ರೈತರ ಗಮನಕ್ಕೆ ಪ್ರಮುಖ ಮಾಹಿತಿಗಳು:
- ಯಾವುದೇ ಅರ್ಜಿ ಶುಲ್ಕವಿಲ್ಲದೆ ಪೌತಿ ಖಾತೆ ಮಾಡಿಸಿಕೊಳ್ಳಿ.
- ಮರಣ ಪ್ರಮಾಣಪತ್ರ ಇಲ್ಲದಿದ್ದರೂ ಅರ್ಜಿ ಸಲ್ಲಿಸಲು ಅವಕಾಶ.
- ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಪಹಣಿಯಲ್ಲಿ ಹೆಸರು ದಾಖಲು.
ತಂದೆ ಅಥವಾ ಮನೆಯ ಹಿರಿಯರು ತೀರಿಕೊಂಡ ಮೇಲೆ ಅವರ ಹೆಸರಿರೋ ಜಮೀನನ್ನು ವಾರಸುದಾರರ ಹೆಸರಿಗೆ ಬದಲಾಯಿಸುವುದು (ಪೌತಿ ಖಾತೆ) ಅಷ್ಟು ಸುಲಭದ ಮಾತಾಗಿರಲಿಲ್ಲ. ಮರಣ ಪ್ರಮಾಣಪತ್ರಕ್ಕಾಗಿ ಅಲೆಯುವುದು, ಕಚೇರಿಗಳಿಗೆ ಎಡತಾಕುವುದು ರೈತರಿಗೆ ದೊಡ್ಡ ತಲೆನೋವಾಗಿತ್ತು. ಆದರೆ ಈಗ ಕರ್ನಾಟಕ ಸರ್ಕಾರ ಈ ಎಲ್ಲಾ ತೊಂದರೆಗಳಿಗೆ ಮುಕ್ತಿ ಹಾಡಿದೆ. ಮರಣ ಪ್ರಮಾಣಪತ್ರ ಇಲ್ಲದಿದ್ದರೂ ಜಮೀನು ನಿಮ್ಮ ಹೆಸರಿಗೆ ಮಾಡಿಸಿಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಏನಿದು ಹೊಸ ನಿಯಮ?
ಕಂದಾಯ ಇಲಾಖೆಯು ಪೌತಿ ವಾರಸಾ ಖಾತೆ ಬದಲಾವಣೆ ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸಿದೆ. ಇನ್ನು ಮುಂದೆ ರೈತರು ಮಧ್ಯವರ್ತಿಗಳ ಮೊರೆ ಹೋಗುವ ಅಗತ್ಯವಿಲ್ಲ.
ಪ್ರಮುಖ ಬದಲಾವಣೆಗಳು
- ದಾಖಲೆಗಳ ಸಡಿಲಿಕೆ: ಒಂದು ವೇಳೆ ಮರಣ ಪ್ರಮಾಣಪತ್ರ ಸಿಗದಿದ್ದರೆ ಗಾಬರಿ ಬೇಡ. ಸ್ಥಳೀಯ ತನಿಖೆ, ಮಹಜರ್ ಮತ್ತು ವಾರಸುದಾರರ ಅಫಿಡವಿಟ್ (ಪಮಾಣ ಪತ್ರ) ನೀಡುವ ಮೂಲಕ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಬಹುದು.
- ಶುಲ್ಕ ಮನ್ನಾ: ಈ ಮೊದಲು ಇ-ಪೌತಿ ಮಾಡಲು 35 ರೂಪಾಯಿ ಶುಲ್ಕ ಇತ್ತು. ಈಗ ಆ ಶುಲ್ಕವನ್ನು ಸರ್ಕಾರ ಸಂಪೂರ್ಣವಾಗಿ ರದ್ದು ಮಾಡಿದೆ.
- ಮನೆ ಬಾಗಿಲಿಗೆ ಸೇವೆ: ನಿಮ್ಮ ಗ್ರಾಮದ ಆಡಳಿತಾಧಿಕಾರಿಗಳೇ (VA) ಆಧಾರ್ ಸೀಡಿಂಗ್ ಸಮಯದಲ್ಲಿ ಮೃತರ ವಿವರ ಪತ್ತೆ ಹಚ್ಚಿ, ಇ-ಪೌತಿ ತಂತ್ರಾಂಶದಲ್ಲಿ ಮಾಹಿತಿ ಅಪ್ಲೋಡ್ ಮಾಡಲಿದ್ದಾರೆ.
- ತ್ವರಿತ ವಿಲೇವಾರಿ: ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಯಾವುದೇ ಆಕ್ಷೇಪಣೆ ಬಾರದಿದ್ದರೆ, ತಕ್ಷಣವೇ ‘ಭೂಮಿ’ ತಂತ್ರಾಂಶದ ಮೂಲಕ ಪಹಣಿಯಲ್ಲಿ ನಿಮ್ಮ ಹೆಸರು ದಾಖಲಾಗುತ್ತದೆ.
