ಕರ್ನಾಟಕದಲ್ಲಿ ಕಳೆದ 3 ತಿಂಗಳಿಂದ 16 ಲಕ್ಷ ಫಲಾನುಭವಿಗಳ ವೃದ್ಧಾಪ್ಯ, ವಿಧವಾ ಮತ್ತು ಸಂಧ್ಯಾ ಸುರಕ್ಷಾ ಪಿಂಚಣಿ ಸ್ಥಗಿತಗೊಂಡಿದೆ. ಪಿಂಚಣಿ ರದ್ದಾಗಲು ಪ್ರಮುಖ ಕಾರಣಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ…
- *ಬಿಗ್ ಶಾಕ್: 16 ಲಕ್ಷ ಜನರ ಪಿಂಚಣಿ ದಿಢೀರ್ ಸ್ಥಗಿತ.
- *ಉಳಿತಾಯ: ಪಿಂಚಣಿ ರದ್ದತಿಯಿಂದ ಸರ್ಕಾರಕ್ಕೆ 150 ಕೋಟಿ ಉಳಿತಾಯ.
- *ಕಾರಣ: ದಾಖಲೆ ಕೊರತೆ, ಆದಾಯ ಪ್ರಮಾಣಪತ್ರ ಸಲ್ಲಿಸದ ಕಾರಣ ರದ್ದು.
16 ಲಕ್ಷ ಜನರ ಪಿಂಚಣಿ ದಿಢೀರ್ ಸ್ಥಗಿತ: ವೃದ್ಧಾಪ್ಯ, ವಿಧವಾ ವೇತನ ರದ್ದಾಗಲು ಕಾರಣಗಳೇನು?
16 ಲಕ್ಷ ಜನರ ಪಿಂಚಣಿ ದಿಢೀರ್ ಸ್ಥಗಿತ: ವೃದ್ಧಾಪ್ಯ, ವಿಧವಾ ವೇತನ ರದ್ದಾಗಲು ಕಾರಣಗಳೇನು?
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳನ್ನು ಪರಿಷ್ಕರಣೆ ಮಾಡಲು ಮುಂದಾಗಿರುವ ಬೆನ್ನಲ್ಲೇ, ಇದೀಗ ಪಿಂಚಣಿದಾರರಿಗೆ (Pensioners) ದೊಡ್ಡ ಆಘಾತವೊಂದು ಎದುರಾಗಿದೆ. ಕಳೆದ ಮೂರು ತಿಂಗಳಿಂದ ರಾಜ್ಯದ ಬರೋಬ್ಬರಿ 16 ಲಕ್ಷ ಜನರಿಗೆ ಪಿಂಚಣಿ ಹಣ ತಲುಪಿಲ್ಲ ಎಂಬ ಶಾಕಿಂಗ್ ಮಾಹಿತಿ ಹೊರಬಿದ್ದಿದೆ.
ಮನೆ ಖರ್ಚಿಗೆ, ಔಷಧಿ ಖರೀದಿಗೆ ಆರ್ಥಿಕ ನೆರವಾಗಿದ್ದ ಪಿಂಚಣಿ ಹಣ ದಿಢೀರ್ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ವಯಸ್ಸಾದ ವೃದ್ಧರು, ವಿಧವೆಯರು ಹಾಗೂ ಅಂಗವಿಕಲರು ಕಚೇರಿಯಿಂದ ಕಚೇರಿಗೆ ಅಲೆಯುವಂತಾಗಿದೆ.
ಯಾರ ಪಿಂಚಣಿ ರದ್ದಾಗಿದೆ?
