₹20,000 ಕಿಟ್ ಉಚಿತ!
ಕಟ್ಟಡ ಕಾರ್ಮಿಕರಿಗೆ ರಾಜ್ಯ ಸರ್ಕಾರ ಬಂಪರ್ ಸುದ್ದಿಯೊಂದನ್ನು ನೀಡಿದೆ. ಕೇವಲ ಲೇಬರ್ ಕಾರ್ಡ್ ಇದ್ದರೆ ಸಾಕು, ನಿಮ್ಮ ವೃತ್ತಿಗೆ ಬೇಕಾದ ₹20,000 ಬೆಲೆಬಾಳುವ ಟೂಲ್ ಕಿಟ್ (Tool Kit) ಅನ್ನು ಸರ್ಕಾರವೇ ಉಚಿತವಾಗಿ ನೀಡುತ್ತಿದೆ. ಜೊತೆಗೆ ನುರಿತ ತಜ್ಞರಿಂದ ತರಬೇತಿ ಮತ್ತು ಊಟದ ವ್ಯವಸ್ಥೆಯೂ ಇದೆ. ಯಾರೆಲ್ಲಾ ಅರ್ಜಿ ಹಾಕಬಹುದು? ಬೇಕಾಗುವ ದಾಖಲೆಗಳೇನು? ಇಲ್ಲಿದೆ ಮಾಹಿತಿ.
ಬೆಂಗಳೂರು: ರಾಜ್ಯದ ಅಭಿವೃದ್ಧಿಯಲ್ಲಿ ಕಟ್ಟಡ ಕಾರ್ಮಿಕರ ಪಾತ್ರ ಹಿರಿದು. ಅಂತಹ ಶ್ರಮಜೀವಿಗಳ ಬದುಕು ಹಸನು ಮಾಡಲು ಕರ್ನಾಟಕ ಸರ್ಕಾರ ಮತ್ತು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಜಂಟಿಯಾಗಿ “ಶ್ರಮ ಸಾಮರ್ಥ್ಯ ಯೋಜನೆ” (Shrama Samarthya Yojana) ಜಾರಿಗೆ ತಂದಿದೆ.
ಅನೇಕ ಕಾರ್ಮಿಕರಿಗೆ ಕೆಲಸದ ಅನುಭವ ಇರುತ್ತದೆ, ಆದರೆ ಆಧುನಿಕ ಉಪಕರಣಗಳು (Tools) ಇರುವುದಿಲ್ಲ. ಇದನ್ನು ಮನಗಂಡು ಸರ್ಕಾರವೇ ಈಗ ಉಚಿತವಾಗಿ ಕಿಟ್ ನೀಡಲು ಮುಂದಾಗಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ, ತಪ್ಪದೇ ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಏನಿದು ₹20,000 ಕಿಟ್? ಏನೇನಿರುತ್ತೆ?
ಈ ಯೋಜನೆಯಡಿ ಆಯ್ಕೆಯಾದ ಕಾರ್ಮಿಕರಿಗೆ ಅವರ ಕೆಲಸಕ್ಕೆ ತಕ್ಕಂತೆ ಉಪಕರಣಗಳನ್ನು ನೀಡಲಾಗುತ್ತದೆ.
ಸುರಕ್ಷತಾ ಕಿಟ್: ಹೆಲ್ಮೆಟ್, ಸೇಫ್ಟಿ ಶೂಸ್ (Safety Shoes), ಗ್ಲೌಸ್, ಕನ್ನಡಕ.
ವೃತ್ತಿಪರ ಕಿಟ್:
- ಮೇಸ್ತ್ರಿಗಳಿಗೆ (Masons) ಅದಕ್ಕೆ ಸಂಬಂಧಿಸಿದ ಟೂಲ್ಸ್.
