ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10(Bigboss season 10) ಇನ್ನೇನು ಮುಕ್ತಾಯಗೊಳ್ಳುವ ಹಂತದಲ್ಲಿದೆ. ಶನಿವಾರದ ಸಂಚಿಕೆಯಲ್ಲಿ ತುಕಾಲಿ ಸಂತೋಷ್ ಮನೆಯಿಂದ ಹೊರಬಂದಿದ್ದರು. ಭಾನುವಾರದ ಸಂಚಿಕೆಯಲ್ಲಿ ವರ್ತೂರ್ ಸಂತೋಷ್ ಹೊರಗೆ ಬಂದರು. ಆದರೆ ಮೂರನೇ ರನ್ನರ್ ಅಪ್ ಆಗಿ ವಿನಯ್ ಅವರು ಹೊರಗೆ ಬಂದಿರುವುದು ಎಲ್ಲರಿಗೂ ಶಾಂಕಿಂಗ್ ಎಂದೇ ಹೇಳಬಹುದು. ವಿನಯ್ ಗೌಡ(Vinay Gowda) ಅವರು ಮನೆಯಿಂದ ಹೊರಗೆ ಬರಲು ಏನಿರಬಹುದು ಕಾರಣ ಎಂಬುವುದರ ಬಗ್ಗೆ ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಬಿಗ್ ಬಾಸ್ ಮನೆಯಿಂದ ವಿನಯ್ ಗೌಡ ಹೊರಗಡೆ :

ವರ್ತುರ್ ಸಂತೋಷ್ ಅವರು ಹೋದ ನಂತರ ನೆಕ್ಸ್ಟ್ ಎಲಿಮಿನೇಷನ್ (elimination) ಗೆ ನಾಲ್ಕು ಜನರಾದ ವಿನಯ್ ಸಂಗೀತ ಕಾರ್ತಿಕ್ ಹಾಗೂ ಪ್ರತಾಪ್ ಅವರನ್ನು ಕುರ್ಚಿಯಲ್ಲಿ ಕುರಿಸಲಾಯಿತು. ಖರ್ಚುಗಳು ತಿರುಗುವಾಗ ಯಾರು ಮರೆಯಾಗುತ್ತಾರೋ ಅವರು ಎಲಿಮಿನೇಷನ್ ಎಂದು ಘೋಷಿಸಲಾಗುವುದು. ಇದರ ಪ್ರಕಾರ ವಿನಯದವರು ಹೊರಗೆ ಹೋಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಟಾಪ್ ಟು ನಲ್ಲಿ ಇರಬೇಕಾದ ಸ್ಪರ್ದಿ ವಿನಯ್ ಎಂದು ಎಲ್ಲರೂ ಹೇಳುತ್ತಿದ್ದರು ಆದರೆ ಅವರೇ ಹೊರಗೆ ಬಂದಿರುವುದು ಎಲ್ಲರಿಗೂ ಶಾಕಿಂಗ್ ಆಗಿದೆ. ಅದರಲ್ಲಿಯೂ ವಿನಯವರನ್ನು ವಿಭಿನ್ನವಾಗಿ ಹೊರಗಡೆ ತರಲಾಯಿತು. ವಿನಯ್ ಗೌಡ ಫೈನಲ್ನಿಂದ ಎಲಿಮಿನೇಟ್ ಆಗಿದ್ದಾರೆ. ಈ ಮೂಲಕ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಇದೇ ಕಾರಣಕ್ಕೆ ಎಲಿಮಿನೇಟ್ ಆಗಿರಬಹುದು :
ಬಿಗ್ ಬಾಸ್ ಮನೆಯಲ್ಲಿ ಆಟ ಒಂದೇ ಲೇಖಕೆ ಬರುವುದಿಲ್ಲ. ಎಲ್ಲವನ್ನು ಕನ್ಸಿಡರ್ ಮಾಡಲಾಗುತ್ತದೆ. ಮನೆಯಲ್ಲಿ ತಮ್ಮ ನಾಲಿಗೆ ಮೇಲೆ ಹಿಡಿತವಿಲ್ಲ ಎಂಭ ಕಾರಣಕ್ಕೆ ಹೆಚ್ಚು ಟೀಕೆಗೆ ಒಳಗಾಗಿದ್ದರು ವಿನಯ್ ಗೌಡ. ಇವರು ಮನೆಯಲ್ಲಿ ನಡೆದುಕೊಂಡ ರೀತಿ ಹೊರಗಡೆ ಕೂಡ ಚರ್ಚೆಯಾಗಿತ್ತು ಎಂಬುವುದು ಸತ್ಯವೇ ಸರಿ. ಇದಕ್ಕೆ ಬಳೆ ವಿವಾದ ಸಾಕ್ಷಿ. ಫೈನಲ್ನಲ್ಲಿ ಟ್ರೋಫಿ ಎತ್ತಲಿದ್ದಾರೆ ಎಂದು ಅಂದುಕೊಂಡಿದ್ದರು ಆದರೆ ಅವರು ಈಗ ಫಿನಾಲೆಯ ಕೊನೆಯ ಕ್ಷಣದಲ್ಲಿ ಎಲಿಮಿನೇಟ್ ಆಗಿದ್ದಾರೆ.
