ಇತ್ತೀಚಿನ ದಿನಗಳಲ್ಲಿ ಹೃದಯಾಘಾತ (Heart Attack) ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅದರ ಆರಂಭಿಕ ಲಕ್ಷಣಗಳನ್ನು ಸರಿಯಾಗಿ ಗುರುತಿಸುವುದು ಅತ್ಯಂತ ಅಗತ್ಯವಾಗಿದೆ. ಹಲವಾರು ಬಾರಿ ಹೃದಯಾಘಾತದ ಪ್ರಾರಂಭಿಕ ಲಕ್ಷಣಗಳು ಸಾಮಾನ್ಯ ಗ್ಯಾಸ್ಟ್ರಿಕ್ ಸಮಸ್ಯೆ ಅಥವಾ ಇತರ ಸಣ್ಣ ತೊಂದರೆಗಳಂತೆ ಕಾಣಬಹುದು. ಈ ತಪ್ಪು ಗುರುತಿಸುವಿಕೆಯಿಂದ ಅನೇಕರು ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯದೆ, ಪ್ರಾಣ ಕಳೆದುಕೊಳ್ಳುವ ದುರ್ಘಟನೆಗಳು ಸಂಭವಿಸುತ್ತಿವೆ. ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಇತ್ತೀಚಿನ ಸಂವಾದವೊಂದರಲ್ಲಿ ಈ ಕುರಿತು ಸ್ಪಷ್ಟ ಮಾಹಿತಿ ನೀಡಿ, ಜನರಲ್ಲಿ ಜಾಗೃತಿಯನ್ನು ಮೂಡಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೃದಯಾಘಾತದ ನೋವು ಎಲ್ಲರಿಗೂ ಒಂದೇ ರೀತಿ ಬರುವುದಿಲ್ಲ:
ಸಾಮಾನ್ಯವಾಗಿ ಹೃದಯಾಘಾತವಾಗುವಾಗ ಎದೆಯಲ್ಲಿ ತೀವ್ರ ನೋವು ಬರುತ್ತದೆ ಎಂದು ಅನೇಕರು ನಂಬಿದ್ದಾರೆ. ಇದು ಕೆಲವರಿಗೆ ನಿಜವಾಗಿರಬಹುದು. ಆದರೆ ಎಲ್ಲರಿಗೂ ಇದೇ ರೀತಿಯಾದ ನೋವು ಬರುವುದಿಲ್ಲ. ಕೆಲವರಿಗೆ ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಕಾಣಿಸಬಹುದು. ಇದನ್ನು ಸಾಮಾನ್ಯವಾಗಿ ಗ್ಯಾಸ್ಟ್ರಿಕ್ ಸಮಸ್ಯೆ(Gastric problem) ಎಂದು ತಪ್ಪಾಗಿ ಅರ್ಥಮಾಡಿಕೊಂಡು, ಅಜಾಗರೂಕತೆಯಿಂದ ಔಷಧಿ ತೆಗೆದುಕೊಳ್ಳುವವರು ಅಪಾಯಕ್ಕೆ ಒಳಗಾಗುತ್ತಾರೆ.
ಗ್ಯಾಸ್ಟ್ರಿಕ್ ಎಂದು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ:
ಡಾ. ಮಂಜುನಾಥ್ ಅವರ ಪ್ರಕಾರ, ಅನೇಕರು ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಮತ್ತು ವಾಂತಿ ಕಾಣಿಸಿಕೊಂಡಾಗ ಇದು ಗ್ಯಾಸ್ಟ್ರಿಕ್ ಸಮಸ್ಯೆ ಎಂದು ಭಾವಿಸಿ ಮನೆಯಲ್ಲೇ ಮಾತ್ರೆ ತೆಗೆದುಕೊಂಡು ಚಿಕಿತ್ಸೆ ಮುಂದೂಡುತ್ತಾರೆ. ಹೃದಯಾಘಾತದ ಪ್ರಮುಖ ಲಕ್ಷಣಗಳನ್ನು ಗುರುತಿಸಲು ವಿಫಲವಾದ ಕಾರಣ ಅನೇಕರು ತೀವ್ರ ಅಪಾಯವನ್ನು ಎದುರಿಸುತ್ತಾರೆ.
