ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಹೃದಯ ಸಂಬಂಧಿತ ರೋಗಗಳು ಗಂಭೀರ ಸಮಸ್ಯೆಯಾಗಿ ಮಾರ್ಪಟ್ಟಿವೆ. ವಿಶೇಷವಾಗಿ ಚಿಕ್ಕ ಮಕ್ಕಳಿನಿಂದ ಯುವಕರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವುದು ಚಿಂತೆಗೆ ಕಾರಣವಾಗಿದೆ. ಪ್ರಸ್ತುತ, ರಾಜ್ಯದಲ್ಲಿ ಒಟ್ಟು ಮರಣಗಳಲ್ಲಿ 30% ರಷ್ಟು ಹೃದಯ ರೋಗಗಳಿಂದ ಸಂಭವಿಸುತ್ತಿವೆ. ಇದರ ಜೊತೆಗೆ ರಕ್ತದೊತ್ತಡ, ಡಯಾಬಿಟಿಸ್, ಕ್ಯಾನ್ಸರ್ ಮತ್ತು ಸ್ಟ್ರೋಕ್ ಸಹ ಆರೋಗ್ಯ ಸವಾಲುಗಳಾಗಿವೆ. ಹಾಗೆಯೆ ಇದೆಲ್ಲದಕ್ಕಿಂತ ಜೀವನಶೈಲಿ ,ವ್ಯಾಯಾಮ, ಆರೋಗ್ಯಕರವಲ್ಲದ ಆಹಾರ ಸೇವನೆ ಧೂಮಪಾನ ಮತ್ತು ಮದ್ಯಪಾನ ಇವು ಯುವಕರು ಮತ್ತು ಮಹಿಳೆಯರಲ್ಲಿ ಹೃದಯಾಘಾತದ ಪ್ರಮುಖ ಕಾರಣಗಳಾಗಿವೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಸಿ.ಎನ್. ಮಂಜುನಾಥ್ (ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ) ಅವರ ಪ್ರಕಾರ, ಭಾರತೀಯರು ಇತರ ದೇಶಗಳಿಗೆ ಹೋಲಿಸಿದರೆ 15 ವರ್ಷ ಮುಂಚಿತವಾಗಿಯೇ ಹೃದಯ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಕೆಟ್ಟ ಆಹಾರ ಶೈಲಿ, ಒತ್ತಡ, ಧೂಮಪಾನ ಮತ್ತು ವಾಯು ಮಾಲಿನ್ಯದಂತಹ ಅಂಶಗಳು ಪ್ರಮುಖ ಕಾರಣವಾಗಿವೆ.
ಯುವಕರು ಮತ್ತು ಮಹಿಳೆಯರಲ್ಲಿ ಹೃದಯಾಘಾತದ ಪ್ರಮಾಣ
ಡಾ. ಮಂಜುನಾಥ್ ಅವರು ಒತ್ತಿಹೇಳಿದಂತೆ, 45 ವರ್ಷದೊಳಗಿನ 8% ಮಹಿಳೆಯರು ಹೃದಯಾಘಾತದಿಂದ ಬಳಲುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣಗಳು:
- ಧೂಮಪಾನ
- ಅಧಿಕ ರಕ್ತದೊತ್ತಡ
- ಬದಲಾದ ಜೀವನಶೈಲಿ
- ಆರೋಗ್ಯಕರವಲ್ಲದ ಆಹಾರ ಸೇವನೆ
ಹೃದಯ ರೋಗಗಳು 45 ರಿಂದ 60 ವರ್ಷದ ವಯಸ್ಕರಲ್ಲಿ ಹೆಚ್ಚು ಕಂಡುಬರುತ್ತವೆ. ಆದರೆ, ಕುಟುಂಬದಲ್ಲಿ ಯಾರಾದರೂ ಹೃದಯ ರೋಗದ ಸಮಸ್ಯೆಗಳನ್ನು ಎದುರಿಸಿದ್ದರೆ, ನೀವೂ ಕೂಡಾ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಹೃದಯ ರೋಗವನ್ನು ಮುಂಚಿತವಾಗಿ ಗುರುತಿಸಲು ಇದು ಸಹಾಯ ಮಾಡುತ್ತದೆ.
