- 1979ರ ನಂತರದ ಎಸ್ಸಿ-ಎಸ್ಟಿ ಜಮೀನು ಪರಭಾರೆಗೆ ಸರ್ಕಾರದ ಅನುಮತಿ ಕಡ್ಡಾಯ.
- ನಿಯಮ ಮೀರಿ ಮಾರಾಟವಾದ ಜಮೀನನ್ನು ವಾಪಸ್ ಪಡೆಯಲು ಅವಕಾಶವಿದೆ.
- ಜಮೀನು ಮಾರಾಟಕ್ಕೆ 15 ವರ್ಷಗಳ ಸಾಗುವಳಿ ಮತ್ತು ಅನುಮತಿ ಅಗತ್ಯ.
ಬೆಂಗಳೂರು: ರಾಜ್ಯದಲ್ಲಿ ಶೋಷಿತ ಸಮುದಾಯಗಳ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ಅತ್ಯಂತ ಪ್ರಮುಖ ಕಾನೂನು ಎಂದರೆ ‘ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ (ಕೆಲವು ಭೂಮಿಗಳ ಪರಭಾರೆ ನಿಷೇಧ) ಕಾಯ್ದೆ’. ಈ ಕಾಯ್ದೆಯು ಸಾಮಾನ್ಯ ಜನರಿಗೆ ಅಷ್ಟಾಗಿ ತಿಳಿದಿಲ್ಲದಿದ್ದರೂ, ಮಂಜೂರಾದ ಭೂಮಿಯ ರಕ್ಷಣೆಯಲ್ಲಿ ಇದು ನಿರ್ಣಾಯಕ ಪಾತ್ರ ವಹಿಸುತ್ತದೆ.
ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ಹೀಗಿದೆ
ದಿನಾಂಕ:1-1-1979 ರಿಂದ ಈ ಕಾಯ್ದೆ ಜ್ಯಾರಿಯಲ್ಲಿ ಬಂದಿದ್ದು, ಈ ಕಾಯ್ದೆ ಜ್ಯಾರಿಯಲ್ಲಿ ಬರುವ ಮೊದಲು ಹಾಗೂ ನಂತರ ಮಂಜೂರಾದ ಜಮೀನು ಪರಭಾರೆ ಮಾಡುವಂತಿಲ್ಲ.
ಒಂದು ವೇಳೆ ಜಮೀನು ಪರಭಾರೆ ಮಾಡಬೇಕಿದ್ದಲ್ಲಿ ಕಲಂ 4(2) ರನ್ವಯ ಸರ್ಕಾರದಿಂದ ಪೂರ್ವಾನುಮತಿ ಪಡೆಯಬೇಕಾಗುತ್ತದೆ.
ಈ ಕಾಯ್ದೆ ಉಲ್ಲಂಘನೆ ಪ್ರಕರಣಗಳನ್ನು ಗ್ರಾಮ ಲೆಕ್ಕಾಧಿಕಾರಿಗಳು/ಕಂದಾಯ ನಿರೀಕ್ಷಕರು ಕಂಡು ಹಿಡಿಯಬೇಕಾಗುತ್ತದೆ. ಉಪವಿಭಾಗಾಧಿಕಾರಿಗಳು ಕಾಯ್ದೆ ಉಲ್ಲಂಘನೆ ಬಗ್ಗೆ ಪರಿಶೀಲಿಸಿ ಕಾಯ್ದೆ ಉಲ್ಲಂಘನೆಯಾಗಿದ್ದಲ್ಲಿ ಪರಭಾರೆಯಾದ ಜಮೀನನ್ನು ಮೂಲ ಮಂಜೂರಿದಾರರ ಸ್ವಾಧೀನತೆಗೆ ವಹಿಸಿ ಕೊಡಬೇಕಾಗುತ್ತದೆ.
