ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10(BigBoss season 10) ಇನ್ನೇನು ನಾಲ್ಕು ದಿನಗಳಲ್ಲಿ ಫಿನಾಲೆ ಬರುತ್ತದೆ. ಯಾವ ಸೀಸನ್ಗಳಲ್ಲೂ ಆಗದ ಅದ್ಭುತಗಳು ಈ ಸೀಸನ್ನಲ್ಲಿ ನಡೆದಿವೆ. ಈ ಸಮಯದಲ್ಲಿ ಬಿಗ್ ಬಾಸ್ ಮನೆಯ ಸ್ಪರ್ಧೆಗಳಿಗೆ ಪತ್ರಿಕಾಗೋಷ್ಠಿ ಒಂದನ್ನು ನಡೆಸಿದರು. ಅದಕ್ಕೆಂದು ಕಿರಿಕ್ ಕೀರ್ತಿ(Kirik keerthi) ಹಾಗೂ ಜಾಹ್ನವಿ ಅವರು ಎಂಟ್ರಿಯನ್ನು ನೀಡಿದರು. ಇವರಿಬ್ಬರೂ ಮನೆಯ ಫೈನಲಿಸ್ಟ್ ಗಳಿಗೆ ನೇರ ನೇರವಾಗಿ ಪ್ರಶ್ನೆಗಳನ್ನು ಕೇಳಿದರು. ಆರು ಜನರಿಗೂ ಕೂಡ ನೇರವಾಗಿ ಪ್ರಶ್ನೆಗಳನ್ನು ಕೇಳಿದರು. ಕೆಲವು ಪ್ರಶ್ನೆಗಳಿಗೆ ಫೈನಲಿಸ್ಟ್ ಗಳು ಉತ್ತರಿಸಿದ ವಿವರ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪ್ರತಾಪ್ ಅವರಿಗೆ ಕೇಳಿದ ಪ್ರಶ್ನೆಗಳು ಹೀಗಿವೆ :

ಪ್ರತಾಪ್ ಅವರೇ ನೀವು ಹೊರಗಡೆ ಮಾತಿನಲ್ಲಿ ಯಾರಿಗೂ ಕಮ್ಮಿ ಇರಲಿಲ್ಲ ಆದರೆ ಒಳಗಡೆ ಬಂದ ಮೇಲೆ ಸಿಂಪತಿ ಕಾರ್ಡನ್ನು ಗಿಟ್ಟಿಸಿಕೊಳ್ಳಲು ಅಳುವುದು ಹಾಗೂ ಸಮಾಧಾನದಿಂದ ಇರುವುದು ಮಾಡುತ್ತಿದ್ದೀರಾ? ಎಂದು ಕೇಳಿದರು :
ಅದಕ್ಕೆ ಪ್ರತ್ಯುತ್ತರವಾಗಿ ಪ್ರತಾಪ್ ಅವರು, ಹೊರಗಡೆ ಟಿವಿ ಶೋಗಳಲ್ಲಿ ನಾನು ಮೂರು ಗಂಟೆಗಳ ಕಾಲ ಜನರನ್ನು ಎದುರಿಸಬೇಕಾಗಿತ್ತು, ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿತ್ತು. ಆದರೆ ಇಲ್ಲಿ 24 ಗಂಟೆಗಳ ಕಾಲ ಕ್ಯಾಮರಾ ನೋಡುತ್ತಿರುತ್ತವೆ ಹಾಗೂ ಎಲ್ಲರೂ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ಬಿಗ್ ಬಾಸ್ ಮನೆ ನಮ್ಮನ್ನು ಹೀಗೆ ಮಾಡಿಬಿಡುತ್ತದೆ. ಯಾವುದೇ ರೀತಿಯ ಸಿಂಪತಿಯನ್ನು ಗಿಟ್ಟಿಸಿಕೊಳ್ಳಲು ನಾನು ಹೀಗೆ ಮಾಡುತ್ತಿಲ್ಲ. ನಾನು ಹೊರಗಡೆ ಹೇಗೆ ಇದ್ದೇನೋ ಇಲ್ಲೂ ಕೂಡ ಹಾಗೆ ಇದ್ದೇನೆ ಎಂದು ಹೇಳಿದರು.
