SC-ST ಅಭ್ಯರ್ಥಿಗಳಿಗೆ ಬಹುಮುಖ್ಯ ಅವಕಾಶ : ಪ್ರವಾಸೋದ್ಯಮ ಇಲಾಖೆಯಿಂದ ಮೊಬೈಲ್ ಕ್ಯಾಂಟೀನ್ ಆರಂಭಿಸಲು ರೂ.5 ಲಕ್ಷ ಸಹಾಯಧನ!
ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಪರಿಶಿಷ್ಟ ಜಾತಿ (Scheduled Caste) ಮತ್ತು ಪರಿಶಿಷ್ಟ ಪಂಗಡ (Scheduled Tribe) ಸಮುದಾಯದವರಿಗೆ ಉದ್ಯಮಶೀಲತೆಯ ಹೊಸ ಬಾಗಿಲು ತೆರೆಯುವ ಮಹತ್ವದ ಹೆಜ್ಜೆ ಹಾಕಿದೆ. ಸರ್ಕಾರದ ಎಸ್.ಸಿ.ಎಸ್.ಪಿ.(SCSP), ಟಿ.ಎಸ್.ಪಿ(TSP) ಯೋಜನೆಯಡಿ, ಮೊಬೈಲ್ ಕ್ಯಾಂಟೀನ್(Mobile Canteen) ಆರಂಭಿಸಲು ಇಚ್ಛಿಸುವವರಿಗೆ ರೂ.5 ಲಕ್ಷಗಳವರೆಗೆ ಸಹಾಯಧನ(Subsidy)ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಯೋಜನೆಯ ವಿಶೇಷತೆ ಏನು?
ಈ ಯೋಜನೆಯು ಆರ್ಥಿಕವಾಗಿ ಹಿಂದೇಟುಬಿದ್ದ SC ಮತ್ತು ST ಸಮಾಜದ ಯುವಕರು ಮತ್ತು ಯುವತಿಯರಿಗೆ ಉದ್ಯಮಶೀಲತೆಯ ಅಂಗಳ ತಲುಪಲು ಸಹಾಯ ಮಾಡುವ ಉದ್ದೇಶ ಹೊಂದಿದೆ. ಈ ಪ್ರಯತ್ನದ ಮೂಲಕ ಮೊಬೈಲ್ ಕ್ಯಾಂಟೀನ್ (Mobile Canteen) ಎಂಬ ಹೊಸ ಆದಾಯದ ಮಾರ್ಗವನ್ನು ತೆರೆಯಲಾಗಿದೆ.
ಅರ್ಹತೆಗಳು ಮತ್ತು ಮುಖ್ಯ ಅಂಶಗಳು(Qualifications and key points):
ಉದ್ಯಮಶೀಲತಾ ತರಬೇತಿ ಕಡ್ಡಾಯ: ಮೊಬೈಲ್ ಕ್ಯಾಂಟೀನ್ ಯೋಜನೆಯ ಲಾಭ ಪಡೆಯಲು ಅಭ್ಯರ್ಥಿಗಳು ಒಂದು ತಿಂಗಳ Enterprenuership ಕುರಿತ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಪೂರ್ಣಗೊಳಿಸಿ ಪ್ರಮಾಣಪತ್ರ ಪಡೆದುಕೊಂಡಿರಬೇಕು.
ಘಟಕ ವೆಚ್ಚದ ಶೇಕಡಾ 70 ರಷ್ಟು ಸಹಾಯಧನ: ಸರ್ಕಾರ ಘಟಕ ವೆಚ್ಚದ ಶೇಕಡಾ 70 ರಷ್ಟು, ಗರಿಷ್ಠ ರೂ.5.00 ಲಕ್ಷಗಳವರೆಗೆ ಅನುದಾನ ನೀಡಲಿದೆ. ಇದರಿಂದ ವಾಣಿಜ್ಯ ಉದ್ದೇಶದ ಮಾದರಿಯಲ್ಲಿ ಮೊಬೈಲ್ ಕ್ಯಾಂಟೀನ್ ಆರಂಭಿಸಬಹುದು.
ಅರ್ಜಿ ಸಲ್ಲಿಕೆಯ ಮಾಹಿತಿ(Application submission information):
ಅರ್ಜಿಗಳನ್ನು ಪ್ರವಾಸೋದ್ಯಮ ಇಲಾಖೆಯ ಕಚೇರಿಯಿಂದ ಪಡೆಯಬಹುದು.
ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಸಂಯೋಜಿಸಿ, ಎಪ್ರಿಲ್ 15, 2025 ರೊಳಗಾಗಿ
ಧಾರವಾಡದ ರಂಗಾಯಣ ಆವರಣದಲ್ಲಿರುವ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ದ್ವಿಪ್ರತಿಯಲ್ಲಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 0836-2955522
ಒಟ್ಟಾರೆ, ಈ ಯೋಜನೆ, ಕೇವಲ ಅನುದಾನ ನೀಡುವುದಲ್ಲ, ಬದಲಿಗೆ ಯುವಜನರಿಗೆ(Youths) ಅವರ ಕನಸುಗಳನ್ನು ಸಾಕಾರಗೊಳಿಸಲು ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ. ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗಾಗಿ ಒದಗಿಸಲಾದ ಈ ವಿಶಿಷ್ಟ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಮೊಬೈಲ್ ಕ್ಯಾಂಟೀನ್ ಉದ್ಯಮದ ಮೂಲಕ ತಮ್ಮದೇ ಆದ ಸ್ವಂತ ಉದ್ಯಮವನ್ನು ಆರಂಭಿಸಿ, ಆತ್ಮನಿರ್ಭರತೆಯತ್ತ ದಿಟ್ಟ ಹೆಜ್ಜೆ ಇಡಬಹುದು.
ಸ್ವಪ್ನಗಳನ್ನು ವ್ಯವಹಾರವನ್ನಾಗಿ ಪರಿವರ್ತಿಸಲು – ಈಗಲೇ ಈ ಸುವರ್ಣಾವಕಾಶವನ್ನು ಬಳಸಿ!
ಅರ್ಜಿಸಿ, ತರಬೇತಿ ಪಡೆದು, ನಿಮ್ಮ ಮೊಬೈಲ್ ಕ್ಯಾಂಟೀನ್ ಆರಂಭಿಸಿ – ಹೊಸ ಬದುಕಿಗೆ ಹೆಜ್ಜೆ ಇಡಿ!
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




