ಕರ್ನಾಟಕ ಸರ್ಕಾರವು ಆರೋಗ್ಯ ವಲಯದಲ್ಲಿ ಕೈಗೊಂಡಿರುವ ದೊಡ್ಡ ಮಟ್ಟದ ಪರಿವರ್ತನೆಗಳಲ್ಲಿ ಪ್ರಮುಖವಾದದ್ದು ಗೃಹ ಆರೋಗ್ಯ (Home Health) ಯೋಜನೆ. 30 ವರ್ಷ ಮೇಲ್ಪಟ್ಟ ಗ್ರಾಮೀಣ ಜನಸಾಮಾನ್ಯರ ಆರೋಗ್ಯವನ್ನು ಮನೆಯ ಮಟ್ಟದಲ್ಲೇ ಪರಿಶೀಲಿಸಿ, ಅಗತ್ಯವಿದ್ದರೆ ಉಚಿತ ಚಿಕಿತ್ಸೆಯೊಂದಿಗೆ ಔಷಧಿಯನ್ನು ತಲುಪಿಸುವ ಈ ಯೋಜನೆ ಈಗ ರಾಜ್ಯದ ಆರನೇ ಗ್ಯಾರಂಟಿಯಾಗಿ ಗುರುತಿಸಲ್ಪಟ್ಟಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಆರೋಗ್ಯ ತಜ್ಞರ ವಿಶ್ಲೇಷಣೆಯ ಪ್ರಕಾರ, ಗ್ರಾಮೀಣ ಪ್ರದೇಶಗಳಲ್ಲಿ ದೀರ್ಘಕಾಲೀನ ಕಾಯಿಲೆಗಳ ಹೆಚ್ಚಳ, ವೈದ್ಯರ ಲಭ್ಯತೆಯ ಕೊರತೆ ಮತ್ತು ತಡವಾದ ಚಿಕಿತ್ಸೆಯಿಂದ ಉಂಟಾಗುವ ತೊಂದರೆಗಳನ್ನು ತಡೆಗಟ್ಟುವಲ್ಲಿ ಈ ಯೋಜನೆ ಮಹತ್ವದ ಪಾತ್ರವಹಿಸುತ್ತಿದೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಮುಂದಾಳತ್ವದಲ್ಲಿ ಕೋಲಾರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ ಗೃಹ ಆರೋಗ್ಯ ಕಾರ್ಯಕ್ರಮ ಜನಪ್ರಿಯತೆ ಗಳಿಸಿದ ಬಳಿಕ ರಾಜ್ಯಾದ್ಯಂತ ವಿಸ್ತರಿಸಲಾಯಿತು. ಆರಂಭದಲ್ಲಿ ಕೇವಲ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆಗೆ ಮಾತ್ರ ಸೀಮಿತವಾಗಿದ್ದ ಯೋಜನೆಯನ್ನು ಸಚಿವರು ನಂತರ ವ್ಯಾಪಿಸಿದ್ದಾರೆ.
ಇದಾಗಿ ಕ್ಯಾನ್ಸರ್, ಮಾನಸಿಕ ಆರೋಗ್ಯ ಸೇರಿದಂತೆ ಒಟ್ಟು 14 ವಿಧದ ಕಾಯಿಲೆಗಳನ್ನು ಗುರುತಿಸಲು ಕ್ಷೇತ್ರ ಸಿಬ್ಬಂದಿಗೆ ಸೂಚನೆ ನೀಡಲಾಯಿತು. ಈ ಬದಲಾವಣೆ ಯೋಜನೆಯ ಪ್ರಭಾವವನ್ನು ಮತ್ತಷ್ಟು ವಿಸ್ತರಿಸಿದ್ದು, ಇದೀಗ ರಾಜ್ಯದ ಪ್ರತೀ ಜಿಲ್ಲೆಯಲ್ಲಿ ಈ ಸೇವೆಯನ್ನು ಮುಂದುವರೆಸಲಾಗಿದೆ.
5 ಲಕ್ಷಕ್ಕೂ ಹೆಚ್ಚು ಜನರಿಗೆ ಉಚಿತ ಔಷಧಿ:
ಜೀವ ಉಳಿಸುವ ಸೇವೆ,
ಈಗಾಗಲೇ ರಾಜ್ಯಾದ್ಯಂತ 3,26,703 ರಕ್ತದೊತ್ತಡ ರೋಗಿಗಳು, 2,36,759 ಮಧುಮೇಹ ರೋಗಿಗಳು ನಿಯಮಿತವಾಗಿ ಉಚಿತವಾಗಿ ಔಷಧಿಯನ್ನು ಪಡೆದುಕೊಳ್ಳುತ್ತಿದ್ದಾರೆ.
