ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಲವೆಡೆ ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು (Kalyana Karnataka Districts) ಹಾಗೂ ಭೀಮಾ ನದೀತೀರದ ಗ್ರಾಮಗಳು ಭಾರೀ ಹಾನಿಗೆ ಗುರಿಯಾಗಿವೆ. ನಿರಂತರ ಮಳೆ, ಜಲಾಶಯಗಳಿಂದ ನೀರಿನ ಬಿಡುಗಡೆ, ಹಾಗೂ ತೀವ್ರ ಪ್ರವಾಹದಿಂದಾಗಿ ಲಕ್ಷಾಂತರ ಎಕರೆ ಕೃಷಿಭೂಮಿಗಳು ಜಲಾವೃತಗೊಂಡು ಬೆಳೆ ಸಂಪೂರ್ಣ ಹಾನಿಗೊಳಗಾಗಿವೆ. ಮನೆ, ರಸ್ತೆ, ಸೇತುವೆ, ಶಾಲೆ ಹಾಗೂ ಸಾರ್ವಜನಿಕ ಸೌಕರ್ಯಗಳಿಗೂ ಸಾಕಷ್ಟು ಹಾನಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramayya) ಅವರು ರಾಜ್ಯ ಸರ್ಕಾರದ ಪರವಾಗಿ ದೊಡ್ಡ ಪ್ರಮಾಣದ ಪರಿಹಾರ ಘೋಷಣೆ ಮಾಡಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪರಿಹಾರ ಪ್ಯಾಕೇಜ್ ಘೋಷಣೆ:
ಒಟ್ಟು ಪರಿಹಾರ: ₹2000 ಕೋಟಿ
ಪ್ರವಾಹಪೀಡಿತ ಜಿಲ್ಲೆಗಳ ಪರಿಸ್ಥಿತಿ ಅರಿಯಲು ಸಿಎಂ ವೈಮಾನಿಕ ಸಮೀಕ್ಷೆ (CM’s aerial survey) ನಡೆಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಈ ವೇಳೆ ಬೆಳೆ, ಮನೆ, ಜಾನುವಾರು ಹಾಗೂ ಮೂಲಸೌಕರ್ಯ ಹಾನಿಗೆ ತಕ್ಷಣ ಪರಿಹಾರ ನೀಡುವಂತೆ ಆದೇಶಿಸಲಾಗಿದೆ.
ಹೆಚ್ಚಿನ ನೆರವಿಗಾಗಿ ಕೇಂದ್ರ ಸರ್ಕಾರಕ್ಕೂ (For Central government) ಮನವಿ ಮಾಡಲಾಗುವುದು. ಅದಕ್ಕಾಗಿ ಸಚಿವರ ನಿಯೋಗವನ್ನು ದೆಹಲಿಗೆ ಕಳುಹಿಸಲಾಗುತ್ತದೆ.
ಬೆಳೆ ಹಾನಿ ಪ್ರದೇಶಗಳ ಮಾಹಿತಿ:
8 ಜಿಲ್ಲೆಗಳಲ್ಲಿ 9 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದ ಬೆಳೆ ಹಾನಿ.
ಭೂಮಿ ಕೆರೆಯಂತಾಗಿ, ನೂರಾರು ರೈತರ ಹೊಲಗಳು ಸಂಪೂರ್ಣ ನಾಶ.
ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ.
ಮಳೆಯ ಪರಿಣಾಮ ಜಾನುವಾರಗಳ ಬಲಿ :
ರಾಜ್ಯದಲ್ಲಿ ಒಟ್ಟು 422 ಜಾನುವಾರುಗಳು ಬಲಿಯಾಗಿವೆ.
ಯಾದಗಿರಿ ಜಿಲ್ಲೆಯಲ್ಲಿ ಮಾತ್ರ 245 ಜಾನುವಾರುಗಳ ಮರಣ.
ಕಲಬುರಗಿ – 27, ಬೀದರ್ – 38, ವಿಜಯಪುರ – 3.
ಇದುವರೆಗೆ 407 ಜಾನುವಾರು ಮಾಲೀಕರಿಗೆ ಪರಿಹಾರ ವಿತರಣೆ ಪೂರ್ಣಗೊಂಡಿದೆ.
ಮನೆ ಹಾನಿ ವಿವರ (Home damage details) :
547 ಮನೆಗಳು ಸಂಪೂರ್ಣ ಹಾನಿ – ತಲಾ ₹1.20 ಲಕ್ಷ ಪರಿಹಾರ.
62 ಅನಧಿಕೃತ ಮನೆಗಳಿಗೆ ತಲಾ ₹1 ಲಕ್ಷ ಪರಿಹಾರ.
ಭಾಗಶಃ ಹಾನಿ:
50–75% ಹಾನಿ: ತಲಾ ₹50,000.
20–50% ಹಾನಿ: 3,166 ಮನೆಗಳು – ಪರಿಹಾರ ವಿತರಣೆ.
15–20% ಹಾನಿ: 3,881 ಮನೆಗಳು – ತಲಾ ₹6,500 ಪರಿಹಾರ.
ಇದುವರೆಗೆ ₹23.12 ಕೋಟಿ ಮನೆ ಹಾನಿಗೊಳಗಾದವರಿಗೆ ವಿತರಣೆ.
