ಭಾರತದ ಚುನಾವಣಾ ವ್ಯವಸ್ಥೆ(Electoral system of India) ವಿಶ್ವದಲ್ಲೇ ಅತ್ಯಂತ ವಿಶಾಲ ಹಾಗೂ ಜವಾಬ್ದಾರಿಯುತ ವ್ಯವಸ್ಥೆಗಳಲ್ಲಿ ಒಂದಾಗಿದೆ. ಪ್ರಜಾಪ್ರಭುತ್ವದ ಬುನಾದಿಯಾದ ಚುನಾವಣಾ ಪ್ರಕ್ರಿಯೆಯು ಕೇವಲ ಮತದಾನ ದಿನಕ್ಕಷ್ಟೇ ಸೀಮಿತವಲ್ಲ. ಮತದಾರರ ಪಟ್ಟಿ ಪರಿಷ್ಕರಣೆ(Revision of Electoral Roll), ಬೂತ್ ಮಟ್ಟದ ಅಧ್ಯಯನ, ಅರಿವು ಜಾಗೃತಿ ಮತ್ತು ಸಮರ್ಪಕ ನಿರ್ವಹಣೆ ಎಲ್ಲವೂ ಈ ಪ್ರಕ್ರಿಯೆಯ ಅವಿಭಾಜ್ಯ ಅಂಗಗಳಾಗಿವೆ. ಈ ಹಿನ್ನೆಲೆಯಲ್ಲೇ ಕರ್ನಾಟಕ ರಾಜ್ಯದಲ್ಲಿ(Karnataka state) ಬೂತ್ ಮಟ್ಟದ ಅಧಿಕಾರಿಗಳಾಗಿ (BLO) ಶಾಲಾ ಶಿಕ್ಷಕರನ್ನು ನಿಯೋಜನೆ ಮಾಡಿರುವುದರ ಬಗ್ಗೆ ಚುನಾವಣಾಧಿಕಾರಿಗಳಿಂದ ಮಹತ್ವದ ಆದೇಶ ಹೊರಡಿಸಲಾಗಿದೆ. ಈ ಆದೇಶದಲ್ಲಿ ಏನಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಗಳು ನಿಷ್ಪಕ್ಷಪಾತ, ಗಟ್ಟಿಯಾದ ವ್ಯವಸ್ಥೆಯೊಂದಿಗೆ ನಡೆಯಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಬೂತ್ ಮಟ್ಟದ ಕಾರ್ಯಾಚರಣೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಬೂತ್ ಮಟ್ಟದ ಅಧಿಕಾರಿಗಳು (BLO – Booth Level Officer) ಚುನಾವಣಾ ಪ್ರಕ್ರಿಯೆಯಲ್ಲಿ ಮೂಲಭೂತ ಬಲವಾಗಿದ್ದಾರೆ. ಈ ಹೊತ್ತಿನಲ್ಲಿ, ಕರ್ನಾಟಕ ರಾಜ್ಯದ ಶಿಕ್ಷಕರನ್ನು BLO ಗಳಾಗಿ ನಿಯೋಜನೆ ಮಾಡುವ ಕುರಿತು ಮಹತ್ವದ ಆದೇಶಗಳು ಹೊರಬಿದ್ದಿದ್ದು, ಇದು ರಾಜ್ಯದ ಶಿಕ್ಷಣ ಕ್ಷೇತ್ರ ಮತ್ತು ಆಡಳಿತಾತ್ಮಕ ವ್ಯವಸ್ಥೆಯ ತೀವ್ರ ಚರ್ಚೆಯ ವಿಷಯವಾಗಿದೆ.
