ಭಾರತದಲ್ಲಿ ಹಿರಿಯ ನಾಗರಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ವಯಸ್ಸು ಹೆಚ್ಚಾದಂತೆ ಆದಾಯದ ಮೂಲಗಳು ಕಡಿಮೆಯಾಗುವುದು ಸಹಜ. ನಿವೃತ್ತಿಯ ನಂತರ ವೈದ್ಯಕೀಯ ವೆಚ್ಚ, ದಿನನಿತ್ಯದ ಖರ್ಚು, ಕುಟುಂಬದ ಸ್ಥಿತಿ ಎಲ್ಲವನ್ನೂ ನಿರ್ವಹಿಸಲು ಆರ್ಥಿಕ ಭದ್ರತೆ ಅತ್ಯಂತ ಅವಶ್ಯಕ.
ವಿಶೇಷವಾಗಿ ಇಂದಿನ ದುಬಾರಿ ದಿನಗಳಲ್ಲಿ, ಸುರಕ್ಷಿತ ಹಾಗೂ ಖಚಿತ ಆದಾಯ ನೀಡುವ ಹೂಡಿಕೆ ಯೋಜನೆಯ ಅವಶ್ಯಕತೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ, ಭಾರತೀಯ ಅಂಚೆ ಕಚೇರಿ (India Post) ಹಿರಿಯ ನಾಗರಿಕರ ಆರ್ಥಿಕ ಭದ್ರತೆಗೆ ಶಕ್ತಿಯುತ ಪರಿಹಾರ ನೀಡುತ್ತಿದೆ Senior Citizens Savings Scheme (SCSS). ಸರ್ಕಾರದ ಭರವಸೆ ಹೊಂದಿರುವ ಈ ಯೋಜನೆ, ನಿವೃತ್ತಿಯ ನಂತರ ಪ್ರತಿಮಾಸ ಖಚಿತ ಆದಾಯ ನೀಡುವ ಅತ್ಯಂತ ಜನಪ್ರಿಯ ಹಾಗೂ ವಿಶ್ವಾಸಾರ್ಹ ಹೂಡಿಕೆ ಯೋಜನೆಗಳಲ್ಲಿ ಒಂದಾಗಿದೆ. ಯಾರಿಗೆ SCSS ಯೋಜನೆಯ ಲಾಭ ಸಿಗುತ್ತದೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಯಾರಿಗೆ SCSS ಯೋಜನೆಯ ಲಾಭ ಸಿಗುತ್ತದೆ?:
60 ವರ್ಷ ಅಥವಾ ಹೆಚ್ಚಿನ ವಯಸ್ಸಿನವರು.
55–60 ವರ್ಷ ವಯಸ್ಸಿನ ನಿವೃತ್ತರು, ನಿವೃತ್ತಿಯ ಒಂದು ತಿಂಗಳೊಳಗೆ.
VRS ಪಡೆದವರು, ವಯಸ್ಸು 50 ವರ್ಷ ಮೇಲಾಗಿದ್ದರೆ.
ಈ ಯೋಜನೆ ಮುಖ್ಯವಾಗಿ ಜೀವನೋಪಾಯ, ವೈದ್ಯಕೀಯ ವೆಚ್ಚ ಮತ್ತು ದೈನಂದಿನ ಅಗತ್ಯಗಳನ್ನು ಹೊರಬೇಡಿ ಎಂಬ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ.
SCSS ಯೋಜನೆಯ ಪ್ರಮುಖ ವೈಶಿಷ್ಟ್ಯಗಳು ಏನು?:
ಹೂಡಿಕೆ ಮಿತಿ:
ವೈಯಕ್ತಿಕರಿಗೆ: ₹30 ಲಕ್ಷ
ದಂಪತಿಗಳ ಜಂಟಿ ಖಾತೆ: ₹60 ಲಕ್ಷ
ಖಾತೆ ಅವಧಿ:
ಮೊದಲ ಅವಧಿ: 5 ವರ್ಷಗಳು
ಮತ್ತಷ್ಟು 3 ವರ್ಷಗಳ ವಿಸ್ತರಣೆ ಸಾಧ್ಯ
ಬಡ್ಡಿ ಪಾವತಿ:
ಪ್ರತಿ 3 ತಿಂಗಳಿಗೆ (Quarterly)
ಅಂಚೆ ಕಚೇರಿ ಅಥವಾ ಬ್ಯಾಂಕ್ ಮೂಲಕ ನೇರವಾಗಿ ಖಾತೆಗೆ ಜಮಾ
SCSS ಮೂಲಕ ಎಷ್ಟು ಆದಾಯ ಸಿಗುತ್ತದೆ?:
ಹೂಡಿಕೆ ಮೊತ್ತ: ₹30 ಲಕ್ಷ, ವಾರ್ಷಿಕ ಬಡ್ಡಿ: ₹2.46 ಲಕ್ಷತಿಂಗಳ ಆದಾಯ: ₹20,500.
