ರಾಜ್ಯದ ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ರೂಪಿಸಲಾಗಿರುವ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ (KASS) ಅಕ್ಟೋಬರ್ 1, 2025 ರಿಂದ ಜಾರಿಗೆ ಬರುತ್ತದೆ. ಈ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮಹತ್ವಪೂರ್ಣ ಆದೇಶವನ್ನು ಹೊರಡಿಸಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಯೋಜನೆಯ ವಿವರ:
ಈ ಯೋಜನೆಯು ರಾಜ್ಯ ಸರ್ಕಾರದ ಸೇವೆಯಲ್ಲಿರುವ ಎಲ್ಲಾ ನೌಕರರು ಮತ್ತು ಅವರ ಅವಲಂಬಿತ ಕುಟುಂಬದ ಸದಸ್ಯರನ್ನು ಒಳಗೊಂಡಿದೆ. ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು, 1963ರ ಅಡಿಯಲ್ಲಿ ಈ ಯೋಜನೆಯನ್ನು ರೂಪಿಸಲಾಗಿದ್ದು, ನೌಕರರು ಮತ್ತು ಅವರ ಕುಟುಂಬಗಳು ಗುಣಮಟ್ಟದ ವೈದ್ಯಕೀಯ ಚಿಕಿತ್ಸೆಯಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ.
ನೌಕರರ ಪಾಲ್ಗೊಳ್ಳುವಿಕೆ (ಆಪ್ಶನ್):
ಯೋಜನೆಗೆ ಸೇರಲು ಅಥವಾ ಸೇರದಿರಲು ನೌಕರರಿಗೆ ಆಯ್ಕೆಯ ಸ್ವಾತಂತ್ರ್ಯವನ್ನು ನೀಡಲಾಗಿದೆ. ಮೊದಲು ಮೇ 20, 2025 ರೊಳಗಾಗಿ ತಮ್ಮ ನಿರ್ಧಾರವನ್ನು ತಿಳಿಸುವಂತೆ ಕೇಳಲಾಗಿತ್ತು. ಆದರೆ, ನೌಕರರಿಂದ ಬಂದ ಕೋರಿಕೆಯನ್ನು ಪರಿಗಣಿಸಿ, ಸರ್ಕಾರವು ಈ ಗಡುವನ್ನು ಅಕ್ಟೋಬರ್ 18, 2025 ವರೆಗೆ ವಿಸ್ತರಿಸಿದೆ. ಈ ದಿನಾಂಕದೊಳಗಾಗಿ ಯೋಜನೆಗೆ ಸೇರದಿರಲು ಲಿಖಿತ ರೂಪದಲ್ಲಿ ಇಚ್ಛೆ ವ್ಯಕ್ತಪಡಿಸದ ಎಲ್ಲಾ ನೌಕರರು ಸ್ವಯಂಚಾಲಿತವಾಗಿ ಯೋಜನೆಗೆ ಒಳಪಟ್ಟ ಪರಿಗಣಿಸಲ್ಪಡುತ್ತಾರೆ. ನಿರ್ಧಾರವನ್ನು ಸಂಬಂಧಪಟ್ಟ ಜಿಲ್ಲಾ ದಾಖಲಾತಿ ಅಧಿಕಾರಿಗೆ (DDO)ಸಲ್ಲಿಸಬೇಕು.
ವಂತಿಕೆ (ಪ್ರೀಮಿಯಂ) ವಿಧಾನ:
ಯೋಜನೆಗೆ ಸೇರುವ ನೌಕರರ ಮಾಸಿಕ ವಂತಿಕೆಯನ್ನು ಅವರ ವೇತನದಿಂದ ಕಡಿತಮಾಡಲಾಗುವುದು. ಈ ಕಟಾವು ಅಕ್ಟೋಬರ್ 2025ರ ವೇತನದಿಂದ ಪ್ರಾರಂಭವಾಗುತ್ತದೆ. ಕಟಾವು ಮಾಡಿದ ವಂತಿಕೆಯನ್ನು ಎಲ್ಲಾ ಡಿಡಿಓಗಳು ‘ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್’ನ ವಿಶೇಷ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಬ್ಯಾಂಕ್ ಖಾತೆಯ ವಿವರಗಳನ್ನು HRMS ವ್ಯವಸ್ಥೆಯ ಮೂಲಕ ಡಿಡಿಓಗಳಿಗೆ ತಿಳಿಸಲಾಗುವುದು. ಪತಿ ಮತ್ತು ಪತ್ನಿ ಇಬ್ಬರು ಸರ್ಕಾರಿ ನೌಕರರಾಗಿದ್ದರೆ, ವಂತಿಕೆಯನ್ನು ಇಬ್ಬರಲ್ಲಿ ಒಬ್ಬರು ಮಾತ್ರ ಪಾವತಿಸಬೇಕು ಎಂದು ನಿರ್ಧರಿಸಿ ಅದರ ಬಗ್ಗೆ ಡಿಡಿಓರಿಗೆ ತಿಳಿಸಬೇಕು. HRMS ವ್ಯಾಪ್ತಿಯಲ್ಲಿಲ್ಲದ ನೌಕರರ ವಂತಿಕೆಯನ್ನು ಅವರ ನಿಯೋಜನಾ ಸಂಸ್ಥೆಯು ನೇರವಾಗಿ ಟ್ರಸ್ಟ್ ಖಾತೆಗೆ ವರ್ಗಾವಣೆ ಮಾಡಬೇಕು.
ಕುಟುಂಬದ ವ್ಯಾಪ್ತಿ ಪರಿಷ್ಕರಣೆ:
ಯೋಜನೆಯ ಅಡಿಯಲ್ಲಿ ‘ಕುಟುಂಬ’ದ ವ್ಯಾಖ್ಯಾನದಲ್ಲಿ ನೌಕರರ ತಂದೆ ಮತ್ತು ತಾಯಿಯರನ್ನು ಸೇರಿಸಲಾಗಿದೆ. ಇದಕ್ಕಾಗಿ ಅವರ ಮಾಸಿಕ ಆದಾಯ ಮಿತಿಯನ್ನು ಮೊದಲು ರೂ. 17,000 ಎಂದು ನಿಗದಿ ಮಾಡಲಾಗಿತ್ತು. ಈ ಮಿತಿಯನ್ನು ಮಾಸಿಕ ರೂ. 27,000 ಗೆ ಪರಿಷ್ಕರಿಸಲಾಗಿದೆ. ವಿವಾಹಿತ ಮಹಿಳಾ ನೌಕರರ ತಂದೆ-ತಾಯಿಯರಿಗೂ ಈ ಆದಾಯ ಮಿತಿ ಮತ್ತು ಅವರು ನೌಕರರೊಂದಿಗೆ ವಾಸಿಸುತ್ತಿರಬೇಕು ಎಂಬ ಷರತ್ತುಗಳು ಅನ್ವಯಿಸುತ್ತವೆ.
ಯೋಜನೆಯ ಉದ್ದೇಶ ಮತ್ತು ಪ್ರಯೋಜನಗಳು:
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯು ರಾಜ್ಯದ ಸರ್ಕಾರಿ ನೌಕರರಿಗೆ ಸಮಗ್ರ ಆರೋಗ್ಯ ರಕ್ಷಣಾ ಆವರಣವನ್ನು ಒದಗಿಸುವ ದಿಶೆಯಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಈ ಯೋಜನೆಯ ಮೂಲಕ ನೌಕರರು ಮತ್ತು ಅವರ ಕುಟುಂಬಗಳು ಆರೋಗ್ಯ ಖಾತರಿಯೊಂದಿಗೆ ಕಾರ್ಯನಿರತರಾಗಲು ಸಹಾಯಕವಾಗುವುದು. ವೈದ್ಯಕೀಯ ಖರ್ಚುಗಳ ಚಿಂತೆ ಇಲ್ಲದೆ ಅವರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗುವುದು. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸರ್ಕಾರವು ಅಗತ್ಯವಾದ ಎಲ್ಲಾ ಮಾರ್ಗಸೂಚಿಗಳನ್ನು (SOP) ಹೊರಡಿಸಲಿದೆ ಎಂದು ನಿರೀಕ್ಷಿಸಲಾಗಿದೆ.








ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಕೃಷ್ಣಸಾಗರಿ ಅವರು NeedsOfPublic.in ನ ‘ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ’ (Job Updates & Career) ವಿಭಾಗದ ಮುಖ್ಯಸ್ಥರಾಗಿದ್ದಾರೆ. ತುಮಕೂರಿನ ಸರ್ಕಾರಿ ನರ್ಸಿಂಗ್ ಕಾಲೇಜಿನಿಂದ B.Sc (Nursing) ಪದವಿ ಪಡೆದಿರುವ ಇವರು, ಸಾರ್ವಜನಿಕ ಜಾಗೃತಿ ಮತ್ತು ಮಾಹಿತಿ ನೀಡುವ ಆಸಕ್ತಿಯಿಂದಾಗಿ ಡಿಜಿಟಲ್ ಪತ್ರಿಕೋದ್ಯಮ ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ. ಡಿಜಿಟಲ್ ಮಾಧ್ಯಮ ರಂಗದಲ್ಲಿ 3 ವರ್ಷಗಳ ಅನುಭವ ಹೊಂದಿರುವ ಇವರು, ಸರ್ಕಾರಿ ಉದ್ಯೋಗದ ಅಧಿಸೂಚನೆಗಳು (Govt Job Notifications), ಖಾಸಗಿ ನೇಮಕಾತಿಗಳು ಮತ್ತು ಶೈಕ್ಷಣಿಕ ಅಪ್ಡೇಟ್ಗಳನ್ನು ಒದಗಿಸುವಲ್ಲಿ ಪರಿಣತಿ ಹೊಂದಿದ್ದಾರೆ. ನಿರುದ್ಯೋಗಿ ಯುವಕ-ಯುವತಿಯರಿಗೆ ಯಾವುದೇ ಗೊಂದಲವಿಲ್ಲದೆ, ಕೇವಲ ಅಧಿಕೃತ ಮೂಲಗಳಿಂದ ಪರಿಶೀಲಿಸಿದ (Verified) ನಿಖರ ಮಾಹಿತಿಯನ್ನು ಸಕಾಲದಲ್ಲಿ ತಲುಪಿಸುವುದೇ ಇವರ ಬರವಣಿಗೆಯ ಶೈಲಿಯಾಗಿದೆ.


WhatsApp Group




Leave a Reply