ಆಶಾದೀಪ ಯೋಜನೆ: ಮುಖ್ಯಾಂಶಗಳು
- ಅಪ್ರೆಂಟಿಸ್ಗಳಿಗೆ: ಮಾಸಿಕ ₹5,000 ವರೆಗೆ ಶಿಷ್ಯವೇತನ (Stipend) ಸಹಾಯಧನ.
- ಮಾಲೀಕರಿಗೆ ಲಾಭ: ಇಎಸ್ಐ (ESI) ಮತ್ತು ಇಪಿಎಫ್ (EPF) ವಂತಿಕೆಯನ್ನು ಸರ್ಕಾರವೇ ಭರಿಸಲಿದೆ (₹3,000 ವರೆಗೆ).
- ಖಾಯಂ ಉದ್ಯೋಗ: ಅಪ್ರೆಂಟಿಸ್ ನಂತರ ಖಾಯಂ ಆದರೆ ಮಾಲೀಕರಿಗೆ ₹7,000 ವರೆಗೆ ವೇತನ ಮರುಪಾವತಿ.
- ಅರ್ಜಿ ಎಲ್ಲಿ?: ashadeepayojane.karnataka.gov.in
ಬೆಂಗಳೂರು: ರಾಜ್ಯದ ನಿರುದ್ಯೋಗಿ ಯುವಜನತೆಗೆ, ಅದ್ರಲ್ಲೂ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ಅಭ್ಯರ್ಥಿಗಳಿಗೆ ಕರ್ನಾಟಕ ಸರ್ಕಾರ ಸಿಹಿ ಸುದ್ದಿ ನೀಡಿದೆ. ಖಾಸಗಿ ವಲಯದಲ್ಲಿ ಉದ್ಯೋಗ ಪಡೆಯಲು ಮತ್ತು ಆರ್ಥಿಕವಾಗಿ ಸದೃಢರಾಗಲು ‘ಆಶಾದೀಪ ಯೋಜನೆ’ (Ashadeepa Yojane) ಜಾರಿಗೆ ತಂದಿದೆ.
ಉದ್ಯೋಗ ಹುಡುಕುತ್ತಿರುವ ಯುವಕರಿಗೆ ಮತ್ತು ಉದ್ಯೋಗ ನೀಡುವ ಮಾಲೀಕರಿಗೆ ಇಬ್ಬರಿಗೂ ಲಾಭವಾಗುವಂತಹ ಯೋಜನೆ ಇದಾಗಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ.
ಯಾರಿಗೆ ಎಷ್ಟು ಲಾಭ? (Benefits Explained)
ಈ ಯೋಜನೆಯಡಿ ಪ್ರಮುಖವಾಗಿ 3 ಹಂತಗಳಲ್ಲಿ ಹಣಕಾಸಿನ ನೆರವು ಸಿಗಲಿದೆ:
- ಅಪ್ರೆಂಟಿಸ್ಗಳಿಗೆ (Apprentices): ಎಸ್ಸಿ/ಎಸ್ಟಿ ಅಭ್ಯರ್ಥಿಗಳು ಖಾಸಗಿ ಕಂಪನಿಯಲ್ಲಿ ಅಪ್ರೆಂಟಿಸ್ ತರಬೇತಿ ಪಡೆಯುತ್ತಿದ್ದರೆ, ಅವರಿಗೆ ನೀಡುವ ಶಿಷ್ಯವೇತನದಲ್ಲಿ ₹5,000 ವರೆಗಿನ ಮೊತ್ತವನ್ನು (2/3 ಭಾಗ) ಸರ್ಕಾರ ಭರಿಸುತ್ತದೆ. ಇದು 1 ಅಥವಾ 2 ವರ್ಷಗಳವರೆಗೆ ಸಿಗಲಿದೆ.
