ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು ರಾಜ್ಯದ ಭೂ ದಾಖಲೆಗಳ ಸುಧಾರಣೆಗೆ ತೀವ್ರ ಗಮನ ಹರಿಸಿದ್ದು, ಪೋಡಿ ದುರಸ್ತಿ, ಪೌತಿ ಖಾತೆ, ಆಧಾರ್ ಸೀಡಿಂಗ್ ಮತ್ತು ಭೂ ಮಾಲೀಕತ್ವ ಸರಿಪಡಿಸುವಿಕೆ ಕಾರ್ಯಕ್ರಮಗಳನ್ನು ವೇಗಗೊಳಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡರವರು ವಿಕಾಸ ಸೌಧದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ತಹಶೀಲ್ದಾರ್ಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ, ಈ ಕುರಿತು ವಿವಿಧ ತಾಲೂಕುಗಳ ಪ್ರಗತಿಯನ್ನು ಪರಿಶೀಲಿಸಿದ್ದಾರೆ. ಸಭೆಯಲ್ಲಿ ಕೆಲವು ತಹಶೀಲ್ದಾರ್ಗಳ ಕೆಲಸದಲ್ಲಿ ಲೋಪ ದೊರಕಿದ್ದಕ್ಕೆ ಎಲ್ಲರ ಮುಂದೆಯೇ ತರಾಟೆಗೆ ತೆಗೆದುಕೊಂಡು ಕಠಿಣ ಎಚ್ಚರಿಕೆ ನೀಡಿದ್ದಾರೆ. ಈ ಲೇಖನದಲ್ಲಿ ಪೋಡಿ ದುರಸ್ತಿ, ಪೌತಿ ಖಾತೆ, ಆಧಾರ್ ಸೀಡಿಂಗ್ ಮತ್ತು ಇತರ ಭೂ ದಾಖಲೆ ಸುಧಾರಣಾ ಕಾರ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಪೋಡಿ ದುರಸ್ತಿ ಕಾರ್ಯದ ಪ್ರಗತಿ ಮತ್ತು ಸವಾಲುಗಳು
ಪೋಡಿ ದುರಸ್ತಿ ಕಾರ್ಯವು ಭೂ ಮಾಲೀಕತ್ವದ ಸರಿಯಾದ ವಿಭಜನೆ ಮತ್ತು ದಾಖಲೆಗಳ ಸುಧಾರಣೆಗೆ ಅತ್ಯಗತ್ಯವಾಗಿದೆ. ಆದರೆ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (SES) ಹಾಗೂ ಅತಿವೃಷ್ಟಿಯಿಂದಾಗಿ ಈ ಕೆಲಸದಲ್ಲಿ ತಡೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಈಗ ಮತ್ತೆ ಆದ್ಯತೆಯ ಮೇಲೆ ಕಾರ್ಯ ಆರಂಭಿಸಬೇಕಿದೆ. ರಾಜ್ಯದಾದ್ಯಂತ 1.40 ಲಕ್ಷ ಪ್ರಕರಣಗಳು ಸರ್ವೇಗೆ ಹೋಗಿದ್ದು, 1.50 ಲಕ್ಷ ಪ್ರಕರಣಗಳು ಮಿಸ್ಸಿಂಗ್ ರೆಕಾರ್ಡ್ ಕಮಿಟಿಗೆ ಸೇರಿವೆ. ಇನ್ನೂ 20,000 ಸರ್ವೇ ನಂಬರ್ಗಳನ್ನು 1-5 ರೂಪದಲ್ಲಿ ವಿಭಜಿಸಬೇಕಿದೆ. ಈ 20,000 ಸರ್ವೇ ನಂಬರ್ಗಳಲ್ಲಿ 1 ರಿಂದ 1.50 ಲಕ್ಷ ಮಂಜೂರುದಾರರು ಇರಬಹುದು ಎಂದು ಅಂದಾಜಿಸಲಾಗಿದೆ.
