ಮಾನವನ ಜೀವನವು ಕೇವಲ ಭೌತಿಕ ವಾಸ್ತವಿಕತೆಯಷ್ಟೇ ಅಲ್ಲ, ಅದರ ಹಿಂದೆ ಆಧ್ಯಾತ್ಮಿಕ, ನೈತಿಕ, ಮತ್ತು ಪೌರಾಣಿಕ ಅರ್ಥಗಳ ಸುಳಿವನ್ನೂ ನೀಡುತ್ತವೆ. ಅದರಲ್ಲೂ ಪ್ರತಿ ವರ್ಷದ ಪಿತೃಪಕ್ಷ ಕಾಲ, ನಮ್ಮ ಪೂರ್ವಜರಿಗೆ ಗೌರವ ಸಲ್ಲಿಸುವ ಮಹತ್ವಪೂರ್ಣ ಸಮಯವಾಗಿ ನಮಗೆ ತಿಳಿದುಬರುತ್ತದೆ. ಈ ಪಿತೃಪಕ್ಷದಲ್ಲಿ ನಮ್ಮ ಪೂರ್ವಜರಿಗೆ ಪಿಂಡ ದಾನ, ತರ್ಪಣ ಮತ್ತು ವಿವಿಧ ವಿಧಿ ವಿಧಾನಗಳ ಮೂಲಕ ಆಹಾರವನ್ನು ಅರ್ಪಿಸಿದರೆ ಅವರ ಆತ್ಮಕ್ಕೆ ತೃಪ್ತಿ ಸಿಗುತ್ತದೆ ಎಂದು ನಂಬಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಆದರೆ, ಈ ಆಚರಣೆಯಲ್ಲಿ ವಿಶೇಷವಾಗಿ ಕಾಗೆ ಪಾತ್ರ ಮಹತ್ವಪೂರ್ಣವಾಗಿದೆ. ಹಾಗಾದರೆ ಕಾಗೆಗಳು ನಮ್ಮ ಪೂರ್ವಜರೇ? ಈ ಪಿತೃಪಕ್ಷದಲ್ಲಿ ಕಾಗೆಗಳ ಪಾತ್ರ ಏನು? ಈ ಸಂಪ್ರದಾಯದ ಹಿಂದಿನ ತಾತ್ವಿಕ ಮತ್ತು ಪೌರಾಣಿಕ ಕಾರಣವೇನು? ಎಂಬಂತಹ ಪ್ರಶ್ನೆಗಳು ಉದ್ಭವಿಸುತ್ತವೆ. ಹಾಗಿದ್ದರೆ ಗರುಡ ಪುರಾಣದ ಆಳವಾದ ತತ್ವಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಪಿತೃಪಕ್ಷ – ಪೂರ್ವಜರ ಅಸ್ತಿತ್ವಕ್ಕೆ ಗೌರವ ಸಲ್ಲಿಸುವ ಕಾಲ:
ಪಿತೃಪಕ್ಷವು ಹಿಂದು ಸಂಪ್ರದಾಯದ ಪ್ರಮುಖ ಆಚರಣೆ. ಈ ಸಮಯದಲ್ಲಿ ಪೂರ್ವಜರಿಗೆ ಅನ್ನ, ಪಿಂಡ, ತರ್ಪಣ ಇತ್ಯಾದಿ ವಿಧಿಗಳ ಮೂಲಕ ಭೋಜನ ಅರ್ಪಿಸಿ, ಅವರ ಆಶೀರ್ವಾದವನ್ನು ಪಡೆಯುವ ಸಂಪ್ರದಾಯವನ್ನು ಪಾಲಿಸಲಾಗುತ್ತದೆ. ಈ ಆಚರಣೆ ಹಳೆ ಕಾಲದಿಂದ ಪ್ರಾರಂಭವಾಗಿದೆ. ಪಿತೃಪಕ್ಷದಲ್ಲಿ ಮನೆಯ ಹಿರಿಯರು ಮತ್ತು ಎಲ್ಲಾ ಸದಸ್ಯರು ಒಂದಾಗಿ ಪೂರ್ವಜರ ಇಷ್ಟದ ಆಹಾರವನ್ನು ತಯಾರಿಸಿ ಬಾಳೆ ಎಲೆ ಮೇಲೆ ಇಟ್ಟು ಪೂಜೆ ಸಲ್ಲಿಸುತ್ತಾರೆ. ಬಳಿಕ, ಈ ಆಹಾರವನ್ನು ಮನೆಯ ಹೊರಗೆ ಇಡಲಾಗುತ್ತದೆ.