ತನಿಷಾ ಅವರನ್ನು ಯಾರು ಎಲಿಮಿನೇಟ್ ಆಗಬಹುದು ಎಂದು ಕೇಳಿದಾಗ ಅವರು ವಿನಯ ಹೆಸರನ್ನು ತೆಗೆದುಕೊಂಡಿದ್ದರು. ಅದಕ್ಕೆ ಕಾರಣವಾಗಿ, ಬಿಗ್ ಬಾಸ್ ಅಲ್ಲಿ ವಿನಯವರನ್ನು ಇಷ್ಟಪಟ್ಟು ನೋಡುವವರು ಕೂಡ ಇದ್ದಾರೆ ಆದರೆ ವೋಟ್ ಹಾಕುವವರೇ ಬೇರೆಯವರು ಇದ್ದಾರೆ ಹಾಗೂ ಇಷ್ಟಪಡುವವರೇ ಬೇರೆದ್ದಾರೆ ಎಲಿಮಿನೇಟ್ ಹಾಗಾಗಿ ಆಗಿರಬಹುದು ಎಂದು ಹೇಳಿದರು. ವಿನಯ್ ಎಲಿಮಿನೇಟ್ ಆಗಿದ್ದಕ್ಕೆ ಅವರ ಮಗ ತುಂಬಾ ನೊಂದುಕೊಂಡು ಕಣ್ಣೀರಿಟ್ಟರು. ಅವರಿಗೆ ಸುದೀಪ್ ಅವರು ಸಾಂತ್ವನ ನೀಡಿದರು. ವಿನಯ್ ಅವರು ಕೂಡ ಎಲಿಮಿನೇಟ್ ಆಗಿದ್ದು ಶಾಕಿಂಗ್ ಆಗಿದೆ ಎಂದರು, ಆದರೆ ಜನರ ಮನಸ್ಸನ್ನು ಗೆದ್ದಿರುವುದು ಖುಷಿ ಇದೆ ಎಂದು ಸಂತಸವನ್ನು ವ್ಯಕ್ತಪಡಿಸಿಕೊಂಡರು. ಬಲ್ಲ ಮೂಲಗಳಿಂದ ಕಾರ್ತಿಕ್ ವಿನ್ನಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- BBK 10- ಡ್ರೋನ್ ಪ್ರತಾಪ್ ಮನೆಯಿಂದ ಔಟ್.? ಬಾರಿ ಶಾಕ್ ಕೊಟ್ಟ ಬಿಗ್ ಬಾಸ್!!
- ಡ್ರೋನ್ ಪ್ರತಾಪ್ ಫೈನಲ್ ಟಿಕೆಟ್ ಕೊಡುವಲ್ಲಿ ಬಿಗ್ ಬಾಸ್ ಮೋಸ ಮಾಡಿದ್ರಾ? ಇಲ್ಲಿದೆ ಕಿಚ್ಚನ ಕ್ಲಾರಿಟಿ!
- BBK 10: ಬಿಗ್ ಬಾಸ್ ಗೆಲ್ಲೋದು ಯಾರು ಗೊತ್ತಾ..? ಕಪ್ ತಗೊಂಡು ಹೋಗೋ ಸ್ಪರ್ಧಿ ಇವರೇ ನೋಡಿ!
- BBK 10: ಬಿಗ್ ಬಾಸ್ ಮನೆಗೆ ಬಂದೇ ಬಿಡ್ತು ಪ್ರತಾಪ್ ಡ್ರೋನ್..!
- BBK 10: ಸುದೀಪ್ ಸರ್ ನೀವು ದೇವರು ಎಂದು ಭಾವುಕರಾದ ಪ್ರತಾಪ್ ತಾಯಿ.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






