ ‘ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ’ (Job Updates & Career) ವಿಭಾಗದ ಮುಖ್ಯಸ್ಥರಾಗಿದ್ದಾರೆ. ಉದ್ಯೋಗ ಮಾಹಿತಿ ಕ್ಷೇತ್ರದಲ್ಲಿ 4 ವರ್ಷಗಳ ವೃತ್ತಿಪರ ಅನುಭವ ಹೊಂದಿರುವ ಇವರು, ಸರ್ಕಾರಿ ಉದ್ಯೋಗದ ಅಧಿಸೂಚನೆಗಳು (Govt Job Notifications), ಖಾಸಗಿ ವಲಯದ ನೇಮಕಾತಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಅಪ್ಡೇಟ್ಗಳನ್ನು ಒದಗಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಉದ್ಯೋಗಾಕಾಂಕ್ಷಿಗಳಿಗೆ ಕೇವಲ ಅಧಿಕೃತ ಮೂಲಗಳಿಂದ ಪರಿಶೀಲಿಸಿದ (verified) ಮತ್ತು ನಿಖರವಾದ ಉದ್ಯೋಗದ ಮಾಹಿತಿಯನ್ನು ಸಕಾಲದಲ್ಲಿ ತಲುಪಿಸುವುದು ಸಾಗರಿ ಅವರ ಪ್ರಮುಖ ಗುರಿಯಾಗಿದೆ.”


WhatsApp Group




