ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಅಡಿಕೆಗೆ ವಿಶೇಷ ಸ್ಥಾನವಿದೆ. ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡ, ದಾವಣಗೆರೆ, ಚಿಕ್ಕಮಗಳೂರು, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳ ಸಾವಿರಾರು ರೈತರ ಈ ಬೆಲೆಯಿಂದಾಗಿ ಬದುಕು ಕಟ್ಟಿಕೊಂಡಿದ್ದಾರೆ. ಹೆಚ್ಚು ಬಂಡವಾಳದೊಂದಿಗೆ ಬೆಳೆದರೂ, ಹವಾಮಾನ ಅವಲಂಬಿತತೆಯ ಜೊತೆಗೆ, ರೋಗರುಜಿನಗಳು ಮತ್ತು ನೀರಿನ ಕೊರತೆಗಳು ಅಡಿಕೆ ಬೆಳೆಗೆ ಸಮಸ್ಯೆಗಳಾಗಿವೆ. ಇದರ ನಡುವೆ ಮಾರುಕಟ್ಟೆ ಬೆಲೆ ಕುಸಿದರೆ, ರೈತರ ಸ್ಥಿತಿಗತಿಗಳು ಬಿಕ್ಕಟ್ಟಿಗೆ ತಲುಪುವುದು ಖಚಿತ. ಆದರೆ, ಇತ್ತೀಚಿನ ದಿನಗಳಲ್ಲಿ ಅಡಿಕೆ ಬೆಲೆಯಲ್ಲಿ ಕಂಡುಬಂದಿರುವ ಬೃಹತ್ ಏರಿಕೆಯು ರೈತರ ಮುಖದಲ್ಲಿಗೆ ಮತ್ತೆ ನಗು ತಂದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಆರ್ಥಿಕ ಬಿಕ್ಕಟ್ಟಿನಲ್ಲಿದ್ದ ರೈತರ ಪಾಲಿಗೆ ಪ್ರಸ್ತುತ ಮಾರುಕಟ್ಟೆ ಬದಲಾವಣೆ ಹೊಸ ಆಶಾವಾದ ತಂದಿದೆ. ಕೆಲ ತಿಂಗಳುಗಳಿಂದ ಅಡಿಕೆ ಮೌಲ್ಯ ಕ್ರಮೇಣ ಏರಿಕೆಯಾಗುತ್ತಾ ಬರುವ ನಡುವೆಯೇ, “ಕ್ವಿಂಟಾಲ್ ಅಡಿಕೆ ₹80,000 ತಲುಪಬಹುದು” ಎಂಬ ನಿರೀಕ್ಷೆ ಹುಟ್ಟಿಕೊಂಡಿದೆ. ಇಂಥ ಬೆಲೆ ಏರಿಕೆಯ ಹಿಂದಿರುವ ಪ್ರಮುಖ ಕಾರಣಗಳಲ್ಲಿ ಸರಬರಾಜು ಕಡಿಮೆಯಾದರೆ, ಬೇಡಿಕೆ ನಿರಂತರವಾಗಿರುವುದು ಕೂಡ ಪ್ರಮುಖ.
ಇಂದಿನ ಪ್ರಮುಖ ಮಾರುಕಟ್ಟೆ ದರ ಹೀಗಿದೆ:
ದಾವಣಗೆರೆ:
ಸರ್ವಸಾಮಾನ್ಯ ಅಡಿಕೆ: ₹57,500/ಕ್ವಿಂಟಾಲ್
ರಾಶಿ ಅಡಿಕೆ: ₹24,000/ಕ್ವಿಂಟಾಲ್
ಶಿವಮೊಗ್ಗ:
ಬೆಟ್ಟೆ ಅಡಿಕೆ: ₹53,519/ಕ್ವಿಂಟಾಲ್
ರಾಶಿ ಅಡಿಕೆ: ₹46,161/ಕ್ವಿಂಟಾಲ್
ಸರುಕು: ₹52,069/ಕ್ವಿಂಟಾಲ್
ಯಲ್ಲಾಪುರ:
ಬೆಳೆಗೋಟು: ₹18,559
ತಟ್ಟಿಬೆಟ್ಟೆ: ₹28,769
ಕೋಕಾ: ₹10,900
ಶಿರಸಿ:
ಬಿಳೆಗೋಟು: ₹16,910
ರಾಶಿ ಅಡಿಕೆ: ₹41,599/ಕ್ವಿಂಟಾಲ್
ಈ ದರಗಳಲ್ಲಿ ಕೆಲವು ಸ್ಥಳೀಯ ವಿಭಿನ್ನತೆಗಳು ಇದ್ದರೂ, ಒಟ್ಟಾರೆ ಪ್ರವೃತ್ತಿ ಏರಿಕೆಯ ದಿಶೆಯಲ್ಲಿದೆ.