ದವಡೆ ಮತ್ತು ಹಲ್ಲು ನೋವಿನ ರೂಪದಲ್ಲೂ ಲಕ್ಷಣಗಳು ಕಾಣಿಸಿಕೊಳ್ಳಬಹುದು:
ಕೆಲವರಿಗೆ ಹೃದಯಾಘಾತದ ಸಮಯದಲ್ಲಿ ದವಡೆ ಅಥವಾ ಹಲ್ಲಿನ ಭಾಗದಲ್ಲಿ ನೋವು ಕಾಣಿಸಬಹುದು. ಇದನ್ನು ಸಾಮಾನ್ಯ ಹಲ್ಲು ನೋವಿನಂತೆ ಭಾವಿಸಿ ಚಿಕಿತ್ಸೆ ಮುಂದೂಡುವುದು ಜೀವಕ್ಕೆ ಅಪಾಯಕಾರಿಯಾಗಿದೆ.
ಗಂಟಲು ನೋವು, ಎದೆ ಉರಿ ಮತ್ತು ಎಡಕೈ ನೋವು:
ಮತ್ತೊಂದು ಮುಖ್ಯ ಲಕ್ಷಣವೆಂದರೆ ಗಂಟಲು ನೋವು ಅಥವಾ ಊಟದ ನಂತರ ನಡೆಯುವಾಗ, ಮೆಟ್ಟಿಲು ಹತ್ತುವಾಗ, ಇಳಿಯುವಾಗ ಎದೆ ಉರಿ, ಎಡಕೈ ಅಥವಾ ಭುಜ ಭಾಗದಲ್ಲಿ ನೋವು ಕಾಣಿಸಿಕೊಳ್ಳುವುದನ್ನು ಹಗುರವಾಗಿ ತೆಗೆದುಕೊಳ್ಳದೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.
ಯಾವ ನೋವು ಹೃದಯಕ್ಕೆ ಸಂಬಂಧಿಸಿರುವುದಿಲ್ಲ?:
ಡಾ. ಮಂಜುನಾಥ್ ಅವರು ಹೇಳಿರುವ ಪ್ರಕಾರ, ಕೆಲವರಿಗೆ ಕೂತಿರುವಾಗ ಎದೆ ನೋವು ಕಾಣಿಸಿಕೊಂಡು, ಆದರೆ ಓಡಾಡುವಾಗ ಅಥವಾ ಚಲನೆಯಲ್ಲಿರುವಾಗ ನೋವು ಕಡಿಮೆಯಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಅದು ಹೃದಯಾಘಾತದ ಲಕ್ಷಣವಾಗಿರುವುದಿಲ್ಲ. ಆದರೂ ಯಾವುದೇ ರೀತಿಯ ನೋವನ್ನು ನಿರ್ಲಕ್ಷ್ಯ ಮಾಡದೆ ವೈದ್ಯಕೀಯ ಸಲಹೆ ಪಡೆಯುವುದು ಸುರಕ್ಷಿತ.
ಒಟ್ಟಾರೆಯಾಗಿ, ಹೃದಯಾಘಾತದ ಲಕ್ಷಣಗಳು ಎಲ್ಲರಲ್ಲೂ ಒಂದೇ ರೀತಿಯಾಗಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಪ್ರಮುಖ ಸಂಗತಿ. ಹೊಟ್ಟೆ ನೋವು, ದವಡೆ ನೋವು, ಗಂಟಲು ನೋವು, ಎದೆ ಉರಿ ಅಥವಾ ಎಡಕೈ ನೋವು ಇವೆಲ್ಲವೂ ಹೃದಯಾಘಾತ ಸಂಭವಿಸುವ ಮುನ್ಸೂಚನೆಗಳಿರಬಹುದು ಆದ್ದರಿಂದ ಗ್ಯಾಸ್ಟ್ರಿಕ್ ಎಂದು ತಪ್ಪಾಗಿ ಅರ್ಥಮಾಡಿಕೊಂಡು ವಿಳಂಬ ಮಾಡಿದರೆ ಪ್ರಾಣಾಪಾಯ ಸಾಧ್ಯತೆ ಹೆಚ್ಚಾಗುತ್ತದೆ. ಆದ್ದರಿಂದ ಈ ಲಕ್ಷಣಗಳು ಕಂಡುಬಂದ ಕೂಡಲೇ ತಕ್ಷಣ ವೈದ್ಯಕೀಯ ನೆರವು ಪಡೆಯುವುದು ಅಗತ್ಯವೆಂದು ಡಾ. ಸಿ.ಎನ್. ಮಂಜುನಾಥ್ ಸಲಹೆ ನೀಡಿದ್ದಾರೆ.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




