ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ರಾಜ್ಯದಲ್ಲಿ ಪಟಾಕಿ ಬ್ಯಾನ್ ಆಗಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಹೌದು, ರಾಜಕೀಯ ಸಮಾರಂಭ, ಸಮಾವೇಶ, ಮದುವೆ ಹಾಗೂ ಗಣೇಶನ ಉತ್ಸವಗಳ ಕಾರ್ಯಕ್ರಮಗಳಲ್ಲಿ ಪಟಾಕಿ ಬ್ಯಾನ್ ಮಾಡಲಾಗಿದೆ. ಆದರೆ ದೀಪಾವಳಿ(diwali)ಗೆ ಪಟಾಕಿಯನ್ನು ಹುಡಿಸಬಹುದು ಅದರಲ್ಲೂ ಕೂಡ ಹಸಿರು ಪಟಾಕಿ(Green Firecrackers)ಗಳಿಗೆ ಮಾತ್ರ ಅವಕಾಶವಿದೆ, ಇನ್ನಿತರ ಪಟಾಕಿಗಳನ್ನು ಯಾವುದೇ ಸಮಾರಂಭ ಗಳಾಗಲಿ ಅಥವಾ ದೀಪಾವಳಿಯಾಗಲಿ ಉಳಿಸುವಂತಿಲ್ಲ ಎಂದು ಸಿ. ಎಂ ಸಿದ್ದರಾಮಯ್ಯನವರು ಸ್ಪಷ್ಟನೆ ಮಾಡಿದ್ದಾರೆ. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಕರ್ನಾಟಕ ರಾಜ್ಯದಲ್ಲಿ ಪಟಾಕಿ ಬ್ಯಾನ್ :
Ban on Crackers: ಈಗಾಗಲೇ ಗಣೇಶ ಹಬ್ಬ ಮುಗಿದು ಎಲ್ಲರೂ ಪಟಾಕಿಗಳನ್ನು ಉಳಿಸಿದ್ದಾಗಿದೆ ಆದರೆ ಮುಂದೆ ಬರಲಿರುವ ದೀಪಾವಳಿಯ ಹಬ್ಬಕ್ಕೆ, ರಾಜ್ಯದಲ್ಲಿ ಪಟಾಕಿ ಮಾರಾಟಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ ಕುರಿತು ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ, ಹಸಿರು ಪಟಾಕಿಗಳನ್ನು ಹೊರತುಪಡಿಸಿ ಇದರ ಯಾವುದೇ ರೀತಿಯ ಪಟಾಕಿಗಳನ್ನು ಸಮಾರಂಭಗಳಲ್ಲಿ ಹಚ್ಚಬಾರದು ಇಂದು ನಿರ್ಣಯ ಕೈಗೊಂಡಿದ್ದಾರೆ. ಇದು ಸುಪ್ರೀಂ ಕೋರ್ಟಿನ ಆದೇಶವು ಕೂಡ ಆಗಿದೆ.
ಕಳೆದ ತಿಂಗಳು ಹಾವೇರಿಯ ಗ್ರಾಮವೊಂದರಲ್ಲಿ ಪಟಾಕಿಯ ಗೋಡೌನಿಗೆ ಬೆಂಕಿ ತಗಲಿ ಅವಗಡವಾಗಿ ಅನೇಕರು ಸಾವನಪ್ಪಿದ್ದಾರೆ ಅಷ್ಟೇ ಅಲ್ಲದೆ ಅತ್ತಿಬೆಲೆಯಲ್ಲಿ ಕೂಡ 14 ಜನರು ಪಟಾಕಿಯಿಂದಾಗಿ ಮರಣವನ್ನು ಹೊಂದಿದ್ದಾರೆ. ಇವೆಲ್ಲವುಗಳನ್ನು ಮನದಟ್ಟು ಮಾಡಿಕೊಂಡು ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಪಟಾಕಿಗಳನ್ನು ಯಾವುದೇ ಸಮಾರಂಭಗಳಲ್ಲಿ ಹುಡಿಸುವಂತಿಲ್ಲ, ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶ ಇದೆ ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದಾರೆ.
ಅಷ್ಟಕ್ಕೂ ಈ ಹಸಿರು ಪಟಾಕಿಗಳನ್ನು ಗುರುತಿಸುವುದು ಹೇಗೆ?:
ಸುಪ್ರೀಂ ಕೋರ್ಟಿನಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಸುಡಿಸಬೇಕು ಎಂಬ ನಿರ್ಧಾರವನ್ನು ಸಿದ್ದರಾಮಯ್ಯನವರು ಪಾಲಿಸಲು ಮುಂದಾಗಿದ್ದಾರೆ. ಹಸಿರು ಪಟಾಕಿಗಳನ್ನು ಪತ್ತೆಹಚ್ಚಲು ಕ್ಯೂಆರ್ ಕೋಡ್ ಬಂದಿದೆ. ಹೌದು ಮೊಬೈಲಿನಿಂದನೆ ಪಟಾಕಿಯ ಮೇಲಿರುವ ಕ್ಯೂಆರ್ ಕೋಡ್ ಗಳನ್ನು ಸ್ಕ್ಯಾನ್ ಮಾಡಿ ಹಸಿರು ಪಟಾಕಿಯನ್ನು ಪತ್ತೆ ಹಚ್ಚಬಹುದಾಗಿದೆ. ಹಸಿರು ಪಟಾಕಿಗಳ ಮೇಲೆ ಎಲ್ಲಾ ಜನರಿಗೆ ಜಾಗೃತಿ ಉಂಟಾಗಬೇಕು, ಮುಂದೆ ಹಸಿರು ಪಟಾಕಿಗಳು ಮಾತ್ರ ಇರಬೇಕು ಎಂದು ಹೇಳಿದ್ದಾರೆ.
ಹಾಗಾಗಿ ಈ ದೀಪಾವಳಿಯಲ್ಲಿ ಎಲ್ಲರೂ ಪಟಾಕಿಯ ಬದಲಾಗಿ ದೀಪಗಳನ್ನು ಮಾತ್ರ ಹೆಚ್ಚಿಸಿದರೆ ಚೆನ್ನಾಗಿರುತ್ತದೆ, ಆದರೂ ಪಟಾಕಿಗಳನ್ನು ಕೊಡಿಸಬೇಕು ಎಂದು ಮನಸ್ಸಾದರೆ ಹಸಿರು ಪಟಾಕಿಗಳನ್ನು ಹುಡಿಸಿ ಸಂಭ್ರಮದಿಂದ ದೀಪಾವಳಿಯನ್ನು ಆಚರಿಸಬಹುದು. ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group







