ಕರ್ನಾಟಕ ಸರ್ಕಾರದ ನಿರುದ್ಯೋಗಿ ಯುವಕರಿಗೆ ಅವಕಾಶ
ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ನಿರುದ್ಯೋಗಿ ಯುವಕರಿಗೆ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು “ಸ್ವಾವಲಂಬಿ ಸಾರಥಿ ಯೋಜನೆ” ಅಡಿಯಲ್ಲಿ ಸಹಾಯಧನ ನೀಡಲಿದೆ. ಈ ಯೋಜನೆಯಡಿ, ಅರ್ಹರಾದ ಅಭ್ಯರ್ಥಿಗಳು ಸರಕು ವಾಹನ ಅಥವಾ ಹಳದಿ ಬೋರ್ಡ್ ಟ್ಯಾಕ್ಸಿ ಖರೀದಿಸಲು 75% ರಷ್ಟು ಅಥವಾ ಗರಿಷ್ಠ ₹4 ಲಕ್ಷ ಸಬ್ಸಿಡಿ ಪಡೆಯಬಹುದು. ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಲು ಅವಕಾಶವಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಯೋಜನೆಯ ಉದ್ದೇಶ
ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ಸಮಸ್ಯೆಯನ್ನು ನಿವಾರಿಸಲು ಈ ಯೋಜನೆ ರೂಪುಗೊಂಡಿದೆ. ಯುವಕರು ಸ್ವಂತ ವಾಹನ ಖರೀದಿಸಿ ಟ್ಯಾಕ್ಸಿ ಅಥವಾ ಸರಕು ಸಾಗಾಣಿಕೆ ವ್ಯವಸ್ಥೆಯನ್ನು ಪ್ರಾರಂಭಿಸಿ ಆರ್ಥಿಕವಾಗಿ ಸ್ವಾವಲಂಬರಾಗಲು ಇದು ನೆರವಾಗುತ್ತದೆ.
ಅರ್ಹತೆ
- ಅರ್ಜಿದಾರರು ಕರ್ನಾಟಕ ರಾಜ್ಯದ ನಿವಾಸಿರಾಗಿರಬೇಕು.
- 21 ರಿಂದ 56 ವರ್ಷ ವಯಸ್ಸಿನೊಳಗಿರಬೇಕು.
- ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದವರಿಗೆ ₹1.5 ಲಕ್ಷ ಮತ್ತು ನಗರವಾಸಿಗಳಿಗೆ ₹2 ಲಕ್ಷಗಿಂತ ಕಡಿಮೆ ಇರಬೇಕು.
- ಕುಟುಂಬದ ಯಾರೂ ಸರ್ಕಾರಿ/ಅರೆ-ಸರ್ಕಾರಿ ಉದ್ಯೋಗದಲ್ಲಿರಬಾರದು.
- ಇದಕ್ಕೂ ಮುಂಚೆ ಯಾವುದೇ ಸರ್ಕಾರಿ ನಿಗಮದಿಂದ ಸಹಾಯಧನ ಪಡೆದಿರಬಾರದು.
ಸಬ್ಸಿಡಿ ಮೊತ್ತ
ಯೋಜನೆಯಡಿ ವಾಹನದ ಬೆಲೆಯ 75% ಅಥವಾ ₹4 ಲಕ್ಷ (ಯಾವುದು ಕಡಿಮೆಯೋ ಅದು) ಸಹಾಯಧನ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ
ಅರ್ಜಿಗಳನ್ನು 10 ಸೆಪ್ಟೆಂಬರ್ 2025ರೊಳಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಧಾನ
ಆನ್ಲೈನ್ ವಿಧಾನ:
- ಸೇವಾ ಸಿಂಧು ಪೋರ್ಟಲ್ (ಲಿಂಕ್) ಗೆ ಭೇಟಿ ನೀಡಿ.
- “ಸ್ವಾವಲಂಬಿ ಸಾರಥಿ ಯೋಜನೆ” ಅನ್ನು ಹುಡುಕಿ.
- ಆನ್ಲೈನ್ ಅರ್ಜಿ ನಮೂನೆ ಪೂರೈಸಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಲ್ಲಿಸಿ.
ಆಫ್ಲೈನ್ ವಿಧಾನ:
- ಅಗತ್ಯ ದಾಖಲೆಗಳೊಂದಿಗೆ ನಿಮ್ಮ ನೆರೆಯ ಗ್ರಾಮ ಒನ್ ಕೇಂದ್ರ ಅಥವಾ ಸಮಾಜ ಕಲ್ಯಾಣ ಕಚೇರಿಗೆ ಭೇಟಿ ನೀಡಿ.
ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ವಯಸ್ಸು ಮತ್ತು ನಿವಾಸದ ಪ್ರಮಾಣಪತ್ರ
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಬ್ಯಾಂಕ್ ಪಾಸ್ಬುಕ್
- ಡ್ರೈವಿಂಗ್ ಲೈಸೆನ್ಸ್
- ವಾಹನದ ದರಪಟ್ಟಿ
- ಪಾಸ್ಪೋರ್ಟ್ ಗಾತ್ರದ ಫೋಟೋ
ಹೆಚ್ಚಿನ ಮಾಹಿತಿಗೆ
ಸಹಾಯವಾಣಿ ಸಂಖ್ಯೆ: 9482300400
ಅಧಿಕೃತ ವೆಬ್ಸೈಟ್: Click Here
ಅರ್ಜಿ ಸಲ್ಲಿಸಲು ಲಿಂಕ್-Apply Now
ನಿರುದ್ಯೋಗಿ ಯುವಕರು ಈ ಅವಕಾಶವನ್ನು ಬಳಸಿಕೊಂಡು ಸ್ವಾವಲಂಬರಾಗಲು ಮುಂದಾಗಿ!.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.