ಹೂಡಿಕೆ ಮೊತ್ತ: ₹15 ಲಕ್ಷ, ವಾರ್ಷಿಕ ಬಡ್ಡಿ: ₹98,000ತಿಂಗಳ ಆದಾಯ: ₹11,750.
ಹೀಗಾಗಿ, ₹15 ಲಕ್ಷ ಹೂಡಿಕೆ ಮಾಡಿದರೆ ಸುಮಾರು ₹11,000–₹12,000 ರಷ್ಟು ಪ್ರತಿಮಾಸ ಖಚಿತ ಆದಾಯ ದೊರೆಯುತ್ತದೆ.
ತೆರಿಗೆ ಸೌಲಭ್ಯ:
SCSS ಯೋಜನೆಯಲ್ಲಿ ಹೂಡಿಕೆ ಮಾಡಿದ ಮೊತ್ತಕ್ಕೆ Income Tax Act ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಲಭ್ಯ.
ಮುಂಗಡ ಹಿಂತೆಗೆದರೆ ದಂಡ:
1 ವರ್ಷಕ್ಕಿಂತ ಮೊದಲು: 2% ದಂಡ
1–5 ವರ್ಷದೊಳಗೆ: 1% ದಂಡ
ಹೀಗಾಗಿ ದೀರ್ಘಾವಧಿ ಹೂಡಿಕೆ ಮಾಡುವುದು ಉತ್ತಮ.
SCSS ಖಾತೆ ಹೇಗೆ ತೆರೆಯಬಹುದು?:
ಹತ್ತಿರದ ಅಂಚೆ ಕಚೇರಿ ಅಥವಾ ಯಾವುದೇ ರಾಷ್ಟ್ರೀಯೀಕೃತ ಬ್ಯಾಂಕ್ ಹೋಗಿ, ಗುರುತು ಪತ್ರ, ಪಾಸ್ಬುಕ್, PAN, ವಿಳಾಸ ದೃಢೀಕರಣ ಮತ್ತು ವಯಸ್ಸಿನ ದಾಖಲೆ ನೀಡಬೇಕು.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಕೃಷ್ಣಸಾಗರಿ ಅವರು NeedsOfPublic.in ನ ‘ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ’ (Job Updates & Career) ವಿಭಾಗದ ಮುಖ್ಯಸ್ಥರಾಗಿದ್ದಾರೆ. ತುಮಕೂರಿನ ಸರ್ಕಾರಿ ನರ್ಸಿಂಗ್ ಕಾಲೇಜಿನಿಂದ B.Sc (Nursing) ಪದವಿ ಪಡೆದಿರುವ ಇವರು, ಸಾರ್ವಜನಿಕ ಜಾಗೃತಿ ಮತ್ತು ಮಾಹಿತಿ ನೀಡುವ ಆಸಕ್ತಿಯಿಂದಾಗಿ ಡಿಜಿಟಲ್ ಪತ್ರಿಕೋದ್ಯಮ ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ. ಡಿಜಿಟಲ್ ಮಾಧ್ಯಮ ರಂಗದಲ್ಲಿ 3 ವರ್ಷಗಳ ಅನುಭವ ಹೊಂದಿರುವ ಇವರು, ಸರ್ಕಾರಿ ಉದ್ಯೋಗದ ಅಧಿಸೂಚನೆಗಳು (Govt Job Notifications), ಖಾಸಗಿ ನೇಮಕಾತಿಗಳು ಮತ್ತು ಶೈಕ್ಷಣಿಕ ಅಪ್ಡೇಟ್ಗಳನ್ನು ಒದಗಿಸುವಲ್ಲಿ ಪರಿಣತಿ ಹೊಂದಿದ್ದಾರೆ. ನಿರುದ್ಯೋಗಿ ಯುವಕ-ಯುವತಿಯರಿಗೆ ಯಾವುದೇ ಗೊಂದಲವಿಲ್ಲದೆ, ಕೇವಲ ಅಧಿಕೃತ ಮೂಲಗಳಿಂದ ಪರಿಶೀಲಿಸಿದ (Verified) ನಿಖರ ಮಾಹಿತಿಯನ್ನು ಸಕಾಲದಲ್ಲಿ ತಲುಪಿಸುವುದೇ ಇವರ ಬರವಣಿಗೆಯ ಶೈಲಿಯಾಗಿದೆ.


WhatsApp Group




