ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಯಾದ ‘ಗೃಹಲಕ್ಷ್ಮಿ’ ಯೋಜನೆಯಡಿಯಲ್ಲಿ ಮಹಿಳೆಯರಿಗೆ ನೀಡಬೇಕಿದ್ದ ಮಾಸಿಕ 2,000 ರೂಪಾಯಿ ಗ್ಯಾರಂಟಿ ಹಣವು ಕ್ರಮಬದ್ಧವಾಗಿ ಬರದೆ, ಜಿಲ್ಲೆಯ ಸಾವಿರಾರು ಮಹಿಳೆಯರು ಗಂಭೀರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಸರ್ಕಾರಿ ಯೋಜನೆಯನ್ನು ನಂಬಿ ವಿವಿಧ ಉಳಿತಾಯ ಯೋಜನೆಗಳಲ್ಲಿ ಹಣವನ್ನು ಪಡೆದು ಇದೀಗ ಅನೇಕರು ಸಾಲದ ಬಿಕ್ಕಟ್ಟಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.……..

ಮಡಿಕೇರಿ: ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಮನೆ ಯಜಮಾನಿಗೆ ಪ್ರತಿ ತಿಂಗಳಿಗೆ 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯ ಹಣ ಕಳೆದ ಮೂರು ತಿಂಗಳಿನಿಂದ ಬಾರದೇ ಮಹಿಳೆಯರು ಅತಂತ್ರವಾಗಿದ್ದಾರೆ. ಸರ್ಕಾರದ ಗ್ಯಾರಂಟಿಗಳನ್ನು ನಂಬಿ ಚೀಟಿ, ಗೋಲ್ಡ್ ಸ್ಕೀಮ್ ಹೀಗೆ ಉಳಿತಾಯ ಯೋಜನೆಗಳಿಗೆ ಕೈಹಾಕಿದ್ದ ಮಹಿಳೆಯರೀಗ ತೊಂದರೆಗೊಳಗಾಗಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದ ಅದೆಷ್ಟೋ ಮಹಿಳೆಯರಿಗೆ ದಿನನಿತ್ಯದ ಜೀವನಕ್ಕೆ ಅನುಕೂಲಕರವಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಯ ಹಣವನ್ನು ಉಳಿಸಿ ಅತ್ಯಗತ್ಯ ದಿನನಿತ್ಯದ ವಸ್ತುಗಳನ್ನು ಕೊಂಡುಕೊಂಡಿರುವ, ಕೊಡಿಸಿರುವ ಕುರಿತು ಆಗಾಗ ವಾಹಿನಿಗಳಲ್ಲಿ ಸುದ್ದಿಯಾಗುತ್ತಿರುತ್ತದೆ. ಆದರೇ, ಕಳೆದ ಮೂರು ತಿಂಗಳಿಂದ ಖಾತೆಗೆ ಗೃಹಲಕ್ಷ್ಮಿ ಹಣ ಬಾರದೇ ಇರುವುದರಿಂದ ಜಿಲ್ಲೆಯ ಮಹಿಳೆಯರು ಸಮಸ್ಯೆ ಅನುಭವಿಸುವಂತಾಗಿದೆ. ಗೃಹಲಕ್ಷ್ಮಿ ಹಣವನ್ನು ನಂಬಿ ಕೆಲವು ಮಹಿಳೆಯರು ಸ್ಥಳೀಯವಾಗಿ ಚೀಟಿಗಳಿಗೆ ಸೇರುವುದು, ಗೋಲ್ಡ್ ಸ್ಕೀಮ್ಗಳನ್ನು ಕಟ್ಟುವುದು ಹೀಗೆ ಹಣವನ್ನು ಉಳಿತಾಯ ಮಾಡುವ ಯೋಜನೆಗಳಲ್ಲಿ ಪಾಲ್ಗೊಂಡಿದ್ದರು. ಆದರೆ ಈಗ ಮೂರು ತಿಂಗಳು ಹಣ ಬರದೇ ಇರುವುದರಿಂದ ಮಹಿಳೆಯರು ತಮ್ಮ ಸ್ಕೀಮ್ ಹಣ ಪಾವತಿಸಲಾಗದೇ ಸಾಲ ಮಾಡುವ ಪರಿಸ್ಥಿತಿಗೆ ಬಂದು ನಿಂತಿದ್ದಾರೆ
ಆಗಸ್ಟ್ನಿಂದ ಖಾತೆಗೆ ಹಣ ಜಮಾ ಆಗೇಯಿಲ್ಲಾ
2023ರ ಆಗಸ್ಟ್ ತಿಂಗಳಿನಿಂದ ಶುರುವಾದ ಈ ಯೋಜನೆಯು ಮನೆ ಯಜಮಾನಿಯ ಖಾತೆಗೆ ಸರ್ಕಾರದಿಂದ 2 ಸಾವಿರ ರೂ. ಹಣವನ್ನು ಜಮಾ ಮಾಡಲಾಗುತ್ತಿದೆ. ಒಂದೆರಡು ಸಂದರ್ಭಗಲಲ್ಲಿ ತಡವಾಗಿದ್ದು ಬಿಟ್ಟರೇ ಉಳಿದಂತೆ ಹಣವನ್ನು ಹಾಕಲಾಗಿದೆ. ಜುಲೈ ತಿಂಗಳಿನಲ್ಲಿ ಕೊನೆಯದಾಗಿ ಹಣ ಬಂದಿದ್ದು ಬಿಟ್ಟರೆ ಮತ್ತೆ ಮಹಿಳೆಯರ ಖಾತೆಗೆ ಸರ್ಕಾರದ 2000 ರೂ. ಬಂದಿರುವುದಿಲ್ಲಾ. ಕಳೆದ ಆಗಸ್ಟ್ , ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಮಹಿಳೆಯರ ಖಾತೆಗೆ ಹಣ ಬರದೇ ಇರುವುದರಿಂದ ಸಿದ್ದರಾಮಯ್ಯ ಅವರ ಗ್ಯಾರಂಟಿ ಮುಗಿದು ಹೋಯಿತೇ ಎಂದು ಮಹಿಳೆಯರು ಅಧಿಕಾರಿಗಳನ್ನಾ ಪ್ರಶ್ನೆ ಮಾಡುತ್ತಿದ್ದಾರೆ.
