ಕರ್ನಾಟಕದಲ್ಲಿ ಬೆಲೆ ಏರಿಕೆ: ಇಂದಿನಿಂದ ಹಾಲು, ವಿದ್ಯುತ್, ಟೋಲ್ಗೆ ಹೊಸ ದರ!
ಬೆಂಗಳೂರು, ಏಪ್ರಿಲ್ 1: ಕರ್ನಾಟಕದ ನಿವಾಸಿಗಳಿಗೆ ಇಂದಿನಿಂದ (ಏಪ್ರಿಲ್ ೧) ಹಲವಾರು ವಸ್ತುಗಳು ಮತ್ತು ಸೇವೆಗಳ ಬೆಲೆ ಏರುತ್ತಿದೆ. ಹಾಲು, ಮೊಸರು, ವಿದ್ಯುತ್, ಟೋಲ್, ಮುದ್ರಾಂಕ ಶುಲ್ಕ, ಕಸ ಸಂಗ್ರಹ ಶುಲ್ಕ ಸೇರಿದಂತೆ ಅನೇಕ ವಿಭಾಗಗಳಲ್ಲಿ ದರ ಏರಿಕೆ ಜಾರಿಯಾಗಿದೆ. ಇದರಿಂದ ಸಾಮಾನ್ಯ ಜನರ ಮೇಲೆ ಹಣಕಾಸಿನ ಭಾರ ಹೆಚ್ಚಾಗುತ್ತಿದೆ..ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹಾಲು & ಮೊಸರಿನ ಬೆಲೆ ₹೪ ಏರಿಕೆ
- ನಂದಿನಿ ಹಾಲಿನ ಎಲ್ಲಾ ಪ್ಯಾಕೆಟ್ಗಳ ಬೆಲೆ ಲೀಟರ್ಗೆ ₹4 ಹೆಚ್ಚಾಗಿದೆ.
- ಮೊಸರಿನ ದರವೂ ಲೀಟರ್ಗೆ ₹4 ಏರಿಕೆಯಾಗಿದೆ.
ವಿದ್ಯುತ್ ದರ: ಯೂನಿಟ್ಗೆ ೩೬ ಪೈಸೆ ಹೆಚ್ಚಳ
- ಪ್ರತಿ ಯೂನಿಟ್ಗೆ36 ಪೈಸೆ ಹೆಚ್ಚಳ.
- ಮಾಸಿಕ ನಿಗದಿತ ಶುಲ್ಕ ₹120 ರಿಂದ ₹140 ಆಗಿ ಏರಿಕೆ.
- 200 ಯೂನಿಟ್ಗಳಿಗೆ ಮೀರಿದ ಬಳಕೆದಾರರಿಗೆ ಹೆಚ್ಚಿನ ಶುಲ್ಕ.
ಬಿಬಿಎಂಪಿ ಕಸ ಶುಲ್ಕ: ವಸತಿ & ವಾಣಿಜ್ಯ ಕಟ್ಟಡಗಳಿಗೆ ಹೊಸ ದರ
- ವಸತಿ ಕಟ್ಟಡಗಳು:
- 6೦೦ ಚದರಡಿ ವರೆಗೆ – ₹10
- 601–1000 ಚದರಡಿ – ₹50
- 1001–2000 ಚದರಡಿ – ₹100
- 4೦೦೦+ ಚದರಡಿ – ₹400
- ವಾಣಿಜ್ಯ ಕಟ್ಟಡಗಳು (ದಿನಕ್ಕೆ):
- 5 ಕೆಜಿ ಕಸ – ₹500
- 10 ಕೆಜಿ – ₹1,400
- 50 ಕೆಜಿ – ₹2,000
- 100 ಕೆಜಿ – ₹14,000
ಮುದ್ರಾಂಕ & ಅಫಿಡವಿಟ್ ಶುಲ್ಕ ಏರಿಕೆ
- ಮುದ್ರಾಂಕ ಶುಲ್ಕ ₹50→ ₹500
- ಅಫಿಡವಿಟ್ ಶುಲ್ಕ ₹20 → ₹100
ಟೋಲ್ ದರ: ೩–೫% ಹೆಚ್ಚಳ
- ರಾಜ್ಯದ 66 ಟೋಲ್ ಪ್ಲಾಜಾಗಳಲ್ಲಿ ದರ ಏರಿಕೆ.
