ಕರ್ನಾಟಕದಲ್ಲಿ ಸರ್ಕಾರಿ ನೌಕರರ ಹಕ್ಕು, ಭದ್ರತೆ ಹಾಗೂ ಭವಿಷ್ಯದ ಬಗ್ಗೆ ನಡೆದಿರುವ ಚರ್ಚೆಗಳಲ್ಲಿ “ಹಳೆ ಪಿಂಚಣಿ ಯೋಜನೆ” (OPS) ಪ್ರಮುಖ ವಿಷಯವಾಗಿದೆ. ದೇಶದಾದ್ಯಂತ ಸರ್ಕಾರಿ ನೌಕರರು ಪಿಂಚಣಿಯ ಭವಿಷ್ಯ ಕುರಿತು ಚಿಂತನೆ ವ್ಯಕ್ತಪಡಿಸುತ್ತಿರುವಾಗ, ಕರ್ನಾಟಕದಲ್ಲಿಯೂ ಹಲವು ವರ್ಷಗಳಿಂದ NPS (National Pension Scheme) ವಿರುದ್ಧ ಧ್ವನಿ ಎತ್ತಲಾಗಿದೆ. 2004ರ ನಂತರ ಭಾರತ ಸರ್ಕಾರ ಹಾಗೂ 2006ರ ನಂತರ ಕರ್ನಾಟಕ ಸರ್ಕಾರ(Karnataka government) ನೇಮಕ ಮಾಡಿದ್ದ ಸರ್ಕಾರಿ ನೌಕರರಿಗೆ ಹೊಸ ರಾಷ್ಟ್ರೀಯ ಪಿಂಚಣಿ ಯೋಜನೆ ಜಾರಿಗೊಳಿಸಲಾಯಿತು. ಆದರೆ, ಈ ಯೋಜನೆ ನೌಕರರಿಗೆ ಭರವಸೆ ನೀಡುವಂತದ್ದಲ್ಲ ಎಂಬ ಅಸಮಾಧಾನ ವರ್ಷಗಳಿಂದ ಮುಂದುವರಿದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹಳೆ ಪಿಂಚಣಿ ಯೋಜನೆ (OPS) ಅಂದರೆ ನಿವೃತ್ತಿಯ ನಂತರ ಸರ್ಕಾರಿ ನೌಕರರಿಗೆ ಆಜೀವ ಭದ್ರತೆ, ನಿರ್ದಿಷ್ಟ ಮೊತ್ತದ ಪಿಂಚಣಿ, ಹಾಗೂ ಕುಟುಂಬಕ್ಕೆ ಭರವಸೆಯ ಆದಾಯ ನೀಡುವ ವ್ಯವಸ್ಥೆ. ಆದರೆ, NPS ವ್ಯವಸ್ಥೆಯಲ್ಲಿ ಮಾರುಕಟ್ಟೆ ಅವಲಂಬಿತ ಹೂಡಿಕೆ ಮತ್ತು ನಿರ್ಧಿಷ್ಟ ಆದಾಯದ ಭರವಸೆ ಇಲ್ಲ. ಹೀಗಾಗಿ, ಸಾವಿರಾರು ಸರ್ಕಾರಿ ನೌಕರರು ಹಳೆಯ ವ್ಯವಸ್ಥೆಯನ್ನು ಮರು ಜಾರಿಗೆ ತರಬೇಕು ಎಂದು ನಿರಂತರವಾಗಿ ಪ್ರತಿಭಟನೆ, ಸಭೆ, ಚರ್ಚೆ ನಡೆಸುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರದ ಭರವಸೆ:
2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೇ, ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ OPS ಜಾರಿಗೆ ಸಂಬಂಧಿಸಿದ ಭರವಸೆ ನೀಡಿತ್ತು. “ಸರ್ಕಾರಿ ನೌಕರರು ನೆಮ್ಮದಿಯಿಂದ ಬದುಕುವುದು ನಮ್ಮ ಹೊಣೆಗಾರಿಕೆ” ಎಂಬ ನಿಲುವನ್ನು ಸ್ಪಷ್ಟವಾಗಿ ಹೇಳಿಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ(Chief Minister Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(Chief Minister D.K. Shivakumar), ಇದನ್ನು ಜಾರಿಗೊಳಿಸಲು ತಾವು ಬದ್ಧರಾಗಿದ್ದೇವೆ ಎಂದು ಹಲವಾರು ಬಾರಿ ತಿಳಿಸಿದ್ದರು.