ಈ ವರ್ಷ ಒಟ್ಟು ಬಂದಿದ್ದು 5 ತಿಂಗಳ ಹಣವಷ್ಟೆ:
ಪ್ರಸ್ತುತ ವರ್ಷ 2025 ರಲ್ಲಿ ಕೇವಲ 5 ತಿಂಗಳು ಮಾತ್ರ ಮಹಿಳೆಯರ ಖಾತೆಗೆ ಹಣ ವರ್ಗಾಯಿಸಲಾಗಿದೆ. ಜನವರಿಯ ಹಣ ಖಾತೆಗೆ ಬಂದಿದ್ದು, ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಹಣ ಹಾಕಲಿಲ್ಲ. ಬಳಿಕ ಏಪ್ರಿಲ್ನಿಂದ ಹಣ ಹಾಕುವುದನ್ನು ಮುಂದುವರಿಸಲಾಗಿದೆ. ಆದರೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಬಾಕಿ ಹಣವನ್ನು ಸರ್ಕಾರ ಇದುವರೆಗೂ ಪಾವತಿ ಮಾಡಿಲ್ಲ. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇತ್ತೀಚೆಗೆ ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ ಮತ್ತು ಕೆಡಿಪಿ ಸಭೆಗಳಲ್ಲಿ ಮಾಹಿತಿ ನೀಡಿದೆಯಷ್ಟೆ.
ಗೃಹಲಕ್ಷ್ಮೀ ಯೋಜನೆ – ಇಲ್ಲಿಯವರೆಗಿನ ಕಂತುಗಳ ಬಿಡುಗಡೆ ದಿನಾಂಕಗಳು
| ಕಂತು ಸಂಖ್ಯೆ | ಸಂಬಂಧಿತ ತಿಂಗಳು | ಸ್ಥಿತಿ | ಬಿಡುಗಡೆ ದಿನಾಂಕ |
|---|---|---|---|
| 28th | ನವಂಬರ್ 2025 | ಪೆಂಡಿಂಗ್ (Pending) | ಇನ್ನೂ ನವೀಕರಿಸಬೇಕು |
| 27th | ಅಕ್ಟೋಬರ್ 2025 | ಪೆಂಡಿಂಗ್ (Pending) | ಇನ್ನೂ ನವೀಕರಿಸಬೇಕು |
| 26th | ಸೆಪ್ಟೆಂಬರ್ 2025 | ಪೆಂಡಿಂಗ್ (Pending) | ಇನ್ನೂ ನವೀಕರಿಸಬೇಕು |
| 25th | ಆಗಸ್ಟ್ 2025 | ಪೆಂಡಿಂಗ್ (Pending) | ಇನ್ನೂ ನವೀಕರಿಸಬೇಕು |
| 24th | ಜುಲೈ 2025 | ಪೆಂಡಿಂಗ್ (Pending) | ಇನ್ನೂ ನವೀಕರಿಸಬೇಕು |
| 23rd | ಜೂನ್ 2025 | ಪೆಂಡಿಂಗ್ (Pending) | ಇನ್ನೂ ನವೀಕರಿಸಬೇಕು |
| 22nd | ಮೇ 2025 | ಪೂರ್ಣಗೊಂಡಿದೆ | 20-10-2025 |
| 21st | ಏಪ್ರಿಲ್ 2025 | ಪೂರ್ಣಗೊಂಡಿದೆ | 14-08-2025 |
| 20th | ಮಾರ್ಚ್ 2025 | ಪೂರ್ಣಗೊಂಡಿದೆ | 05-06-2025 |
| 19th | ಫೆಬ್ರವರಿ 2025 | ಪೂರ್ಣಗೊಂಡಿದೆ ( | 17-05-2025 |
| 18th | ಜನವರಿ 2025 | ಪೂರ್ಣಗೊಂಡಿದೆ | 30-03-2025 |
ಗಮನಿಸಿ: DBT ಮೂಲಕ ಬ್ಯಾಚ್ಗಳಲ್ಲಿ ಪ್ರಕ್ರಿಯೆಗೊಳ್ಳುವ ಕಾರಣ ಬಿಡುಗಡೆ ದಿನಾಂಕ ಮತ್ತು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವ ನಿಜವಾದ ದಿನಾಂಕದಲ್ಲಿ ವ್ಯತ್ಯಾಸವಾಗಿರಬಹುದು.

