ಕರ್ನಾಟಕದ ಜಾತಿ ಗಣತಿ ವರದಿ
ಬೆಂಗಳೂರು: ಕರ್ನಾಟಕ ಸರ್ಕಾರದ ಜಾತಿ ಗಣತಿ ವರದಿ (ಸಾಮಾಜಿಕ-ಶೈಕ್ಷಣಿಕ-ಆರ್ಥಿಕ ಸಮೀಕ್ಷೆ) ಅಧಿಕೃತವಾಗಿ ಬಹಿರಂಗವಾಗಿದೆ. ಈ ವರದಿಯ ಪ್ರಕಾರ, ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ ಅತ್ಯಧಿಕವಾಗಿದ್ದು, ಅದು 72.25 ಲಕ್ಷ (18.7%) ಎಂದು ತಿಳಿದುಬಂದಿದೆ. ಇದು SC/ST, OBC, ಲಿಂಗಾಯಿತ ಮತ್ತು ಇತರೆ ಸಮುದಾಯಗಳಿಗಿಂತ ಹೆಚ್ಚಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಜಾತಿ ವಾರು ಜನಸಂಖ್ಯೆ ವಿವರ:
- ಮುಸ್ಲಿಮರು – 72.25 ಲಕ್ಷ (18.7%)
- ಲಿಂಗಾಯಿತರು – 66 ಲಕ್ಷ
- ವೀರಶೈವ ಲಿಂಗಾಯಿತರು – 10 ಲಕ್ಷ
- ಒಕ್ಕಲಿಗರು – 61 ಲಕ್ಷ
- ಪರಿಶಿಷ್ಟ ಜಾತಿ (SC) – 1.09 ಕೋಟಿ (101 ಜಾತಿಗಳು)
- ಪರಿಶಿಷ್ಟ ಪಂಗಡ (ST) – 42.81 ಲಕ್ಷ (49 ಜಾತಿಗಳು)
- ಕುರುಬರು – 44 ಲಕ್ಷ
- ಬಣಜಿಗರು – 10 ಲಕ್ಷ
- ಕ್ರಿಶ್ಚಿಯನ್ – 9 ಲಕ್ಷ
ಮುಸ್ಲಿಮರ ಜನಸಂಖ್ಯೆ ಹೆಚ್ಚಾಗಿರುವುದರಿಂದ ಮೀಸಲಾತಿ ಶಿಫಾರಸು
ಜಾತಿ ಗಣತಿ ಆಯೋಗವು 2B ಪ್ರವರ್ಗದ (OBC) ಮುಸ್ಲಿಮರಿಗೆ ನೀಡಲಾಗುವ 4% ಮೀಸಲಾತಿಯನ್ನು 8%ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿದೆ. ಇದಕ್ಕೆ ಕಾರಣ, ಅವರ ಜನಸಂಖ್ಯೆಯ ಪ್ರಮಾಣ ಹೆಚ್ಚಾಗಿರುವುದು.
ಪರಿಶಿಷ್ಟ ಜಾತಿ (SC) ಮತ್ತು ಪಂಗಡ (ST) ವಿವರ:
- SC ಜನಸಂಖ್ಯೆ 1.09 ಕೋಟಿ (18.27%) ಆದರೂ, 101 ಜಾತಿಗಳನ್ನು ಒಳಗೊಂಡಿರುವುದರಿಂದ ಒಂದೇ ಜಾತಿಯ ಮುಸ್ಲಿಮರಿಗಿಂತ ಕಡಿಮೆ.
- ST ಜನಸಂಖ್ಯೆ 42.81 ಲಕ್ಷ (49 ಜಾತಿಗಳು).
ಲಿಂಗಾಯಿತರು ಮತ್ತು ಒಕ್ಕಲಿಗರ ಸ್ಥಾನಮಾನ
- ಲಿಂಗಾಯಿತ ಸಮುದಾಯ (66 ಲಕ್ಷ) ಮತ್ತು ವೀರಶೈವ ಲಿಂಗಾಯಿತರು (10 ಲಕ್ಷ) ಎಂದು ವಿಂಗಡಿಸಲಾಗಿದೆ.