ಈ ಕಾಯ್ದೆಗೆ ವ್ಯತಿರಿಕ್ತವಾಗಿ ಪರಭಾರೆಯಾದ ಜಮೀನುಗಳನ್ನು ಗುರುತಿಸುವ ಬಗ್ಗೆ –
ಗ್ರಾಮದಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದವರಿಗೆ ಮಂಜೂರಾದ ಜಮೀನಿನ ವಿವರಗಳನ್ನು ಗೇಣಿ ಮತ್ತು ಪಹಣಿ ಪತ್ರಿಕೆಗಳಿಂದ ಗುರುತಿಸುವುದು ಹಾಗೂ ಸ್ವಾಧೀನತೆ ಇದ್ದ /ಇರದ ಬಗ್ಗೆ ಮಾಹಿತಿ ಪಡೆಯುವುದು. ಸ್ಥಾನಿಕ ವಿಚಾರಣೆಯಿಂದ ಖಚಿತಪಡಿಸಿಕೊಳ್ಳುವುದು.
ಭೂಮಂಜೂರಿ ವಹಿಯ ಆಧಾರದ ಮೇಲೆ ಮಂಜೂರಿದಾರರ ವಿವರ ಪಡೆದು ಪರಿಶೀಲಿಸುವುದು.
ಸಾಗುವಳಿ ಚೀಟಿಗಳು/ಹಕ್ಕು ದಾಖಲಾತಿಗಳ ಆಧಾರದ ಮೇಲೆ ಮಂಜೂರಾತಿಯ ವಿವರಗಳನ್ನು ಪರಿಶೀಲಿಸುವುದು. ಉಲ್ಲಂಘನೆಯಾಗಿವೆ ಅಂತಾ ಕಂಡು ಬಂದಲ್ಲಿ ಅವುಗಳ ಬಗ್ಗೆ ವಿವರ ನೀಡಿ, ಸ್ಥಳ ಪರಿಶೀಲನಾ ವರದಿ, ಪಂಚನಾಮೆ (ಮಹಜರ), ಸಂಬಂಧಿಸಿದವರ ಹೇಳಿಕೆ ಪಡೆದು ಪ್ರಕರಣ ತಯಾರಿಸಿ ತಹಶೀಲದಾರರಿಗೆ ವರದಿ ಮಾಡುವುದು. ಪ್ರಕರಣ ತಯಾರಿಸುವಾಗ ಗೇಣಿ ಪತ್ರಿಕೆ/ಚಕಬಂದಿ ವಿವರ ಹಾಗೂ ನಕಾಶದ ಪ್ರತಿ ಅಥವಾ ಕೈ ನಕಾಶೆ ತೆಗೆದು ಪ್ರಕರಣ ಸಲ್ಲಿಸುವುದು. ಉಪವಿಭಾಗಾಧಿಕಾರಿಗಳು ಆದೇಶ ಮಾಡಿದಲ್ಲಿ ತಡೆಯಾಜ್ಞೆ ಇರದಿದ್ದಲ್ಲಿ ಮೂಲ ಮಂಜೂರಿದಾರರ ಸ್ವಾಧೀನತೆಗೆ ಕಬ್ಬೆ ವಹಿಸಿ ಕೊಡುವುದು ಹಾಗೂ ದಾಖಲೆ ಇಡುವುದು.
ಸಾಮಾನ್ಯವಾಗಿ ಭೂಮಂಜೂರಿಯಾಗಿ 5 ವರ್ಷಗಳಾಗಿದ್ದಲ್ಲಿ ಹಾಗೂ ಮಾರಾಟ ಮಾಡಿದ ಹಣದ ಶೇಕಡಾ 50 ರಷ್ಟನ್ನು ಸರ್ಕಾರಕ್ಕೆ ಭರಣಾ ಮಾಡಿದಲ್ಲಿ ಸರ್ಕಾರ ಮಾರಾಟ ಮಾಡಲು ಅನುಮತಿ ನೀಡಬಹುದಾಗಿದೆ. ಈ ಪ್ರಕಾರ ಪ್ರಸ್ತಾವನೆ ಸಲ್ಲಿಸುವಾಗ ಸಂಬಂಧಿಸಿದ ದಾಖಲೆಗಳು, ಕುಟುಂಬದ ಆರ್ಥಿಕ ಸಂಕಷ್ಟ, ಖರೀದಿಸುವ ವ್ಯಕ್ತಿಯ ವಿವರ, ಆತನ ಉದ್ದೇಶ, ಖರೀದಿ ಕ್ರಯ ಮುಂತಾದ ವಿವರಗಳನ್ನು ತಿಳಿದುಕೊಂಡು ವರದಿ ಮಾಡಬೇಕು.