ಲಿಫ್ಟ್ & ಟ್ರಾನ್ಸ್ಫಾರ್ಮರ್ ಪರಿಶೀಲನೆ ಶುಲ್ಕ ದುಪ್ಪಟ್ಟು
- ೩-ಅಂತಸ್ತಿನ ಮನೆ ಲಿಫ್ಟ್ ಪರಿಶೀಲನೆ: ₹1,000 → ₹5,000–8,000
- 25ಕೆವಿಎ ಟ್ರಾನ್ಸ್ಫಾರ್ಮರ್: ₹1,500 → ₹2,000–5,000
ಬಿಜೆಪಿ ಪ್ರತಿಭಟನೆ
ಬೆಲೆ ಏರಿಕೆ ವಿರುದ್ಧ ಬಿಜೆಪಿ ಬುಧವಾರ (ಏಪ್ರಿಲ್3) ಮತ್ತು ಏಪ್ರಿಲ್ 5 ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ.
ಈ ಬೆಲೆ ಏರಿಕೆಗಳು ಸಾಮಾನ್ಯ ಜನರ ಜೀವನವನ್ನು ಹೆಚ್ಚು ದುಬಾರಿಯಾಗಿಸಿವೆ. ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಈ ವಿಷಯವನ್ನು ಕುರಿತು ಚರ್ಚೆಗಳು ನಡೆಯುತ್ತಿವೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಶಿವರಾಜ್ ಅವರು NeedsOfPublic.in ನಲ್ಲಿ ಸಾರ್ವಜನಿಕ, ಶೈಕ್ಷಣಿಕ ಮತ್ತು ಸ್ಥಳೀಯ ಸುದ್ದಿಗಳ ವಿಭಾಗದ ಹಿರಿಯ ಸಂಪಾದಕರಾಗಿದ್ದಾರೆ (Senior Editor). ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದರೂ, ಮಾಧ್ಯಮ ಕ್ಷೇತ್ರದ ಮೇಲಿರುವ ಅತೀವ ಆಸಕ್ತಿಯಿಂದಾಗಿ 2019 ರಲ್ಲಿ ಡಿಜಿಟಲ್ ಜಗತ್ತಿಗೆ ಕಾಲಿಟ್ಟರು. ಇವರು ಆರಂಭಿಸಿದ “Suddi No.1 Kannada” ಯೂಟ್ಯೂಬ್ ಚಾನೆಲ್ ಪ್ರಸ್ತುತ 300K ಗೂ ಹೆಚ್ಚು ಸಬ್ಸ್ಕ್ರೈಬರ್ಗಳನ್ನು ಹೊಂದುವ ಮೂಲಕ ಜನಪ್ರಿಯವಾಗಿದೆ. ಡಿಜಿಟಲ್ ಮಾಧ್ಯಮದಲ್ಲಿ ಉತ್ತಮ ಅನುಭವ ಹೊಂದಿರುವ ಇವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಕೀರ್ಣ ಯೋಜನೆಗಳನ್ನು ಹಾಗೂ ವಿದ್ಯಾರ್ಥಿವೇತನಗಳನ್ನು (Scholarships) ಸರಳವಾಗಿ ವಿಶ್ಲೇಷಿಸಿ, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತಲುಪಿಸುವಲ್ಲಿ ಎಕ್ಸ್ಪರ್ಟ್ ಆಗಿದ್ದಾರೆ. ಇದರ ಜೊತೆಗೆ ಪ್ರಮುಖ ಶೈಕ್ಷಣಿಕ ಅಪ್ಡೇಟ್ಗಳು ಮತ್ತು ನಿಖರ ಮಾಹಿತಿ ನೀಡುವ ವಿಡಿಯೋ ಕಂಟೆಂಟ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು ಇವರ ಬರವಣಿಗೆಯ ವಿಶಿಷ್ಟ ಶೈಲಿಯಾಗಿದೆ.


WhatsApp Group




Leave a Reply