ಬೆಂಗಳೂರು, ಜೂನ್ 2025, ಹಿಂದುಳಿದ ವರ್ಗದ ಸಮಾಜದ ಉನ್ನತಿಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮವು 2025-26ನೇ ಸಾಲಿಗೆ ವಿವಿಧ ಸಬಲೀಕರಣ ಮತ್ತು ಆರ್ಥಿಕ ಸಹಾಯ ಯೋಜನೆಗಳನ್ನು ಪ್ರಕಟಿಸಿದೆ. ಈ ಬಾರಿ ನಿಗಮವು ಗ್ರಾಮೀಣ ಹಾಗೂ ನಗರ ಹಿನ್ನಲೆ ಹೊಂದಿದ ವರ್ಗ-1ರ 6(A) ರಿಂದ 6(AK) ಯವರೆಗೆ ಬರುವ ಸಮುದಾಯಗಳಿಗೆ ಸಧೃಢ ಆಧಾರ ನೀಡುವ ನಿಟ್ಟಿನಲ್ಲಿ ಜತೆಗೆ ನವೀನತೆಯೊಂದಿಗೆ ಯೋಜನೆಗಳನ್ನು ಅಳವಡಿಸಿಕೊಂಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಯೋಜನೆಗಳು:
ಅರಿವು ಶೈಕ್ಷಣಿಕ ಸಾಲ ಯೋಜನೆ (ಹೊಸ ಮತ್ತು ನವೀಕರಣ):
ಅಂತಾರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವಿದ್ಯಾಭ್ಯಾಸದ ಆಸೆಪಡುವ ವಿದ್ಯಾರ್ಥಿಗಳಿಗೆ ಇದು ಬಹುಮುಖ್ಯವಾದ ಅವಕಾಶ. ಈ ಯೋಜನೆಯಡಿ ಮೌಲಿಕ ಶೈಕ್ಷಣಿಕ ವೆಚ್ಚಗಳಿಗೆ ಸಾಲ ನೀಡಲಾಗುವುದು. ಆರ್ಥಿಕ ಅಡಚಣೆಯಿಂದ ಶಿಕ್ಷಣ ನಿಲ್ಲಿಸುವ ಸಂದರ್ಭಗಳನ್ನು ತಪ್ಪಿಸಲು ಇದು ಅನುಕೂಲ.
ಗಂಗಾ ಕಲ್ಯಾಣ ನೀರಾವರಿ ಯೋಜನೆ:
ಬಡ ರೈತ ಕುಟುಂಬಗಳಿಗೆ ಭೂಮಿಗೆ ನೀರಾವರಿ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆಯಡಿ ಕೊಳವೆ ಬಾವಿ ಅಥವಾ ನದಿ ಜಲದ ಲಿಫ್ಟ್ ವ್ಯವಸ್ಥೆ ಸೌಲಭ್ಯ ಲಭ್ಯವಿದೆ. ಕೃಷಿ ಆಧಾರಿತ ಬದುಕಿಗೆ ಬಲ ನೀಡುವ ಮಹತ್ವದ ಕ್ರಮವಿದು.
ಸ್ವಯಂ ಉದ್ಯೋಗ ನೇರ ಸಾಲ ಮತ್ತು ಸಹಾಯಧನ ಯೋಜನೆ:
ನೋಂದಾಯಿತ ಕೈಗಾರಿಕೆಗಳು, ವ್ಯಾಪಾರ/ಉದ್ಯಮ ಪ್ರಾರಂಭಿಸಬೇಕಾದ ವ್ಯಕ್ತಿಗಳಿಗೆ ಬ್ಯಾಂಕುಗಳ ಮೂಲಕ ಸಾಲ ನೀಡಲಾಗುವುದು. ಈ ಯೋಜನೆಯ ಉದ್ದೇಶ, ಉದ್ಯೋಗ ಹುಡುಕುವವರನ್ನು ಉದ್ಯೋಗ ಸೃಷ್ಟಿಕರ್ತರಾಗಿ ರೂಪಿಸುವುದು.
ಸ್ವಾವಲಂಭಿ ಸಾರಥಿ ಯೋಜನೆ :
ವ್ಯಕ್ತಿಗತ ಸಾರಿಗೆ ಉದ್ಯಮದಲ್ಲಿ ತೊಡಗಲು ಬಯಸುವವರಿಗಾಗಿ – ಖಾಸಗಿ ಟೆಂಪೋ, ಟ್ಯಾಕ್ಸಿ, ಆಟೋ ಮೊದಲಾದ ವಾಹನ ಖರೀದಿಗೆ ಅನುಕೂಲವಾಗುವ ಸಾಲ. ನಿರುದ್ಯೋಗ ಯುವಕರಿಗೆ ಈ ಯೋಜನೆ ಹೊಸ ದಾರಿ ತೆರೆದಿದೆ.
