ಮುಂಗಾರು ವೇಳೆ ಟೈಮ್ ನಲ್ಲೆ ಸಡನ್ ರಸಗೊಬ್ಬರ ರಫ್ತು ನಿಲ್ಲಿಸಿದ ಚೀನಾ, ಇಲ್ಲಿದೆ ಸಂಪೂರ್ಣ ಮಾಹಿತಿ

Picsart 25 06 28 23 07 48 299

WhatsApp Group Telegram Group

ಜೈವಿಕ ರಸಗೊಬ್ಬರ(Bio-fertilizer) ರಫ್ತಿಗೆ ಚೀನಾ ಬ್ರೇಕ್: ಭಾರತೀಯ ಕೃಷಿಗೆ ಆತಂಕ, ಪರ್ಯಾಯ ಮಾರ್ಗಗಳ ಹುಡುಕಾಟ ಆರಂಭ

ಭಾರತದ ಕೃಷಿ ವಲಯವು ಈಗಾಗಲೇ ಹವಾಮಾನ ವೈಪರಿತ್ಯ, ನೀರಿನ ಕೊರತೆ ಮತ್ತು ಮಣ್ಣುಧ್ರುವೀಕರಣದಂತಹ ಹಲವಾರು ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲೇ, ಏಕಾಏಕಿ ಚೀನಾ  ರಸಗೊಬ್ಬರ ರಫ್ತು ನಿಲ್ಲಿಸಿದೆ. ವಿಶೇಷವಾಗಿ ಮುಂಗಾರು ಋತು ಆರಂಭವಾಗುತ್ತಿರುವ ಜೂನ್‌ನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬುದು ಭಾರತೀಯ ಕೃಷಿ ಉದ್ದಿಮೆಗೂ, ರೈತ ಸಮುದಾಯಕ್ಕೂ ಆತಂಕದ ವಿಚಾರವಾಗಿದೆ. ಹಾಗಿದ್ದರೆ ಜೈವಿಕ ಉತ್ತೇಜಕಗಳ ಮಹತ್ವವೇನು? ರಫ್ತು ನಿಲ್ಲಿಸಲಾದ ಪ್ರಮುಖ ರಸಗೊಬ್ಬರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ಭಾರತದ ಕೃಷಿ ಕ್ಷೇತ್ರವು ಈಗ ಸಂಕಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಮುಂಗಾರು ಆರಂಭದ ಹಿನ್ನಲೆಯಲ್ಲಿ ಭತ್ತ ಸೇರಿದಂತೆ ಹಲವು ಪ್ರಮುಖ ಬೆಳೆಗಳನ್ನು ಬೆಳೆಯುವ ಹಂತದಲ್ಲಿರುವಾಗಲೇ, ಚೀನಾ ತನ್ನ ತೀರ್ಮಾನಗಳಿಂದ ಭಾರತಕ್ಕೆ ಹೊಸ ತೊಂದರೆ ತಂದಿದೆ. ಇತ್ತೀಚಿಗೆ ವಿರಳ ಲೋಹಗಳ(rare earth metals) ರಫ್ತಿಗೆ ನಿಷೇಧ ಹೇರಿದ್ದ ಚೀನಾ, ಇದೀಗ ಕೃಷಿಗೆ ಅತ್ಯಂತ ಅವಶ್ಯಕವಾಗಿರುವ “ಇಳುವರಿ ಹೆಚ್ಚಿಸುವ ವಿಶೇಷ ರಸಗೊಬ್ಬರ”ಗಳ ರಫ್ತನ್ನು ಸಹ ನಿಷೇಧಿಸಿದೆ. ಈ ಬೆಳವಣಿಗೆ ಭಾರತೀಯ ಕೃಷಿಕರು ಮತ್ತು ರಸಗೊಬ್ಬರ ಉದ್ಯಮಗಳಿಗೆ ತೀವ್ರ ಆಘಾತ ತಂದಿದೆ.

