ದಕ್ಷಿಣ ಭಾರತದ ರಾಜ್ಯಗಳಲ್ಲಿ ಬ್ಯಾಂಕಿಂಗ್ ಸೇವೆಗಳ ವೇಳೆ ಭಾಷಾ ಅಡೆತಡೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಸೂಚನೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ, ಬ್ಯಾಂಕ್ ಸಿಬ್ಬಂದಿ ಸ್ಥಳೀಯ ಭಾಷೆ ಮಾತನಾಡದಿರುವುದು ಗ್ರಾಹಕರಿಗೆ ಗೊಂದಲ, ಅಸಮಾಧಾನ ಮತ್ತು ಕೆಲವೊಮ್ಮೆ ವಾಗ್ವಾದಕ್ಕೂ ಕಾರಣವಾಗಿದೆ. ಗ್ರಾಹಕರಿಗೆ ಸೇವೆ ನೀಡಲು ಭಾಷಾ ಸಂವಹನವೇ ಬಹಳ ಮುಖ್ಯ ಸೇತುವೆ. ಈ ಸೇತುವೆ ದುರ್ಬಲವಾದಾಗ ಸೇವೆಯ ಗುಣಮಟ್ಟ ಕುಸಿಯುವುದಷ್ಟೇ ಅಲ್ಲ, ಗ್ರಾಹಕ ಹಾಗೂ ಸಿಬ್ಬಂದಿ ನಡುವಿನ ನಂಬಿಕೆಗೆ ಧಕ್ಕೆಯೂ ಉಂಟಾಗುತ್ತದೆ. ಇದೇ ಹಿನ್ನೆಲೆಯಲ್ಲೇ ಹಣಕಾಸು ಸಚಿವರು ಬ್ಯಾಂಕ್ಗಳಿಗೆ ಕಡ್ಡಾಯ ಸಲಹೆ ನೀಡಿದ್ದು ವಿಶೇಷ ಮಹತ್ತ್ವ ಪಡೆದಿದೆ.
ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
12ನೇ ಎಸ್ಬಿಐ ಬ್ಯಾಂಕಿಂಗ್ ಮತ್ತು ಅರ್ಥಶಾಸ್ತ್ರ ಸಮಾವೇಶದಲ್ಲಿ ನಿರ್ಮಲಾ ಸೀತಾರಾಮನ್ ಹೇಳಿಕೆ:
ಎಸ್ಬಿಐ ಆಯೋಜಿಸಿದ್ದ 12ನೇ ಬ್ಯಾಂಕಿಂಗ್ ಮತ್ತು ಅರ್ಥಶಾಸ್ತ್ರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಬ್ಯಾಂಕ್ಗಳು ಸ್ಥಳೀಯ ಭಾಷೆ ತಿಳಿದವರನ್ನೇ ಶಾಖೆಗಳ ಹುದ್ದೆಗೆ ನೇಮಕ ಮಾಡಬೇಕು. ಈ ಭಾಷಾ ಜ್ಞಾನವನ್ನೇ ವೃತ್ತಿಪರತೆಯ ಒಂದು ಭಾಗವಾಗಿ ಪರಿಗಣಿಸಬೇಕು ಎಂದು ಸ್ಪಷ್ಟಪಡಿಸಿದರು. ಹಿರಿಯ ಅಧಿಕಾರಿಗಳಿಗೆ ಸ್ಥಳೀಯ ಭಾಷೆ ಬಾರದಿದ್ದರೂ ಪರವಾಗಿಲ್ಲ, ಆದರೆ ಶಾಖೆಗಳ ಮಟ್ಟದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಆ ಪ್ರದೇಶದ ಜನರ ಭಾಷೆಯನ್ನು ಅರಿತಿರಬೇಕು. ನೇಮಕಾತಿ ಹಾಗೂ ಮಾನವ ಸಂಪನ್ಮೂಲ ನೀತಿಗಳಲ್ಲೂ ಬೇಕಾದ ಬದಲಾವಣೆ ಮಾಡಬೇಕು ಎಂದು ಸೂಚಿಸಿದರು.