ಗ್ರಾಮೀಣ ಭಾಗದಲ್ಲಿ ದೀರ್ಘಕಾಲೀನ ರೋಗಗಳ ನಿರ್ವಹಣೆಗೆ ಇದು ಮಹತ್ತರ ಹೆಜ್ಜೆಯಾಗಿದ್ದು, ಹೃದಯಾಘಾತ, ಸ್ಟ್ರೋಕ್, ಕಿಡ್ನಿ ವೈಫಲ್ಯದಂತಹ ಗಂಭೀರ ಸ್ಥಿತಿಗಳಿಗೆ ಕಾರಣವಾಗುವ ಅಪಾಯವನ್ನು ಮೂಲದಲ್ಲೇ ನಿಯಂತ್ರಿಸಬಹುದು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಔಷಧ ವಿತರಣೆ ಪ್ರತಿ ಎರಡು ತಿಂಗಳಿಗೊಮ್ಮೆ ಸ್ಥಳೀಯ ಆಯುಷ್ಮಾನ್ ಆರೋಗ್ಯ ಕೇಂದ್ರಗಳ ಮೂಲಕ ನಡೆಯುತ್ತದೆ. ಸುಮಾರು 185 ಕೋಟಿ ರೂ. ವೆಚ್ಚದ ಯೋಜನೆಗಾಗಿ ಈಗಾಗಲೇ 115 ಕೋಟಿ ಮೌಲ್ಯದ ಔಷಧಿಗಳ ಖರೀದಿ ಮುಂದುವರೆದಿದೆ.
ರಾಜ್ಯಾದ್ಯಂತ ನಡೆದ ಕಾಯಿಲೆ ತಪಾಸಣೆಯ ವರದಿ: ಆತಂಕದ ಜೊತೆ ಎಚ್ಚರಿಕೆ,
ಗ್ರಾಮೀಣ ಜನರ ಆರೋಗ್ಯ ಸ್ಥಿತಿಯನ್ನು ಒಳಗೊಳ್ಳುವ ಸ್ಪಷ್ಟ ಚಿತ್ರಣ ಈ ಯೋಜನೆ ಒದಗಿಸಿದೆ. ಪ್ರಮುಖ ಕಾಯಿಲೆಗಳ ತಪಾಸಣೆ ಮತ್ತು ಪತ್ತೆಯಾದ ಶಂಕಿತ ಪ್ರಕರಣಗಳ ವಿವರ ಇಂತಿದೆ.
ಕಿಡ್ನಿ ಸಮಸ್ಯೆ:
ತಪಾಸಣೆ: 8,46,399
ಶಂಕಿತ ಪ್ರಕರಣಗಳು: 7,719
ಕಿಡ್ನಿ ಕಾಯಿಲೆಗಳ ಹೆಚ್ಚುತ್ತಿರುವ ಪ್ರಮಾಣದಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಗುಣಮಟ್ಟ, ಜೀವನಶೈಲಿ ಮತ್ತು ನಿರ್ಲಕ್ಷ್ಯ ಪ್ರಮುಖ ಕಾರಣಗಳೆಂದು ತಜ್ಞರು ಸೂಚಿಸುತ್ತಾರೆ.
ಶ್ವಾಸಕೋಶ ಸಮಸ್ಯೆಗಳು:
ತಪಾಸಣೆ: 9,48,671
ಧೂಳು, ಕೃಷಿ ರಸಗೊಬ್ಬರಗಳು, ತಂಬಾಕು ಬಳಕೆಯು ಹೆಚ್ಚುತ್ತಿರುವ ಗ್ರಾಮೀಣ ಶ್ವಾಸಕೋಶ ರೋಗಗಳಿಗೆ ಕಾರಣ.
ಲಿವರ್ ಸಂಬಂಧಿತ ಕಾಯಿಲೆಗಳು:
ತಪಾಸಣೆ: 9,58,671
ಶಂಕಿತ ಪ್ರಕರಣಗಳು: 7,535
ಅನಾರೋಗ್ಯಕರ ಆಹಾರ ಪದ್ಧತಿ, ಮದ್ಯಪಾನ ಮತ್ತು ದೀರ್ಘಕಾಲೀನ ಸೋಂಕುಗಳು ಲಿವರ್ ಸಮಸ್ಯೆಗಳಿಗೆ ಕಾರಣವಾಗಿರುವ ಸಾಧ್ಯತೆ.
ಬಾಯಿ ಕ್ಯಾನ್ಸರ್
ತಪಾಸಣೆ: 11,92,436
ಶಂಕಿತ ಪ್ರಕರಣಗಳು: 3,403
ಕುದ್ದು, ತಂಬಾಕು, ಗುತ್ತಖಾ ಸೇವನೆಯು ಪ್ರಮುಖ ಕಾರಣ.
ಗರ್ಭಕಂಠದ ಕ್ಯಾನ್ಸರ್:
ಶಂಕಿತ ಪ್ರಕರಣಗಳು: 950
ಸ್ತನ ಕ್ಯಾನ್ಸರ್:
ಶಂಕಿತ ಪ್ರಕರಣಗಳು: 1,311
ಗ್ರಾಮೀಣ ಮಹಿಳೆಯರ ನಡುವೆ ಜಾಗೃತಿಯ ಕೊರತೆಗೈಯುವ ಈ ಅಂಕಿಗಳು ಆರೋಗ್ಯ ಇಲಾಖೆಗೆ ಎಚ್ಚರಿಕೆಯ ಸೂಚನೆ.