- ಎಲೆಕ್ಟ್ರಿಷಿಯನ್, ಪ್ಲಂಬರ್ ಮತ್ತು ಪೇಂಟರ್ಗಳಿಗೆ ಅವರ ಕೆಲಸಕ್ಕೆ ಬೇಕಾದ ಕಾಸ್ಟ್ಲಿ ಮೆಷಿನ್ಗಳು ಮತ್ತು ಟೂಲ್ಸ್ಗಳು ಇದರಲ್ಲಿ ಇರುತ್ತವೆ.
ತರಬೇತಿ: ಜರ್ಮನ್ ತಂತ್ರಜ್ಞಾನ ಆಧಾರಿತ ವಿಶೇಷ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ. ತರಬೇತಿ ಸಮಯದಲ್ಲಿ ಟೀ, ಕಾಫಿ ಮತ್ತು ಊಟದ ವ್ಯವಸ್ಥೆ ಇರುತ್ತದೆ.

ಯಾರಿಗೆ ಸಿಗುತ್ತೆ? (Eligibility Checklist)
ಎಲ್ಲರಿಗೂ ಇದು ಸಿಗುವುದಿಲ್ಲ, ಈ ಕೆಳಗಿನ ಅರ್ಹತೆ ಕಡ್ಡಾಯ:
ಅರ್ಜಿದಾರರು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಸದಸ್ಯರಾಗಿರಬೇಕು (Active Labour Card).
ವಯಸ್ಸು 18 ರಿಂದ 60 ವರ್ಷದೊಳಗೆ ಇರಬೇಕು.
ಕಳೆದ ಒಂದು ವರ್ಷದಲ್ಲಿ ಕನಿಷ್ಠ 90 ದಿನ ಕಟ್ಟಡ ಕೆಲಸ ಮಾಡಿರಬೇಕು.
ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
ನೀವು ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಅಥವಾ ಹತ್ತಿರದ ಕಂಪ್ಯೂಟರ್ ಸೆಂಟರ್ನಲ್ಲಿ ಅರ್ಜಿ ಹಾಕಬಹುದು.
ಅರ್ಜಿ ಸಲ್ಲಿಕೆ ನಿಯಮ ಬದಲಾವಣೆ!
ಗಮನಿಸಿ: ಈ ಹಿಂದೆ ‘ಸೇವಾ ಸಿಂಧು’ ಪೋರ್ಟಲ್ ಮೂಲಕ ಅರ್ಜಿ ಹಾಕಬೇಕಿತ್ತು. ಆದರೆ, ಪ್ರಕ್ರಿಯೆಯನ್ನು ಸುಲಭಗೊಳಿಸಲು ಕಾರ್ಮಿಕ ಇಲಾಖೆಯು ಈಗ ನೇರ ಲಿಂಕ್ (Direct Link) ನೀಡಿದೆ. ನೀವು ಸೇವಾ ಸಿಂಧುಗೆ ಹೋಗುವ ಅಗತ್ಯವಿಲ್ಲ, ನೇರವಾಗಿ ಇಲಾಖೆಯ ವೆಬ್ಸೈಟ್ನಲ್ಲೇ ಮೊಬೈಲ್ ಮೂಲಕ ಅರ್ಜಿ ಹಾಕಬಹುದು.
ಹೊಸ “ಅರ್ಜಿ ಸಲ್ಲಿಸುವ ವಿಧಾನ” (Updated Steps):
ಅರ್ಜಿ ಸಲ್ಲಿಸಲು ಸ್ಟೆಪ್-ಬೈ-ಸ್ಟೆಪ್ ಗೈಡ್:
- ಮೊದಲು ಕಾರ್ಮಿಕ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ಮುಖಪುಟದಲ್ಲಿ Login ಅಥವಾ “Register” ಎಂಬ ಆಯ್ಕೆ ಕಾಣುತ್ತದೆ, ಅದನ್ನು ಕ್ಲಿಕ್ ಮಾಡಿ.
