ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆದ ಬಿಗ್ ಬಾಸ್ ಸೀಸನ್ 10(BigBoss season 10) ರಲ್ಲಿ ಮನೋರಂಜನೆಗಿಂತ ವಾದ ವಿವಾದಗಳು, ಕಿತ್ತಾಟಗಳು ಜಗಳಗಳೇ ಜಾಸ್ತಿಯಾಗಿವೆ. ರಾಕ್ಷಸರು ಹಾಗೂ ಗಂಧರ್ವರ ಆಟದಲ್ಲಿ ಹಲವಾರು ಸ್ಪರ್ಧೆಗಳು ರಾಕ್ಷಸರಂತೆಯೇ ನಡೆದುಕೊಂಡಿದ್ದಾರೆ. ಇದರಿಂದಾಗಿ ಸಂಗೀತ(Sangeeta) ಹಾಗೂ ಪ್ರತಾಪ್(Drone prathap) ಅವರು ಟಾಸ್ಕ್ ಒಂದರಲ್ಲಿ ಸೋಪಿನ ನೀರು ಕಣ್ಣಿಗೆ ಹೋಗಿ ಆಸ್ಪತ್ರೆಯನ್ನು ಸೇರಿದ್ದು ಎಲ್ಲರಿಗೂ ತಿಳಿದೇ ಇದೆ. ಇವತ್ತಿನ ಬಿಗ್ ಬಾಸ್ ಪ್ರೊಮೊದಲ್ಲಿ ಸಂಗೀತ ಹಾಗೂ ಡ್ರೋನ್ ಪ್ರತಾಪ್ ಅವರು ಕಪ್ಪು ಕನ್ನಡಕವನ್ನು ಧರಿಸಿ ಮನೆಗೆ ಮತ್ತೆ ಬಂದಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ವರದಿಯಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಆಸ್ಪತ್ರೆಯಿಂದ ಬಿಗ್ ಬಾಸ್ ಮನೆಗೆ ವಾಪಸ್ ಆದ ಸಂಗೀತ ಹಾಗೂ ಪ್ರತಾಪ್ :

ಟಾಸ್ಕಿನಲ್ಲಿ ಗಂಧರ್ವರ ಗುಂಪಿನವರಾದ ಸಂಗೀತ ಹಾಗೂ ಪ್ರತಾಪ್ ಅವರಿಗೆ ರಾಕ್ಷಸರ ಗುಂಪಿನವರು ಸೋಪಿನ ನೀರನ್ನು ಎರಚಿದ ಕಾರಣ ಅದರಲ್ಲಿ ಇದ್ದ ಕೆಮಿಕಲ್ ನಿಂದ ಕಣ್ಣಿಗೆ ಅಪಾಯ ಉಂಟಾಗಿ ಆಸ್ಪತ್ರೆಯನ್ನು ತರಲಿದ್ದರು. ಒಂದು ದಿನ ಕಳೆದರೂ ಅವರಿಬ್ಬರು ಮತ್ತೆ ಮನೆಗೆ ಬರದಿದ್ದನ್ನು ನೋಡಿ ಎಲ್ಲರೂ ಏನಾಗಿರಬಹುದು ಎಂದು ಗಾಬರಿಗೊಂಡಿದ್ದರು. ಪ್ರೇಕ್ಷಕರಲ್ಲಿಯೂ ಕೂಡ ಇದು ಒಂದು ಕುತೂಹಲವನ್ನೇ ಉಂಟು ಮಾಡಿತ್ತು. ಆದರೆ ಇವತ್ತು ಸಂಗೀತ ಹಾಗೂ ಡ್ರೋನ್ ಪ್ರತಾಪ್ ಮತ್ತೆ ಮನೆಗೆ ಕಪ್ಪು ಕನ್ನಡಕವನ್ನು ಧರಿಸಿ ಬಂದಿದ್ದಾರೆ.
