ಬೆಂಗಳೂರು – ದೆಹಲಿಯ ‘ಕರ್ನಾಟಕ ಭವನ(Karnataka bhavana)’ ವಾಸ್ತವ್ಯ ದರ, ಕೊಠಡಿ ಹಂಚಿಕೆ ಹಾಗೂ ಮಾರ್ಗಸೂಚಿಗಳ ಪರಿಷ್ಕರಣೆ ಕುರಿತಂತೆ ರಾಜ್ಯ ಸರ್ಕಾರ(State government) ಮಹತ್ವದ ಆದೇಶ ಹೊರಡಿಸಿದೆ.
ದೆಹಲಿ ರಾಷ್ಟ್ರ ರಾಜಧಾನಿಯಾಗಿದ್ದು, ಹಲವಾರು ಸಾಂವಿಧಾನಿಕ, ರಾಜಕೀಯ ಹಾಗೂ ಆಡಳಿತಾತ್ಮಕ ಉದ್ದೇಶಗಳಿಗಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು, ಸರ್ಕಾರದ ಆಹ್ವಾನಿತ ವ್ಯಕ್ತಿಗಳು ತಾತ್ಕಾಲಿಕ ವಾಸ್ತವ್ಯಕ್ಕೆ ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ, ನವದೆಹಲಿಯಲ್ಲಿರುವ ಕರ್ನಾಟಕ ಭವನವು ರಾಜ್ಯದ ಅಧಿಕೃತ ಆತಿಥ್ಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪ್ರಸ್ತುತ ದೆಹಲಿಯಲ್ಲಿ ಮೂರು ವಿಭಿನ್ನ ಭವನಗಳಿವೆ:
1. ಕರ್ನಾಟಕ ಭವನ-1 (ಅನೆಕ್ಸ್ ಕಟ್ಟಡ, ಚಾಣಕ್ಯಪುರಿ).
2. ಕರ್ನಾಟಕ ಭವನ-2 (ಶರಾವತಿ).
3. ಕರ್ನಾಟಕ ಭವನ-3 (ಭೀಮಾ).
ಈ ಮೂರು ಭವನಗಳಲ್ಲಿ ತಾತ್ಕಾಲಿಕ ವಾಸ್ತವ್ಯದ ದರಗಳು ಹಾಗೂ ಕೊಠಡಿಗಳ ಹಂಚಿಕೆ ಸಂಬಂಧಿತ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರವು ದಿನಾಂಕ 29.03.2025 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಿದೆ.
ಆದೇಶದ ಹಿನ್ನೆಲೆ ಏನು?:
ನವದೆಹಲಿಯ ನಿವಾಸಿ ಆಯುಕ್ತರು, Karnataka Bhavana ನಿಜಸ್ವರೂಪ ಹಾಗೂ ಅವಶ್ಯಕತೆಗಳನ್ನು ಹತ್ತಿರದಿಂದ ವಿಮರ್ಶಿಸಿ, ದರಗಳು ಹಾಗೂ ಕೊಠಡಿ ಹಂಚಿಕೆ ಮಾರ್ಗಸೂಚಿಗಳ ಸಂಬಂಧಿತ ಮಾರ್ಪಾಡುಗಳ ಅವಶ್ಯಕತೆ ಕುರಿತಾಗಿ ಸರ್ಕಾರಕ್ಕೆ ಸಲಹೆ ನೀಡಿದ್ದರು. ಇದಲ್ಲದೇ, ಕರ್ನಾಟಕ ವಿಧಾನಸಭೆಯ ಅಂದಾಜು ಸಮಿತಿ ಹಾಗೂ ಹಕ್ಕು-ಭಾದ್ಯತೆಗಳ ಸಮಿತಿಗಳು ಈ ನಿಟ್ಟಿನಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಬೇಕೆಂದು ಶಿಫಾರಸು ಮಾಡಿದ್ದವು.
ಈ ಎಲ್ಲ ಪ್ರಸ್ತಾವನೆಗಳನ್ನು ಸರಿಯಾಗಿ ಪರಿಶೀಲಿಸಿ, ಆರ್ಥಿಕ ಬದ್ಧತೆ ಹಾಗೂ ಪಾರದರ್ಶಕತೆಯ ಉದ್ದೇಶದಿಂದ ರಾಜ್ಯ ಸರ್ಕಾರವು(State government) ಆದೇಶ ಹೊರಡಿಸಿದೆ.
ಪರಿಷ್ಕೃತ ಆದೇಶದಲ್ಲಿ ಏನಿದೆ?:
ವಾಸ್ತವ್ಯ ದರಗಳು :
ಅನುಬಂಧ-1ರಲ್ಲಿ ನವದೆಹಲಿಯ ಮೂರೂ ಕರ್ನಾಟಕ ಭವನಗಳಲ್ಲಿ ವಾಸ್ತವ್ಯ ಹೊಂದಲು ನಿಗದಿಪಡಿಸಿದ ಕೊಠಡಿಗಳ ನೂತನ ದರವನ್ನು ನೀಡಲಾಗಿದೆ. ವಿವಿಧ ಕೊಠಡಿ ವರ್ಗಗಳ (ವಿಐಪಿ, ಡಬಲ್ ಬೇಡ್, ಡಾರ್ಮಿಟರಿ ಇತ್ಯಾದಿ) ಪ್ರತ್ಯೇಕ ದರಗಳು ಇಲ್ಲಿ ಸ್ಪಷ್ಟಪಡಿಸಲಾಗಿದೆ.