- 3B ಪ್ರವರ್ಗದಲ್ಲಿ (ಲಿಂಗಾಯಿತ + ಉಪಜಾತಿಗಳು) 81 ಲಕ್ಷ ಜನ.
- 2A ಪ್ರವರ್ಗದಲ್ಲಿ (ಕುರುಬರು, ಇತರೆ) 77.78 ಲಕ್ಷ.
- 3A ಪ್ರವರ್ಗದಲ್ಲಿ (ಒಕ್ಕಲಿಗ + ಉಪಜಾತಿಗಳು) 72.99 ಲಕ್ಷ.
ಅತ್ಯಂತ ಹಿಂದುಳಿದ ವರ್ಗಗಳ (AHV) ಹೊಸ ವರ್ಗೀಕರಣ
- 1A ಪ್ರವರ್ಗವನ್ನು 1A ಮತ್ತು 1B ಎಂದು ವಿಂಗಡಿಸಲಾಗಿದೆ.
- ಅಲೆಮಾರಿ ಸಮುದಾಯಗಳನ್ನು 1ರ ವ್ಯಾಪ್ತಿಗೆ ತರಲಾಗಿದೆ.
- 1A + 1B ಪ್ರವರ್ಗದ ಒಟ್ಟು ಜನಸಂಖ್ಯೆ – 1.07 ಕೋಟಿ.
ಈ ವರದಿಯು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ನೀತಿಗಳ ಮೇಲೆ ದೊಡ್ಡ ಪ್ರಭಾವ ಬೀರಬಹುದು. ಮುಸ್ಲಿಮರಿಗೆ ಮೀಸಲಾತಿ ಹೆಚ್ಚಳ, SC/ST/OBC ಹಕ್ಕುಗಳ ಪುನರ್ವಿಮರ್ಶೆ ಮತ್ತು ಲಿಂಗಾಯಿತ-ಒಕ್ಕಲಿಗರ ರಾಜಕೀಯ ಒತ್ತಡ ಮುಂತಾದ ವಿಷಯಗಳು ಮುಂದಿನ ದಿನಗಳಲ್ಲಿ ಚರ್ಚೆಯಾಗಲಿವೆ.
(ಮೂಲ: ಕರ್ನಾಟಕ ಸರ್ಕಾರದ ಜಾತಿ ಗಣತಿ ವರದಿ 2025)
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

“ಶಿವರಾಜ್ ಅವರು NeedsOfPublic.in ನಲ್ಲಿ ಸಾರ್ವಜನಿಕ, ಶೈಕ್ಷಣಿಕ ಮತ್ತು ಸ್ಥಳೀಯ ಸುದ್ದಿಗಳ ವಿಭಾಗದ ಹಿರಿಯ ಸಂಪಾದಕರಾಗಿದ್ದಾರೆ. ಪತ್ರಿಕೋದ್ಯಮದಲ್ಲಿ 6 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಇವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಕೀರ್ಣ ಯೋಜನೆಗಳನ್ನು ಹಾಗೂ ವಿದ್ಯಾರ್ಥಿವೇತನಗಳನ್ನು (Scholarships) ವಿಶ್ಲೇಷಿಸಿ, ಜನಸಾಮಾನ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಅದರ ಪ್ರಯೋಜನಗಳನ್ನು ಸುಲಭವಾಗಿ ಅರ್ಥೈಸುವಲ್ಲಿ ಎಕ್ಸ್ಪರ್ಟ್ ಆಗಿದ್ದಾರೆ. ಇದರ ಜೊತೆಗೆ ಪ್ರಮುಖ ಶೈಕ್ಷಣಿಕ ಅಪ್ಡೇಟ್ಗಳು, ಪರೀಕ್ಷಾ ಫಲಿತಾಂಶಗಳು ಮತ್ತು ವಿಶ್ವಾಸಾರ್ಹ ದೈನಂದಿನ ಹವಾಮಾನ ವರದಿಯನ್ನು ಒದಗಿಸುತ್ತಾರೆ. ವಿದ್ಯಾರ್ಥಿಗಳ ಭವಿಷ್ಯ ಮತ್ತು ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವುದು ಇವರ ಮುಖ್ಯ ಗುರಿಯಾಗಿದೆ.”


WhatsApp Group