ಅವರಿಬ್ಬರೂ ಮನೆಯ ಒಳಗೆ ಬಂದ ತಕ್ಷಣ ಮನೆಯವರೆಲ್ಲ ಬಾಗಿಲ ಹತ್ತಿರ ಓಡಿ ಹೋಗಿ, ಈಗ ಹೇಗಿದೆ ಎಂದು ವಿಚಾರಿಸಿದ್ದಾರೆ. ಕನ್ನಡಕ ಹಾಕಿಕೊಂಡಿರುವುದರಿಂದ ಕಣ್ಣು ಸರಿಯಾಗಿ ಕಾಣುತ್ತಿದೆಯೇ ಎಂದು ಕೂಡ ಕೇಳಿತಕ್ಕೆ ಪ್ರತಾಪ್ ಅವರು ಕಾಣಿಸುತ್ತಿದೆ ಎಂದು ಹೇಳುತ್ತಾರೆ. ಸಂಗೀತ ಅವರು ಕೂಡ ಸ್ವಲ್ಪ ದಿನಗಳಲ್ಲಿ ಸರಿಯಾಗುತ್ತದೆ ಎಂದು ಉತ್ತರವನ್ನು ನೀಡಿದ್ದಾರೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಸುದೀಪ್ ಅವರ ಶನಿವಾರದ ಪಂಚಾಯಿತಿಗೆ ಕಾತುರದಿಂದ ಕಾಯುತ್ತಿರುವ ವೀಕ್ಷಕರು :
ಈ ಬಾರಿ ಬಿಗ್ ಬಾಸ್ ನಲ್ಲಿ ಗಲಾಟೆಯು ಜೋರಾಗಿಯೇ ನಡೆಯುತ್ತಿದೆ. ಈ ವಾರದ ಟಾಸ್ಕ್ಗಳಲ್ಲಂತೂ ಹಲವರು ರಾಕ್ಷಸರಂತೆಯೇ ವರ್ತಿಸಿದ್ದಾರೆ. ಪ್ರೇಕ್ಷಕರು ಇಷ್ಟು ಮಾನವೀಯತೆಯನ್ನು ಮರೆತು ಆಡುವುದು ಒಳ್ಳೆಯದೇ ಎಂದು ಪ್ರಶ್ನಿಸುತ್ತಿದ್ದಾರೆ. ಈ ವಾರದ ಆಟ ಎಷ್ಟರಮಟ್ಟಿಗೆ ಸದ್ದು ಮಾಡುತ್ತದೆ ಎಂದರೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ ಅವರು ಕೂಡ, ಕೆಮಿಕಲ್ ಪುಡಿಯನ್ನು ಹಾಕಿ ಮುಖಕ್ಕೆ ನೀರನ್ನು ಎರಚುವುದು ಕ್ರೂರ ಎನಿಸಿತು ಎಂದು ಹೇಳಿಕೆ ನೀಡಿದ್ದಾರೆ. ಇವೆಲ್ಲವನ್ನೂ ಕಂಡ ಮೇಲೆ ಶನಿವಾರದ ಸುದೀಪನ ಪಂಚಾಯಿತಿಯಲ್ಲಿ ಅವರು ಏನು ಹೇಳುತ್ತಾರೆ ಎಂಬುವುದನ್ನು ನೋಡಬೇಕಿದೆ.
ಸೋಪಿನ ಪುಡಿಯನ್ನು ಮುಖಕ್ಕೆ ಎರಚಿ ಆಟ ಆಡಿರುವುದರ ಬಗ್ಗೆ ಸುದೀಪ ಅವರು ಏನು ಹೇಳುತ್ತಾರೆ?, ಕಾರ್ತಿಕ್ ಅವರನ್ನು ಜೈಲಿಗೆ ಕಳುಹಿಸಿದರ ಬಗ್ಗೆ ಅವರ ಅಭಿಪ್ರಾಯವೇನು?, ಅಷ್ಟೇ ಅಲ್ಲದೆ ಕಾರ್ತಿಕ್ ಹಾಗೂ ವಿನಯ್ ನಡುವೆ ನಡೆದ ಚಪ್ಪಲಿಯ ವಿವಾದದ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ನೋಡಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಅಷ್ಟೇ ಅಲ್ಲದೆ ಬಿಗ್ ಬಾಸ್ ಮನೆಯಿಂದ ಈ ವಾರ ಯಾರು ಇರುತ್ತಾರೆ?, ಯಾರು ಹೋಗುತ್ತಾರೆ?, ಮೊದಲು ಯಾರು ಸೇಫ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ಈ ಮಾಹಿತಿಗಳನ್ನು ಓದಿ
- ವಿನಯ್-ಕಾರ್ತಿಕ್ ನಡುವೆ ಫಿಸಿಕಲ್ ಅಟ್ಯಾಕ್; ಫೇಲ್ ಆಯ್ತಾ ಸ್ನೇಹಿತ್ ಉಸ್ತುವಾರಿ
- ಮಿತಿ ಮೀರಿದ ಟಾಸ್ಕ್ ಗಲಾಟೆ, ಸಂಗೀತಾ, ಪ್ರತಾಪ್ ಆಸ್ಪತ್ರೆಗೆ. ವಾರದ ಕಳಪೆ ಪಟ್ಟ ಕಾರ್ತಿಕ್ ಗೆ
- ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ, ರಾಕ್ಷಸರ ಮಾತು ಧಿಕ್ಕರಿಸಿದ ಸಂಗೀತಾ
- ಈ ಬಾರಿ ಫಿನಾಲೆ ತಲುಪುವ ಅರ್ಹತೆ ಯಾರಿಗಿದೆ..? ಯಾರು ಗೆಲ್ಲುತ್ತಾರೆ ಗೊತ್ತಾ ?
- ಉಸ್ತುವಾರಿಯಲ್ಲಿ ಮತ್ತೆ ಎಡವಟ್ಟು ಮಾಡಿಕೊಂಡ್ರಾ ಸ್ನೇಹಿತ್.?
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group