ಬಟ್ಟೆ ಮತ್ತು ಗೃಹ ಬಳಕೆ ವಸ್ತುಗಳ ನಷ್ಟ:
4,858 ಕುಟುಂಬಗಳು ನಷ್ಟಕ್ಕೆ ಗುರಿ.
ಈಗಾಗಲೇ ₹2.42 ಕೋಟಿ ಪರಿಹಾರ ನೀಡಲಾಗಿದೆ.
ಮೂಲಸೌಕರ್ಯ ಹಾನಿ(Infrastructure damage) :
ರಸ್ತೆ, ಸೇತುವೆ, ಶಾಲೆಗಳಿಗೆ ಭಾರೀ ಹಾನಿ.
ಸಮೀಕ್ಷೆ ಪ್ರಗತಿಯಲ್ಲಿದ್ದು, ವರದಿ ಬಂದ ತಕ್ಷಣ ಪರಿಹಾರ ನೀಡಲಾಗುವುದು.
ಪ್ರತಿ ಕ್ಷೇತ್ರಕ್ಕೆ ₹25 ರಿಂದ ₹50 ಕೋಟಿ ವಿಶೇಷ ಅನುದಾನ ಈಗಾಗಲೇ ಬಿಡುಗಡೆಯಾಗಿದೆ.
ಸಿಎಂ ಸಿದ್ದರಾಮಯ್ಯ ಹೇಳಿಕೆ(CM Siddaramaiah’s statement) :
ಈ ಬಾರಿ ಮಳೆಯ ಪ್ರಮಾಣ ಸಾಮಾನ್ಯಕ್ಕಿಂತ ಹೆಚ್ಚು. ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬಿಡಲಾಗಿದ್ದು, ಭೀಮಾ ತೀರದ ಗ್ರಾಮಗಳು ಜಲಾವೃತಗೊಂಡಿವೆ. ಜನರ ತೊಂದರೆ ನಿವಾರಣೆಗಾಗಿ ಸರ್ಕಾರ ಬದ್ಧವಾಗಿದೆ. ಮನೆ ಮುಳುಗಿದವರಿಗೆ ತಕ್ಷಣವೇ ₹5,000 ಪರಿಹಾರ (compensation) ನೀಡಲಾಗುವುದು. ಹೆಚ್ಚಿನ ನೆರವಿಗಾಗಿ ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ, ಪ್ರವಾಹದಿಂದ ಹಾನಿಗೊಳಗಾದ ರೈತರು, ಗೃಹಮಾಲೀಕರು ಹಾಗೂ ಸಾಮಾನ್ಯ ಜನರಿಗೆ ತಕ್ಷಣ ಪರಿಹಾರ ಒದಗಿಸಲು ಸರ್ಕಾರ (Government) ವೇಗವಾಗಿ ಕ್ರಮ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದಲೂ ಹೆಚ್ಚಿನ ನೆರವು ನಿರೀಕ್ಷಿಸಲಾಗಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ರಾಜ್ಯ ಸರ್ಕಾರಿ ನೌಕರರ ಸಂಘದಿಂದ ವರ್ಗಾವಣೆ ಸಂಬಂಧಿತ ‘ಪತ್ರ ವ್ಯವಹಾರ’ದ ಬಗ್ಗೆ ಮಹತ್ವದ ಆದೇಶ.!
- 2024-25ನೇ ಸಾಲಿನ `ಶಿಕ್ಷಕರ ವರ್ಗಾವಣೆ’ಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ.!
- ರಾಜ್ಯದ ರೈತರ ಪೌತಿ ಖಾತೆ ಕುರಿತು ಬಂಪರ್ ಗುಡ್ ನ್ಯೂಸ್, ಜಮೀನು ವರ್ಗಾವಣೆಗೆ ಹೊಸ ರೂಲ್ಸ್
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

“ಕೃಷ್ಣಸಾಗರಿ ಅವರು NeedsOfPublic.in ನ ‘ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ’ (Job Updates & Career) ವಿಭಾಗದ ಮುಖ್ಯಸ್ಥರಾಗಿದ್ದಾರೆ. ಉದ್ಯೋಗ ಮಾಹಿತಿ ಕ್ಷೇತ್ರದಲ್ಲಿ 4 ವರ್ಷಗಳ ವೃತ್ತಿಪರ ಅನುಭವ ಹೊಂದಿರುವ ಇವರು, ಸರ್ಕಾರಿ ಉದ್ಯೋಗದ ಅಧಿಸೂಚನೆಗಳು (Govt Job Notifications), ಖಾಸಗಿ ವಲಯದ ನೇಮಕಾತಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಅಪ್ಡೇಟ್ಗಳನ್ನು ಒದಗಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಉದ್ಯೋಗಾಕಾಂಕ್ಷಿಗಳಿಗೆ ಕೇವಲ ಅಧಿಕೃತ ಮೂಲಗಳಿಂದ ಪರಿಶೀಲಿಸಿದ (verified) ಮತ್ತು ನಿಖರವಾದ ಉದ್ಯೋಗದ ಮಾಹಿತಿಯನ್ನು ಸಕಾಲದಲ್ಲಿ ತಲುಪಿಸುವುದು ಸಾಗರಿ ಅವರ ಪ್ರಮುಖ ಗುರಿಯಾಗಿದೆ.”


WhatsApp Group