ಆದೇಶದ ತಾತ್ವಿಕ ಹಿನ್ನೆಲೆ ಏನು?:
ರಾಜ್ಯದ ಸರ್ಕಾರಿ ಶಾಲೆಗಳ ವಿವಿಧ ಶಿಕ್ಷಕರನ್ನು ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಚುನಾವಣೆ ಸಂಬಂಧಿತ ಕರ್ತವ್ಯಗಳಿಗೆ ಬೂತ್ ಮಟ್ಟದ ಅಧಿಕಾರಿಗಳಾಗಿ(Booth level officer) ನೇಮಕ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸಾರ್ವಜನಿಕ ಹಿತದ ದೃಷ್ಟಿಯಿಂದ ಕೆಲ ಶಿಕ್ಷಕರನ್ನು BLO ಆಗಿ ನೇಮಿಸುವುದನ್ನು ಹಿಂಪಡೆಯಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವಂತೆ ಮನವಿ ಸಲ್ಲಿಸಿದ್ದರೂ, ಮಾನ್ಯ ಸರ್ವೋಚ್ಚ ನ್ಯಾಯಾಲಯ(Supreme Court) ಹಾಗೂ ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು(Election Commission guidelines) ಉಲ್ಲೇಖಿಸಿ ಸ್ಪಷ್ಟ ಉತ್ತರ ನೀಡಲಾಗಿದೆ.
ಮಾನ್ಯ ನ್ಯಾಯಾಲಯದ ಹಾಗೂ ಆಯೋಗದ ಅಭಿಪ್ರಾಯ ಏನು:
ಮಾನ್ಯ ಸರ್ವೋಚ್ಚ ನ್ಯಾಯಾಲಯವು ನೀಡಿರುವ ತೀರ್ಪಿನಲ್ಲಿ, ಶಿಕ್ಷಕರನ್ನು ಬೋಧಕೇತರ ದಿನಗಳಲ್ಲಿ ಹಾಗೂ ರಜಾದಿನಗಳಲ್ಲಿ ಚುನಾವಣಾ ಕರ್ತವ್ಯಗಳಿಗೆ ನಿಯೋಜಿಸಬಹುದೆಂದು ಸ್ಪಷ್ಟಪಡಿಸಿದೆ. ಬೋಧಕೇತರ ಸಿಬ್ಬಂದಿಗಳನ್ನು ಯಾವುದೇ ದಿನ, ಯಾವುದೇ ಸಮಯದಲ್ಲಿ ಕರ್ತವ್ಯಕ್ಕೆ ನಿಯೋಜಿಸುವ ಅಗತ್ಯವಿದ್ದರೆ, ಅದಕ್ಕೂ ಕಾನೂನು ಅನುಮತಿಯನ್ನು ಪಡೆದುಕೊಳ್ಳಬೇಕು.
ಅದೇ ರೀತಿ, ಭಾರತ ಚುನಾವಣಾ ಆಯೋಗವು ದಿನಾಂಕ 05.06.2025 ರಂದು ಹೊರಡಿಸಿರುವ ಸುತ್ತೋಲೆಯಲ್ಲಿ, ಪ್ರಜಾ ಪ್ರತಿನಿಧಿ ಕಾಯ್ದೆ 1950ರ ಕಲಂ 13ಬಿ (2) ರಡಿಯಲ್ಲಿ BLO ಗಳ ನೇಮಕಾತಿ ಕುರಿತು ಮಾರ್ಗಸೂಚಿಗಳನ್ನು ನೀಡಿದೆ. BLO ನೇಮಕಾತಿಗೆ ಮೊದಲ ಆದ್ಯತೆಯು ಗ್ರೂಪ್ ‘ಸಿ’ ದರ್ಜೆಯ ಖಾಯಂ ಸರ್ಕಾರಿ ನೌಕರರಿಗೆ(Group ‘C’ Grade Permanent Government Employees) ಇರಬೇಕು. ಅಂತಹ ನೌಕರರು ಲಭ್ಯವಿಲ್ಲದ ಪರಿಸ್ಥಿತಿಯಲ್ಲಿ ಮಾತ್ರ, ಅಂಗನವಾಡಿ, ಗುತ್ತಿಗೆ ಶಿಕ್ಷಕರು ಅಥವಾ ಕೇಂದ್ರ ಸರ್ಕಾರದ ನೌಕರರನ್ನು BLO ಗಳಾಗಿ ನೇಮಿಸಬಹುದೆಂದು ಸೂಚಿಸಲಾಗಿದೆ. ಇದರಿಂದ ತಿಳಿಯುವಂತೆ, ಶಿಕ್ಷಕರಿಗೆ ಈ ನಿಯೋಜನೆಗಳಿಂದ ಯಾವುದೇ ವಿನಾಯಿತಿಯಿಲ್ಲ.
