ಅಕ್ಷಯ ತೃತೀಯ(Akshay Trithiya)- ಒಂದು ಶುಭ ದಿನ, ಧಾರ್ಮಿಕ ಉತ್ಸಾಹ ಮತ್ತು ಸಾಂಸ್ಕೃತಿಕ ಸಂಭ್ರಮಗಳಿಂದ ತುಂಬಿರುತ್ತದೆ. ಈ ದಿನದಂದು ದಾನ ಮಾಡುವುದು ಮತ್ತು ಚಿನ್ನ, ಬೆಳ್ಳಿಯಂತಹ ಲೋಹಗಳನ್ನು ಖರೀದಿಸುವುದು ಶುಭವೆಂದು ನಂಬಲಾಗಿದೆ. ಆದರೆ ಇನ್ನು ಕೆಲವರಿಗೆ ಅಕ್ಷಯ ತೃತೀಯದ ಮಹತ್ವವೇನು ಮತ್ತು ಯಾಕೆ ಈ ದಿನದಂದು ಚಿನ್ನವನ್ನು ಖರೀದಸಬೇಕು ಎಂದು ಸ್ಪಷ್ಟವಾಗಿ ತಿಳಿದಿಲ್ಲ. ಹೀಗಿರುವಾಗ ಈ ವರದಿ ನಿಮಗೆ ಈ ಪವಿತ್ರ ಅಕ್ಷಯ ತೃತೀಯದ ಮಹತ್ವವನ್ನು ತಿಳಿಸಿಕೊಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಅಕ್ಷಯ ತೃತೀಯದ ಸಮೃದ್ಧಿ ಮತ್ತು ಪವಿತ್ರತೆ:
ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಂದು ಅಕ್ಷಯ ತೃತೀಯದ ಸಂಭ್ರಮ ಭಾರತದಾದ್ಯಂತ ಮನೆ ಮಾಡುತ್ತದೆ. ಈ ದಿನವನ್ನು ಅಖಾ ತೀಜ್(Akah teej) ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ. ಈ ದಿನ ಚಿನ್ನ ಮತ್ತು ಬೆಳ್ಳಿಯ ಖರೀದಿ, ಲಕ್ಷ್ಮಿ ದೇವಿ ಪೂಜೆಯ ಜೊತೆಗೆ ಶುಭ ಕಾರ್ಯಗಳಿಗೆ ವಿಶೇಷ ಮಹತ್ವವಿದೆ. ಅಕ್ಷಯ ಎಂದರೆ ಕ್ಷಯವಿಲ್ಲದ, ಯಾವಾಗಲೂ ಉಳಿಯುವ ಎಂದರ್ಥ. ಈ ದಿನದಂದು ಯಾವುದೇ ಶುಭ ಕಾರ್ಯಗಳನ್ನು ಮಾಡಿದರೆ ಅವು ಅಕ್ಷಯ ಫಲ ನೀಡುತ್ತವೆ ಎಂಬ ನಂಬಿಕೆ ಇದೆ. ಸಂಪತ್ತು ಮತ್ತು ಸಮೃದ್ಧಿಯ ದೇವಿ ಲಕ್ಷ್ಮಿಯ ಆಶೀರ್ವಾದವನ್ನು ಪಡೆಯಲು ಈ ದಿನ ಅತ್ಯುತ್ತಮ ಅವಕಾಶ. ಲಕ್ಷ್ಮಿ ಪೂಜೆ, ದಾನಧರ್ಮಗಳು ಈ ದಿನದಂದು ವಿಶೇಷ ಮಹತ್ವ ಪಡೆಯುತ್ತವೆ.
ಅಕ್ಷಯ ತೃತೀಯದಂದು ನಿಶ್ಚಿತಾರ್ಥ, ವಿದ್ಯಾರಂಭ, ಗೃಹಪ್ರವೇಶ, ಮುಂಡನ ಮುಂತಾದ ಶುಭ ಕಾರ್ಯಗಳನ್ನು ನಡೆಸಿದರೆ ಅವು ಸುಗಮವಾಗಿ ನಡೆಯುವುದರ ಜೊತೆಗೆ ಶುಭಫಲ ನೀಡುತ್ತವೆ ಎಂಬ ನಂಬಿಕೆ ಇದೆ. ಒಟ್ಟಿನಲ್ಲಿ ಅಕ್ಷಯ ತೃತೀಯ ಒಂದು ಪವಿತ್ರ ಮತ್ತು ಶುಭ ದಿನವಾಗಿದ್ದು, ಈ ದಿನದಂದು ಮಾಡುವ ಯಾವುದೇ ಕಾರ್ಯಗಳು ಅಕ್ಷಯ ಫಲ ನೀಡುವುದರ ಜೊತೆಗೆ ಜೀವನದಲ್ಲಿ ಸಮೃದ್ಧಿ ಮತ್ತು ಸಂತೋಷ ತುಂಬಿಸುತ್ತದೆ.