ಚೀನಾದ ನಿರ್ಬಂಧ: ಏಕಾಏಕಿ ಪೂರೈಕೆ ಸ್ಥಗಿತ,

ಭಾರತಕ್ಕೆ ಆಮದುವಾಗುತ್ತಿದ್ದ ಜೈವಿಕ ಉತ್ತೇಜಕ (Bio-stimulants) ಹಾಗೂ ಇತರ ಸೂಕ್ಷ್ಮ ಪೋಷಕಾಂಶಗಳಿಂದ ಸಮೃದ್ಧವಾಗಿರುವ ವಿಶೇಷ ರಸಗೊಬ್ಬರಗಳಲ್ಲಿ ಶೇ. 80ರಷ್ಟು ಪೂರೈಕೆಯನ್ನು ಚೀನಾ ಮಾಡುತ್ತಿರುವುದು ಸತ್ಯದ ಸಂಗತಿ. ಕಳೆದ ಐದು ವರ್ಷಗಳಿಂದ ಕ್ರಮೇಣ ಪೂರೈಕೆ ಕಡಿಮೆ ಮಾಡುತ್ತಿದ್ದ ಚೀನಾ(china), ಕಳೆದ ಎರಡು ತಿಂಗಳಿಂದ ಯಾವುದೇ ಪೂರ್ವಸೂಚನೆಯಿಲ್ಲದೆ ಪೂರೈಕೆಯನ್ನೇ ನಿಲ್ಲಿಸಿದೆ.

ಭಾರತೀಯ ರಸಗೊಬ್ಬರ ಉದ್ಯಮ ಸಂಘದ (SFIA) ಅಧ್ಯಕ್ಷ ರಾಜೀವ್ ಚಕ್ರವರ್ತಿ(Rajeev chakravarthi) ಅವರು ಹೇಳಿರುವಂತೆ, “ಚೀನಾ ಅಧಿಕೃತ ಘೋಷಣೆಯೇನು ಮಾಡಿಲ್ಲ, ಆದರೆ ವಾಸ್ತವದಲ್ಲಿ ಯಾವುದೇ ಪೂರೈಕೆ ನಡೆಯುತ್ತಿಲ್ಲ. ಇದು ಕೃಷಿಗೆ ತೊಂದರೆಯಾಗುತ್ತಿದ್ದು, ರಾಜಕೀಯ ಹುನ್ನಾರದ ಸಂಕೇತವಾಗಿದೆ.”

ಜೈವಿಕ ಉತ್ತೇಜಕಗಳ ಮಹತ್ವವೇನು?:

ಚೀನಾದಿಂದ ಭಾರತಕ್ಕೆ ಬರುತ್ತಿದ್ದ ರಸಗೊಬ್ಬರಗಳು ಸಬ್ಸಿಡಿ ರಹಿತವಾಗಿದ್ದರೂ, ಅವುಗಳ ಪರಿಣಾಮ ಕೃಷಿಗೆ ಬಹುಮಟ್ಟಿಗೆ ಲಾಭಕಾರಿ. ಈ ರಸಗೊಬ್ಬರಗಳು,
ಮಣ್ಣಿನ ಪೋಷಕಶಕ್ತಿಯನ್ನು ಹೆಚ್ಚಿಸುತ್ತವೆ.
ಬೆಳೆಗಳ ಇಳುವರಿ ಗಣನೀಯವಾಗಿ ಸುಧಾರಿಸುತ್ತದೆ.
ಪರಿಸರದ ಮೇಲೆ ಅಪಾಯಕಾರಿ ಪರಿಣಾಮ ಬೀರಿದ್ದಾವೆ.
ಪೋಷಕಾಂಶಗಳ ಬಳಕೆಯಲ್ಲಿ ಹೆಚ್ಚಿನ ಪರಿಣಾಮಕಾರಿ ಮಟ್ಟ ತಲುಪುತ್ತದೆ.