- ನಿಮ್ಮ ಲೇಬರ್ ಕಾರ್ಡ್ (Labour Card) ನಂಬರ್ ಹಾಕಿ ಲಾಗಿನ್ ಆಗಿ. ನಂತರ ಯೋಜನೆ ಸೆಲೆಕ್ಟ್ ಮಾಡಿ
- ಅಲ್ಲಿ ಕೇಳಲಾದ ವೈಯಕ್ತಿಕ ಮಾಹಿತಿ ತುಂಬಿ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಕೊನೆಯಲ್ಲಿ ‘Submit’ ಬಟನ್ ಒತ್ತಿದರೆ ನಿಮ್ಮ ಅರ್ಜಿ ಸಲ್ಲಿಕೆಯಾಗುತ್ತದೆ.
ಗಮನಿಸಿ: ಆನ್ಲೈನ್ ಬಗ್ಗೆ ಗೊತ್ತಿಲ್ಲದಿದ್ದರೆ, ನೇರವಾಗಿ ನಿಮ್ಮ ಹತ್ತಿರದ ‘ಗ್ರಾಮ ಒನ್’ ಅಥವಾ ‘ಕರ್ನಾಟಕ ಒನ್’ ಕೇಂದ್ರಕ್ಕೆ ಹೋಗಿ ₹30 ಶುಲ್ಕ ನೀಡಿ ಅರ್ಜಿ ಹಾಕಿಸಬಹುದು.
ಬೇಕಾಗುವ ದಾಖಲೆಗಳು (Documents Required)
ಅರ್ಜಿ ಹಾಕಲು ಹೋಗುವಾಗ ಈ ದಾಖಲೆಗಳನ್ನು ಮರೆಯದೇ ತೆಗೆದುಕೊಂಡು ಹೋಗಿ:
- ಚಾಲ್ತಿಯಲ್ಲಿರುವ ಲೇಬರ್ ಕಾರ್ಡ್ (Labour Card).
- ಆಧಾರ್ ಕಾರ್ಡ್.
- ಬ್ಯಾಂಕ್ ಪಾಸ್ಬುಕ್ (ಧನಸಹಾಯ ಅಥವಾ ಸ್ಟೈಫಂಡ್ ಜಮೆಗೆ).
- ಪಾಸ್ಪೋರ್ಟ್ ಸೈಜ್ ಫೋಟೋ.
- ರೇಷನ್ ಕಾರ್ಡ್ (ಇದ್ದರೆ).
ಈ ಮಾಹಿತಿಗಳನ್ನು ಓದಿ
- ಕುಕ್ಕುಟ ಸಂಜೀವಿನಿ ಯೋಜನೆ: ಮಹಿಳೆಯರ ಸಬಲೀಕರಣಕ್ಕೆ ಆಶಾಕಿರಣ! ಉಚಿತ ಕೋಳಿಮರಿ, ಶೆಡ್ಗೆ ಹಣ, ಜೊತೆಗೆ ₹25,000 ಪ್ರೋತ್ಸಾಹಧನ
- PM Kusum: ರಾತ್ರಿ ಹೊತ್ತು ನೀರು ಹಾಯಿಸೋ ಕಷ್ಟ ಇಲ್ಲ , ಕರೆಂಟ್ ಬಿಲ್ ಇಲ್ಲ ! ರೈತರಿಗೆ 80% ಸಬ್ಸಿಡಿಯಲ್ಲಿ ಸೋಲಾರ್ ಪಂಪ್ – ಅರ್ಜಿ ಹಾಕೋದು ಹೇಗೆ?
- BREAKING : ರಾಜ್ಯದ ರೈತರಿಗೆ ಸಿಹಿಸುದ್ದಿ: 3.50 ಲಕ್ಷ ಕೃಷಿ ಪಂಪ್ ಸೆಟ್ಗಳು ಸಕ್ರಮ – ಸಚಿವ ಕೆ.ಜೆ.ಜಾರ್ಜ್ ಘೋಷಣೆ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