ಅರ್ಜಿ ಸಲ್ಲಿಸಲು ಶರತ್ತುಗಳು:
ಅರ್ಜಿದಾರರ ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ಜೋಡಣೆ ಕಡ್ಡಾಯ.
ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಸೌಲಭ್ಯ.
ಕಳೆದ 3 ವರ್ಷಗಳಲ್ಲಿ ಈ ನಿಗಮ ಅಥವಾ ಸರ್ಕಾರದ ಬೇರೆ ನಿಗಮದಿಂದ ಯೋಜನೆಯ ಪ್ರಯೋಜನ ಪಡೆದಿದ್ದವರು ಅರ್ಹರಲ್ಲ.
2023-24 ಅಥವಾ 2024-25 ರಲ್ಲಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪುನಃ ಅರ್ಜಿ ಹಾಕಬೇಕಿಲ್ಲ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
ಅರ್ಜಿ ಸಲ್ಲಿಕೆಗಾಗಿ ಸೇವಾ ಸಿಂಧು ಪೋರ್ಟಲ್ (Seva Sindhu)https://sevasindhu.karnataka.gov.in ಬಳಸಿ July 4ರೊಳಗೆ ಅರ್ಜಿ ಸಲ್ಲಿಸಬೇಕು.
ಅರ್ಜಿದಾರರು ತಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ನಾಗರೀಕ ಸೇವಾ ಕೇಂದ್ರಗಳಲ್ಲಿ ಸಹಾಯ ಪಡೆದು ಅರ್ಜಿ ಸಲ್ಲಿಸಬಹುದು.
ಸರ್ಕಾರದ ನಿರ್ದೇಶನ ಮಂಡಳಿಯ ವಿವೇಚನಾ ಕೋಟಾದಡಿಗೂ ಅರ್ಜಿದಾರರು ಅರ್ಜಿ ಸಲ್ಲಿಸಬಹುದು.
ಯೋಜನೆಯ ಫಲಾನುಭವಿಗಳಿಗೆ ಸಲಹೆ:
ಈ ಯೋಜನೆಗಳ ಉದ್ದೇಶ, ಸಮುದಾಯವನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ರೂಪಿಸುವುದು. ಆಸಕ್ತರು ಸಮಯವನ್ನು ಕಳೆಯದೇ ಅರ್ಜಿ ಸಲ್ಲಿಸಿ, ತಮ್ಮ ಬದುಕಿಗೆ ಹೊಸ ಭರವಸೆಯ ಬಾಗಿಲು ತೆರೆದಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ನಿಗಮದ ಅಧಿಕೃತ ಜಾಲತಾಣ: https://ambigaradevelopment.karnataka.gov.in
ದೂರವಾಣಿ ಸಂಖ್ಯೆ: 08182-229634
ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಜಿಲ್ಲಾ ಕಚೇರಿ – ನೇರವಾಗಿ ಭೇಟಿ ನೀಡಬಹುದು.
ಕೊನೆಯದಾಗಿ ಹೇಳುವುದಾದರೆ, ಈ ಯೋಜನೆಗಳು ಮಾತ್ರವಲ್ಲ, ನಿಮ್ಮ ವಿದ್ಯಾಭ್ಯಾಸ, ಉದ್ಯಮ ಹಾಗೂ ಜೀವನಮಟ್ಟವನ್ನು ಉತ್ತುಂಗಕ್ಕೆ ತಲುಪಿಸಲು ಸರ್ಕಾರ ನೀಡುವ ಹಕ್ಕುಪ್ರದಾನ ಯೋಜನೆಗಳು ಸದ್ಬಳಕೆಗೊಳಿಸಿ. ಆಸೆಪಟ್ಟು ಕಾಯುವುದಕ್ಕಿಂತ, ಒಂದು ಹೆಜ್ಜೆ ಮುಂದೆ ಹಾಕಿ ಅರ್ಜಿ ಸಲ್ಲಿಸಿ – ಇದುವರೆಗೆ ನೀವು ನಿರೀಕ್ಷಿಸಿದ್ದ ಅವಕಾಶ ನಿಮ್ಮ ಕೈಯಲ್ಲಿದೆ.ಮತ್ತು ಇಂತಹ ಉತ್ತಮವಾದ ಮಾಹಿತಿಯನ್ನು ನೀವು ತಿಳಿದಮೇಲೆ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.