ರಫ್ತು ನಿಲ್ಲಿಸಲಾದ ಪ್ರಮುಖ ರಸಗೊಬ್ಬರಗಳ ಪಟ್ಟಿ ಹೀಗೆದೆ:

1. ನೀರಿನಲ್ಲಿ ಕರಗಬಲ್ಲ ರಸಗೊಬ್ಬರ (WSF).
2. ಕಂಟ್ರೋಲ್ಡ್ ರಿಲೀಸ್ ಫರ್ಟಿಲೈಸರ್ (CRF).
3. ಸ್ಲೋ ರಿಲೀಸ್ ಫರ್ಟಿಲೈಸರ್ (SRF).
4. ಬಲವರ್ಧಿತ ರಸಗೊಬ್ಬರಗಳು.
5. ನ್ಯಾನೋ ಹಾಗೂ ಸೂಕ್ಷ್ಮ ಪೋಷಕಾಂಶ ರಸಗೊಬ್ಬರಗಳು.

ಚೀನಾದ ನಿರ್ಧಾರದ ಹಿಂದಿನ ರಾಜಕೀಯ ಕುತಂತ್ರವೇನು?:

ರಾಜಕೀಯ ವಿಶ್ಲೇಷಕರ ಅಭಿಪ್ರಾಯದಂತೆ, ಭಾರತವನ್ನು ಆರ್ಥಿಕವಾಗಿ ಹಾಗೂ ತಾಂತ್ರಿಕವಾಗಿ ಅವಲಂಬಿತವಾಗಿರಿಸಲು ಚೀನಾ ವೈದಿಕ ರಾಜಕೀಯವನ್ನು ಅನುಸರಿಸುತ್ತಿದೆ. ದೇಶದ ಹೊರಾಂಗಣ ನೀತಿಯಲ್ಲಿ ಇದು “ಆರ್ಥಿಕ ಸರ್ಕಾರಿ ಹಸ್ತಕ್ಷೇಪ” ಎಂಬಂತೆ ಕಾಣುತ್ತದೆ. ಚೀನಾ ಹಲವು ಸಂದರ್ಭಗಳಲ್ಲಿ ತನ್ನ ಪೂರೈಕೆ ಶೃಂಖಲೆಗಳ ನಿಯಂತ್ರಣವನ್ನು ರಾಜಕೀಯ ಗುರಿಗಳಿಗಾಗಿ ಉಪಯೋಗಿಸುತ್ತಿರುವ ಬಗ್ಗೆ ಇತಿಹಾಸವೇ ಸಾಕ್ಷಿ ನೀಡಿದೆ.

ಭಾರತದ ಆಮದು ಅವಲಂಬನೆ ಮತ್ತು ಮಾರುಕಟ್ಟೆಯ ಭವಿಷ್ಯ:

ಭಾರತವು ಸಾಮಾನ್ಯವಾಗಿ ಜೂನ್-ಡಿಸೆಂಬರ್ ಅವಧಿಯಲ್ಲಿ 1.5 ಲಕ್ಷ ಟನ್‌ಗಳಷ್ಟು ವಿಶೇಷ ರಸಗೊಬ್ಬರಗಳನ್ನು ಆಮದು ಮಾಡಿಕೊಳ್ಳುತ್ತದೆ. ಭಾರತೀಯ ರಸಗೊಬ್ಬರ ಉದ್ಯಮ ಸಂಘದ (FAI) ವರದಿ ಪ್ರಕಾರ,
2029ರ ವೇಳೆಗೆ ಭಾರತದಲ್ಲಿ ಈ ಮಾರುಕಟ್ಟೆಯ ಮೌಲ್ಯ ಶತಕೋಟಿ ಡಾಲರ್ ದಾಟಲಿದೆ.
ಜೈವಿಕ ಉತ್ತೇಜಕಗಳ ಬೇಡಿಕೆ $734 ಮಿಲಿಯನ್ ದಾಟಲಿದೆ.
ಸಾವಯವ ರಸಗೊಬ್ಬರ ಮಾರುಕಟ್ಟೆ $1.13 ಶತಕೋಟಿಗೆ ಏರುವ ನಿರೀಕ್ಷೆ ಇದೆ.

