ರಾಜ್ಯ ಸರ್ಕಾರವು ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಶುಭವಾರ್ತೆಯನ್ನು ತಂದಿದೆ. ಸರ್ಕಾರಿ ನೇಮಕಾತಿ ಪ್ರಕ್ರಿಯೆಯಲ್ಲಿ ವಯೋಮಿತಿಯನ್ನು ಮೂರು ವರ್ಷಗಳವರೆಗೆ ಸಡಿಲಿಸುವ ಮಹತ್ವದ ನಿರ್ಣಯವನ್ನು ಸರ್ಕಾರ ತೀರಿಸಿಕೊಂಡಿದೆ. ಈ ಆದೇಶವು ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ಅನ್ವಯಿಸಲಿದೆ. ಈ ಸಡಿಲಿಕೆಯು 2027ರ ಡಿಸೆಂಬರ್ 31ರ ವರೆಗೆ ಮಾತ್ರ ಜಾರಿಯಲ್ಲಿರಲಿದೆ ಎಂದು ಸರ್ಕಾರವು ತಿಳಿಸಿದೆ. ಇದರ ಪ್ರಕಾರ, ಪ್ರಸ್ತುತ ನಡೆಯಲಿರುವ ಮತ್ತು ಭವಿಷ್ಯದ ನೇಮಕಾತಿ ಪ್ರಕ್ರಿಯೆಗಳಲ್ಲಿ ಈ ವಯೋಮಿತಿ ರಿಯಾಯ್ತಿಯನ್ನು ಪಡೆಯಲು ಅರ್ಜಿದಾರರು ಅರ್ಹರಾಗಿರುತ್ತಾರೆ. ಆದರೆ, ಈ ರಿಯಾಯ್ತಿಯನ್ನು ಒಂದು ಬಾರಿ ಮಾತ್ರವೇ ಯಾವುದೇ ಅಭ್ಯರ್ಥಿ ಪಡೆಯುವ ಅವಕಾಶ ಇದೆ ಎಂದು ಸರ್ಕಾರಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಬಹಳ ವರ್ಷಗಳಿಂದ ರಾಜ್ಯ ಸರ್ಕಾರವು ನೇರ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸಿರಲಿಲ್ಲ. ಇದರಿಂದಾಗಿ, ಸರ್ಕಾರಿ ಉದ್ಯೋಗಗಳಿಗಾಗಿ ತಯಾರಿ ನಡೆಸುತ್ತಿದ್ದ ಅನೇಕ ಯುವಕ ಯುವತಿಯರ ವಯಸ್ಸು ನಿಗದಿತ ಮಿತಿಯನ್ನು ಮೀರಿ ಹೋಗುತ್ತಿತ್ತು ಮತ್ತು ಅವರು ಉದ್ಯೋಗಾವಕಾಶಗಳನ್ನು ಕಳೆದುಕೊಳ್ಳುವ ಸಂದರ್ಭಗಳು ಉಂಟಾಗಿದ್ದವು. ಆದರೆ, ಈ ಹೊಸ ಆದೇಶದಿಂದ ಈ ಚಿಂತೆ ಇನ್ನು ಮುಂದೆ ಇರುವುದಿಲ್ಲ. ಸರ್ಕಾರಿ ಉದ್ಯೋಗವನ್ನು ಬಯಸುವ ಅಭ್ಯರ್ಥಿಗಳಿಗೆ ಇದು ಒಂದು ಸುವರ್ಣಾವಕಾಶವಾಗಿದೆ.
ವಿವಿಧ ವರ್ಗಗಳಿಗೆ ಎಷ್ಟು ವಯೋಮಿತಿ ಸಡಿಲಿಕೆ?
ಸಾಮಾನ್ಯ ವರ್ಗ: ಹಿಂದಿನ ಮಿತಿ 35 ವರ್ಷ, ಹೊಸ ಮಿತಿ 38 ವರ್ಷ
ಓಬಿಸಿ ವರ್ಗ: ಹಿಂದಿನ ಮಿತಿ 38 ವರ್ಷ, ಹೊಸ ಮಿತಿ 41 ವರ್ಷ
ಎಸ್ಸಿ/ಎಸ್ಟಿ ವರ್ಗ: ಹಿಂದಿನ ಮಿತಿ 40 ವರ್ಷ, ಹೊಸ ಮಿತಿ 43 ವರ್ಷ
ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ವಯೋಮಿತಿ:
ಸಾಮಾನ್ಯ ವರ್ಗ: ಹಿಂದಿನ ಮಿತಿ 40 ವರ್ಷ, ಹೊಸ ಮಿತಿ 43 ವರ್ಷ
ಎಸ್ಸಿ/ಎಸ್ಟಿ/ಓಬಿಸಿ ವರ್ಗ: ಹಿಂದಿನ ಮಿತಿ 42 ವರ್ಷ, ಹೊಸ ಮಿತಿ 45 ವರ್ಷ
ಎಸ್.ಡಿ.ಎ., ಎಫ್.ಡಿ.ಎ. ಮತ್ತು ಗ್ರೂಪ್ ಸಿ ಹುದ್ದೆಗಳಿಗೆ:
ಸಾಮಾನ್ಯ ವರ್ಗ: ಹಿಂದಿನ ಮಿತಿ 37 ವರ್ಷ, ಹೊಸ ಮಿತಿ 40 ವರ್ಷ
ಎಸ್ಸಿ/ಎಸ್ಟಿ/ಓಬಿಸಿ ವರ್ಗ: ಹಿಂದಿನ ಮಿತಿ 35 ವರ್ಷ, ಹೊಸ ಮಿತಿ 38 ವರ್ಷ
ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಗೆ:
ಸಾಮಾನ್ಯ ವರ್ಗ: ಹಿಂದಿನ ಮಿತಿ 25 ವರ್ಷ, ಹೊಸ ಮಿತಿ 28 ವರ್ಷ
ಎಸ್ಸಿ/ಎಸ್ಟಿ/ಓಬಿಸಿ ವರ್ಗ: ಹಿಂದಿನ ಮಿತಿ 27 ವರ್ಷ, ಹೊಸ ಮಿತಿ 30 ವರ್ಷ
ಪೊಲೀಸ್ ಸಬ್-ಇನ್ಸ್ಪೆಕ್ಟರ್ (ಎಸ್ಐ) ಹುದ್ದೆಗೆ:
ಸಾಮಾನ್ಯ ವರ್ಗ: ಹಿಂದಿನ ಮಿತಿ 30 ವರ್ಷ, ಹೊಸ ಮಿತಿ 33 ವರ್ಷ
ಎಸ್ಸಿ/ಎಸ್ಟಿ/ಓಬಿಸಿ ವರ್ಗ: ಹಿಂದಿನ ಮಿತಿ 32 ವರ್ಷ, ಹೊಸ ಮಿತಿ 35 ವರ್ಷ
ಕರ್ನಾಟಕ ಅಡ್ಮಿನಿಸ್ಟ್ರೇಟಿವ್ ಸರ್ವಿಸ್ (ಕೆಎಎಸ್) ಹುದ್ದೆಗಳಿಗೆ:
ಸಾಮಾನ್ಯ ವರ್ಗ: ಹಿಂದಿನ ಮಿತಿ 37 ವರ್ಷ, ಹೊಸ ಮಿತಿ 40 ವರ್ಷ
ಎಸ್ಸಿ/ಎಸ್ಟಿ/ಓಬಿಸಿ ವರ್ಗ: ಹಿಂದಿನ ಮಿತಿ 40 ವರ್ಷ, ಹೊಸ ಮಿತಿ 43 ವರ್ಷ
ಈ ನಿರ್ಣಯದಿಂದ ರಾಜ್ಯದ ಲಕ್ಷಾಂತರ ಯುವಕ ಯುವತಿಯರು ಲಾಭಪಡೆಯುವರು ಎಂದು ನಿರೀಕ್ಷಿಸಲಾಗಿದೆ. ಸರ್ಕಾರಿ ಉದ್ಯೋಗದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದ ಅನೇಕರು ವಯೋಮಿತಿ ತಡೆಯಾಗಿ ನಿಂತಿದ್ದ ಸಮಸ್ಯೆ ಈಗ ನಿವಾರಣೆಯಾಗಿದೆ. ಸರ್ಕಾರದ ಈ ಕ್ರಮವು ಉದ್ಯೋಗಾಕಾಂಕ್ಷಿ ಯುವಜನತೆಗೆ ನೀಡಿದ ಪ್ರಮುಖ ಪ್ರೋತ್ಸಾಹವೆಂದು ಪರಿಗಣಿಸಲಾಗಿದೆ.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಕೃಷ್ಣಸಾಗರಿ ಅವರು NeedsOfPublic.in ನ ‘ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ’ (Job Updates & Career) ವಿಭಾಗದ ಮುಖ್ಯಸ್ಥರಾಗಿದ್ದಾರೆ. ತುಮಕೂರಿನ ಸರ್ಕಾರಿ ನರ್ಸಿಂಗ್ ಕಾಲೇಜಿನಿಂದ B.Sc (Nursing) ಪದವಿ ಪಡೆದಿರುವ ಇವರು, ಸಾರ್ವಜನಿಕ ಜಾಗೃತಿ ಮತ್ತು ಮಾಹಿತಿ ನೀಡುವ ಆಸಕ್ತಿಯಿಂದಾಗಿ ಡಿಜಿಟಲ್ ಪತ್ರಿಕೋದ್ಯಮ ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ. ಡಿಜಿಟಲ್ ಮಾಧ್ಯಮ ರಂಗದಲ್ಲಿ 3 ವರ್ಷಗಳ ಅನುಭವ ಹೊಂದಿರುವ ಇವರು, ಸರ್ಕಾರಿ ಉದ್ಯೋಗದ ಅಧಿಸೂಚನೆಗಳು (Govt Job Notifications), ಖಾಸಗಿ ನೇಮಕಾತಿಗಳು ಮತ್ತು ಶೈಕ್ಷಣಿಕ ಅಪ್ಡೇಟ್ಗಳನ್ನು ಒದಗಿಸುವಲ್ಲಿ ಪರಿಣತಿ ಹೊಂದಿದ್ದಾರೆ. ನಿರುದ್ಯೋಗಿ ಯುವಕ-ಯುವತಿಯರಿಗೆ ಯಾವುದೇ ಗೊಂದಲವಿಲ್ಲದೆ, ಕೇವಲ ಅಧಿಕೃತ ಮೂಲಗಳಿಂದ ಪರಿಶೀಲಿಸಿದ (Verified) ನಿಖರ ಮಾಹಿತಿಯನ್ನು ಸಕಾಲದಲ್ಲಿ ತಲುಪಿಸುವುದೇ ಇವರ ಬರವಣಿಗೆಯ ಶೈಲಿಯಾಗಿದೆ.


WhatsApp Group




Leave a Reply