ರೇಣುಕಾಸ್ವಾಮಿ ಹತ್ಯೆ ಪ್ರಕರಣ: ದರ್ಶನ್ ಪರ ಕಪಿಲ್ ಸಿಬಲ್, ಸುಪ್ರೀಂ ತೀರ್ಪಿಗೆ ನಿರೀಕ್ಷೆ!
ಸ್ಯಾಂಡಲ್ವುಡ್ ನಟ ದರ್ಶನ್ (Actor Darshan) ಅವರ ವಿವಾದಿತ ರೇಣುಕಾಸ್ವಾಮಿ ಹತ್ಯಾ ಪ್ರಕರಣದ ಕಾನೂನು ಹೋರಾಟ ಇನ್ನೂ ಮುಂದುವರೆದಿದೆ. ಹೈಕೋರ್ಟ್ (Highcourt) ಜಾಮೀನು ಮಂಜೂರಾತಿ ನಂತರವೂ, ದರ್ಶನ್ ಮತ್ತು ಇತರ ಆರೋಪಿಗಳ ಮೇಲೆ ಕಾನೂನು ಪ್ರಕ್ರಿಯೆ ಮುಂದುವರೆದಿದೆ. ಇನ್ನು, ಹೈಕೋರ್ಟ್ ನೀಡಿದ ಜಾಮೀನು ಆದೇಶವನ್ನು ಪ್ರಶ್ನಿಸಿ ಪೊಲೀಸ್ ಟೀಮ್ ಜಾಮೀನು ವಜಾ ಮಾಡಿಸಲು ಸುಪ್ರೀಂ ಕೋರ್ಟ್ (Supremecourt) ಮೆಟ್ಟಿಲೇರಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ಹಿನ್ನಲೆಯಲ್ಲಿ, ದರ್ಶನ್ ಪರವಾಗಿ ಸುಪ್ರೀಂ ಕೋರ್ಟ್ನಲ್ಲಿ ಶ್ರೇಷ್ಟ ವಕೀಲರನ್ನು ನೇಮಿಸಲು ಅವರ ಪರಿವಾರ ಮುಂದಾಗಿದ್ದು, ಭಾರತದ ಖ್ಯಾತ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ಸಂಪರ್ಕಿಸಿದೆ. ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ಹಿಂಪಡೆಯಲು ಸರ್ಕಾರದ ಪರ ವಕೀಲರು (Lawyers) ವಾದ ಮಂಡಿಸಲಿದ್ದಾರೆ. ಈ ಸನ್ನಿವೇಶದಲ್ಲಿ, ದರ್ಶನ್ ಅವರ ಕಾನೂನು ತಂಡವೂ ಅತ್ಯುತ್ತಮ ವಕೀಲರನ್ನು ನೇಮಿಸಿ ಜಾಮೀನು ಉಳಿಸಿಕೊಳ್ಳಲು ತಯಾರಿ ನಡೆಸುತ್ತಿದೆ.
ಜಾಮೀನು ಹಿಂಪಡೆಯಲು ಸರ್ಕಾರದ ಪ್ರಯತ್ನ:
ರೇಣುಕಾಸ್ವಾಮಿ (Renukaswamy) ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ದರ್ಶನ್ ಸೇರಿ ಏಳು ಮಂದಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ ಈ ನಿರ್ಧಾರವನ್ನು ಪ್ರಶ್ನಿಸಿ, ಕರ್ನಾಟಕ ಪೊಲೀಸರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಜಾಮೀನು ನೀಡಿದ ದಿನದಿಂದಲೇ ಈ ಆದೇಶವನ್ನು ರದ್ದುಗೊಳಿಸಲು ಸರ್ಕಾರದ ಕಾನೂನು ತಂಡ ಕ್ರಮ ಕೈಗೊಂಡಿದೆ. ಇದರಿಂದಾಗಿ, ದರ್ಶನ್ ಮತ್ತಷ್ಟು ಕಾನೂನು ಹೋರಾಟಕ್ಕೆ ಸಜ್ಜಾಗಬೇಕಾದ ಅನಿವಾರ್ಯತೆ ಎದುರಾಗಿದೆ.