ಆಹಾರವನ್ನು ಕಾಗೆ ಬಂದು ತಿನ್ನಬೇಕು ಎಂಬ ನಂಬಿಕೆ ಇದ್ದು, ಇದು ಪೂರ್ವಜರಿಂದ ಆದ ಅನುಗ್ರಹ ಎಂದು ಪರಿಗಣಿಸಲಾಗುತ್ತದೆ. ಕೆಲವರು ಆ ಆಹಾರವನ್ನು ದಿನವಿಡೀ ಕಾಗೆಗಾಗಿ ಹೊರಗಿಡುತ್ತಾರೆ, ಹಾಗೆ ಕಾಗೆಗಳು ಬಂದು ತಿನ್ನುವ ಮೂಲಕ ಪೂರ್ವಜರ ಆತ್ಮ ಸಂತೃಪ್ತಿಯಾಗುತ್ತದೆ ಎನ್ನಲಾಗುತ್ತದೆ.
ಪಿತೃ ಹಾಗೂ ಕಾಗೆಯ ಬಗೆಗಿನ ಪೌರಾಣಿಕ ದೃಷ್ಟಿಕೋನ:
ಗರುಡ ಪುರಾಣದ ಪ್ರಕಾರ, ವ್ಯಕ್ತಿಯ ಕರ್ಮಾನುಸಾರ ವ್ಯಕ್ತಿಯೋರ್ವ 4 ರೀತಿಯ ಹಂತಗಳಲ್ಲಿ ಹಾದು ಹೋಗುತ್ತಾನೆ,
1. ಬ್ರಹ್ಮ ಲೋಕ (ಅಚಿ ಮಾರ್ಗ),
2. ಪಿತೃ ಲೋಕ (ಧೂಮ ಮಾರ್ಗ),
3. ಜನ್ಮ-ಮೃತ್ಯು ಮಾರ್ಗ (ಮರುಜನ್ಮ ಅಥವಾ ಪ್ರಾಣಿ ರೂಪ),
4. ನರಕ ಮಾರ್ಗ.
ಪಿತೃ ಲೋಕವು ಮರಣದ ನಂತರ ಆತ್ಮವು ವಾಸಿಸುವ ಒಂದು ಪವಿತ್ರ ಸ್ಥಳ. ಗರುಡ ಪುರಾಣದಲ್ಲಿ ಪಿತೃಲೋಕವನ್ನು 86,000 ಯೋಜನೆಗಳು ದಕ್ಷಿಣ ದಿಕ್ಕಿನಲ್ಲಿ ಭೂಮಿಯಿಂದ ದೂರದಲ್ಲಿರುವಂತೆ ವಿವರಿಸಲಾಗಿದೆ. ಪಿತೃಗಳು ದೇವ ಪಿತೃ ಮತ್ತು ಮನುಷ್ಯ ಪಿತೃ ಎಂಬ ಎರಡು ವರ್ಗಗಳಲ್ಲಿ ವಿಭಜಿತರಾಗಿದ್ದಾರೆ. ಪಿತೃಪಕ್ಷದ ಸಮಯದಲ್ಲಿ ಈ ಪಿತೃಲೋಕದಿಂದ ಭೂಲೋಕಕ್ಕೆ ಕಿರಣಗಳ ಮೂಲಕ ಆತ್ಮಗಳು ಪ್ರವೇಶಿಸುತ್ತಾರೆ ಎಂದು ನಂಬಿಕೆ ಇದೆ.
ಇದರೊಂದಿಗೆ, ಪೌರಾಣಿಕ ಗ್ರಂಥಗಳಲ್ಲಿ, ಕಾಗೆಗಳು ಪಿತೃ ಲೋಕದಲ್ಲಿ ವಾಸಿಸುವ ಪ್ರಾಣಿಗಳೆಂದು ಹೇಳಲಾಗಿದೆ. ಪಿತೃಪಕ್ಷದ ಸಂದರ್ಭದಲ್ಲಿ, ಕಾಗೆಗಳ ಮೂಲಕ ಪೂರ್ವಜರಿಗೆ ಆಹಾರ ಅರ್ಪಿಸುವುದರಿಂದ ಅವರ ಆತ್ಮ ಸಂತೃಪ್ತಗೊಳ್ಳುತ್ತದೆ ಎಂಬ ನಂಬಿಕೆ ಪೋಷಿಸಲಾಗುತ್ತದೆ. ವಿಶೇಷವಾಗಿ ಬ್ರಾಹ್ಮ ಮುಹೂರ್ತದಲ್ಲಿ ಎದ್ದೇಳುವ ಕಾಗೆಗಳು ಆಧ್ಯಾತ್ಮಿಕ ಶಕ್ತಿಯ ಸಂಕೇತ. ಈ ಸಮಯದಲ್ಲಿ ಕಾಗೆಗಳು ಆಹಾರ ಸೇವಿಸುತ್ತವೆ ಎಂದು ಪರಿಗಣಿಸಲಾಗುವುದು. ಆದರೆ, ರಾತ್ರಿ ಸಮಯದಲ್ಲಿ ಕಾಗೆಗಳ ಕೂಗು ಕೆಟ್ಟ ಶಕುನವೆಂದು ತಿಳಿದು, ಪೂರ್ವಜರಿಂದ ಆದ ಎಚ್ಚರಿಕೆಯ ಸಂಕೇತವೆಂದು ಭಾವಿಸಲಾಗುತ್ತದೆ.
