ಕಲಬುರಗಿ, ಗದಗ, ಹಾವೇರಿ ಜಿಲ್ಲೆಗಳು ಅಗ್ರಸ್ಥಾನದಲ್ಲಿ – ಜಿಲ್ಲಾವಾರು ವಿವರ
ಬೆಂಗಳೂರು: ಕರ್ನಾಟಕದ 23 ಲಕ್ಷಕ್ಕೂ ಹೆಚ್ಚು ರೈತರಿಗೆ 1,449 ಕೋಟಿ ರೂಪಾಯಿ ಬೆಳೆ ವಿಮೆ ಪರಿಹಾರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಬಿಡುಗಡೆ ಮಾಡಿವೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಅಡಿಯಲ್ಲಿ ಈ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತಿದೆ. ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಯಾವ ಬೆಳೆಗಳಿಗೆ ಪರಿಹಾರ?
2024-25ನೇ ಸಾಲಿನ ಮುಂಗಾರು ಬೆಳೆಗಳಾದ ತೊಗರಿ, ಭತ್ತ, ರಾಗಿ, ಮೆಕ್ಕೆಜೋಳ, ಸೋಯಾಬಿನ್, ಹತ್ತಿ, ಹೆಸರು, ನೆಲಗಡಲೆ, ಉದ್ದು ಮತ್ತು ಸೂರ್ಯಕಾಂತಿ ಸೇರಿದಂತೆ ಹಲವಾರು ಬೆಳೆಗಳ ಹಾನಿಗೆ ಈ ಪರಿಹಾರ ನೀಡಲಾಗಿದೆ.
ಜಿಲ್ಲಾವಾರು ಹಂಚಿಕೆ:
- ಕಲಬುರಗಿ: ₹656 ಕೋಟಿ (ಕಳೆದ ವರ್ಷದ್ದಕ್ಕಿಂತ ಮೂರು ಪಟ್ಟು ಹೆಚ್ಚು)
- ಗದಗ: ₹242 ಕೋಟಿ
- ಹಾವೇರಿ: ₹95 ಕೋಟಿ
- ವಿಜಯಪುರ: ₹97 ಕೋಟಿ
- ವಿಜಯನಗರ: ₹70 ಕೋಟಿ
- ಚಿತ್ರದುರ್ಗ: ₹33 ಕೋಟಿ
- ದಾವಣಗೆರೆ: ₹44 ಕೋಟಿ
- ಯಾದಗಿರಿ: ₹18 ಕೋಟಿ
- ಧಾರವಾಡ: ₹23 ಕೋಟಿ
- ಕೊಪ್ಪಳ: ₹34 ಕೋಟಿ
- ಬೆಳಗಾವಿ: ₹24 ಕೋಟಿ
- ಶಿವಮೊಗ್ಗ: ₹13 ಕೋಟಿ
- ಮಂಡ್ಯ: ₹3 ಕೋಟಿ
- ಬಾಗಲಕೋಟೆ: ₹14 ಕೋಟಿ
- ಬೀದರ್: ₹13 ಕೋಟಿ
- ಚಾಮರಾಜನಗರ: ₹2 ಕೋಟಿ
- ಬಳ್ಳಾರಿ: ₹32 ಲಕ್ಷ
- ಉಡುಪಿ: ₹3 ಲಕ್ಷ
- ದಕ್ಷಿಣ ಕನ್ನಡ: ₹2.40 ಲಕ್ಷ
- ಬೆಂಗಳೂರು ನಗರ: ₹4 ಲಕ್ಷ
- ಒಟ್ಟು ಪರಿಹಾರ ಮೊತ್ತ: ₹1,449 ಕೋಟಿ ರೂಪಾಯಿ
ಹಣ ಯಾವಾಗ ಸಿಗುತ್ತದೆ?
ಸುಮಾರು 50% ರೈತರ ಖಾತೆಗೆ ಈಗಾಗಲೇ ಹಣ ಜಮೆಯಾಗಿದೆ. ಉಳಿದವರಿಗೆ ರಾಜ್ಯ ಸರ್ಕಾರ ತ್ವರಿತವಾಗಿ ಪಾವತಿಸಲು ಕ್ರಮ ಕೈಗೊಂಡಿದೆ.
ಯೋಜನೆಯ ಪ್ರಾಮುಖ್ಯತೆ:
ಹಿಂದಿನ ವರ್ಷಗಳಲ್ಲಿ ಅಕಾಲಿಕ ಮಳೆ ಮತ್ತು ಬೆಳೆ ಹಾನಿಯಿಂದ ಬಳಲಿದ ರೈತರಿಗೆ ಈ ಪರಿಹಾರ ಆರ್ಥಿಕ ಸುರಕ್ಷತೆ ನೀಡುತ್ತದೆ. ಸರ್ಕಾರವು PMFBY ಯೋಜನೆ ಮೂಲಕ ರೈತರನ್ನು ಹೆಚ್ಚು ಕವರ್ ಮಾಡಲು ಮುಂದಾದಿದೆ.
ಹೆಚ್ಚಿನ ಮಾಹಿತಿಗೆ:
- ರೈತ ಸಹಾಯ ಕೇಂದ್ರಗಳು
- ಕೃಷಿ ಇಲಾಖೆ ಅಧಿಕೃತ ವೆಬ್ಸೈಟ್
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

“ಕೃಷ್ಣಸಾಗರಿ ಅವರು NeedsOfPublic.in ನ ‘ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ’ (Job Updates & Career) ವಿಭಾಗದ ಮುಖ್ಯಸ್ಥರಾಗಿದ್ದಾರೆ. ಉದ್ಯೋಗ ಮಾಹಿತಿ ಕ್ಷೇತ್ರದಲ್ಲಿ 4 ವರ್ಷಗಳ ವೃತ್ತಿಪರ ಅನುಭವ ಹೊಂದಿರುವ ಇವರು, ಸರ್ಕಾರಿ ಉದ್ಯೋಗದ ಅಧಿಸೂಚನೆಗಳು (Govt Job Notifications), ಖಾಸಗಿ ವಲಯದ ನೇಮಕಾತಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಅಪ್ಡೇಟ್ಗಳನ್ನು ಒದಗಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಉದ್ಯೋಗಾಕಾಂಕ್ಷಿಗಳಿಗೆ ಕೇವಲ ಅಧಿಕೃತ ಮೂಲಗಳಿಂದ ಪರಿಶೀಲಿಸಿದ (verified) ಮತ್ತು ನಿಖರವಾದ ಉದ್ಯೋಗದ ಮಾಹಿತಿಯನ್ನು ಸಕಾಲದಲ್ಲಿ ತಲುಪಿಸುವುದು ಸಾಗರಿ ಅವರ ಪ್ರಮುಖ ಗುರಿಯಾಗಿದೆ.”


WhatsApp Group