ದರ್ಶನ್ ಪರ ಪ್ರಬಲ ವಕೀಲರಾದ ಕಪಿಲ್ ಸಿಬಲ್ ನೇಮಕ:
ಹೈಕೋರ್ಟ್ನಲ್ಲಿ ಜಾಮೀನು ಪಡೆದು ತಾತ್ಕಾಲಿಕ ಬಿಡುಗಡೆಯನ್ನುಗಳಿಸಿಕೊಂಡ ದರ್ಶನ್ ಪರ, ಸುಪ್ರೀಂ ಕೋರ್ಟ್ನಲ್ಲೂ ಸಮಾನ ಜಯ ಸಾಧಿಸಲು ಕಪಿಲ್ ಸಿಬಲ್ ಅವರನ್ನು ವಕೀಲರಾಗಿ ನೇಮಿಸಲು ಅವರ ಪರಿವಾರ ಮುಂದಾಗಿದೆ. ವರದಿಗಳ ಪ್ರಕಾರ, ಕಪಿಲ್ ಸಿಬಲ್ (Kapil Sibal) ಅವರನ್ನು ಈಗಾಗಲೇ ಸಂಪರ್ಕಿಸಿ, ಹೈಕೋರ್ಟ್ನಲ್ಲಿ ನಡೆದ ವಾದ-ಪ್ರತಿವಾದ, ಕೇಸ್ ಹಿಸ್ಟರಿ ಸೇರಿದಂತೆ ಎಲ್ಲಾ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
ಕಪಿಲ್ ಸಿಬಲ್, ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ (Indian judicial system) ಶ್ರೇಷ್ಟ ವಕೀಲರಾಗಿದ್ದು, ಹಲವು ಮಹತ್ವದ ಪ್ರಕರಣಗಳಲ್ಲಿ ವಾದಿಸಿ ಜಯಗಳಿಸಿದ ಅನುಭವ ಹೊಂದಿದ್ದಾರೆ. ಅವರ ವಕಾಲತ್ತಿನಲ್ಲಿ ದರ್ಶನ್ ಪರ ಸುಪ್ರೀಂನಲ್ಲಿ ಪ್ರಬಲ ವಾದ ನಡೆಯುವ ನಿರೀಕ್ಷೆಯಿದೆ. ಮಾರ್ಚ್ 18 ರಂದು ಈ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ನಡೆಯಲಿದ್ದು, ಅದೇ ದಿನ ಕಪಿಲ್ ಸಿಬಲ್ ವಾದ ಮಂಡಿಸುವ ಸಾಧ್ಯತೆ ಇದೆ.
ಈ ಹಿನ್ನಲೆಯಲ್ಲಿ, ದರ್ಶನ್ ಪರ ಕಾನೂನು ತಂಡ ತ್ವರಿತವಾದ ಕ್ರಮ ಕೈಗೊಂಡಿದ್ದು, ಕೇಸ್ ನ್ಯೂನತೆಗಳು ಮತ್ತು ತರ್ಕಬದ್ಧ ಅಂಶಗಳನ್ನು ಪ್ರಬಲವಾಗಿ ಪ್ರತಿಪಾದಿಸಲು ತಯಾರಿಯಲ್ಲಿದೆ. ಹೈಕೋರ್ಟ್ನಂತಹ ಜಯ ಸುಪ್ರೀಂ ಕೋರ್ಟ್ನಲ್ಲೂ ಸಿಗಬೇಕು ಎಂಬ ಗುರಿಯೊಂದಿಗೆ, ದರ್ಶನ್ ಪರ ವಕೀಲರು ತಂತ್ರ ರೂಪಿಸುತ್ತಿದ್ದಾರೆ.
ಮಾರ್ಚ್ 18 ರಂದು ಈ ಪ್ರಕರಣದ ಅಂತಿಮ ತೀರ್ಪು (Final Judgement) ಏನಾಗಲಿದೆ ಎಂಬ ಕುತೂಹಲ ನಿರ್ಮಾಣವಾಗಿದ್ದು, ದರ್ಶನ್ ಅಭಿಮಾನಿಗಳು, ಕುಟುಂಬ ಮತ್ತು ಚಿತ್ರರಂಗದವರು ಕೋರ್ಟ್ ತೀರ್ಪಿನತ್ತ ಕಾಯುತ್ತಿದ್ದಾರೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