ಎಲ್ಲಾ ತಾಲೂಕುಗಳಲ್ಲೂ ಮಂಜೂರುದಾರರಿದ್ದು, ಬಂಟ್ವಾಳ, ಬೆಳ್ತಂಗಡಿ, ತಿಪಟೂರು ತಾಲೂಕುಗಳಲ್ಲಿ ಅಧಿಕ ಸಂಖ್ಯೆಯ ಮಂಜೂರುದಾರರಿದ್ದಾರೆ. ಕುಣಿಗಲ್, ತುಮಕೂರು ತಾಲೂಕುಗಳಲ್ಲಿಯೂ ಕೆಲಸ ಬಾಕಿಯಿದೆ. ಆದರೆ, ಶಿರಾ, ತಿಪಟೂರು, ಚಿಕ್ಕನಾಯಕನಹಳ್ಳಿ ತಾಲೂಕುಗಳಲ್ಲಿ ಕಳೆದ ಬಾರಿಗಿಂತ ಉತ್ತಮ ಪ್ರಗತಿ ಕಂಡುಬಂದಿದೆ. ಕನಕಪುರ (5,390), ಮಾಗಡಿ (5,840), ರಾಮನಗರ (4,201) ಪ್ರಕರಣಗಳು ಮಿಸ್ಸಿಂಗ್ ರೆಕಾರ್ಡ್ ಕಮಿಟಿಗೆ ಸೇರಿವೆ. ಆದರೆ, ಮಂಗಳೂರು, ಕಡಬ, ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಸುಳ್ಯ ತಾಲೂಕುಗಳಲ್ಲಿ ಅನುಬಂಧ 1ಕ್ಕೂ ಮಿಸ್ಸಿಂಗ್ ರೆಕಾರ್ಡ್ ತಾಳೆಯೇ ಆಗಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವರು, ತಹಶೀಲ್ದಾರರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೆ ಇಷ್ಟೊಂದು ಪ್ರಕರಣಗಳನ್ನು ಮಿಸ್ಸಿಂಗ್ ರೆಕಾರ್ಡ್ ಕಮಿಟಿಗೆ ಕಳುಹಿಸುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಕಠಿಣ ಸೂಚನೆ
ಹೊಸಕೋಟೆಯಲ್ಲಿ 580 ಪ್ರಕರಣಗಳು ಸರ್ವೇಗೆ ಬಾಕಿಯಿದ್ದು, ಹೊಳಲ್ಕೆರೆ, ಹೊಸದುರ್ಗ, ಹೊನ್ನಾಳಿ, ಬೇಲೂರು, ಚನ್ನಪಟ್ಟಣ ತಾಲೂಕುಗಳಲ್ಲಿಯೂ ಗಣನೀಯ ಸಂಖ್ಯೆಯ ಪ್ರಕರಣಗಳು ಬಾಕಿಯಿವೆ. ಈಗಾಗಲೇ ಕೈಗೆ ತೆಗೆದುಕೊಂಡಿರುವ 20,000 ಮತ್ತು ಇನ್ನೂ ತೆಗೆದುಕೊಳ್ಳಬೇಕಾದ 25,000 ಸೇರಿ ಒಟ್ಟು 45,000 ಸರ್ವೇ ನಂಬರ್ಗಳ ಕೆಲಸ ಬಾಕಿಯಿದೆ. ಈ ಎಲ್ಲಾ ಕಾರ್ಯಗಳನ್ನು ಡಿಸೆಂಬರ್ 2025 ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸಚಿವರು ಯೋಜನೆ ರೂಪಿಸಿಕೊಳ್ಳಲು ಸೂಚಿಸಿದ್ದಾರೆ. ಡೇಟಾ ಎಂಟ್ರಿಯಿಂದ ಹಿಡಿದು ತಹಶೀಲ್ದಾರ್ ಅನುಮೋದನೆವರೆಗೆ ಎಲ್ಲಾ ಹಂತಗಳನ್ನು ಡಿಸೆಂಬರ್ ಒಳಗೆ ಮುಗಿಸಬೇಕು ಎಂದು ಖಡಕ್ ಸೂಚನೆ ನೀಡಲಾಗಿದೆ.