ಈ ಮಾಹಿತಿಗಳನ್ನು ಓದಿ
- ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್ಗೆ ಸೇರಲು 1,000 ರೂ ಕೊಟ್ಟು ಷೇರ್ ಹೋಲ್ಡರ್ ಆಗಬೇಕು ಯಾರಿಗೆ ಎಷ್ಟು ಸಾಲ ಸಿಗುತ್ತೆ? ಏನೆಲ್ಲಾ ನಿಯಮ?
- BREAKING : ‘ಗೃಹಲಕ್ಷ್ಮಿ’ ಫಲಾನುಭವಿಗಳಿಗೆ ಗುಡ್ ನ್ಯೂಸ್ : 23ನೇ ಕಂತಿನ ಹಣ ಬಿಡುಗಡೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
- BIGNEWS : ಗೃಹಲಕ್ಷ್ಮಿ ಬಾಕಿ 4000ರೂ ಹಣ ಈ ದಿನದಂದು ಖಾತೆಗೆ ಜಮೆ? ಅಧಿಕೃತ ಮಾಹಿತಿ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್..!
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಶಿವರಾಜ್ ಅವರು NeedsOfPublic.in ನಲ್ಲಿ ಸಾರ್ವಜನಿಕ, ಶೈಕ್ಷಣಿಕ ಮತ್ತು ಸ್ಥಳೀಯ ಸುದ್ದಿಗಳ ವಿಭಾಗದ ಹಿರಿಯ ಸಂಪಾದಕರಾಗಿದ್ದಾರೆ (Senior Editor). ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದರೂ, ಮಾಧ್ಯಮ ಕ್ಷೇತ್ರದ ಮೇಲಿರುವ ಅತೀವ ಆಸಕ್ತಿಯಿಂದಾಗಿ 2019 ರಲ್ಲಿ ಡಿಜಿಟಲ್ ಜಗತ್ತಿಗೆ ಕಾಲಿಟ್ಟರು. ಇವರು ಆರಂಭಿಸಿದ “Suddi No.1 Kannada” ಯೂಟ್ಯೂಬ್ ಚಾನೆಲ್ ಪ್ರಸ್ತುತ 300K ಗೂ ಹೆಚ್ಚು ಸಬ್ಸ್ಕ್ರೈಬರ್ಗಳನ್ನು ಹೊಂದುವ ಮೂಲಕ ಜನಪ್ರಿಯವಾಗಿದೆ. ಡಿಜಿಟಲ್ ಮಾಧ್ಯಮದಲ್ಲಿ ಉತ್ತಮ ಅನುಭವ ಹೊಂದಿರುವ ಇವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಕೀರ್ಣ ಯೋಜನೆಗಳನ್ನು ಹಾಗೂ ವಿದ್ಯಾರ್ಥಿವೇತನಗಳನ್ನು (Scholarships) ಸರಳವಾಗಿ ವಿಶ್ಲೇಷಿಸಿ, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತಲುಪಿಸುವಲ್ಲಿ ಎಕ್ಸ್ಪರ್ಟ್ ಆಗಿದ್ದಾರೆ. ಇದರ ಜೊತೆಗೆ ಪ್ರಮುಖ ಶೈಕ್ಷಣಿಕ ಅಪ್ಡೇಟ್ಗಳು ಮತ್ತು ನಿಖರ ಮಾಹಿತಿ ನೀಡುವ ವಿಡಿಯೋ ಕಂಟೆಂಟ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು ಇವರ ಬರವಣಿಗೆಯ ವಿಶಿಷ್ಟ ಶೈಲಿಯಾಗಿದೆ.


WhatsApp Group




Leave a Reply