ಹಾಗಿದ್ದರೆ ಭಾರತದ ಮುಂದಿನ ಆಯ್ಕೆಗಳು ಏನು?:

ಸದ್ಯಕ್ಕೆ ಭಾರತವು ತನ್ನ ಉದ್ದೇಶಿತ ಬೇಡಿಕೆಯನ್ನು ಪೂರೈಸಲು ಚೀನಾ ತ್ಯಜಿಸಿ ಇತರ ರಾಷ್ಟ್ರಗಳತ್ತ ಮುಖ ಮಾಡಬೇಕಾಗಿದೆ. ಜೋರ್ಡಾನ್ ಮತ್ತು ಯುರೋಪಿಯನ್(Jordanian and European) ಒಕ್ಕೂಟದ ರಾಷ್ಟ್ರಗಳೊಂದಿಗೆ ಆಮದು ಸಂಪರ್ಕವನ್ನು ವಿಸ್ತರಿಸುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ಪ್ರಮುಖ ಅಡಚಣೆ ಏನೆಂದರೆ,
ಚೀನಾ ಬಳಸುವ ಮೂಲ ಪದಾರ್ಥಗಳು ಹಾಗೂ ತಂತ್ರಜ್ಞಾನ ಭಾರತದಲ್ಲಿ ತಕ್ಷಣ ಲಭ್ಯವಿಲ್ಲ.
ದೇಶೀಯ ಕಂಪನಿಗಳು ಈಗಾಗಲೇ ವಿಶೇಷ ರಸಗೊಬ್ಬರಗಳ ಉತ್ಪಾದನೆಗೆ ಆಸಕ್ತಿ ತೋರಿಸುತ್ತಿದ್ದು, ಆವಿಷ್ಕಾರ ಶಕ್ತಿ ಮತ್ತು ತ್ವರಿತ ಹೂಡಿಕೆಯಲ್ಲಿ ಯಶಸ್ಸು ಗುರಿಯಾಗುತ್ತಿದೆ.

ಒಟ್ಟಾರೆಯಾಗಿ, ಚೀನಾದ ಈ ಆರ್ಥಿಕ ನಿರ್ಬಂಧದ ಪರಿಣಾಮಗಳು ಕೇವಲ ಕೃಷಿ ಕ್ಷೇತ್ರಕ್ಕಷ್ಟೇ ಸೀಮಿತವಾಗಿಲ್ಲ. ಇದು ಜಾಗತಿಕ ತಂತ್ರಜ್ಞಾನ, ಆಹಾರ ಸುರಕ್ಷತೆ ಮತ್ತು ಆರ್ಥಿಕ ರಾಜಕಾರಣದ ಶಕ್ತಿಸಮತೋಲನದ ಭಾಗವಾಗಿದೆ. ಭಾರತದ ಮುಂದಿನ ಹೆಜ್ಜೆಗಳು ಸ್ಥಳೀಯ ಉತ್ಪಾದನೆಗೆ ಉತ್ತೇಜನ ನೀಡುವುದು, ಆಮದು ನಿಭಾಯಿಸುವ ಪರ್ಯಾಯ ಮಾರ್ಗಗಳಿಗಾಗಿ ನವೋದ್ಯಮಕ್ಕೆ ಉತ್ತೇಜನ ನೀಡುವುದು ಮತ್ತು ಜಾಗತಿಕ ಪೂರೈಕೆ ಶೃಂಖಲೆಯಲ್ಲಿನ ತನ್ನ ನೆಲೆಯನ್ನು ಪುನರ್‌ನಿರ್ಮಿಸುವ ದಿಕ್ಕಿನಲ್ಲಿ ಸಾಗಬೇಕಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!