ನೀವು ಹೊರಗಡೆ ಮಾಡಿದ ಕೆಲವು ತಪ್ಪುಗಳಿಗೆ ಇನ್ನೂ ಕರ್ನಾಟಕದ ಜನತೆಯ ಮುಂದೆ ಸ್ಪಷ್ಟವಾಗಿ ಕ್ಷಮೆಯನ್ನು ಏಕೆ ಕೇಳಿಲ್ಲ? ಎಂದರು :
ಇದಕ್ಕೆ ಉತ್ತರವಾಗಿ ಡ್ರೋನ್ ಪ್ರತಾಪ್(Drone prathap) ಅವರು, ನಾನು ಸುದೀಪ್ ಅವರು ನೀವು ಹೊರಗಡೆ ಮಾಡಿದ ಕೆಲವು ತಪ್ಪುಗಳನ್ನು ಒಪ್ಪಿಕೊಳ್ಳುತ್ತೀರಾ ಎಂದು ಕೇಳಿದಾಗ ನಾನು ಹೌದು ಎಂದು ಉತ್ತರಿಸಿದ್ದೇನೆ. ಈಗಲೂ ಕೂಡ ನಾನು ಕ್ಷಮೆಯನ್ನು ಕನ್ನಡದ ಜನತೆಯ ಎದುರು ಕೇಳಲು ಇಷ್ಟಪಡುತ್ತೇನೆ ಎಂದು ಎದ್ದು ನಿಂತುಕೊಂಡು ತಲೆಯನ್ನು ಬಾಗಿಸಿ ಕರ್ನಾಟಕದ ಜನತೆಯ ಮುಂದೆ ಕ್ಷಮೆಯನ್ನು ಕೇಳಿದರು.

ಜನರ ಬೆಂಬಲಗಳಿಸಲು ಪ್ರತಾಪ್ ಗೆ ಹತ್ತಿರವಾದ್ರಾ ಸಂಗೀತ :
ಕಿರಿಕ್ ಕೀರ್ತಿ ಅವರು ವಿನಯ್ ಅವರಿಗೆ ನೀವು ಪ್ರತಿ ಮಾತಿಗೂ ಮನೆಯವರಿಗೆ ಹೆಂಡತಿ ಮಗು ನೋಡುತ್ತಿರುತ್ತಾರೆ ಅವರಿಗೆ ಹರ್ಟ್ ಆಗುತ್ತದೆ ಎಂದು ಹೇಳುತ್ತಿರುತ್ತೀರಾ ಆದರೆ ನೀವು ಪ್ರತಾಪ್ ಅವರಿಗೆ ನೀವು ಎದುರು ಮಾತನಾಡುವಾಗ ಅವರ ಮನೆಯವರು ನೊಂದುಕೊಳ್ಳುತ್ತಾರೆ ಅನಿಸಲಿಲ್ಲವೇ ಎಂದು ಕೇಳಿದರು. ಅದಕ್ಕೆ ಪ್ರತ್ಯುತ್ತರವಾಗಿ ವಿನಯವರು, ನಾನು ಯಾವುದನ್ನು ಕೂಡ ಕೆದಕಿ ಇಲ್ಲದೆ ಇರುವ ತಪ್ಪುಗಳನ್ನು ಅವನ ಮೇಲೆ ಹೊರೆಸಿಲ್ಲ. ಅವನು ಮಾಡಿರುವುದಕ್ಕೆ ನಾನು ನನ್ನ ಪ್ರಕಾರ ಉತ್ತರಗಳನ್ನು ನೀಡಿದ್ದೇನೆ. ನಾನು ಎಂದಿಗೂ ತಪ್ಪಾಗಿ ಪ್ರತಾಪ್ ಅವರ ಮೇಲೆ ನಿಂದನೆಯನ್ನು ಹೊರಿಸಿಲ್ಲ ಎಂದು ಹೇಳಿದರು.