ಪಿತೃಲೋಕದ ಮಹತ್ವ:
ಗರುಡ ಪುರಾಣದಲ್ಲಿ ಪುನರ್ಜನ್ಮ ತತ್ವವನ್ನು ವಿವರಿಸಲಾಗಿದ್ದು, ಮನುಷ್ಯನ ಆತ್ಮ ತನ್ನ ಕರ್ಮದ ಅನುಸಾರವಾಗಿ ಪಿತೃಲೋಕದಲ್ಲಿ ನೆಲೆಸುತ್ತದೆ. ಉತ್ತಮ ಕರ್ಮ ಮಾಡಿದವರು ಬ್ರಹ್ಮ ಲೋಕ ಅಥವಾ ಸ್ವರ್ಗ ಲೋಕಕ್ಕೆ ಹೋಗುತ್ತಾರೆ. ಆದರೆ, ಮಧ್ಯಮ ಕರ್ಮ ಹೊಂದಿದವರು ಪಿತೃ ಲೋಕದಲ್ಲಿ ನೆಲೆಸುವರು. ಕೆಟ್ಟ ಕರ್ಮ ಹೊಂದಿದವರು ನರಕ ಲೋಕದಲ್ಲಿ ನೋವು ಭರಿಸುತ್ತಾರೆ.
ಪಿತೃಪಕ್ಷದ ಸಮಯದಲ್ಲಿ ಪೂರ್ವಜರಿಗೆ ಆಹಾರ ಅರ್ಪಿಸುವುದು, ಪಿತೃ ದೋಷ ನಾಶ ಮಾಡುವುದಾಗಿ ನಂಬಲಾಗಿದೆ. ಈ ಮೂಲಕ ಮಾನವನ ಆತ್ಮವು ಶುದ್ಧಗೊಂಡು ಮುಂದಿನ ಜನ್ಮದಲ್ಲಿ ಉತ್ತಮ ಸ್ಥಿತಿಗೆ ಪ್ರವೇಶಿಸುತ್ತದೆ ಎಂಬ ನಂಬಿಕೆ ಇದೆ.
ಇನ್ನು, ಪಿತೃಪಕ್ಷವು ನಮ್ಮಲ್ಲಿ ಪೂರ್ವಜರ ಕುರಿತು ಜ್ಞಾನ, ಗೌರವ ಮತ್ತು ಧಾರ್ಮಿಕ ಜವಾಬ್ದಾರಿಯ ಭಾವನೆ ಹುಟ್ಟಿಸುವ ವಿಶೇಷ ಸಮಯ. ಈ ಮೂಲಕ ಕುಟುಂಬಸ್ಥರೊಳಗಿನ ಸಂಬಂಧ ಬಲವಾಗಿ ನಿಂತು, ಪೌರಾಣಿಕ ಸಂಸ್ಕೃತಿ ಮುಂದುವರೆಯುತ್ತದೆ. ಪಿತೃಪಕ್ಷದ ಆಚರಣೆಯು ಕೇವಲ ತಾತ್ಕಾಲಿಕ ಪದ್ಧತಿ ಅಲ್ಲ, ಜೀವನೋತ್ತರ ಸಂಬಂಧಗಳ ಕುರಿತಾದ ಆಳವಾದ ತತ್ವವನ್ನು ಪ್ರತಿಬಿಂಬಿಸುತ್ತದೆ.
ಒಟ್ಟಾರೆಯಾಗಿ, ಈಗ ಪಿತೃಪಕ್ಷದ ಆಚರಣೆ, ಪೌರಾಣಿಕ ವಿವರಣೆ, ಪುನರ್ಜನ್ಮ ತತ್ವ ಮತ್ತು ಕಾಗೆ-ಪಿತೃ ಸಂಬಂಧದ ಆಳವಾದ ಅರ್ಥವನ್ನು ಸ್ಪಷ್ಟವಾಗಿ ಅರಿತುಕೊಳ್ಳಬಹುದು. ಗರುಡ ಪುರಾಣದ ಪ್ರಕಾರ, ನಮ್ಮ ಪೂರ್ವಜರು ಪಿತೃ ಲೋಕದಲ್ಲಿ ವಾಸಿಸುತ್ತಾರೆ ಮತ್ತು ಪಿತೃಪಕ್ಷದ ಸಮಯದಲ್ಲಿ ಅವರಿಗೆ ಆಹಾರ ಅರ್ಪಿಸುವುದರಿಂದ ನಮ್ಮ ಜೀವನದಲ್ಲಿ ಪಿತೃ ದೋಷ ನಾಶವಾಗುತ್ತದೆ ಎಂಬ ನಂಬಿಕೆ ಇದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.