ಅಕ್ಷಯ ತೃತೀಯ: ಶುಭದಿನ ಮತ್ತು ಶುಭ ಮುಹೂರ್ತ
ಶುಭದಿನಾಂಕ: ಶುಕ್ರವಾರ, ಮೇ 10, 2024
ವಿಶೇಷ ಸಮಯ:
ತೃತೀಯಾ ತಿಥಿ ಆರಂಭ – ಮೇ 10, 2024 – ಬೆಳಿಗ್ಗೆ 4:17
ತೃತೀಯಾ ತಿಥಿ ಕೊನೆಗೊಳ್ಳುತ್ತದೆ – ಮೇ 11, 2024 – ಬೆಳಿಗ್ಗೆ 2:50
ಪೂಜೆ ಮುಹೂರ್ತ – ಬೆಳಿಗ್ಗೆ 5:13 ರಿಂದ ಮಧ್ಯಾಹ್ನ 11:43
ಅಕ್ಷಯ ತೃತೀಯದ ಅಮಿತ ಮಹತ್ವ:
ಅಕ್ಷಯ ಎಂದರೆ ಯಾವತ್ತೂ ಕ್ಷೀಣಿಸದ, ಖಾಲಿಯಾಗದ ಎಂಬ ಅರ್ಥ. ಈ ವಿಶೇಷ ದಿನದಂದು ಯಾವುದೇ ಶುಭ ಕಾರ್ಯಗಳನ್ನು ಪ್ರಾರಂಭಿಸಿದರೆ ಅವು ಅಕ್ಷಯವಾಗಿ ಉಳಿಯುತ್ತವೆ ಎಂಬ ನಂಬಿಕೆ ಇದೆ. ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುವ ಈ ದಿನದಂದು, ಸಂಪತ್ತು ಮತ್ತು ಸಮೃದ್ಧಿಯು ನಮ್ಮ ಮನೆ ಬಾಗಿಲಿಗೆ ಹರಿದು ಬರುತ್ತದೆ ಎಂದು ಹಿಂದೂಗಳು ನಂಬುತ್ತಾರೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ಪವಿತ್ರ ದಿನದಂದು ಸತ್ಯಯುಗ ಮತ್ತು ತ್ರೇತಾಯುಗ ಪ್ರಾರಂಭವಾಯಿತು, ಮತ್ತು ದ್ವಾಪರ ಯುಗದ ಅಂತ್ಯವಾಗಿ ಕಲಿಯುಗ ಆರಂಭವಾಯಿತು. ಈ ಕಾರಣದಿಂದ ಅಕ್ಷಯ ತೃತೀಯವನ್ನು ಯುಗಾದಿ ತಿಥಿ ಎಂದೂ ಕರೆಯಲಾಗುತ್ತದೆ.
ಅಕ್ಷಯ ತೃತೀಯದಂದು ಚಿನ್ನ ಖರೀದಿಸುವುದರ ಮಹತ್ವ:
ಅಕ್ಷಯ ತೃತೀಯವು ಒಂದು ಶುಭ ಸಮಯವಾಗಿದ್ದು, ಈ ದಿನ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವುದು ಸಮೃದ್ಧಿ ಮತ್ತು ಸಂತೋಷವನ್ನು ತರುತ್ತದೆ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ.
ಭಗವಾನ್ ಕುಬೇರನ ಕಥೆ:
ಒಂದು ಪುರಾಣದ ಪ್ರಕಾರ, ಅಕ್ಷಯ ತೃತೀಯದಂದು ಭಗವಾನ್ ಕುಬೇರನು, ಸಂಪತ್ತಿನ ದೇವರು, ತನ್ನ ನಿಧಿಯನ್ನು ಪಡೆದನು. ಈ ಕಾರಣದಿಂದಾಗಿ, ಈ ದಿನ ಚಿನ್ನವನ್ನು ಖರೀದಿಸುವುದರಿಂದ ಭಗವಾನ್ ಕುಬೇರನ ಆಶೀರ್ವಾದವನ್ನು ಪಡೆಯುತ್ತೇವೆ ಮತ್ತು ಸಂಪತ್ತಿನಲ್ಲಿ ಪ್ರಗತಿ ಸಾಧಿಸುತ್ತೇವೆ ಎಂದು ನಂಬಲಾಗಿದೆ.
ಸಾಂಸ್ಕೃತಿಕ ಮಹತ್ವ:
ಅಕ್ಷಯ ತೃತೀಯ ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ಮಹತ್ವದ ಹಬ್ಬವಾಗಿದೆ. ಈ ದಿನ ಜನರು ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ, ದಾನ ಮಾಡುತ್ತಾರೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಚಿನ್ನ ಖರೀದಿಸುವುದು ಈ ಸಂಪ್ರದಾಯಗಳ ಒಂದು ಭಾಗವಾಗಿದ್ದು, ಸಮೃದ್ಧಿ ಮತ್ತು ಸಂತೋಷದ ಜೀವನಕ್ಕಾಗಿ ಪ್ರಾರ್ಥನೆಗಳನ್ನು ಸಂಕೇತಿಸುತ್ತದೆ.
ಈ ದಿನ ಚಿನ್ನ ಖರೀದಿಸಿದರೆ ಮನೆಯಲ್ಲಿ ಸಂಪತ್ತು, ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ನಂಬುತ್ತಾರೆ. ಚಿನ್ನವನ್ನು ಸಾಂಪ್ರದಾಯಿಕವಾಗಿ ಸಂಪತ್ತು ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ, ಹಾಗಾಗಿ ಈ ದಿನ ಖರೀದಿಸುವುದರಿಂದ ಐಶ್ವರ್ಯ ಲಾಭವಾಗುತ್ತದೆ ಎಂಬ ನಂಬಿಕೆ. ಚಿನ್ನ ಮತ್ತು ಬೆಳ್ಳಿ ಖರೀದಿ, ದಾನ – ಧರ್ಮದಂತಹ ಶುಭ ಕಾರ್ಯಗಳಿಗೆ ಈ ದಿನ ವಿಶೇಷ ಮಹತ್ವ ಎಂಬ ನಂಬಿಕೆಗಳು ಹೇರಳವಾಗಿವೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