ಬ್ಯಾಂಕ್ಗಳ ಬೆಳವಣಿಗೆಗೆ ಭಾಷೆ ಏಕೆ ಅಗತ್ಯ?:
ಸಚಿವೆ ಸೀತಾರಾಮನ್ ಬ್ಯಾಂಕಿಂಗ್ ಕ್ಷೇತ್ರದ ಮೂಲಭೂತತತ್ತ್ವವನ್ನು ತಿಳಿಸಿದ್ದು, ಬ್ಯಾಂಕಿನ ಬೆಳವಣಿಗೆಗೆ ಸ್ಥಳೀಯ ಗ್ರಾಹಕರೊಂದಿಗೆ ನಿಕಟ ಸಂಪರ್ಕ ಅತ್ಯಗತ್ಯ. ಸಚಿವೆ ಸೀತಾರಾಮನ್ ಪ್ರಮುಖ ಅಂಶಗಳನ್ನು ಉಲ್ಲೇಖಿಸಿದ್ದು, ತಂತ್ರಜ್ಞಾನ ಮುಖ್ಯ, ಆದರೆ ಸಂಪೂರ್ಣ ಅವಲಂಬನೆ ಅಪಾಯಕಾರ. ಇಂದಿನ ಬ್ಯಾಂಕುಗಳಲ್ಲಿ ತಂತ್ರಜ್ಞಾನದಿಂದ ಕೆಲಸ ಸುಲಭವಾದರೂ, ಎಲ್ಲಾ ಸಂದರ್ಭದಲ್ಲಿ ಯಂತ್ರದ ಮೇಲೆ ಅವಲಂಬಿಸುವುದು ಸರಿಯಲ್ಲ. ಕೆಲವು ಸಂದರ್ಭಗಳಲ್ಲಿ ಸಿಬ್ಬಂದಿಯೇ ನೇರವಾಗಿ ಗ್ರಾಹಕರೊಂದಿಗೆ ಮಾತನಾಡುವುದು ಅವಶ್ಯಕ.
ಮಾತೃಭಾಷೆ ಮಾತಾಡಿದಾಗ ಗ್ರಾಹಕರ ವಿಶ್ವಾಸ ಹೆಚ್ಚುತ್ತದೆ:
ಹಿಂದಿ, ಇಂಗ್ಲಿಷ್ ಗೊತ್ತಿದ್ದರೂ, ಗ್ರಾಹಕರು ತಮ್ಮ ಮಾತೃಭಾಷೆಯಲ್ಲೇ ಕೇಳಿದಾಗ ಸಂತೋಷ, ವಿಶ್ವಾಸ ಮತ್ತು ಸುಗಮ ಸಂವಹನ ಉಂಟಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಬಾಹ್ಯ ಕ್ರೆಡಿಟ್ ಮಾಹಿತಿ ಕಂಪನಿಗಳ ಅವಲಂಬನೆ ಎಚ್ಚರಿಕೆ:
ಗ್ರಾಹಕರ ಮಾಹಿತಿಗಾಗಿ ಬ್ಯಾಂಕುಗಳು ಬಾಹ್ಯ ಏಜೆನ್ಸಿಗಳ ಮೇಲೆ ಹೆಚ್ಚು ಅವಲಂಬಿಸಿವೆ. ಇದರಿಂದ ತಪ್ಪು ವರದಿಗಳ ಹಿನ್ನೆಲೆಯಲ್ಲಿ ಸಾಲ ತಿರಸ್ಕಾರವಾಗುವ ಅಪಾಯವಿದೆ ಎಂದು ಸಚಿವರು ಎಚ್ಚರಿಸಿದರು.