ರೈತರ ಭಾವನೆ:
ಅಡಿಕೆಗೆ ಈಗ ಸಿಗುತ್ತಿರುವ ಬೆಲೆ ನೋಡಿದರೆ, ಭವಿಷ್ಯದಲ್ಲಿ ಮತ್ತಷ್ಟು ಲಾಭದಾಯಕ ದರ ದಕ್ಕಿಸಿಕೊಳ್ಳಬಹುದೆಂಬ ನಿರೀಕ್ಷೆ ಅವರಲ್ಲಿ ಮೂಡಿದೆ. ಆದರೆ ಈ ಸಂತಸದ ಹಿಂದಿನ ದುಃಖದ ಹಿನ್ನೆಲೆಯನ್ನೂ ಮರೆಯಬಾರದು. ಕಳೆದ ವರ್ಷಗಳಿಂದ ವೈಪರಿತ್ಯ ಹವಾಮಾನ, ಬೆಳೆ ಹಾನಿ ಹಾಗೂ ಸಾಲದ ಬಾಧೆಗಳಿಂದ ಹತಾಶರಾಗಿದ್ದ ರೈತರಿಗೆ ಈಗ ಸಿಗುತ್ತಿರುವ ಬೆಲೆಗಳು ಮಾತ್ರ ಬಾಳಿಗೆ ಬೆಳಕು ತರುತ್ತಿವೆ.
ಆದರೆ ಮಾರುಕಟ್ಟೆ ಯಾವತ್ತೂ ಸ್ಥಿರವಲ್ಲ. ಬೆಲೆಯ ಈ ಏರಿಕೆಯನ್ನು ನಿಲ್ಲಿಸದಂತೆ, ಸರ್ಕಾರದ ಹಸ್ತಕ್ಷೇಪ, ಬೆಂಬಲ ಮೌಲ್ಯಗಳ ಸಮರ್ಪಕ ಜಾರಿ ಮತ್ತು ಮಾರುಕಟ್ಟೆ ನಿಷ್ಠುರತೆಯಿಂದ ರೈತರನ್ನು ರಕ್ಷಿಸುವ ವ್ಯವಸ್ಥೆಗಳು ಅಗತ್ಯವಿವೆ.
ಒಟ್ಟಾರೆಯಾಗಿ, ಸದ್ಯಕ್ಕೆ ಅಡಿಕೆಗೆ ಸಿಗುತ್ತಿರುವ ಉತ್ಕೃಷ್ಟ ಬೆಲೆ ರೈತರ ಪಾಲಿಗೆ ಖುಷಿಯ ಸುದ್ದಿ. ಆದರೆ ಈ ಖುಷಿ ಸ್ಥಿರವಾಗಬೇಕಾದರೆ ನೀತಿ ತೀರ್ಮಾನ, ಕೃಷಿ ಸಹಾಯ ಯೋಜನೆಗಳು, ಸೂಕ್ತ ಸಂಸ್ಕರಣಾ ಶ್ರೇಣಿಗಳು ಹಾಗೂ ಬೆಲೆ ಸ್ಥಿರತೆ ನಿಗಾವಹಿಸುವ ಕ್ರಮಗಳು ಜಾರಿಯಲ್ಲಿರಬೇಕಾಗಿದೆ. ಕೃಷಿಯ ಮಾರುಕ್ಕಟ್ಟೆಯ ಬೆಲೆ ಹೆಚ್ಚಳ ರೈತನ ಬೆನ್ನುತಟ್ಟಿ, ಅವನ ಬದುಕು ಬೆಳಗಲಿ ಎಂಬದೇ ಎಲ್ಲರ ಆಶಯ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಕೃಷ್ಣಸಾಗರಿ ಅವರು NeedsOfPublic.in ನ ‘ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ’ (Job Updates & Career) ವಿಭಾಗದ ಮುಖ್ಯಸ್ಥರಾಗಿದ್ದಾರೆ. ತುಮಕೂರಿನ ಸರ್ಕಾರಿ ನರ್ಸಿಂಗ್ ಕಾಲೇಜಿನಿಂದ B.Sc (Nursing) ಪದವಿ ಪಡೆದಿರುವ ಇವರು, ಸಾರ್ವಜನಿಕ ಜಾಗೃತಿ ಮತ್ತು ಮಾಹಿತಿ ನೀಡುವ ಆಸಕ್ತಿಯಿಂದಾಗಿ ಡಿಜಿಟಲ್ ಪತ್ರಿಕೋದ್ಯಮ ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ. ಡಿಜಿಟಲ್ ಮಾಧ್ಯಮ ರಂಗದಲ್ಲಿ 3 ವರ್ಷಗಳ ಅನುಭವ ಹೊಂದಿರುವ ಇವರು, ಸರ್ಕಾರಿ ಉದ್ಯೋಗದ ಅಧಿಸೂಚನೆಗಳು (Govt Job Notifications), ಖಾಸಗಿ ನೇಮಕಾತಿಗಳು ಮತ್ತು ಶೈಕ್ಷಣಿಕ ಅಪ್ಡೇಟ್ಗಳನ್ನು ಒದಗಿಸುವಲ್ಲಿ ಪರಿಣತಿ ಹೊಂದಿದ್ದಾರೆ. ನಿರುದ್ಯೋಗಿ ಯುವಕ-ಯುವತಿಯರಿಗೆ ಯಾವುದೇ ಗೊಂದಲವಿಲ್ಲದೆ, ಕೇವಲ ಅಧಿಕೃತ ಮೂಲಗಳಿಂದ ಪರಿಶೀಲಿಸಿದ (Verified) ನಿಖರ ಮಾಹಿತಿಯನ್ನು ಸಕಾಲದಲ್ಲಿ ತಲುಪಿಸುವುದೇ ಇವರ ಬರವಣಿಗೆಯ ಶೈಲಿಯಾಗಿದೆ.


WhatsApp Group




Leave a Reply