ವ್ಯಾಯಾಮ ಮತ್ತು ಆರೋಗ್ಯ: ಸರಿಯಾದ ವಿಧಾನಗಳು
ಡಾ. ಮಂಜುನಾಥ್ ಅವರು ವ್ಯಾಯಾಮದ ಬಗ್ಗೆ ಸರಿಯಾದ ಮಾರ್ಗದರ್ಶನ ನೀಡಿದ್ದಾರೆ:
- ದೇಹದ ಸಾಮರ್ಥ್ಯಕ್ಕೆ ತಕ್ಕಂತೆ ವ್ಯಾಯಾಮ ಮಾಡಬೇಕು.
- ಭಾರದ ವ್ಯಾಯಾಮಗಳನ್ನು ಪ್ರಾರಂಭಿಸುವ ಮೊದಲು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ.
- ಕ್ರಮೇಣ ನಿಧಾನವಾಗಿ ವ್ಯಾಯಾಮದ ತೀವ್ರತೆಯನ್ನು ಹೆಚ್ಚಿಸಬೇಕು (ಒಮ್ಮೆಲೆ ಹೆಚ್ಚು ವ್ಯಾಯಾಮ ಮಾಡುವುದು ಅಪಾಯಕಾರಿ).
- ಹೆಚ್ಚು ತಿನ್ನುವುದರ ಪರಿಣಾಮವಾಗಿ ಒಮ್ಮೆಲೆ ಹೆಚ್ಚು ವ್ಯಾಯಾಮ ಮಾಡುವುದು ಹೃದಯಕ್ಕೆ ಬಹು ದೊಡ್ಡ ಹಾನಿಕಾರಕ.
ಸಂಶೋಧನೆ ಮತ್ತು ವೈದ್ಯಕೀಯ ಸೌಲಭ್ಯಗಳ ಅಭಾವ
ಭಾರತದಲ್ಲಿ ವೈದ್ಯಕೀಯ ಸಂಶೋಧನೆಗೆ ಸಾಕಷ್ಟು ಹಣಕಾಸು ದೊರಕುತ್ತಿಲ್ಲ. ಸರ್ಕಾರ ಮತ್ತು ಕಾರ್ಪೋರೇಟ್ ಸಂಸ್ಥೆಗಳು ಹೆಚ್ಚು ಹೂಡಿಕೆ ಮಾಡಿದರೆ, ಹೃದಯ ರೋಗಗಳಂತಹ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು. ಜಯದೇವ ಹೃದ್ರೋಗ ಸಂಸ್ಥೆ ಇದಕ್ಕೆ ಉದಾಹರಣೆ. ಇನ್ಫೋಸಿಸ್ ಫೌಂಡೇಶನ್ ನೆರವಿನಿಂದ ನಿರ್ಮಿತವಾದ 350 ಹಾಸಿಗೆಗಳ ಆಸ್ಪತ್ರೆಯು ಈಗ 1,000 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದೆ. ಇದು ದೇಶದ ಅತಿದೊಡ್ಡ ಹೃದ್ರೋಗ ಆಸ್ಪತ್ರೆಗಳಲ್ಲಿ ಒಂದಾಗಿದೆ.
ಗ್ರಾಮೀಣ ಆರೋಗ್ಯ ಸೇವೆಗಳ ಸ್ಥಿತಿ
ಡಾ. ಮಂಜುನಾಥ್ ಅವರು ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ:
- ಕೇವಲ ಆಸ್ಪತ್ರೆ ಕಟ್ಟಡಗಳನ್ನು ನಿರ್ಮಿಸುವುದರಿಂದ ಸಾಕಾಗುವುದಿಲ್ಲ.
- ಉತ್ತಮ ವೈದ್ಯರು, ಸಲಕರಣೆಗಳು ಮತ್ತು ಸರಿಯಾದ ವಾತಾವರಣ ಅಗತ್ಯ.
- ಸ್ಥಳೀಯ ಒತ್ತಡ ಮತ್ತು ರಾಜಕೀಯ ಪ್ರಭಾವ ವೈದ್ಯಕೀಯ ಸೇವೆಯನ್ನು ಬಳಸುವುದನ್ನು ತಡೆಯುತ್ತದೆ.
