ಡಯಾಬಿಟಿಸ್ಗೊಳಗಾದವರಲ್ಲಿ ಗಾಯಗಳು ವಾಸಿಯಾಗಲು ಏಕೆ ಹೆಚ್ಚು ಸಮಯ ಬೇಕು?
ಇಂದು ಮಧುಮೇಹ ಅಥವಾ ಡಯಾಬಿಟಿಸ್(Diabetes) ಎಂಬುದು ಎಷ್ಟೋ ಮಂದಿಗೆ ಸಾಮಾನ್ಯವಾದ ರೋಗವಾಗಿ ಪರಿಣಮಿಸಿದೆ. ಆದರೆ ಇದನ್ನು “ಸಾಮಾನ್ಯ” ಎಂದು ತಳ್ಳಿಹಾಕಬಾರದು, ಏಕೆಂದರೆ ಇದು ದೈಹಿಕ ಆರೋಗ್ಯದ ಅನೇಕ ಆಯಾಮಗಳನ್ನು ಮುನ್ನೆಚ್ಚರಿಕೆಯಿಂದ ನೋಡಿಕೊಳ್ಳಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತದೆ. ಮಧುಮೇಹ ರೋಗಿಗಳಲ್ಲಿ ಪುಟ್ಟ ಗಾಯವೂ ಹೆಚ್ಚು ಗಂಭೀರವಾಗಬಹುದು ಎಂಬುದನ್ನು ವೈದ್ಯರು ಪದೇ ಪದೇ ಎಚ್ಚರಿಸುತ್ತಾರೆ. ಒಂದು ಸಣ್ಣ ಸಣ್ಣ ಕಡಿತ ಅಥವಾ ಪೆಟ್ಟು ವಾಸಿಯಾಗದೆ ಉಲ್ಬಣವಾಗುವ ಸಾಧ್ಯತೆ ಇರುತ್ತದೆ. ಇದಕ್ಕೆ ಕಾರಣಗಳೇನು? ಯಾಕೆ ಡಯಾಬಿಟಿಸ್ ರೋಗಿಗಳಿಗೆ ಗಾಯಗಳು ಬೇಗನೆ ವಾಸಿಯಾಗುವುದಿಲ್ಲ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
1. ರೋಗ ನಿರೋಧಕ(Disease resistant) ಶಕ್ತಿಯಲ್ಲಿ ಕುಸಿತ:
ಮಧುಮೇಹದ ಸಂದರ್ಭದಲ್ಲಿ ರಕ್ತದಲ್ಲಿ ಸಕ್ಕರೆ ಪ್ರಮಾಣ(Blood sugar levels) ಹೆಚ್ಚು ಇರುತ್ತದೆ. ಈ ಹೆಚ್ಚಾದ ಸಕ್ಕರೆ, ದೇಹದಲ್ಲಿನ ಪ್ರಮುಖ ಪ್ರೊಟೀನ್ಗಳೊಂದಿಗೆ ಸಂಯೋಜನೆಗೊಂಡು ಅವರ ಕಾರ್ಯಚಟುವಟಿಕೆಯನ್ನು ಕಡಿಮೆಮಾಡುತ್ತದೆ. ಪರಿಣಾಮವಾಗಿ ರೋಗ ನಿರೋಧಕ ಶಕ್ತಿ ಹದಗೆಡುತ್ತದೆ. ಈ ಶಕ್ತಿ ಕುಸಿತದಿಂದಾಗಿ ಗಾಯದ ಜಾಗದಲ್ಲಿ ಸೋಂಕು ತಡೆಯುವ ಸಾಮರ್ಥ್ಯ ಕಡಿಮೆಯಾಗುತ್ತದೆ ಮತ್ತು ಗುಣಮುಖತೆಯ ವೇಗ ಕುಂದುಹೋಗುತ್ತದೆ.
2. ರಕ್ತ ಸಂಚಾರದ ವ್ಯತ್ಯಯ:
ಅನಿಯಂತ್ರಿತ ಶುಗರ್ ಲೆವೆಲ್ ಇದ್ದಾಗ, ರಕ್ತ ಸ್ವಲ್ಪ ಗಟ್ಟಿಯಾಗಿರುತ್ತದೆ. ಇದು ಶರೀರದ ವಿಭಿನ್ನ ಅಂಗಾಂಗಗಳಿಗೆ ಸರಿಯಾಗಿ ರಕ್ತ ಹರಿವನ್ನು ತಡೆಹಿಡಿಯುತ್ತದೆ. ಗಾಯದ ಜಾಗಕ್ಕೆ ಅಗತ್ಯ ಬಿಳಿರಕ್ತ ಕಣಗಳು(White blood cells) ತಲುಪಲು ವಿಳಂಬವಾಗುತ್ತದೆ. ಇದು ಗಾಯದ ಭಾಗದಲ್ಲಿ ಸಮರ್ಪಕ ರಕ್ಷಣಾತ್ಮಕ ಪ್ರತಿಕ್ರಿಯೆಯನ್ನು ತಡೆಯುವ ಮೂಲಕ ಗುಣಮುಖತೆಯಲ್ಲಿ ತಡಮಾಡುತ್ತದೆ.