ರಾಜ್ಯದಲ್ಲಿ ಒಟ್ಟು 82.71 ಲಕ್ಷ ಪಿಂಚಣಿ ಫಲಾನುಭವಿಗಳಿದ್ದಾರೆ. ಈ ಪೈಕಿ ಕಂದಾಯ ಇಲಾಖೆಯು ಪರಿಶೀಲನೆ ನಡೆಸಿ ಬರೋಬ್ಬರಿ 16 ಲಕ್ಷ ಜನರನ್ನ ಪಿಂಚಣಿ ಯೋಜನೆಯಿಂದಲೇ ಕೈಬಿಟ್ಟಿದೆ. ವೃದ್ಧಾಪ್ಯ ವೇತನ (Old Age Pension), ವಿಧವಾ ಪಿಂಚಣಿ, ಸಂಧ್ಯಾ ಸುರಕ್ಷಾ ಹಾಗೂ ಅಂಗವಿಕಲರಿಗೆ ನೀಡುತ್ತಿದ್ದ ಪಿಂಚಣಿ ಯೋಜನೆಗೂ ಸರ್ಕಾರ ಈಗ ಸರ್ಜರಿ ಮಾಡಿದೆ.
ಪಿಂಚಣಿ ಸ್ಥಗಿತದಿಂದ ಸರ್ಕಾರಕ್ಕೆ 150 ಕೋಟಿ ಉಳಿತಾಯ!
ಪ್ರತಿ ತಿಂಗಳು ಸರ್ಕಾರವು 82 ಲಕ್ಷಕ್ಕೂ ಹೆಚ್ಚು ಜನರಿಗೆ ಪಿಂಚಣಿಗಾಗಿಯೇ 400 ಕೋಟಿ ರೂ. ಖರ್ಚು ಮಾಡುತ್ತಿದೆ. ಆದರೆ, ಇದೀಗ ದಾಖಲೆಗಳ ಕೊರತೆ ಹಾಗೂ ಅನರ್ಹತೆಯ ನೆಪವೊಡ್ಡಿ 16 ಲಕ್ಷ ಜನರಿಗೆ ಕೊಕ್ ನೀಡಲಾಗಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಪ್ರತಿ ತಿಂಗಳು ಸುಮಾರು 150 ಕೋಟಿ ರೂ. ಉಳಿತಾಯವಾಗಲಿದೆ ಎನ್ನುವ ಆರೋಪಗಳು ಕೇಳಿಬಂದಿವೆ.
ಪಿಂಚಣಿ ದಿಢೀರ್ ಸ್ಥಗಿತಗೊಳ್ಳಲು ಅಸಲಿ ಕಾರಣವೇನು?
ಪಿಂಚಣಿ ರದ್ದಾಗಲು ಸರ್ಕಾರ ಪ್ರಮುಖವಾಗಿ ಈ 3 ಕಾರಣಗಳನ್ನು ನೀಡಿದೆ. ಬಾಧಿತರಾದವರ ನಿಖರ ಅಂಕಿ-ಅಂಶ ಇಲ್ಲಿದೆ:
| ಕ್ರ.ಸಂ | ಪಿಂಚಣಿ ಸ್ಥಗಿತಕ್ಕೆ ನೀಡಲಾದ ಪ್ರಮುಖ ಕಾರಣಗಳು | ಬಾಧಿತರಾದವರ ಸಂಖ್ಯೆ |
|---|---|---|
| 1 | ಪರಿಶೀಲನೆ ವೇಳೆ ಸೂಕ್ತ ದಾಖಲೆಗಳನ್ನು ನೀಡದ ಕಾರಣ | 13,23,932 ಜನ |
| 2 | ಪಿಂಚಣಿಗೆ ಅರ್ಜಿ ಸಲ್ಲಿಸುವಾಗ ನೀಡಿದ್ದ ವಿಳಾಸದಲ್ಲಿ ವಾಸವಿಲ್ಲದ ಕಾರಣ | 2,21,000 ಜನ |
| 3 | ನವೀಕರಿಸಿದ ಆದಾಯ ಪ್ರಮಾಣ ಪತ್ರ (Income Certificate) ಸಲ್ಲಿಸದ ಕಾರಣ | 45,853 ಜನ |
ಪಿಂಚಣಿದಾರರು ಈಗೇನು ಮಾಡಬೇಕು?