ಸಂಗೀತ ಅವರಿಗೆ ಪ್ರಶ್ನೆಯನ್ನು ಕೇಳುತ್ತ, ಡ್ರೋನ್ ಪ್ರತಾಪ್ ಅವರಿಗೆ ಇರುವ ಜನಗಳ ಬೆಂಬಲವನ್ನು ನೋಡಿ ನೀವು ಅವರಿಗೆ ತಮ್ಮ ಎಂದು ಹತ್ತಿರವಾದ್ರ ಎಂದು ಕೇಳಿದರು.
ಅದಕ್ಕೆ ಸಂಗೀತ ಅವರು ಡ್ರೋನ್ ಪ್ರತಾಪ್ ಬಗ್ಗೆ ನನಗೆ ಸಂಪೂರ್ಣವಾಗಿ ತಿಳಿದಿರಲಿಲ್ಲ ಮನೆಗೆ ಬಂದ ಮೇಲೆ ಕೂಡ ಸ್ನೇಹಿತರು ಅವರ ಮಾತುಗಳನ್ನು ನಂಬಬೇಡಿ ಬರೀ ಸುಳ್ಳು ಹೇಳುತ್ತಾರೆ ಎಂದು ಕೂಡ ನನಗೆ ಅದು ಏಕೆ ಎಂದು ಅರ್ಥವಾಗಿರಲಿಲ್ಲ. ನನಗೆ ನೋವು ಬಂದಾಗ ಅವರ ಹತ್ತಿರ ಹೇಳಿಕೊಳ್ಳುತ್ತಿದ್ದೆ ಅಷ್ಟೇ ಅಲ್ಲದೆ ಅವರು ಕೂಡ ನೋವುಗಳನ್ನು ಮನ ಹತ್ತಿರ ಮುಂಚಿನಿಂದಲೂ ಹಂಚಿಕೊಳ್ಳುತ್ತಿದ್ದಾರೆ ಆದ್ದರಿಂದ ನಮ್ಮ ಇಬ್ಬರ ಅಕ್ಕ ತಮ್ಮನ ಸಂಬಂಧ ಗಟ್ಟಿಯಾಗಿ ಬೆಳದು ಬಂದಿದೆ. ಯಾವುದೇ ರೀತಿಯ ಸಿಂಪತಿಯನ್ನು ಗಿಟ್ಟಿಸಿಕೊಳ್ಳಲು ನಾನು ಹೀಗೆ ಮಾಡಿಲ್ಲ ಎಂದು ಹೇಳಿದರು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- BBK 10- ಬಿಗ್ ಬಾಸ್ ಮನೆಯಿಂದ ತನಿಷಾ ಕುಪ್ಪಂಡ ಔಟ್! ವಾರದ ಮಿಡ್ ಎಲಿಮಿನೇಷನ್
- ಡ್ರೋನ್ ಪ್ರತಾಪ್ ಫೈನಲ್ ಟಿಕೆಟ್ ಕೊಡುವಲ್ಲಿ ಬಿಗ್ ಬಾಸ್ ಮೋಸ ಮಾಡಿದ್ರಾ? ಇಲ್ಲಿದೆ ಕಿಚ್ಚನ ಕ್ಲಾರಿಟಿ!
- ಬಿಗ್ ಬಾಸ್ ಮನೆಯ ಶನಿ ಸಂಗೀತ ಎಂದ ಕಾರ್ತಿಕ್, ಆದ್ರೆ ಕಿಚ್ಚ ಮುಂದೆ ನೋ ಬೋರ್ಡ್!
- ತಾರಕಕ್ಕೇರಿದ ಡ್ರೋನ್ & ವಿನಯ್ ಜಗಳ, ಮತ್ತೇ ಟಾರ್ಗೆಟ್ ಆದ್ನಾ ಪ್ರತಾಪ್..?
- ಈ ಬಾರಿ ಬಿಗ್ ಬಾಸ್ ನಲ್ಲಿ ಟಾಪ್ 5ರಲ್ಲಿ ಇರೋರು ಇವರೇ ನೋಡಿ – ಮೈಕಲ್ ಭವಿಷ್ಯ ನುಡಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






