ಉತ್ತರ ಕನ್ನಡ ಜಿಲ್ಲೆಯಲ್ಲಿ(Uttara Kannada district) ಈ ವರ್ಷ ಮೆಕ್ಕೆಜೋಳದ ಬೆಳೆಗೆ ಅಸಾಮಾನ್ಯ ರೀತಿಯಲ್ಲಿ ಬೇಡಿಕೆ ಹೆಚ್ಚಾಗಿದ್ದು, ಕಟಾವಿನ ಆರಂಭದಲ್ಲೇ ರೈತರಿಗೆ ಉತ್ತಮ ಧಾರಣೆ ದೊರಕುತ್ತಿದೆ. ಸಾಮಾನ್ಯವಾಗಿ ಕೋಳಿ ಆಹಾರ ಹಾಗೂ ಕೆಲವೇ ಕೆಲವು ಉದ್ಯಮಗಳಿಗೆ ಮಾತ್ರ ಸೀಮಿತವಾಗಿದ್ದ ಮೆಕ್ಕೆಜೋಳದ ಉಪಯೋಗ ಇದೀಗ ಎಥೆನಾಲ್ ಉತ್ಪಾದನೆಗೆ ವಿಸ್ತರಿಸಿರುವುದು ಈ ಬದಲಾವಣೆಯ ಪ್ರಮುಖ ಕಾರಣವಾಗಿದೆ. ಪಕ್ಕದ ಜಿಲ್ಲೆ ಹಾವೇರಿಯಲ್ಲಿ ಎಥೆನಾಲ್ ಕಾರ್ಖಾನೆ ಸ್ಥಾಪನೆಗೆ ಅನುಮತಿ ನೀಡಿರುವುದರಿಂದ ಮೆಕ್ಕೆಜೋಳಕ್ಕೆ ಹೊಸ ಮಾರುಕಟ್ಟೆ ಅವಕಾಶಗಳು ತೆರೆದುಕೊಂಡಿವೆ. ಇದರ ಪರಿಣಾಮವಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆಗಳು ಇತಿಹಾಸದಲ್ಲೇ ಅತ್ಯಧಿಕ ಮಟ್ಟಕ್ಕೆ ಏರಿಕೆಯಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಆದರೆ, ಈ ವರ್ಷ ಅತಿವೃಷ್ಟಿಯ ಪರಿಣಾಮವಾಗಿ ಬೆಳೆ ಇಳುವರಿ ಗಣನೀಯವಾಗಿ ಕುಸಿದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಬೆಲೆ ಇದೆ ಆದರೆ ಬೆಳೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಲೆಯ ಏರಿಕೆ, ಮಾರುಕಟ್ಟೆಯಲ್ಲಿ ದಾಖಲೆ ಮಟ್ಟದ ಧಾರಣೆ:
ಜಿಲ್ಲೆಯಲ್ಲಿ ಈ ವರ್ಷ ಸುಮಾರು 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳವನ್ನು ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಮೆಕ್ಕೆಜೋಳಕ್ಕೆ ₹3,300ರವರೆಗೆ ದರ ಸಿಗುತ್ತಿದೆ. ಇದು ಕಟಾವಿನ ಆರಂಭದ ದಿನಗಳಲ್ಲಿ ದಾಖಲೆ ಮಟ್ಟದ ಧಾರಣೆ ಎಂದು ರೈತರು ಅಭಿಪ್ರಾಯಪಡುತ್ತಿದ್ದಾರೆ
ಕೇಂದ್ರ ಸರ್ಕಾರ ಘೋಷಿಸಿರುವ ಮೆಕ್ಕೆಜೋಳದ ಕನಿಷ್ಠ ಬೆಂಬಲ ಬೆಲೆ ₹2,330 ಆಗಿದ್ದರೂ, ಪ್ರಸ್ತುತ ಮಾರುಕಟ್ಟೆ ದರ ಅದಕ್ಕಿಂತಲೂ ₹1,000 ಹೆಚ್ಚು ಇದೆ. ಕಳೆದ ವರ್ಷಗಳಲ್ಲಿ ಸಾಮಾನ್ಯವಾಗಿ ಕ್ವಿಂಟಾಲ್ ಮೆಕ್ಕೆಜೋಳಕ್ಕೆ ₹2,000ರಷ್ಟು ದರ ದೊರಕುತ್ತಿತ್ತು. ಈ ವರ್ಷ ದರ ಏರಿಕೆಗೆ ಎಥೆನಾಲ್ ಉತ್ಪಾದನೆ ಪ್ರಮುಖ ಪಾತ್ರ ವಹಿಸಿದೆ.
ಎಥೆನಾಲ್ ಉತ್ಪಾದನೆ :
ಹಿಂದಿನ ಕಾಲದಲ್ಲಿ ಕಬ್ಬು ಮತ್ತು ಅಕ್ಕಿಯಿಂದ ಮಾತ್ರ ಎಥೆನಾಲ್ ಉತ್ಪಾದನೆ ನಡೆಯುತ್ತಿತ್ತು. ಆದರೆ ಈಗ ಮೆಕ್ಕೆಜೋಳದಿಂದಲೂ ಎಥೆನಾಲ್ ಉತ್ಪಾದನೆಗೆ ಪ್ರೋತ್ಸಾಹ ನೀಡಲಾಗಿದೆ. ಹಾವೇರಿಯಲ್ಲಿ ಸ್ಥಾಪನೆಯಾಗುತ್ತಿರುವ ಕಾರ್ಖಾನೆ ಪ್ರತಿದಿನ ಸಾವಿರಾರು ಕ್ವಿಂಟಾಲ್ ಮೆಕ್ಕೆಜೋಳವನ್ನು ಖರೀದಿಸಬೇಕಾಗಿರುವುದರಿಂದ ವ್ಯಾಪಾರಿಗಳು ಮುಂಚಿತವಾಗಿ ರೈತರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿಯೇ ಮೆಕ್ಕೆಜೋಳದ ಬೆಲೆಗಳು ಏರಿಕೆಯಾಗಿದೆ ಎಂದು ವ್ಯಾಪಾರಿ ಮಹೇಶ್ ಗೌಡ ತಿಳಿಸಿದ್ದಾರೆ.