ಆಧಾರ್ ಸೀಡಿಂಗ್: ರೈತರಿಗೆ ಸರ್ಕಾರಿ ಸೌಲಭ್ಯ ತಲುಪಿಸಲು ಅಗತ್ಯ
ರೈತರಿಗೆ ಸರ್ಕಾರದ ವಿವಿಧ ಸೌಲಭ್ಯಗಳು ಸುಗಮವಾಗಿ ತಲುಪಿಸಲು ಆಧಾರ್ ಸೀಡಿಂಗ್ ಅತ್ಯಗತ್ಯವಾಗಿದೆ. ಆದರೆ, ಕೆಲವು ತಾಲೂಕುಗಳಲ್ಲಿ ಇದರ ಪ್ರಗತಿ ನಿರಾಶಾದಾಯಕವಾಗಿದೆ. ಹೆಬ್ರಿಯಲ್ಲಿ ಕೇವಲ ಶೇ.46, ಕಾರ್ಕಳದಲ್ಲಿ ಶೇ.78, ಬೆಂಗಳೂರು ದಕ್ಷಿಣದಲ್ಲಿ ಶೇ.75, ಆನೇಕಲ್ನಲ್ಲಿ ಶೇ.68, ದೇವನಹಳ್ಳಿಯಲ್ಲಿ ಶೇ.71 ಮಾತ್ರ ಆಧಾರ್ ಸೀಡಿಂಗ್ ಆಗಿದೆ. ಎಲ್ಲಾ ತಾಲೂಕುಗಳಲ್ಲೂ ಶೀಘ್ರವಾಗಿ ಆಧಾರ್ ಸೀಡಿಂಗ್ ಪೂರ್ಣಗೊಳಿಸುವಂತೆ ಸಚಿವರು ಕಟ್ಟುನಿಟ್ಟಾದ ಸೂಚನೆ ನೀಡಿದ್ದಾರೆ.
ಪೌತಿ ಖಾತೆ ಅಭಿಯಾನ: ಫೋಟೋ ದೃಢೀಕರಣ ಕಡ್ಡಾಯ
ಪೌತಿ ಖಾತೆ ಅಭಿಯಾನ ಆರಂಭವಾಗಿ ತಕ್ಕ ಮಟ್ಟಿಗೆ ಪ್ರಗತಿ ಸಾಧಿಸಿದೆ. ರಾಜ್ಯದಲ್ಲಿ 41.62 ಲಕ್ಷ ಎಕರೆ ಜಮೀನು ಮೃತ ವ್ಯಕ್ತಿಗಳ ಹೆಸರಿನಲ್ಲಿದೆ. ಇದರಲ್ಲಿ 2 ಲಕ್ಷ ಪ್ರಕರಣಗಳಲ್ಲಿ ಮೃತರ ಹೆಸರಿನ ಜಮೀನನ್ನು ಈಗಿನ ಮಾಲೀಕರ ಹೆಸರಿಗೆ ಬದಲಾಯಿಸಲಾಗಿದೆ. ಇದು ಒಟ್ಟು ಗುರಿಯ ಶೇ.5 ಮಾತ್ರ. ಹುಬ್ಬಳ್ಳಿ, ಧಾರವಾಡ, ಜಮಖಂಡಿ, ಶಿರಸಿ, ಕುಂದಗೋಳ, ದಾಂಡೇಲಿ, ಅಣ್ಣಿಗೇರಿ, ನವಲಗುಂದ ತಾಲೂಕುಗಳಲ್ಲಿ ಶೇ.25ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಲಾಗಿದೆ. ಆದರೆ, ವಿರಾಜಪೇಟೆ, ಬೈಂದೂರು, ಪೊನ್ನಂಪೇಟೆ, ಮಡಿಕೇರಿ, ಆನೇಕಲ್, ಖಾನಾಪೂರ, ಯಳಂದೂರು, ಗೋಕಾಕ್ ತಾಲೂಕುಗಳಲ್ಲಿ ಶೇ.1ಕ್ಕಿಂತ ಕಡಿಮೆ ಪ್ರಗತಿ ದಾಖಲಾಗಿದೆ.