ಇನ್ನು, 2006ರ ಬಳಿಕ ನೇಮಕಗೊಂಡ ನೌಕರರಿಗೆ NPS ಬದಲು OPS ಜಾರಿಗೊಳಿಸುವುದಾಗಿ ನಮ್ಮ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿತ್ತು. ಸದ್ಯದಲ್ಲೇ ಈ ಭರವಸೆ ಪೂರ್ಣಗೊಳ್ಳಲಿದೆ” ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ(Education Minister Madhu Bangarappa) ಇತ್ತೀಚೆಗೆ ಹೇಳಿದ್ದಾರೆ.
ನೌಕರರ ಹೋರಾಟ ಮತ್ತು ಸರ್ಕಾರದ ಸ್ಪಂದನೆ:
ಹಳೆ ಪಿಂಚಣಿ ಯೋಜನೆ ಜಾರಿಗೆ ತರಬೇಕೆಂಬ ಬೇಡಿಕೆ ಕಳೆದ ಎರಡು ವರ್ಷಗಳಿಂದ ತೀವ್ರಗೊಂಡಿತ್ತು. ರಾಜ್ಯದಾದ್ಯಂತ ನೌಕರರು ಹಲವು ಪ್ರತಿಭಟನೆ, ಸಭೆ, ಮೆರವಣಿಗೆಗಳನ್ನು ನಡೆಸಿ ಸರ್ಕಾರದ ಗಮನ ಸೆಳೆದಿದ್ದರು. ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಆಗಸ್ಟ್ 12, 2025ರಂದು ಮುಖ್ಯ ಸಭೆ ನಡೆದಿರುವುದು ಮಹತ್ವದ ಬೆಳವಣಿಗೆ.
ಈ ಸಭೆಯಲ್ಲಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ OPS ಜಾರಿಗೆ ಸಂಬಂಧಿಸಿದ ಎಲ್ಲಾ ಅಂಶಗಳ ಕುರಿತು ಚರ್ಚೆ ನಡೆದಿದೆ. NPS ರದ್ದುಗೊಳಿಸಿ OPS ಜಾರಿಗೆ ತರಲು ಸಾಧ್ಯತೆಗಳ ಕುರಿತಾಗಿ ಸಮಿತಿ ಸಮಗ್ರ ಪರಿಶೀಲನೆ ನಡೆಸಿದೆ.
OPS ಜಾರಿಗೆ ನಿರೀಕ್ಷೆ:
ಹೀಗಾಗಿ, ಇನ್ನು ಹೆಚ್ಚು ಕಾಲ ಸರ್ಕಾರಿ ನೌಕರರು ಕಾಯಬೇಕಾಗಿಲ್ಲ ಎನ್ನುವ ನಿರೀಕ್ಷೆ ಮೂಡಿದೆ. 6ನೇ ಮತ್ತು 7ನೇ ವೇತನ ಆಯೋಗ ಜಾರಿಗೆ ತಂದ ಸಿದ್ದರಾಮಯ್ಯ ಸರ್ಕಾರ, ಈಗ OPS ಜಾರಿಗೆ ಮುಂದಾದರೆ, ನೌಕರರ ಬಹುದಿನದ ಕನಸು ಸಾಕಾರಗೊಳ್ಳಲಿದೆ. OPS ಜಾರಿಗೆ ತರಲಾಗಿದೆಯಾದರೆ, ಇದು ನೌಕರರ ಕುಟುಂಬಗಳಿಗೂ ಆರ್ಥಿಕ ಭದ್ರತೆ ನೀಡಲಿದ್ದು, ರಾಜ್ಯ ಸರ್ಕಾರ ಮತ್ತು ನೌಕರರ ನಡುವಿನ ನಂಟನ್ನು ಮತ್ತಷ್ಟು ಗಟ್ಟಿಗೊಳಿಸುವ ಸಾಧ್ಯತೆ ಇದೆ.
ಒಟ್ಟಾರೆಯಾಗಿ, ರಾಜ್ಯ ಸರ್ಕಾರಿ ನೌಕರರ ಬಹುದಿನದ ಬೇಡಿಕೆ ಪೂರೈಸುವ ಹಂತ ತಲುಪಿದೆ. ಶೀಘ್ರದಲ್ಲೇ OPS ಜಾರಿಗೆ ಸಂಬಂಧಿಸಿದ ಅಧಿಕೃತ ನಿರ್ಧಾರ ಹೊರಬೀಳುವ ಸಾಧ್ಯತೆಗಳಿವೆ. ಸರ್ಕಾರದ ಈ ಹೆಜ್ಜೆ ನೌಕರರ ಮನಸ್ಸಿನಲ್ಲಿ ಭರವಸೆ ಮೂಡಿಸಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