ಅತಿವೃಷ್ಟಿಯ ಹೊಡೆತದಿಂದಾಗಿ ಇಳುವರಿ ಕುಸಿತ:
ರೈತ ಮಲ್ಲಿಕಾರ್ಜುನ ಗೌಡ ತಮ್ಮ ಅಭಿಪ್ರಾಯವನ್ನು ತಿಳಿಸಿರುವ ಪ್ರಕಾರ, ಕಳೆದ ವರ್ಷ 2 ಎಕರೆಗೆ 30 ಕ್ವಿಂಟಾಲ್ ಮೆಕ್ಕೆಜೋಳ ಇಳುವರಿ ಸಿಕ್ಕಿತ್ತು. ಆದರೆ ಈ ಬಾರಿ ಅತಿವೃಷ್ಟಿಯಿಂದ ಅರ್ಧಕ್ಕಿಂತಲೂ ಹೆಚ್ಚು ಉತ್ಪಾದನೆ ಕುಂಠಿತವಾಗಿದೆ. ಈ ದರ ಮುಂದುವರೆದರೆ ನಾವು ಹಾಕಿದ ಬಂಡವಾಳವನ್ನು ಮರಳಿ ಪಡೆಯಬಹುದು. ಆದರೆ ದರ ಇಳಿದರೆ ನಷ್ಟವಾಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಭವಿಷ್ಯದಲ್ಲಿ ಇನ್ನಷ್ಟು ದರ ಏರಿಕೆ ಸಾಧ್ಯತೆ:
ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರಸ್ತುತ ಮೆಕ್ಕೆಜೋಳದ ದರ ₹3,000ರಿಂದ ₹3,300ರ ವರೆಗೆ ಇದೆ. ಮುಂದಿನ ದಿನಗಳಲ್ಲಿ ಎಥೆನಾಲ್ ಕಾರ್ಖಾನೆಗಳ ಬೇಡಿಕೆ ಹೆಚ್ಚಾಗುವುದರಿಂದ ದರಗಳು ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಮಹೇಶ್ ನಾಯ್ಕ ಅಭಿಪ್ರಾಯಪಟ್ಟಿದ್ದಾರೆ. ಇದು ರೈತರಿಗೆ ಪ್ರೋತ್ಸಾಹಕರ ಬೆಳವಣಿಗೆ ಆಗಿದ್ದರೂ, ಇಳುವರಿಯ ಕೊರತೆ ಅದಕ್ಕೆ ದೊಡ್ಡ ಸವಾಲಾಗಬಹುದ ಎಂದು ಹೇಳಲಾಗುತ್ತದೆ.
ಇನ್ನು, ಮೆಕ್ಕೆಜೋಳದ ದರ ಏರಿಕೆಯ ಪರಿಣಾಮವಾಗಿ ಕೋಳಿ ಸಾಕಾಣಿಕೆ ಉದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದೆ. ತಾಲ್ಲೂಕಿನಲ್ಲಿ ಕೋಳಿ ಆಹಾರವಾಗಿ ಮುಖ್ಯವಾಗಿ ಮೆಕ್ಕೆಜೋಳವನ್ನೇ ಬಳಸಲಾಗುತ್ತಿತ್ತು. ಈಗ ಆಹಾರದ ವೆಚ್ಚ ಹೆಚ್ಚಾಗುತ್ತಿರುವುದರಿಂದ ಕೋಳಿ ಸಾಕಾಣಿಕೆ ದರಗಳು ಏರಬಹುದು. ತಜ್ಞರ ಪ್ರಕಾರ, ಮುಂದಿನ ದಿನಗಳಲ್ಲಿ ಮೊಟ್ಟೆಯ ಬೆಲೆ ಏರಿಕೆಯಾಗುವ ಸಾಧ್ಯತೆಯೂ ಇದೆ.
ಒಟ್ಟಾರೆಯಾಗಿ, ಉತ್ತರ ಕನ್ನಡದಲ್ಲಿ ಮೆಕ್ಕೆಜೋಳಕ್ಕೆ ಈ ವರ್ಷ ಅಪಾರ ಬೇಡಿಕೆ ಮತ್ತು ಉತ್ತಮ ಧಾರಣೆ ಸಿಕ್ಕಿದೆ. ಎಥೆನಾಲ್ ಉತ್ಪಾದನೆ ಹೊಸ ಆರ್ಥಿಕ ಅವಕಾಶಗಳನ್ನು ಸೃಷ್ಟಿಸಿದರೂ, ಅತಿವೃಷ್ಟಿಯಿಂದ ಇಳುವರಿ ಕುಸಿತ ರೈತರ ಚಿಂತೆಗೆ ಕಾರಣವಾಗಿದೆ.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