ಮಾನಸಿಕ ಆರೋಗ್ಯ:
ಶಂಕಿತ ಪ್ರಕರಣಗಳು: 7,751
ಗ್ರಾಮೀಣ ಕರ್ನಾಟಕದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಕ್ರಮೇಣ ಏರುತ್ತಿರುವುದನ್ನು ಇದು ಸ್ಪಷ್ಟಪಡಿಸುತ್ತದೆ.
ಗೃಹ ಆರೋಗ್ಯ ಯೋಜನೆ ಕೇವಲ ಚಿಕಿತ್ಸಾ ಕಾರ್ಯಕ್ರಮವಲ್ಲ, ಇದು ಜನರ ಮನೆಯ ಬಾಗಿಲಿಗೇ ಆರೋಗ್ಯ ಸೇವೆಯನ್ನು ತಲುಪಿಸುವ ವ್ಯವಸ್ಥಾತ್ಮಕ ಸುಧಾರಣೆ.
ಗ್ರಾಮೀಣ ಆರೋಗ್ಯ ಕೇಂದ್ರಗಳ ಮೇಲಿನ ಒತ್ತಡ ಕಡಿಮೆಯಾಗುತ್ತಿದೆ.
ದೀರ್ಘಕಾಲೀನ ಕಾಯಿಲೆಗಳಿಂದ ಉಂಟಾಗುವ ಗಂಭೀರ ಜಟಿಲತೆಗಳು ತಡೆಯಲ್ಪಡುತ್ತಿವೆ.
ಆರೋಗ್ಯ ಜಾಗೃತಿ ಮತ್ತು ನಿಯಮಿತ ತಪಾಸಣೆಗಳ ಮೇಲೆ ಗ್ರಾಮೀಣ ಜನರ ನಂಬಿಕೆ ಹೆಚ್ಚುತ್ತಿದೆ.
ಕುಟುಂಬಗಳ ಮೇಲೆ ಬರುವ ವೈದ್ಯಕೀಯ ವೆಚ್ಚದ ಹೊರೆ ಕಡಿಮೆಯಾಗುತ್ತಿದೆ.
ರಾಜ್ಯ ಸರ್ಕಾರದ ಗ್ಯಾರಂಟಿಗಳ ಪೈಕಿ ಜನಜೀವನಕ್ಕೆ ನೇರವಾಗಿ ಸಂಬಂಧಿಸಿದ ಅತ್ಯಂತ ಪರಿಣಾಮಕಾರಿ ಯೋಜನೆ ಎಂದು ತಜ್ಞರು ಈ ಕಾರ್ಯಕ್ರಮವನ್ನು ಪರಿಗಣಿಸುತ್ತಿದ್ದಾರೆ.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಕೃಷ್ಣಸಾಗರಿ ಅವರು NeedsOfPublic.in ನ ‘ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ’ (Job Updates & Career) ವಿಭಾಗದ ಮುಖ್ಯಸ್ಥರಾಗಿದ್ದಾರೆ. ತುಮಕೂರಿನ ಸರ್ಕಾರಿ ನರ್ಸಿಂಗ್ ಕಾಲೇಜಿನಿಂದ B.Sc (Nursing) ಪದವಿ ಪಡೆದಿರುವ ಇವರು, ಸಾರ್ವಜನಿಕ ಜಾಗೃತಿ ಮತ್ತು ಮಾಹಿತಿ ನೀಡುವ ಆಸಕ್ತಿಯಿಂದಾಗಿ ಡಿಜಿಟಲ್ ಪತ್ರಿಕೋದ್ಯಮ ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ. ಡಿಜಿಟಲ್ ಮಾಧ್ಯಮ ರಂಗದಲ್ಲಿ 3 ವರ್ಷಗಳ ಅನುಭವ ಹೊಂದಿರುವ ಇವರು, ಸರ್ಕಾರಿ ಉದ್ಯೋಗದ ಅಧಿಸೂಚನೆಗಳು (Govt Job Notifications), ಖಾಸಗಿ ನೇಮಕಾತಿಗಳು ಮತ್ತು ಶೈಕ್ಷಣಿಕ ಅಪ್ಡೇಟ್ಗಳನ್ನು ಒದಗಿಸುವಲ್ಲಿ ಪರಿಣತಿ ಹೊಂದಿದ್ದಾರೆ. ನಿರುದ್ಯೋಗಿ ಯುವಕ-ಯುವತಿಯರಿಗೆ ಯಾವುದೇ ಗೊಂದಲವಿಲ್ಲದೆ, ಕೇವಲ ಅಧಿಕೃತ ಮೂಲಗಳಿಂದ ಪರಿಶೀಲಿಸಿದ (Verified) ನಿಖರ ಮಾಹಿತಿಯನ್ನು ಸಕಾಲದಲ್ಲಿ ತಲುಪಿಸುವುದೇ ಇವರ ಬರವಣಿಗೆಯ ಶೈಲಿಯಾಗಿದೆ.


WhatsApp Group