ಕೊಠಡಿ ಹಂಚಿಕೆ ಮಾರ್ಗಸೂಚಿ :
ಅನುಬಂಧ-2ರಲ್ಲಿ ಸರ್ಕಾರ, ಅಧೀನಾಧಿಕಾರಿಗಳು, ಜನಪ್ರತಿನಿಧಿಗಳು, ವಿಶೇಷ ಆಹ್ವಾನಿತರು, ಸರ್ಕಾರಿ ನೌಕರರು, ವಿವಿಧ ಇಲಾಖೆಗಳ ಅಧಿಕಾರಿಗಳು ಮುಂತಾದವರಿಗೆ ಕೊಠಡಿ ಹಂಚಿಕೆ ಮಾಡುವ ಕ್ರಮ, ಆದ್ಯತೆ ಕ್ರಮ, ಅರ್ಜಿ ಸಲ್ಲಿಸುವ ವಿಧಾನ ಇತ್ಯಾದಿಗಳನ್ನು ಸ್ಪಷ್ಟವಾಗಿ ನಿಯಮಿತಗೊಳಿಸಿದೆ.
ಷರತ್ತುಗಳು ಹಾಗೂ ನಿಬಂಧನೆಗಳು ಹೀಗಿವೆ :
ವಾಸ್ತವ್ಯ ಕಾಲ, ನಿರಾಕರಣೆ ಮಾಡುವ ಅಧಿಕಾರ, ಕೊಠಡಿ ಬಳಕೆಯ ಮಿತಿಗಳು, ನಂಬಿಕೆ ಉಲಂಘಿಸಿದಲ್ಲಿ ಕೈಗೊಳ್ಳುವ ಕ್ರಮಗಳು ಸೇರಿದಂತೆ ಹಲವು ಷರತ್ತುಗಳನ್ನು ನಿಗದಿಪಡಿಸಲಾಗಿದೆ.
ಈ ಪರಿಷ್ಕರಣೆಗಳಿಂದ ಏನು ಲಾಭ?:
ಆರ್ಥಿಕ ಶಿಸ್ತಿಗೆ ಪ್ರೋತ್ಸಾಹ.
ಭವನ ಬಳಕೆಯಲ್ಲಿನ ನೈತಿಕತೆ ಹಾಗೂ ಸೌಕರ್ಯದ ಸಮರ್ಪಕ ವಿನಿಯೋಗ.
ನ್ಯಾಯಸಮ್ಮತ ಆದ್ಯತೆ ಕ್ರಮದ ಅನುಸರಣೆ.
ಆತಿಥ್ಯದ ಗುಣಮಟ್ಟವನ್ನು ಜಾಗೃತವಾಗಿ ಮೇಲೆತ್ತುವ ಕ್ರಮ.
ನವದೆಹಲಿಯ ಕರ್ನಾಟಕ ಭವನಗಳು ರಾಜ್ಯದ ಗೌರವ ಮತ್ತು ಆತಿಥ್ಯದ ಪ್ರತಿರೂಪವಾಗಿದ್ದು, ಇವುಗಳಲ್ಲಿ ಶಿಸ್ತುಬದ್ಧ ವ್ಯವಸ್ಥೆ, ಸಮರ್ಪಕ ಬಾಡಿಗೆ ದರ, ಹಾಗೂ ಎಲ್ಲ ವರ್ಗಗಳಿಗೂ ನ್ಯಾಯಯುತ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಹೊಸ ಮಾರ್ಗಸೂಚಿ ಪರಿಷ್ಕರಣೆ ಅತ್ಯಂತ ಅಗತ್ಯವಾಗಿತ್ತು. ಈ ಪರಿಷ್ಕರಣೆಗಳೊಂದಿಗೆ, ಭವಿಷ್ಯದಲ್ಲಿ ಈ ಭವನಗಳ ಸೇವೆ ಇನ್ನಷ್ಟು ಜನಸ್ನೇಹಿಯಾಗಲಿದ್ದು, ಉತ್ತಮ ಆಡಳಿತಾತ್ಮಕ ಕಾರ್ಯಕ್ಷಮತೆ ನಿರೀಕ್ಷಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಅಥವಾ ನೂತನ ದರಪಟ್ಟಿ ಹಾಗೂ ಕೊಠಡಿ ಹಂಚಿಕೆ ನಿಯಮಗಳ ನಕಲಿಗಾಗಿ ದೆಹಲಿಯ ನಿವಾಸಿ ಆಯುಕ್ತರ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ ಕರ್ನಾಟಕ ಭವನದ ಅಧಿಕೃತ ವೆಬ್ಸೈಟ್ ಅನ್ನು ವೀಕ್ಷಿಸಬಹುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.