- ESI & PF ಫ್ರೀ: ಹೊಸದಾಗಿ ನೇಮಕವಾದ ಎಸ್ಸಿ/ಎಸ್ಟಿ ನೌಕರರ ಪರವಾಗಿ ಕಂಪನಿ ಕಟ್ಟಬೇಕಾದ ESI ಮತ್ತು EPF ಹಣವನ್ನು (ಗರಿಷ್ಠ ₹3,000) ಸರ್ಕಾರವೇ ಮರುಪಾವತಿ ಮಾಡುತ್ತದೆ. ಇದರಿಂದ ಮಾಲೀಕರಿಗೆ ಹೊರೆ ತಪ್ಪಲಿದೆ, ಯುವಕರಿಗೆ ಕೆಲಸ ಸಿಗುವುದು ಸುಲಭವಾಗಲಿದೆ.
- ವೇತನ ಸಹಾಯಧನ: ಅಪ್ರೆಂಟಿಸ್ ಮುಗಿಸಿದ ಅಭ್ಯರ್ಥಿಯನ್ನು ಅದೇ ಕಂಪನಿ ಖಾಯಂ (Permanent) ಮಾಡಿಕೊಂಡರೆ, ಮಾಲೀಕರಿಗೆ ಪ್ರತಿ ತಿಂಗಳು ₹7,000 ವರೆಗೆ ವೇತನ ಸಹಾಯಧನ ಸಿಗಲಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಉದ್ಯೋಗದಾತರು ಮತ್ತು ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸಿ:
- ವೆಬ್ಸೈಟ್:
ashadeepayojane.karnataka.gov.inಗೆ ಭೇಟಿ ನೀಡಿ. - ಆಯ್ಕೆ: ಮುಖಪುಟದಲ್ಲಿ “Ashadeepa Scheme” ಆಯ್ಕೆ ಮೇಲೆ ಕ್ಲಿಕ್ ಮಾಡಿ “Apply” ಕೊಡಿ.
- ವಿವರ: ಸಂಸ್ಥೆಯ ಹೆಸರು, ಎಂಡಿ ಹೆಸರು ಇತ್ಯಾದಿ ವಿವರ ಭರ್ತಿ ಮಾಡಿ.
- ದಾಖಲೆ: ಅಭ್ಯರ್ಥಿಯ ಆಧಾರ್, ಜಾತಿ ಪ್ರಮಾಣ ಪತ್ರ (SC/ST Caste Certificate), ನೇಮಕಾತಿ ಪತ್ರವನ್ನು ಅಪ್ಲೋಡ್ ಮಾಡಿ.
(Official Website: ashadeepayojane.karnataka.gov.in)
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

“ಶಿವರಾಜ್ ಅವರು NeedsOfPublic.in ನಲ್ಲಿ ಸಾರ್ವಜನಿಕ, ಶೈಕ್ಷಣಿಕ ಮತ್ತು ಸ್ಥಳೀಯ ಸುದ್ದಿಗಳ ವಿಭಾಗದ ಹಿರಿಯ ಸಂಪಾದಕರಾಗಿದ್ದಾರೆ. ಪತ್ರಿಕೋದ್ಯಮದಲ್ಲಿ 6 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಇವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಕೀರ್ಣ ಯೋಜನೆಗಳನ್ನು ಹಾಗೂ ವಿದ್ಯಾರ್ಥಿವೇತನಗಳನ್ನು (Scholarships) ವಿಶ್ಲೇಷಿಸಿ, ಜನಸಾಮಾನ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಅದರ ಪ್ರಯೋಜನಗಳನ್ನು ಸುಲಭವಾಗಿ ಅರ್ಥೈಸುವಲ್ಲಿ ಎಕ್ಸ್ಪರ್ಟ್ ಆಗಿದ್ದಾರೆ. ಇದರ ಜೊತೆಗೆ ಪ್ರಮುಖ ಶೈಕ್ಷಣಿಕ ಅಪ್ಡೇಟ್ಗಳು, ಪರೀಕ್ಷಾ ಫಲಿತಾಂಶಗಳು ಮತ್ತು ವಿಶ್ವಾಸಾರ್ಹ ದೈನಂದಿನ ಹವಾಮಾನ ವರದಿಯನ್ನು ಒದಗಿಸುತ್ತಾರೆ. ವಿದ್ಯಾರ್ಥಿಗಳ ಭವಿಷ್ಯ ಮತ್ತು ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವುದು ಇವರ ಮುಖ್ಯ ಗುರಿಯಾಗಿದೆ.”


WhatsApp Group




