ಭಾರತದಲ್ಲಿ ಓಲಾ-ಊಬರ್(Ola-Uber) ಮಾದರಿಯ ಹೊಸ ಸಹಕಾರಿ ಟ್ಯಾಕ್ಸಿ(Taxi) ಸೇವೆ ಆರಂಭ : ಚಾಲಕರಿಗೆ ನೇರ ಲಾಭ ತಲುಪಿಸಲು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ
ಭಾರತದಲ್ಲಿ ಬಹುಜನರಿಗೆ ಸ್ವಾವಲಂಬನೆಯ ಹೊಸ ಅಸ್ತಿತ್ವ ನೀಡುವ ಪ್ರಯತ್ನದಲ್ಲಿ, ಕೇಂದ್ರ ಸರ್ಕಾರ ಸಹಕಾರಿ ಮಾದರಿಯ ಟ್ಯಾಕ್ಸಿ ಸೇವೆಯನ್ನು ಪರಿಚಯಿಸಲು ಸಜ್ಜಾಗಿದೆ. ಸಹಕಾರಿಯ ತತ್ವದಡಿಯಲ್ಲಿ, ಈ ಸೇವೆಯ ಲಾಭಗಳು ನೇರವಾಗಿ ಚಾಲಕರಿಗೆ(drivers) ತಲುಪಲಿದ್ದು, ಮಧ್ಯವರ್ತಿಗಳ ಹಸ್ತಕ್ಷೇಪವನ್ನು ತಡೆಯಲು ಸರ್ಕಾರ ನಿರ್ಧರಿಸಿದೆ. ಕೇಂದ್ರ ಸಹಕಾರ ಸಚಿವ ಅಮಿತ್ ಶಾ(Minister Amit Shah) ಸಂಸತ್ತಿನಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆಯ ಘೋಷಣೆಯನ್ನು ಮಾಡಿದ್ದು, ಇದು ಭಾರತದ ಸಂಚಾರ ಕ್ಷೇತ್ರದಲ್ಲಿ ಹೊಸತೊಂದು ಅಧ್ಯಾಯವನ್ನು ಬರೆಯಲಿದೆ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಓಲಾ ಮತ್ತು ಊಬರ್(Ola and Uber) ಮಾದರಿಯಲ್ಲಿ ದೇಶದಾದ್ಯಂತ ಸಹಕಾರಿ ಟ್ಯಾಕ್ಸಿ ಸೇವೆ ಪ್ರಾರಂಭಿಸಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ. ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಈ ಮಹತ್ವದ ಘೋಷಣೆ ಮಾಡಿದ್ದು, ಈ ಯೋಜನೆಯ ಉದ್ದೇಶ ಟ್ಯಾಕ್ಸಿ ಚಾಲಕರಿಗೆ ನೇರವಾಗಿ ಆರ್ಥಿಕ ಲಾಭವನ್ನು ಒದಗಿಸುವುದಾಗಿದೆ.
ಸಹಕಾರ ಸಚಿವಾಲಯದ ಪರಿಕಲ್ಪನೆ:
ಈ ಹೊಸ ಯೋಜನೆಯನ್ನು ಕೇಂದ್ರ ಸಹಕಾರ ಸಚಿವಾಲಯ ಕಾರ್ಯಗತಗೊಳಿಸಲಿದ್ದು, “ಸಹಕಾರದಿಂದ ಸಮೃದ್ಧಿ” ಎಂಬ ದೃಷ್ಟಿಕೋನವನ್ನು ಬಲಪಡಿಸಲು ಈ ಸೇವೆಯನ್ನು ಪ್ರಾರಂಭಿಸಲಾಗುತ್ತಿದೆ. ಸಹಕಾರ ವ್ಯವಸ್ಥೆಯ ಮೂಲಕ ದೇಶದ ರೈತರು, ಕಾರ್ಮಿಕರು(workers), ಸಣ್ಣ ವ್ಯಾಪಾರಸ್ಥರು ಮತ್ತು ಚಾಲಕರನ್ನು ಆರ್ಥಿಕವಾಗಿ ಬೆಂಬಲಿಸುವ ಉದ್ದೇಶದಿಂದ ಸರ್ಕಾರ ಈ ಮಹತ್ವದ ಹೆಜ್ಜೆ ಇಟ್ಟಿದೆ.
ಸಹಕಾರಿ ಟ್ಯಾಕ್ಸಿ ಸೇವೆಯ ಪ್ರಮುಖ ಲಕ್ಷಣಗಳು ಹೀಗಿವೆ:
ರಾಷ್ಟ್ರೀಯ ಮಟ್ಟದ ಸಹಕಾರಿ ಸಂಘಟನೆ:
ಟ್ಯಾಕ್ಸಿ ಚಾಲಕರಿಗಾಗಿ ಸಹಕಾರ ಸಂಘಟನೆ ರೂಪಿಸಲಾಗುವುದು. ಇದರಿಂದಾಗಿ ಚಾಲಕರು ಒಗ್ಗೂಡಿ ಸಹಕಾರಿ ಚೌಕಟ್ಟಿನಲ್ಲಿ ಕೆಲಸ ಮಾಡಬಹುದು.
