ಮುಖ್ಯಾಂಶಗಳು: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು 2025-26ನೇ ಸಾಲಿನ ‘ಸಾಂದೀಪನಿ ಶಿಷ್ಯವೇತನ’ಕ್ಕೆ ಅರ್ಜಿ ಕರೆದಿದೆ. ಅರ್ಹ ವಿದ್ಯಾರ್ಥಿಗಳಿಗೆ ಮಾಸಿಕ ₹1,500 ರಂತೆ ಒಟ್ಟು ₹15,000 ಸಹಾಯಧನ ಮತ್ತು ವೃತ್ತಿಪರ ಕೋರ್ಸ್ಗಳಿಗೆ ₹1 ಲಕ್ಷದವರೆಗೆ ಶುಲ್ಕ ಮರುಪಾವತಿ ಸಿಗಲಿದೆ.
ಬೆಂಗಳೂರು: ಪ್ರತಿಭೆ ಇದ್ದರೂ ಹಣದ ಕೊರತೆಯಿಂದ ಉನ್ನತ ಶಿಕ್ಷಣ ಪಡೆಯಲು ಕಷ್ಟಪಡುತ್ತಿರುವ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಆರ್ಥಿಕ ಸಂಜೀವಿನಿ ನೀಡಿದೆ.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು (KSBDB) ತನ್ನ ಮಹತ್ವಾಕಾಂಕ್ಷೆಯ “ಸಾಂದೀಪನಿ ಶಿಷ್ಯವೇತನ” (Saandipani Scholarship) ಯೋಜನೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಇದರ ಲಾಭ ಪಡೆಯಬಹುದು. ಈ ಕುರಿತು ಸಂಪೂರ್ಣ ವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಸಿಗುವ ಸವಲತ್ತುಗಳೇನು? (Scheme Benefits)
ಈ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಎರಡು ರೀತಿಯಲ್ಲಿ ಹಣಕಾಸಿನ ನೆರವು ನೀಡಲಾಗುತ್ತದೆ:
ಎ) ನಿರ್ವಹಣಾ ವೆಚ್ಚ (Maintenance Allowance): ಪಿಯುಸಿ (PUC), ಡಿಪ್ಲೋಮಾ, ಐಟಿಐ ಮತ್ತು ಸಾಮಾನ್ಯ ಪದವಿ (Degree) ಓದುತ್ತಿರುವ ವಿದ್ಯಾರ್ಥಿಗಳಿಗೆ ತಿಂಗಳಿಗೆ ₹1,500 ರಂತೆ, 10 ತಿಂಗಳಿಗೆ ಒಟ್ಟು ₹15,000 ಸಹಾಯಧನವನ್ನು ನೇರವಾಗಿ ಖಾತೆಗೆ ಜಮೆ ಮಾಡಲಾಗುತ್ತದೆ.
ಬಿ) ಶುಲ್ಕ ಮರುಪಾವತಿ (Fee Reimbursement): ಸಿಇಟಿ (CET) ಅಥವಾ ನೀಟ್ (NEET) ಮೂಲಕ ಮೆರಿಟ್ ಸೀಟು ಪಡೆದು ಇಂಜಿನಿಯರಿಂಗ್, ಮೆಡಿಕಲ್ ಮುಂತಾದ ವೃತ್ತಿಪರ ಕೋರ್ಸ್ ಮಾಡುತ್ತಿರುವವರಿಗೆ, ಅವರು ಕಾಲೇಜಿಗೆ ಪಾವತಿಸಿದ ಸರ್ಕಾರಿ ಶುಲ್ಕದಲ್ಲಿ ಗರಿಷ್ಠ ₹1 ಲಕ್ಷದವರೆಗೆ ಹಣವನ್ನು ವಾಪಸ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಅರ್ಹತೆಗಳು (Eligibility)
ಅರ್ಜಿದಾರರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿರಬೇಕು.
ಕುಟುಂಬದ ವಾರ್ಷಿಕ ಆದಾಯ ₹8 ಲಕ್ಷ ಮೀಿರಬಾರದು (ಇದು ಹಲವು ಮಧ್ಯಮ ವರ್ಗದ ಕುಟುಂಬಗಳಿಗೆ ವರದಾನ).
ವಿದ್ಯಾರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
ವಿಶೇಷ ಸೂಚನೆ: ಒಂದು ಕುಟುಂಬದಲ್ಲಿ ಗರಿಷ್ಠ ಇಬ್ಬರು ಗಂಡು ಮಕ್ಕಳಿಗೆ ಮಾತ್ರ ಈ ಯೋಜನೆ ಸಿಗುತ್ತದೆ. ಆದರೆ, ಹೆಣ್ಣು ಮಕ್ಕಳಿಗೆ ಯಾವುದೇ ಮಿತಿ ಇಲ್ಲ (ಎಷ್ಟು ಜನ ಬೇಕಾದರೂ ಅರ್ಜಿ ಹಾಕಬಹುದು).
