ಭಾರತದಲ್ಲಿ ಆದಾಯ ತೆರಿಗೆ ರಿಟರ್ನ್ಸ್ (Income Tax Returns – ITR) ಸಲ್ಲಿಸುವುದು ಅನೇಕರಿಗೆ ಒಂದು ವಾರ್ಷಿಕ ಕರ್ತವ್ಯವಾಗಿದೆ. ಈ ಪ್ರಕ್ರಿಯೆ ತಮ್ಮ ಆದಾಯದ ವಿವರವನ್ನು ಸರ್ಕಾರಕ್ಕೆ ನೀಡುವ ಮೂಲಕ ನ್ಯಾಯಸಮ್ಮತವಾದ ತೆರಿಗೆ ಕಟ್ಟುವ ನಿಟ್ಟಿನಲ್ಲಿ ಬಹುಮೌಲ್ಯವಾಗಿದೆ. ಆದರೆ, ಇತ್ತೀಚೆಗೆ ಕೇಂದ್ರ ಸರ್ಕಾರವು ಮಂಡಿಸಿರುವ “ಆದಾಯ ತೆರಿಗೆ ಮಸೂದೆ 2025” ಕುರಿತಂತೆ, ಲೋಕಸಭೆಯ ಆಯ್ಕೆ ಸಮಿತಿ (Standing Committee) ಮಹತ್ವದ ಶಿಫಾರಸನ್ನು ಮುಂದಿಟ್ಟಿದೆ. ಆ ಶಿಫಾರಸು ಯಾವುದೆಂದರೆ ಮರುಪಾವತಿ (Refund) ಪಡೆಯುವ ಉದ್ದೇಶದಿಂದ ರಿಟರ್ನ್ ಸಲ್ಲಿಸುವುದನ್ನು ಕಡ್ಡಾಯವಾಗಿರಿಸುವ ನಿಯಮವನ್ನು ತೆಗೆದುಹಾಕಬೇಕು ಎಂದು. ಹಾಗಿದ್ದರೆ ಶಿಫಾರಸಿನ ಹಿನ್ನೆಲೆ ಏನು? ಮಸೂದೆಯ ಯಾವ ಷರತ್ತಿಗೆ ಬದಲಾವಣೆ ಶಿಫಾರಸು? ಈಗ ಐಟಿಆರ್ (ITR) ಸಲ್ಲಿಸಲು ಯಾರಿಗೆ ವಿನಾಯಿತಿ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಶಿಫಾರಸಿನ ಹಿನ್ನೆಲೆ ಏನು?
ಆಯ್ಕೆ ಸಮಿತಿಯು ತನ್ನ ವರದಿಯಲ್ಲಿ ಒಂದು ಮುಖ್ಯವಿಷಯವನ್ನು ಒತ್ತಿಹೇಳಿದೆ,
ಸಣ್ಣ ತೆರಿಗೆದಾರರು ಅಥವಾ ತೆರಿಗೆ ವಿಧಿಸಬಹುದಾದ ಮಿತಿಗಿಂತ ಕಡಿಮೆ ಆದಾಯ ಹೊಂದಿರುವವರು ತಾವು ರಿಟರ್ನ್ (Return) ಸಲ್ಲಿಸಬೇಕೆಂದು ತಿಳಿಯದೇ ಇದ್ದರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಇದರಿಂದ ಬೇಡದ ದಂಡ ಮತ್ತು ಕಾನೂನು ಸಮಸ್ಯೆಗಳ ಭೀತಿಯಿಂದ ಅವರು ಸಂಕಟಕ್ಕೆ ಸಿಲುಕಬಹುದು.
ಹೀಗಾಗಿ, ಇಂತಹ ತೊಂದರೆಗಳನ್ನು ತಪ್ಪಿಸಲು ಅವಶ್ಯಕತೆ ಇಲ್ಲದ ಸಂದರ್ಭಗಳಲ್ಲಿ ಕಾನೂನಾತ್ಮಕವಾಗಿ(Leagelly) ರಿಟರ್ನ್ ಸಲ್ಲಿಸಲು ಒತ್ತಾಯಿಸಬಾರದು ಎಂಬ ನಿಲುವು ಸಮಿತಿಯದಾಗಿದೆ.
ಮಸೂದೆಯ ಯಾವ ಷರತ್ತಿಗೆ ಬದಲಾವಣೆ ಶಿಫಾರಸು?