ಲೋನ್ಲಿ ಸಿಂಡ್ರೋಮ್ ಮತ್ತು ಮಾನಸಿಕ ಆರೋಗ್ಯದ ಪರಿಣಾಮ
ಇತ್ತೀಚಿನ ದಿನಗಳಲ್ಲಿ ಸ್ಕ್ರೀನ್ ಅಡಿಕ್ಷನ್ (ಮೊಬೈಲ್/ಲ್ಯಾಪ್ಟಾಪ್ ಅತಿಯಾದ ಬಳಕೆ) ಮತ್ತು ಲೋನ್ಲಿ ಸಿಂಡ್ರೋಮ್ (ಏಕಾಂಗಿತನ) ಹೆಚ್ಚಾಗುತ್ತಿದೆ. ಇದರ ಜೊತೆಗೆ ಟೈಪ್-ಎ ಪರ್ಸನಾಲಿಟಿ (ಅಸಹನೆ, ಇತರರ ಯಶಸ್ಸನ್ನು ಸಹಿಸದಿರುವುದು) ಹೆಚ್ಚುತ್ತಿರುವುದು ಮಾನಸಿಕ ಆರೋಗ್ಯದ ಮೇಲೆ ಬಹು ದೊಡ್ಡ ಕೆಟ್ಟ ಪರಿಣಾಮವನ್ನು ಬೀರುತ್ತಿದೆ.
ಡಾ. ಮಂಜುನಾಥ್ ಅವರು ಹೇಳಿದ ಹಾಗೆ ಆರೋಗ್ಯಕರ ಜೀವನಶೈಲಿ ಅಗತ್ಯ
- ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ.
- ಸಮತೂಕದ ಆಹಾರ ಮತ್ತು ವ್ಯಾಯಾಮ ಅನುಸರಿಸಿ.
- ಧೂಮಪಾನ ಮತ್ತು ಮದ್ಯಪಾನ ತ್ಯಜಿಸಿ.
- ಒತ್ತಡವನ್ನು ನಿಯಂತ್ರಿಸಲು ಯೋಗ ಮತ್ತು ಧ್ಯಾನ ಅಭ್ಯಾಸ ಮಾಡಿ.
ಹೃದಯ ರೋಗಗಳು ತಡೆಗಟ್ಟಲು ಸಾಧ್ಯವಾದವು. ಸರಿಯಾದ ಜಾಗೃತಿ ಮತ್ತು ಆರೋಗ್ಯಕರ ಜೀವನಶೈಲಿಯಿಂದ ನಾವು ಇದನ್ನು ನಿಯಂತ್ರಿಸಬಹುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಹಿರಿಯ ನಾಗರಿಕರ ಕಾರ್ಡ್: 60 ವರ್ಷವಾದ ಕೂಡಲೇ ನೀವು ಪಡೆಯಬಹುದಾದ ಪ್ರಮುಖವಾದ ಸೌಲಭ್ಯಗಳಿವು.!
- ಆಸ್ತಿ ಮಾಲೀಕರಿಗೆ ಸಿಹಿಸುದ್ದಿ: ಬಿ ಖಾತಾ ಎ ಖಾತಾಗೆ ಪರಿವರ್ತನೆ, ವಿದ್ಯುತ್ ಸಂಪರ್ಕ ಬಗ್ಗೆ ಸಿಎಂ ನೇತೃತ್ವದ ಸಭೆಯಲ್ಲಿ ಚರ್ಚೆ.!
- ರಾಜ್ಯ ಸರ್ಕಾರದ ಹೊಸ ಉದ್ಯೋಗ ಪ್ರೋತ್ಸಾಹ ಯೋಜನೆ:ಪರಿಶಿಷ್ಟ ಪಂಗಡದವರಿಗೆ 1 ಲಕ್ಷ ರೂ ಉದ್ಯೋಗ ಸಹಾಯಧನ.! ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Shivaraj is the Lead Editor at NeedsOfPublic.in with over 4 years of experience tracking Indian government schemes and educational updates. He specializes in simplifying complex notifications from the Central and State governments to help the public understand their benefits. Before joining NeedsOfPublic, Shivaraj worked as a Content Writer focusing on Civic issues. When he isn’t decoding the latest circulars, he enjoys reading about digital literacy.”
Follow Shivaraj on:


WhatsApp Group