ನಿಮ್ಮ ಅಥವಾ ನಿಮ್ಮ ಮನೆಯ ಹಿರಿಯರ ಪಿಂಚಣಿ ಹಣ ಸ್ಥಗಿತಗೊಂಡಿದ್ದರೆ, ತಕ್ಷಣವೇ ನಿಮ್ಮ ಹತ್ತಿರದ ನಾಡಕಚೇರಿ ಅಥವಾ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ. ಅಲ್ಲಿ ನಿಮ್ಮ ಪ್ರಸ್ತುತ ವಿಳಾಸದ ದೃಢೀಕರಣ, ಹೊಸ ಆದಾಯ ಪ್ರಮಾಣಪತ್ರ ಹಾಗೂ ಆಧಾರ್-ಬ್ಯಾಂಕ್ ಕೆವೈಸಿ (KYC) ದಾಖಲೆಗಳನ್ನು ಮರು-ಸಲ್ಲಿಸುವ ಮೂಲಕ ಸ್ಥಗಿತಗೊಂಡಿರುವ ಪಿಂಚಣಿಯನ್ನು ಮತ್ತೆ ಆರಂಭಿಸಲು ಮನವಿ ಮಾಡಬಹುದು.
ವರದಿ: ಸನತ್ ದೇಸಾಯಿ, ನೀಡ್ಸ್ ಆಫ್ ಪಬ್ಲಿಕ್ – ಬೆಂಗಳೂರು
ಇದೇ ರೀತಿಯ ನಿಖರ ಸುದ್ದಿಗಳಿಗೆ ನಮ್ಮ ನೀಡ್ಸ್ ಪಬ್ಲಿಕ್ ಆಪ್ ಡೌನ್ಲೋಡ್ App ಮಾಡಿ
ಈ ಮಾಹಿತಿಗಳನ್ನು ಓದಿ:

ಸನತ್ ದೇಸಾಯಿ ಅವರು ನಮ್ಮ ಜಾಲತಾಣದ ಬೆಂಗಳೂರು ವಿಭಾಗದ ವರದಿಗಾರರಾಗಿದ್ದಾರೆ. ಇವರು ಬಿಐಇಟಿ (BIET) ಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ (B.E) ಹಾಗೂ ಕೆಎಸ್ಒಯು (KSOU) ನಿಂದ ಎಂ.ಎ (ಪತ್ರಿಕೋದ್ಯಮ) ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಳೆದ 7 ವರ್ಷಗಳಿಂದ ಫೀಲ್ಡ್ ಜರ್ನಲಿಸಂನಲ್ಲಿ ಸೇವೆ ಸಲ್ಲಿಸುತ್ತಿರುವ ಇವರು, ಈ ಹಿಂದೆ ‘ಈಟಿವಿ ಭಾರತ್’ (ETV Bharat) ನಲ್ಲಿ ಅಪರಾಧ, ರಾಜಕೀಯ, ವಿಜ್ಞಾನ-ತಂತ್ರಜ್ಞಾನ ಮತ್ತು ಸಿನಿಮಾ ವಿಭಾಗಗಳಲ್ಲಿ ವ್ಯಾಪಕ ವರದಿಗಾರಿಕೆ ಮಾಡಿದ ಅನುಭವ ಹೊಂದಿದ್ದಾರೆ. ಪ್ರಸ್ತುತ ನೃಪತುಂಗ ವಿಶ್ವವಿದ್ಯಾಲಯದಲ್ಲಿ ಕುಲಪತಿಗಳ ಆಪ್ತ ಕಾರ್ಯದರ್ಶಿ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ (PRO) ಕೂಡ ಸೇವೆ ಸಲ್ಲಿಸುತ್ತಿದ್ದಾರೆ.


WhatsApp Group




Leave a Reply