ಶೇ.1ಕ್ಕಿಂತ ಕಡಿಮೆ ಸಾಧನೆ ಮಾಡಿದ ತಹಶೀಲ್ದಾರ್ಗಳ ವಿರುದ್ಧ ಕ್ರಮ
ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ ಹೆಗಡೆ, ಹೊಸಕೋಟೆ ತಹಶೀಲ್ದಾರ್ ಸೋಮಶೇಖರ್ ಅವರ ಕೆಲಸದಲ್ಲಿ ತೀವ್ರ ಲೋಪ ಕಂಡುಬಂದಿದ್ದು, ಸಭೆಯಲ್ಲೇ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೌತಿ ಖಾತೆಗೆ ಫೋಟೋ ದೃಢೀಕರಣ ಕಡ್ಡಾಯ ಆಗಿದ್ದು, ಅನೇಕ ತಾಲೂಕುಗಳಲ್ಲಿ ಫೋಟೋ ದಾಖಲೆ ಇಲ್ಲದೆಯೇ ಪೌತಿ ಖಾತೆ ಮಾಡುತ್ತಿರುವುದು ಗಂಭೀರ ತಪ್ಪು ಎಂದು ಎಚ್ಚರಿಕೆ ನೀಡಲಾಗಿದೆ. ಮುಂದಿನ ಹಂತದಲ್ಲಿ ಬಯೋಮೆಟ್ರಿಕ್ ಮುಖ ಗುರುತಿಸುವಿಕೆ ಜಾರಿಗೊಳಿಸಲಾಗುವುದು. ಇದಕ್ಕೆ ಜಮೀನಿನ ವಾರಸುದಾರರ ಫೋಟೋ ದಾಖಲೆಗಳು ಅಗತ್ಯ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿದೆ.
ರೈತರಿಗೆ ಮತ್ತು ಭೂ ಮಾಲೀಕರಿಗೆ ಏನು ಲಾಭ?
- ಸರಿಯಾದ ಭೂ ದಾಖಲೆ: ಪೋಡಿ ದುರಸ್ತಿ ಮತ್ತು ಪೌತಿ ಖಾತೆಯಿಂದ ಭೂ ಮಾಲೀಕತ್ವ ಸ್ಪಷ್ಟಗೊಳ್ಳುತ್ತದೆ.
- ಸರ್ಕಾರಿ ಸೌಲಭ್ಯ: ಆಧಾರ್ ಸೀಡಿಂಗ್ ಮೂಲಕ PM ಕಿಸಾನ್, ಬೆಳೆ ವಿಮೆ, ಸಾಲ ಮನ್ನಾ ಇತ್ಯಾದಿ ಸೌಲಭ್ಯಗಳು ಸುಗಮವಾಗಿ ತಲುಪುತ್ತವೆ.
- ಕಾನೂನು ಭದ್ರತೆ: ಮೃತರ ಹೆಸರಿನ ಜಮೀನು ಸರಿಪಡಿಸುವುದರಿಂದ ಕಾನೂನು ಗೊಂದಲಗಳು ತಪ್ಪುತ್ತವೆ.
- ಭೂ ಆಸ್ತಿ ಮೌಲ್ಯ: ಸರಿಯಾದ ದಾಖಲೆಗಳಿಂದ ಜಮೀನಿನ ಮಾರುಕಟ್ಟೆ ಮೌಲ್ಯ ಹೆಚ್ಚಾಗುತ್ತದೆ.