ಆದಾಯ ತೆರಿಗೆ ಮಸೂದೆ 2025ರ ಷರತ್ತು 263(1)(ix) – ಇದು ವಿಶೇಷವಾಗಿ “ಮರುಪಾವತಿಯ ಹಕ್ಕು ಹೊಂದಿರುವ ವ್ಯಕ್ತಿಗಳು” (“Persons entitled to reimbursement”) ಐಟಿಆರ್ ಸಲ್ಲಿಸಬೇಕು ಎಂದು ಹೇಳುತ್ತದೆ. ಸಮಿತಿಯ ಶಿಫಾರಸಿನಂತೆ ಈ ಉಪ-ಷರತ್ತನ್ನು ತೆಗೆದುಹಾಕುವುದರಿಂದ, ಮರುಪಾವತಿ ಪಡೆಯುವ ಉದ್ದೇಶವಿದ್ದರೂ ಸಹ, ಕಡ್ಡಾಯವಾಗಿ ಐಟಿಆರ್ ಸಲ್ಲಿಸುವ ಅಗತ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಈಗ ಐಟಿಆರ್ ಸಲ್ಲಿಸಲು ಯಾರಿಗೆ ವಿನಾಯಿತಿ?
ತಾವು ರಿಟರ್ನ್ ಸಲ್ಲಿಸದೇ ಇದ್ದರೂ ದಂಡ ಅಥವಾ ಕಾನೂನು ಅಪಾಯಕ್ಕೊಳಗಾಗದೆ ಇರಬಹುದಾದವರು ಈ ಕೆಳಗಿನವರು,
1. ನಿಮಿಷದ ಆದಾಯ ಮಿತಿಗಿಂತ ಕಡಿಮೆ ಆದಾಯ ಹೊಂದಿರುವವರು.
ಹಳೆಯ ತೆರಿಗೆ ಪದ್ಧತಿಯಲ್ಲಿ ₹2.5 ಲಕ್ಷ.
ಹೊಸ ತೆರಿಗೆ ಪದ್ಧತಿಯಲ್ಲಿ ₹3 ಲಕ್ಷ.
2. ಕೃಷಿ ಆದಾಯ ಮಾತ್ರ ಹೊಂದಿರುವವರು.
3. ಅನಿವಾಸಿ ಭಾರತೀಯರು (NRIs),
ಬಡ್ಡಿ ಅಥವಾ ಲಾಭಾಂಶದಿಂದ ಮಾತ್ರ ಆದಾಯ ಇದ್ದು, ಅದು TDS (Tax Deducted at Source) ಗೆ ಒಳಪಟ್ಟಿದ್ದರೆ.
4. 75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು.
ಅವರ ಸಂಪೂರ್ಣ ಆದಾಯ ಪಿಂಚಣಿ ಮತ್ತು ಬ್ಯಾಂಕ್ ಬಡ್ಡಿಯಿಂದ ಬಂದಿದೆ, ಮತ್ತು TDS ಆಗಿರುತ್ತದೆ.
ಈ ಶಿಫಾರಸು ಸಂಸತ್ತಿನಲ್ಲಿ ಚರ್ಚೆಗೆ ಒಳಪಟ್ಟ ಬಳಿಕ ನಿರ್ಧಾರವಾಗಬೇಕಿದೆ. ಇದು ಅನುಮೋದನೆ ಪಡೆದರೆ, ಹಲವಾರು ಸಾಧಾರಣ ನಾಗರಿಕರು, ವಿಶೇಷವಾಗಿ ಕಡಿಮೆ ಆದಾಯ ಹೊಂದಿರುವವರು, ಐಟಿಆರ್ ಸಲ್ಲಿಕೆಯಲ್ಲಿ ಅನುಭವಿಸುತ್ತಿದ್ದ ಭ್ರಮೆ ಮತ್ತು ತೊಂದರೆಗಳಿಂದ (From illusions and troubles) ಮುಕ್ತರಾಗಬಹುದು. ಹೀಗಾಗಿ, ಸರ್ಕಾರದ ತೆರಿಗೆ ಸಂಗ್ರಹ ವ್ಯವಸ್ಥೆಯು ಹೆಚ್ಚು ಜನಮಿತ್ರವಾಗುವತ್ತ ಇದು ಒಂದು ಹೆಜ್ಜೆ ಎನ್ನಬಹುದು.
ಒಟ್ಟಾರೆಯಾಗಿ, ಆದಾಯ ತೆರಿಗೆ ಮಸೂದೆ (Income tax bill) 2025ರ ಪ್ರಸ್ತಾವಿತ ಬದಲಾವಣೆಯು, ದೇಶದ ಸಣ್ಣ ತೆರಿಗೆದಾರರಿಗೆ ಹಾಗೂ ಪಿಂಚಣಿದಾರರಿಗೆ ಸ್ಪಷ್ಟತೆ ಮತ್ತು ಸುಲಭವನ್ನು ತಂದೊಡ್ಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




