ರಾಜ್ಯ ಸರ್ಕಾರವು ಖಜಾನೆ-2 ವ್ಯವಸ್ಥೆಯಲ್ಲಿ ಪಿಂಚಣಿ ಪಾವತಿಗೆ ಸಂಬಂಧಿಸಿದಂತೆ ಮಹತ್ವದ ಆದೇಶವನ್ನು ಹೊರಡಿಸಿದೆ. ಈ ಆದೇಶವು ನಿವೃತ್ತ ಸರ್ಕಾರಿ ನೌಕರರ ವೇತನ ಬ್ಯಾಂಕ್ ಖಾತೆಯನ್ನೇ ಪಿಂಚಣಿ ಸೌಲಭ್ಯಕ್ಕಾಗಿ ಮುಂದುವರೆಸಲು ಅನುಕೂಲ ಕಲ್ಪಿಸುತ್ತದೆ, ಇದರಿಂದ ಹೊಸ ಬ್ಯಾಂಕ್ ಖಾತೆ ತೆರೆಯುವ ಅಗತ್ಯವಿಲ್ಲ ಅಧಿಕೃತ ಸುತ್ತೋಲೆ ಲೇಖನದ ಕೊನೆಯಭಾಗದಲ್ಲಿದೆ
ಖಜಾನೆ-2 ರಲ್ಲಿ ಪಿಂಚಣಿ ಪಾವತಿ ನಿಯಮಗಳು:
ಖಜಾನೆ-2 ವ್ಯವಸ್ಥೆಯಲ್ಲಿ, ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳನ್ನು ಪಾವತಿಸಲು ಸ್ವೀಕರ್ತರ ವಿಧ-27 ರಲ್ಲಿ ನೌಕರರನ್ನು ನೋಂದಾಯಿಸಲಾಗುತ್ತದೆ. ಆದರೆ, ಸೇವೆಯಿಂದ ನಿವೃತ್ತರಾದ ನೌಕರರಿಗೆ ಪಿಂಚಣಿ ಸೌಲಭ್ಯವನ್ನು ಪಾವತಿಸಲು ಸ್ವೀಕರ್ತರ ವಿಧ-28 ರಲ್ಲಿ ನೋಂದಾಯಿಸಬೇಕಾಗುತ್ತದೆ. ಒಂದೇ ಬ್ಯಾಂಕ್ ಖಾತೆಯನ್ನು ಎರಡು ಸ್ವೀಕರ್ತರ ವಿಧಗಳಲ್ಲಿ (ವಿಧ-27 ಮತ್ತು ವಿಧ-28) ನೋಂದಾಯಿಸಲು ಅವಕಾಶವಿಲ್ಲದಿರುವುದರಿಂದ, ಈಗಾಗಲೇ ನಿವೃತ್ತರಾದವರು ಹೊಸ ಬ್ಯಾಂಕ್ ಖಾತೆ ತೆರೆದು ವಿವರಗಳನ್ನು ಒದಗಿಸಬೇಕಿತ್ತು.
ಈಗ, ಈ ಸಮಸ್ಯೆಯನ್ನು ಸರಳೀಕರಣಗೊಳಿಸಲು ಸರ್ಕಾರವು ವೇತನ ಬ್ಯಾಂಕ್ ಖಾತೆಯನ್ನೇ ಸ್ವೀಕರ್ತರ ವಿಧ-28 ರಲ್ಲಿ ನೋಂದಾಯಿಸಲು ಅನುಕೂಲ ಕಲ್ಪಿಸಿದೆ. ಈ ಕೆಳಕಂಡ ವಿಧಾನಗಳನ್ನು ಅನುಸರಿಸಲಾಗುವುದು:
- ನಿವೃತ್ತಿಯ ನಂತರ 20 ದಿನಗಳ ಕಾಲ ಸ್ವೀಕರ್ತ ವಿಧ-27 ಸಕ್ರಿಯ:
ಸರ್ಕಾರಿ ನೌಕರರು ನಿವೃತ್ತರಾದ ನಂತರ, ಅವರ ಸ್ವೀಕರ್ತ ವಿಧ-27 ಅನ್ನು ನಿವೃತ್ತಿ ದಿನಾಂಕದಿಂದ 20 ದಿನಗಳವರೆಗೆ ಸಕ್ರಿಯ ಸ್ಥಿತಿಯಲ್ಲಿ ಇರಿಸಲಾಗುವುದು. ಈ ಅವಧಿಯಲ್ಲಿ, ಬಾಕಿ ಇರುವ ವೇತನ ಅಥವಾ ಭತ್ಯೆಗಳನ್ನು ಪಾವತಿಸಬಹುದು. 20 ದಿನಗಳ ನಂತರ, ಸ್ವೀಕರ್ತ ವಿಧ-27 ನೋಂದಣಿಯನ್ನು ನಿಷ್ಕ್ರಿಯಗೊಳಿಸಲಾಗುವುದು. - ವೇತನ ಬ್ಯಾಂಕ್ ಖಾತೆಯಲ್ಲಿ ಪಿಂಚಣಿ ಸೌಲಭ್ಯ:
ಸ್ವೀಕರ್ತ ವಿಧ-27 ನಿಷ್ಕ್ರಿಯಗೊಂಡ ನಂತರ, ಅದೇ ಬ್ಯಾಂಕ್ ಖಾತೆಯ ವಿವರಗಳನ್ನು ಉಪಯೋಗಿಸಿಕೊಂಡು, ಪಿಂಚಣಿ ಸೌಲಭ್ಯಕ್ಕಾಗಿ ಸ್ವೀಕರ್ತರ ವಿಧ-28 ರಲ್ಲಿ ನೋಂದಾಯಿಸಿಕೊಳ್ಳಬಹುದು. - ಪುನಃ ವೇತನ ಭತ್ಯೆ ಪಾವತಿಗೆ ಅವಕಾಶ:
ಒಂದು ವೇಳೆ ನಿವೃತ್ತಿಯ ನಂತರ ಯಾವುದೇ ವೇತನ ಅಥವಾ ಭತ್ಯೆ ಪಾವತಿಸಬೇಕಾದ ಸಂದರ್ಭ ಬಂದರೆ, ಸಂಬಂಧಿತ ಡಿಡಿಓ (Drawing and Disbursing Officer) ಖಜಾನೆ-2 ರಲ್ಲಿ ಟಿಕೇಟ್ ಮಂಡಿಸಿದರೆ, ಸ್ವೀಕರ್ತರ ವಿಧ-27 ಅನ್ನು ಪುನಃ ಸಕ್ರಿಯಗೊಳಿಸಿ, ಪಾವತಿಗೆ ಅವಕಾಶ ಕಲ್ಪಿಸಲಾಗುವುದು.



ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