ಪೌತಿ ಖಾತೆ ಪ್ರಕ್ರಿಯೆ
| ವಿವರ | ಮಾಹಿತಿ |
| ಅರ್ಜಿ ಶುಲ್ಕ | ಉಚಿತ (0 ರೂಪಾಯಿ) |
| ಅಗತ್ಯ ದಾಖಲೆ | ವಂಶವೃಕ್ಷ, ಅಫಿಡವಿಟ್ ಅಥವಾ ಮರಣ ಪ್ರಮಾಣಪತ್ರ |
| ಸಮಯ ಮಿತಿ | 15 ದಿನಗಳ ನೋಟಿಸ್ ಅವಧಿಯ ನಂತರ ವಿಲೇವಾರಿ |
| ಎಲ್ಲಿ ಮಾಡಿಸಬಹುದು? | ಇ-ಪೌತಿ ತಂತ್ರಾಂಶ ಅಥವಾ ಗ್ರಾಮ ಆಡಳಿತಾಧಿಕಾರಿಗಳ ಮೂಲಕ |
ಮುಖ್ಯ ಸೂಚನೆ: ನಿಮ್ಮ ಜಮೀನಿನ ಪಹಣಿಯಲ್ಲಿ ವಾರಸುದಾರರ ಹೆಸರು ಜಂಟಿಯಾಗಿ ಕಾಲಂ 9ರಲ್ಲಿ ದಾಖಲಾಗುತ್ತದೆ, ಇದರಿಂದ ಮುಂದಿನ ದಿನಗಳಲ್ಲಿ ಬೆಳೆ ಸಾಲ ಅಥವಾ ಪಿಎಂ ಕಿಸಾನ್ ಹಣ ಪಡೆಯಲು ಅನುಕೂಲವಾಗುತ್ತದೆ.




ನಮ್ಮ ಸಲಹೆ
ಒಂದು ವೇಳೆ ನಿಮ್ಮ ಬಳಿ ಮರಣ ಪ್ರಮಾಣಪತ್ರ ಇಲ್ಲದಿದ್ದರೆ, ಪಂಚಾಯತ್ ಅಥವಾ ಸ್ಥಳೀಯ ಸಂಸ್ಥೆಯಿಂದ ‘ಮರಣ ದೃಢೀಕರಣ’ ಪಡೆದು, ನೋಟರಿ ಸಮಕ್ಷಮ ವಂಶವೃಕ್ಷದ ವಿವರ ನೀಡಿ. ಇದು ನಿಮ್ಮ ಕೆಲಸವನ್ನು ಬಹಳ ವೇಗವಾಗಿ ಮುಗಿಸಲು ಸಹಾಯ ಮಾಡುತ್ತದೆ. ಹಾಗೆಯೇ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗಿದೆಯೇ ಎಂದು ಒಮ್ಮೆ ಪರಿಶೀಲಿಸಿಕೊಳ್ಳಿ.
🚨 ಯಾವುದೇ ಬ್ರೇಕಿಂಗ್ ನ್ಯೂಸ್ ಮಿಸ್ ಮಾಡ್ಕೋಬೇಡಿ!
ಸರ್ಕಾರಿ ಯೋಜನೆಗಳು, ಉದ್ಯೋಗ ಮಾಹಿತಿ ಹಾಗೂ ದಿನನಿತ್ಯದ ಪ್ರಮುಖ ಸುದ್ದಿಗಳನ್ನು ನೇರವಾಗಿ ನಿಮ್ಮ ಮೊಬೈಲ್ನಲ್ಲೇ ಉಚಿತವಾಗಿ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ.
FAQs
ಪ್ರಶ್ನೆ 1: ಪೌತಿ ಖಾತೆ ವಿಳಂಬವಾದರೆ ಏನಾಗುತ್ತದೆ?
ಉತ್ತರ: ಖಾತೆ ಬದಲಾವಣೆ ವಿಳಂಬವಾದರೆ ರೈತರಿಗೆ ಬೆಳೆ ಸಾಲ ಪಡೆಯಲು, ಬೆಳೆ ವಿಮೆ ಪರಿಹಾರ ಪಡೆಯಲು ಅಥವಾ ಸರ್ಕಾರದ ಯಾವುದೇ ಸಬ್ಸಿಡಿ ಪಡೆಯಲು ಸಾಧ್ಯವಾಗುವುದಿಲ್ಲ.
ಪ್ರಶ್ನೆ 2: ವಂಶವೃಕ್ಷ ಎಲ್ಲಿ ಸಿಗುತ್ತದೆ?
ಉತ್ತರ: ಅಟಲ್ ಜೀ ಜನಸ್ನೇಹಿ ಕೇಂದ್ರದ ಮೂಲಕ ಪಡೆಯಬಹುದು. ಅಲ್ಲಿ ಲಭ್ಯವಿಲ್ಲದಿದ್ದರೆ ನೋಟರಿ ಸಮಕ್ಷಮ ಸಹಿ ಮಾಡಿ ಮನವಿ ಸಲ್ಲಿಸಲು ಈಗ ಅವಕಾಶ ನೀಡಲಾಗಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Rakshit With over 4 years of dedicated experience in journalism, Rakshit is a seasoned writer known for his accurate and timely reporting. He specializes in breaking down complex government schemes, local news, and current affairs for the common reader. His commitment to fact-checking ensures readers get only the most reliable information.


WhatsApp Group