ಯಾರು ಅರ್ಹರಲ್ಲ?
- ಒಂದೇ ತರಗತಿಯನ್ನು ಎರಡು ಬಾರಿ ಓದುತ್ತಿರುವವರು.
- ಮ್ಯಾನೇಜ್ಮೆಂಟ್ ಕೋಟಾ (Management Quota) ಅಡಿಯಲ್ಲಿ ಸೀಟು ಪಡೆದವರು ಶುಲ್ಕ ಮರುಪಾವತಿಗೆ ಅರ್ಹರಲ್ಲ.
ಬೇಕಾಗುವ ದಾಖಲೆಗಳು (Documents Required)
ಅರ್ಜಿ ಸಲ್ಲಿಸುವ ಮುನ್ನ ಈ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ:
- EWS ಪ್ರಮಾಣ ಪತ್ರ ಅಥವಾ ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
- ಆಧಾರ್ ಕಾರ್ಡ್.
- SSLC ಮತ್ತು ಹಿಂದಿನ ತರಗತಿಯ ಮಾರ್ಕ್ಸ್ ಕಾರ್ಡ್.
- ಬ್ಯಾಂಕ್ ಪಾಸ್ಬುಕ್ ಜೆರಾಕ್ಸ್.
- ಶುಲ್ಕ ಪಾವತಿಸಿದ ರಸೀದಿ (ವೃತ್ತಿಪರ ಕೋರ್ಸ್ಗಳಿಗೆ).
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಕೆ ಸಂಪೂರ್ಣ ಆನ್ಲೈನ್ ಆಗಿದ್ದು, ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ (SSP Portal) ಮೂಲಕವೇ ಸಲ್ಲಿಸಬೇಕು.
- Website: ssp.postmatric.karnataka.gov.in
- Last Date: ಫೆಬ್ರವರಿ 28, 2026.
| ವಿವರ (Details) | ಲಿಂಕ್ (Direct Link) |
|---|---|
| Apply Online (SSP) | 👉 Click to Apply |
| Official Website | 👉 KSBDB Website |
| More Updates | 👉 Needs of Public |
NSP vs SSP: ಗೊಂದಲ ಇದೆಯಾ? ಈ ವಿಡಿಯೋ ನೋಡಿ
ರಾಷ್ಟ್ರೀಯ ಸ್ಕಾಲರ್ಶಿಪ್ (NSP) ಮತ್ತು ರಾಜ್ಯ ಸ್ಕಾಲರ್ಶಿಪ್ (SSP) ನಡುವೆ ಇರುವ ವ್ಯತ್ಯಾಸವೇನು? ಎರಡಕ್ಕೂ ಅರ್ಜಿ ಸಲ್ಲಿಸಬಹುದಾ? ಎಂಬ ಗೊಂದಲ ನಿಮಗಿದ್ದರೆ, ನಮ್ಮ ಈ ವಿಡಿಯೋವನ್ನು ತಪ್ಪದೆ ನೋಡಿ. ಸಂಪೂರ್ಣ ಮಾಹಿತಿ ಇಲ್ಲಿದೆ:
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್

“ಕೃಷ್ಣಸಾಗರಿ ಅವರು NeedsOfPublic.in ನ ‘ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ’ (Job Updates & Career) ವಿಭಾಗದ ಮುಖ್ಯಸ್ಥರಾಗಿದ್ದಾರೆ. ಉದ್ಯೋಗ ಮಾಹಿತಿ ಕ್ಷೇತ್ರದಲ್ಲಿ 4 ವರ್ಷಗಳ ವೃತ್ತಿಪರ ಅನುಭವ ಹೊಂದಿರುವ ಇವರು, ಸರ್ಕಾರಿ ಉದ್ಯೋಗದ ಅಧಿಸೂಚನೆಗಳು (Govt Job Notifications), ಖಾಸಗಿ ವಲಯದ ನೇಮಕಾತಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಅಪ್ಡೇಟ್ಗಳನ್ನು ಒದಗಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಉದ್ಯೋಗಾಕಾಂಕ್ಷಿಗಳಿಗೆ ಕೇವಲ ಅಧಿಕೃತ ಮೂಲಗಳಿಂದ ಪರಿಶೀಲಿಸಿದ (verified) ಮತ್ತು ನಿಖರವಾದ ಉದ್ಯೋಗದ ಮಾಹಿತಿಯನ್ನು ಸಕಾಲದಲ್ಲಿ ತಲುಪಿಸುವುದು ಸಾಗರಿ ಅವರ ಪ್ರಮುಖ ಗುರಿಯಾಗಿದೆ.”


WhatsApp Group