3. ಬ್ಯಾಕ್ಟೀರಿಯಾ(Bacteria) ಆಕ್ರಮಣಕ್ಕೆ ಆಸರೆ:
ಡಯಾಬಿಟಿಸ್ ರೋಗಿಗಳ ರಕ್ತದಲ್ಲಿ ಹೆಚ್ಚು ಶಕ್ಕರೆ ಇದ್ದಾಗ, ಅದು ಬ್ಯಾಕ್ಟೀರಿಯಾದ ಬೆಳವಣಿಗೆಗೆ ಸೂಕ್ತ ವಾತಾವರಣ ಒದಗಿಸುತ್ತದೆ. ಜೊತೆಗೆ ರೋಗ ನಿರೋಧಕ ಶಕ್ತಿ ದುರ್ಬಲವಾಗಿರುವುದರಿಂದ ಬ್ಯಾಕ್ಟೀರಿಯಾದು ಬೇಗನೇ ಹರಡಬಹುದು. ಇದು ಗಾಯದ ಪರಿಸ್ಥಿತಿಯನ್ನು ಇನ್ನಷ್ಟು ಕಠಿಣಗೊಳಿಸಬಹುದು.
4. ದೇಹದ ರಕ್ಷಣಾತ್ಮಕ ವ್ಯವಸ್ಥೆಯ ಕುಸಿತ:
ಹೆಚ್ಚಿದ ಶುಗರ್ ಮಟ್ಟದಿಂದ ರಕ್ತದಲ್ಲಿ “ಡೈಕಾರ್ಬೋನಿಲ್”(Dicarbonyl) ಎಂಬ ಅಂಶ ಉಂಟಾಗುತ್ತದೆ, ಇದು ದೇಹದ ರಕ್ಷಣಾತ್ಮಕ ವ್ಯವಸ್ಥೆಗೆ ಹಾನಿಕಾರಕವಾಗಿರುತ್ತದೆ. ಈ ಪರಿಣಾಮವಾಗಿ ದೇಹ ಕ್ರಿಮಿ ಸೋಂಕುಗಳ ವಿರುದ್ಧ ಸಮರ್ಥವಾಗಿ ಯುದ್ಧಿಸಲು ವಿಫಲವಾಗುತ್ತದೆ. ಇದರಿಂದ ಗಾಯ ಗುಣಮುಖವಾಗಲು ಹೆಚ್ಚು ಸಮಯ ಬೇಕಾಗುತ್ತದೆ ಅಥವಾ ಅದು ಹೊಸ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು.
ಮಧುಮೇಹ ರೋಗಿಗಳು ತಮ್ಮ ದೈನಂದಿನ ಜೀವನದ ಪ್ರತಿಯೊಂದು ಹಂತದಲ್ಲಿಯೂ ಎಚ್ಚರಿಕೆಯಿಂದ ಇರಬೇಕು. ಗಾಯಗಳ ವಿಚಾರದಲ್ಲಿ ಇದು ಹೆಚ್ಚು ಪ್ರಸ್ತುತ. ಸ್ವಲ್ಪ ನಿರ್ಲಕ್ಷ್ಯವೂ ಕೂಡ ಭವಿಷ್ಯದಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಬಹುದು. ವೈಯಕ್ತಿಕ ಸ್ವಚ್ಛತೆ, ನಿಯಮಿತ ವ್ಯಾಯಾಮ, ಶುಗರ್ ಲೆವೆಲ್ ನಿಯಂತ್ರಣ(Sugar level control), ಮತ್ತು ಗಾಯಗಳ ಸರಿಯಾದ ಚಿಕಿತ್ಸೆ ಈ ಎಲ್ಲವು ಡಯಾಬಿಟಿಸ್ ರೋಗಿಗಳ ಆರೋಗ್ಯದ ಪಥವನ್ನು ಸುರಕ್ಷಿತವಾಗಿ ರೂಪಿಸಬಹುದಾದ ಪ್ರಮುಖ ಅಂಶಗಳಾಗಿವೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




