ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10( reality show Bigg Boss season 10) ಶುರುವಾಗಿ ಮೂರು ದಿನಗಳಾಯ್ತು. ಈ ಸೀಸನ್ ನ ಶೋ ಎಲ್ಲರ ಗಮನ ಸೆಳೆದಿದೆ. ಯಾಕಂದರೆ ಈ ಹಿಂದಿನ ಶೋಗಳಲ್ಲಿ ಶೋ ಶುರುವಾದಗ ಯಾವುದೆ ಗಲಾಟೆ ಜಗಳ ನಡೆಯುತ್ತಿರಲಿಲ್ಲ ಮುಂದೆ ಹೋದಂತೆಲ್ಲ ನಿಜಾವಾದ ಶೋ ಶುರುವಾಗ್ತಿತ್ತು. ಆದರೆ ಈ ಸೀಸನ್ ಶುರುವಾದ ಮೂರೇ ದಿನಗಳಲ್ಲಿ ಜಗಳ ಶುರುವಾಗಿದೆ. ಯಾರ ಯಾರ ನಡುವೆ ಅಂತ ತಿಳಿದುಕೊಳ್ಳ ಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಬಿಗ್ ಬಾಸ್ ನಲ್ಲಿ ಜಗಳ ಶುರುವಾಗಿಯೇ ಬಿಡ್ತು :
ಬಿಗ್ ಬಾಸ್ (Bigg Boss) ಮನೆಯಲ್ಲಿ ಎಲ್ಲರ ಮನಸ್ಥಿತಿ ಯೂ ಒಂದೇ ತರ ಇರುವುದಿಲ್ಲ, ಹೀಗಿದ್ದಾಗ ಜಗಳಗಳು ಕಾಮನ್ ಆಗಿರುತ್ತದೆ. ಬಿಗ್ ಬಾಸ್ ಗೆ ಬಂದ ಮೊದಲ ವಾರ ಎಲ್ಲರೂ ಶಾಂತ ರೀತಿಯಿಂದ ಇರುತ್ತಾರೆ. ಆದರೆ ಬಿಗ್ ಬಾಸ್ ಕನ್ನಡ ಸೀಸನ್ 10 ನಲ್ಲಿ ಈ ರೀತಿ ಆಗಿಲ್ಲ. ಮೂರೇ ದಿನಕ್ಕೆ ದೊಡ್ಮನೆಯಲ್ಲಿ ಜಗಳ ಶುರುವಾಗಿದೆ. ಸಂಗೀತಾ ಶೃಂಗೇರಿ ಹಾಗೂ ವಿನಯ್ ಮಧ್ಯೆ ಜಗಳ ನಡೆದಿದೆ. ಇದು ಪ್ರೇಕ್ಷಕರ ಕುತೂಹಲ ಕೆರಳಿಸಿದೆ.
ದೊಡ್ಮನೆಯಲ್ಲಿ ಏನಿದು ಗಲಾಟೆ ಅಂತ ನೋಡೋಣ ಬನ್ನಿ.
ದೊಡ್ಮನೆಗೆ ಎಂಟ್ರಿ ಪಡೆಯೋದು ಅಷ್ಟು ಸುಲಭದ ಮಾತಲ್ಲ. ಆದರೆ ಈ ಸೀಸನ್ ನಲ್ಲಿ ಶೋ ನೋಡೋಕೆ ಬಂದವರಿಗೆ ಓಟಿಂಗ್ ಮಾಡುವ ಅವಕಾಶ ಇತ್ತು. ಹೀಗೆ ಓಟಿಂಗ್ ಮಾಡಿದಾಗ ಶೇ.80ರ ಮೇಲೆ ಬಂದರೆ ಅವರು ಅರ್ಹರು ಎಂದು ಇನ್ನು ಶೇ.40ರಿಂದ 79 ಇದ್ದರೆ ಅವರನ್ನು ಅನರ್ಹರು ಎಂದು ಪರಿಗಣಿಸಿ ದೊಡ್ಮನೆಯೊಳಗೆ ಕಳುಹಿಸಲಾಯಿತು.
ನಂತರ ಶೋ ಶುರುವಾದಗ ಮೊದಲಿನಲ್ಲಿ ಅನರ್ಹರನ್ನು ನಾಮಿನೇಟ್ ಮಾಡವ ಅವಕಾಶ ಅರ್ಹರಿಗೆ ಇತ್ತು. ಅನರ್ಹರಿಗೆ ಸೋಫಾ, ಬೆಡ್ ರೂಂ ಬಳಕೆ ಮಾಡುವ ಅವಕಾಶ ಇರಲಿಲ್ಲ. ಆದರೂ ಸಂಗೀತಾ ಅವರು ಸೋಫಾ ಮೇಲೆ ಕುಳಿತ್ತಿದ್ದರು. ಇದೇ ವಿಚಾರ ಇಟ್ಟುಕೊಂಡು ವಿನಯ್ ಅವರು ಸಂಗೀತಾ ಹೆಸರನ್ನು ಹೇಳಿ ನಾಮಿನೇಟ್ ಮಾಡಿದರು.
ಸಂಗೀತ ಅವರು ಅಂತೂ ಸಿಟ್ಟಿಗೆದ್ದೆ ಬಿಟ್ರು :
ಇದಕ್ಕೆ ಸಂಗೀತಾ ಶೃಂಗೇರಿ ಅವರು ಸಿಟ್ಟಿಗೆದ್ದು ನಾನು ತಪ್ಪು ಮಾಡಿದ್ದರೆ ಬಿಗ್ ಬಾಸ್ ಶಿಕ್ಷೆ ಕೊಡುತ್ತಿದ್ದರು. ನೀವೇ ಬಿಗ್ ಬಾಸ್ ಆಗ್ಬಿಟ್ರಲ್ಲ ಎಂದು ಗರಂ ಆದರು. ನನ್ನತ್ರ ಯಾರೂ ಮಾತಾಡೋದನ್ನು ಇಟ್ಕೋಬೇಡಿ’ ಎಂದು ವಿನಯ್ ರವರಿಗೆ ಎಚ್ಚರಿಕೆ ಕೊಟ್ಟರು.
ಇದಾದ ನಂತರ ಬಿಗ್ ಬಾಸ್ ಮನೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಯ್ತು. ಇವರಿಬ್ಬರ ನಡುವೆ ನಡೆದ ಈ ಜಗಳ ದೊಡ್ಡ ಮನೆಯಲ್ಲಿ ಅಶಾಂತಿಯನ್ನು ಸೃಷ್ಟಿಮಾಡಿದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group