ನೇರ ಆದಾಯ ಭದ್ರತೆ:
ಇದರಲ್ಲಿ ಯಾವುದೇ ಮಧ್ಯವರ್ತಿ ಅಥವಾ ಖಾಸಗಿ ಕಂಪನಿಯ ನಿಯಂತ್ರಣ ಇರುವುದಿಲ್ಲ. ಆದಾಯ ನೇರವಾಗಿ ಚಾಲಕರಿಗೆ ತಲುಪುವುದು.
ವ್ಯಾಪ್ತಿಯ ಸುಧಾರಣೆ:
ದ್ವಿಚಕ್ರ ವಾಹನಗಳು(Two wheelers), ಆಟೋ ರಿಕ್ಷಾ, ಕಾರುಗಳ ಸಹಿತ ವಿವಿಧ ರೀತಿಯ ವಾಹನಗಳು ಸಹಕಾರಿ ಪ್ಲಾಟ್ಫಾರ್ಮ್ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.
ಸಹಕಾರಿ ವಿಮಾ ಯೋಜನೆ(Cooperative Insurance Scheme):
ಚಾಲಕರ ಮತ್ತು ಅವರ ಕುಟುಂಬದ ಸುರಕ್ಷತೆಗಾಗಿ ವಿಶೇಷ ವಿಮಾ ಯೋಜನೆ ಕೂಡ ಪರಿಚಯಿಸಲಾಗುವುದು.
ಸಹಕಾರಿ ವಲಯದ ವಿಸ್ತರಣೆ:
ಪೆಟ್ರೋಲ್ ಪಂಪುಗಳು, ಅನಿಲ ವಿತರಣಾ ಕೇಂದ್ರಗಳು, ಪಡಿತರ ಅಂಗಡಿಗಳು, ಔಷಧಿ ಮಾರಾಟ ಕೇಂದ್ರಗಳು, ಗೋದಾಮುಗಳು, ನೀರಿನ ನಿರ್ವಹಣೆ ಮತ್ತು ಸಾವಯವ ಕೃಷಿ ಕ್ಷೇತ್ರಗಳಿಗೂ(agricultural fields) ಈ ಯೋಜನೆ ವಿಸ್ತಾರಗೊಳ್ಳಲಿದೆ.
ಈ ಹೊಸ ಸಹಕಾರಿ ಟ್ಯಾಕ್ಸಿ ಸೇವೆಯು ದೇಶದ ಸಂಚಾರ ವ್ಯವಸ್ಥೆಗೆ ಮತ್ತು ಚಾಲಕರ ಆರ್ಥಿಕ ಸ್ಥಿರತೆಗೆ ಮಹತ್ತರ ಬದಲಾವಣೆಯನ್ನು ತರಲಿದೆ. ಸರ್ಕಾರದ ಪ್ರಕಾರ, ಈ ಸೇವೆ ಚಾಲಕರ ಶ್ರೇಣಿಗೆ ಹೆಚ್ಚಿನ ಸ್ವಾಯತ್ತತೆ ನೀಡಲಿದ್ದು, ದುರ್ಬಲ ವರ್ಗಗಳ ಆರ್ಥಿಕ ಸುಧಾರಣೆಗೆ ನೆರವಾಗಲಿದೆ. ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರ “ಸಹಕಾರದಿಂದ ಸಮೃದ್ಧಿ” ದೃಷ್ಠಿಕೋಣವನ್ನು ಮುಂದುವರಿಸುವ ಈ ಯೋಜನೆಯು ಭಾರತದಲ್ಲಿ ಒಬ್ಬ ಸಾಮಾನ್ಯ ಚಾಲಕನಿಗೂ ಆರ್ಥಿಕ ಸ್ವಾಯತ್ತತೆಯನ್ನು ಒದಗಿಸಲಿದೆ.
ಭಾರತದಲ್ಲಿ ಇತ್ತೀಚೆಗೆ ಸಹಕಾರಿ ಮಾದರಿಯ ಸೇವೆಗಳು ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿಯಾಗುತ್ತಿರುವ ಹಿನ್ನೆಲೆಯಲ್ಲಿ, ಈ ಯೋಜನೆ ಸಹ ಭವಿಷ್ಯದಲ್ಲಿ ಭಾರಿ ಪ್ರಭಾವ ಬೀರುವ ಸಾಧ್ಯತೆ ಇದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