ಡಿಸೆಂಬರ್ ಗಡುವು – ಅಧಿಕಾರಿಗಳಿಗೆ ಕಡ್ಡಾಯ
ಕಂದಾಯ ಸಚಿವ ಕೃಷ್ಣ ಬೈರೇಗೌಡರವರು ರಾಜ್ಯದ ಎಲ್ಲಾ ತಹಶೀಲ್ದಾರ್ಗಳಿಗೆ ಡಿಸೆಂಬರ್ 2025 ಅಂತ್ಯದೊಳಗೆ ಎಲ್ಲಾ ಬಾಕಿ ಕಾರ್ಯಗಳನ್ನು ಪೂರ್ಣಗೊಳಿಸುವಂತೆ ಕಟ್ಟುನಿಟ್ಟಾದ ಸೂಚನೆ ನೀಡಿದ್ದಾರೆ. ಪೋಡಿ ದುರಸ್ತಿ, ಪೌತಿ ಖಾತೆ, ಆಧಾರ್ ಸೀಡಿಂಗ್ ಮತ್ತು ಭೂ ದಾಖಲೆ ಸುಧಾರಣೆಗಳು ರೈತರಿಗೆ ಮತ್ತು ಭೂ ಮಾಲೀಕರಿಗೆ ದೀರ್ಘಕಾಲಿಕ ಲಾಭದಾಯಕವಾಗಿದೆ. ಈ ಕಾರ್ಯಗಳಲ್ಲಿ ವಿಳಂಬ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಶಿವರಾಜ್ ಅವರು NeedsOfPublic.in ನಲ್ಲಿ ಸಾರ್ವಜನಿಕ, ಶೈಕ್ಷಣಿಕ ಮತ್ತು ಸ್ಥಳೀಯ ಸುದ್ದಿಗಳ ವಿಭಾಗದ ಹಿರಿಯ ಸಂಪಾದಕರಾಗಿದ್ದಾರೆ (Senior Editor). ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದರೂ, ಮಾಧ್ಯಮ ಕ್ಷೇತ್ರದ ಮೇಲಿರುವ ಅತೀವ ಆಸಕ್ತಿಯಿಂದಾಗಿ 2019 ರಲ್ಲಿ ಡಿಜಿಟಲ್ ಜಗತ್ತಿಗೆ ಕಾಲಿಟ್ಟರು. ಇವರು ಆರಂಭಿಸಿದ “Suddi No.1 Kannada” ಯೂಟ್ಯೂಬ್ ಚಾನೆಲ್ ಪ್ರಸ್ತುತ 300K ಗೂ ಹೆಚ್ಚು ಸಬ್ಸ್ಕ್ರೈಬರ್ಗಳನ್ನು ಹೊಂದುವ ಮೂಲಕ ಜನಪ್ರಿಯವಾಗಿದೆ. ಡಿಜಿಟಲ್ ಮಾಧ್ಯಮದಲ್ಲಿ ಉತ್ತಮ ಅನುಭವ ಹೊಂದಿರುವ ಇವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಕೀರ್ಣ ಯೋಜನೆಗಳನ್ನು ಹಾಗೂ ವಿದ್ಯಾರ್ಥಿವೇತನಗಳನ್ನು (Scholarships) ಸರಳವಾಗಿ ವಿಶ್ಲೇಷಿಸಿ, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತಲುಪಿಸುವಲ್ಲಿ ಎಕ್ಸ್ಪರ್ಟ್ ಆಗಿದ್ದಾರೆ. ಇದರ ಜೊತೆಗೆ ಪ್ರಮುಖ ಶೈಕ್ಷಣಿಕ ಅಪ್ಡೇಟ್ಗಳು ಮತ್ತು ನಿಖರ ಮಾಹಿತಿ ನೀಡುವ ವಿಡಿಯೋ ಕಂಟೆಂಟ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು ಇವರ ಬರವಣಿಗೆಯ ವಿಶಿಷ್ಟ ಶೈಲಿಯಾಗಿದೆ.


WhatsApp Group




Leave a Reply