ಭಾಷಾ ವಿವಾದ, ದಕ್ಷಿಣ ಭಾರತದಲ್ಲಿ ಹೆಚ್ಚುತ್ತಿರುವ ಅಸಮಾಧಾನ:
ಕಳೆದ ಕೆಲವು ವರ್ಷಗಳಲ್ಲಿ, ಬೆಂಗಳೂರು ಸೇರಿ ಕರ್ನಾಟಕದ ಹಲವು ಭಾಗಗಳಲ್ಲಿ ಕನ್ನಡದಲ್ಲಿ ಮಾತನಾಡದ ಬ್ಯಾಂಕ್ ಸಿಬ್ಬಂದಿ ವಿರುದ್ಧ ಅಸಮಾಧಾನ ಹೊರಹಾಕಲಾಗಿದೆ.
ಇನ್ನು, ದಕ್ಷಿಣ ರಾಜ್ಯಗಳಲ್ಲಿ ಅನ್ಯಭಾಷಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸುತ್ತಿರುವ ಬಗ್ಗೆ ಆಕ್ರೋಶ ಭುಗಿಲೆದ್ದಿದ್ದು ಗ್ರಾಹಕರ ಪ್ರತಿಭಟನೆ ಮಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲೇ ಹಣಕಾಸು ಸಚಿವರಿಂದ ಬಂದಿರುವ ಈ ಹೇಳಿಕೆ, ಸ್ಥಳೀಯ ಭಾಷಾ ಹಕ್ಕುಗಳಿಗೆ ದೊಡ್ಡ ಬೆಂಬಲವಾಗಿದೆ.
ಒಟ್ಟಾರೆಯಾಗಿ, ಬೆಂಗಳೂರಿನಂತಹ ಬಹುಭಾಷಾ ಮಹಾನಗರಗಳಲ್ಲಿ ಬ್ಯಾಂಕಿಂಗ್ ಸೇವೆಗಳ ಗುಣಮಟ್ಟ ಸುಧಾರಿಸಲು ಈ ಸಲಹೆಗಳು ಮುಂದಿನ ದಿನಗಳಲ್ಲಿ ನೀತಿ ಬದಲಾವಣೆಗಳಿಗೆ ಕಾರಣವಾಗಬಹುದಾದ ಪ್ರಮುಖ ಸಂಕೇತಗಳಂತೆ ಕಾಣುತ್ತಿವೆ.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

“ಕೃಷ್ಣಸಾಗರಿ ಅವರು NeedsOfPublic.in ನ ‘ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ’ (Job Updates & Career) ವಿಭಾಗದ ಮುಖ್ಯಸ್ಥರಾಗಿದ್ದಾರೆ. ಉದ್ಯೋಗ ಮಾಹಿತಿ ಕ್ಷೇತ್ರದಲ್ಲಿ 4 ವರ್ಷಗಳ ವೃತ್ತಿಪರ ಅನುಭವ ಹೊಂದಿರುವ ಇವರು, ಸರ್ಕಾರಿ ಉದ್ಯೋಗದ ಅಧಿಸೂಚನೆಗಳು (Govt Job Notifications), ಖಾಸಗಿ ವಲಯದ ನೇಮಕಾತಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಅಪ್ಡೇಟ್ಗಳನ್ನು ಒದಗಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಉದ್ಯೋಗಾಕಾಂಕ್ಷಿಗಳಿಗೆ ಕೇವಲ ಅಧಿಕೃತ ಮೂಲಗಳಿಂದ ಪರಿಶೀಲಿಸಿದ (verified) ಮತ್ತು ನಿಖರವಾದ ಉದ್ಯೋಗದ ಮಾಹಿತಿಯನ್ನು ಸಕಾಲದಲ್ಲಿ ತಲುಪಿಸುವುದು ಸಾಗರಿ ಅವರ ಪ್ರಮುಖ ಗುರಿಯಾಗಿದೆ.”


WhatsApp Group