ಸರಕಾರದ ನಿರ್ದೇಶನಗಳು:
ಶಿಕ್ಷಕರ BLO ನೇಮಕಾತಿಯಲ್ಲಿ ಯಾವುದೇ ಲೋಪವಾಗದಂತೆ, ನ್ಯಾಯಾಲಯ ಹಾಗೂ ಆಯೋಗದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಮೂಲಕ ಚುನಾವಣೆ ಸಂಬಂಧಿತ ಕಾರ್ಯಗಳ ಸಮರ್ಪಕ ನಿರ್ವಹಣೆ ಖಚಿತಪಡಿಸಿಕೊಳ್ಳಲಾಗುತ್ತಿದೆ.
ತರಬೇತಿಯ ಅವಶ್ಯಕತೆ:
ಪ್ರಸ್ತುತ ದೇಶಾದ್ಯಾಂತ ಹಾಗೂ ರಾಜ್ಯದ ವಿಧಾನಸಭಾ ಕ್ಷೇತ್ರಗಳಲ್ಲಿ BLO ಗಳಿಗೆ ವಿಶೇಷ ತರಬೇತಿ ಕಾರ್ಯಕ್ರಮಗಳು ಜರುಗುತ್ತಿವೆ. BLO ಗಳಾಗಿ ನೇಮಕಗೊಂಡಿರುವ ಶಿಕ್ಷಕರು ಸೇರಿದಂತೆ ಎಲ್ಲ ಅಧಿಕಾರಿಗಳು ಈ ತರಬೇತಿಗೆ ಕಡ್ಡಾಯವಾಗಿ ಹಾಜರಾಗಬೇಕೆಂದು ಇಲಾಖೆ ಸೂಚಿಸಿದೆ.


ಒಟ್ಟಾರೆಯಾಗಿ, ಪ್ರಜಾಪ್ರಭುತ್ವದ ಪೋಷಣೆಗೆ ಚುನಾವಣಾ ವ್ಯವಸ್ಥೆ ಸತ್ಯವಾಗಿದ್ದರೆ ಸಾಲದು, ಆ ವ್ಯವಸ್ಥೆಗೆ ನೆರವಾಗುವ ಸಿಬ್ಬಂದಿಯ ಶ್ರಮವೂ ಅಷ್ಟೇ ಅಗತ್ಯ. ಶಿಕ್ಷಕರನ್ನು BLO ಗಳಾಗಿ ನೇಮಿಸುವ ಈ ಕ್ರಮವು, ಅವರು ಶಿಕ್ಷಣದ ಜವಾಬ್ದಾರಿಯೊಂದಿಗೆ ಸಾರ್ವಜನಿಕ ಸೇವೆಯನ್ನೂ ನಿರ್ವಹಿಸುತ್ತಿರುವ ಸಂಕೇತವಾಗಿದೆ. ಆದರೆ ಈ ನಿಯೋಜನೆ ಸಮರ್ಪಕ ವ್ಯವಸ್ಥೆಯೊಂದಿಗೆ ಮತ್ತು ಶಿಕ್ಷಕರ ಮೂಲ ಕರ್ತವ್ಯಗಳಿಗೆ ವ್ಯತಿರಿಕ್ತವಾಗದ ರೀತಿಯಲ್ಲಿ ನಿರ್ವಹಿಸಲ್ಪಟ್ಟರೆ ಮಾತ್ರ, ಇದು ಸಮರ್ಥ ಮತ್ತು ಸಮವಾಯಿಕ ರೀತಿಯಲ್ಲಿ ಕಾರ್ಯರೂಪಕ್ಕೆ ಬರುತ್ತದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