ಜಮೀನು ಮಾರಾಟ ಮತ್ತು ವರ್ಗಾವಣೆ ನಿಯಮಗಳು
| ವಿವರ | ಪ್ರಮುಖ ಮಾಹಿತಿಗಳು |
|---|---|
| ಕಾಯ್ದೆ ಜಾರಿ ದಿನಾಂಕ | 01 ಜನವರಿ 1979 |
| ಮಾರಾಟಕ್ಕೆ ಕನಿಷ್ಠ ಸಾಗುವಳಿ ಅವಧಿ | ಸಾಮಾನ್ಯವಾಗಿ 15 ವರ್ಷಗಳು (ಕೆಲವು ಪ್ರಕರಣಗಳಲ್ಲಿ 5 ವರ್ಷ) |
| ಸರ್ಕಾರದ ಪಾಲು | ಮಾರಾಟದ ಮೊತ್ತದ 50% ಹಣವನ್ನು ಸರ್ಕಾರಕ್ಕೆ ಕಟ್ಟಬೇಕು |
| ಅಧಿಕಾರಿಯ ಅನುಮತಿ | ಕಲಂ 4(2) ರನ್ವಯ ಸರ್ಕಾರದ ಪೂರ್ವಾನುಮತಿ ಕಡ್ಡಾಯ |
ಮುಖ್ಯ ಸೂಚನೆ: ಸರ್ಕಾರಿ ಮಂಜೂರಾದ ಜಮೀನನ್ನು ಕೊಳ್ಳುವ ಮುನ್ನ ಅದು “PTCL” ವ್ಯಾಪ್ತಿಗೆ ಬರುತ್ತದೆಯೇ ಎಂದು ಲಾಯರ್ ಅಥವಾ ಕಂದಾಯ ಅಧಿಕಾರಿಗಳ ಬಳಿ ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ನಿಮ್ಮ ಹಣ ಮತ್ತು ಜಮೀನು ಎರಡೂ ಕೈತಪ್ಪಬಹುದು.
ನಮ್ಮ ಸಲಹೆ
ನಮ್ಮ ಸಲಹೆ: ನೀವು ಕೊಳ್ಳುತ್ತಿರುವ ಜಮೀನಿನ ಪಹಣಿಯ (RTC) 9ನೇ ಕಾಲಂ ಅಥವಾ 11ನೇ ಕಾಲಂನಲ್ಲಿ “ಸರ್ಕಾರಿ ಮಂಜೂರು” ಅಥವಾ “ಷರತ್ತುಬದ್ಧ ಮಂಜೂರಾತಿ” ಎಂದು ನಮೂದಾಗಿದ್ದರೆ ಅಂತಹ ಜಮೀನಿನ ಬಗ್ಗೆ ಎಚ್ಚರವಿರಲಿ. ಅರ್ಜಿ ಹಾಕುವ ಮೊದಲು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆಯೇ (Bank Seeding Status) ಎಂದು ಚೆಕ್ ಮಾಡಿಕೊಳ್ಳಿ, ಇದರಿಂದ ಮುಂದೆ ಜಮೀನಿನ ಪರಿಹಾರ ಅಥವಾ ಸೌಲಭ್ಯ ಪಡೆಯಲು ಸುಲಭವಾಗುತ್ತದೆ.
FAQs (ಸಾಮಾನ್ಯ ಪ್ರಶ್ನೆಗಳು)
ಪ್ರಶ್ನೆ 1: ನಾನು 20 ವರ್ಷಗಳ ಹಿಂದೆ ಎಸ್ಸಿ-ಎಸ್ಟಿ ಜಮೀನು ಕೊಂಡಿದ್ದೇನೆ, ಈಗ ಅದು ವಾಪಸ್ ಹೋಗುತ್ತದೆಯೇ? ಉತ್ತರ: ಹೌದು, ಒಂದು ವೇಳೆ ನೀವು ಜಮೀನು ಕೊಳ್ಳುವಾಗ ಸರ್ಕಾರದ ಪೂರ್ವಾನುಮತಿ ಪಡೆದಿಲ್ಲದಿದ್ದರೆ, ಎಷ್ಟು ವರ್ಷಗಳೇ ಆಗಿದ್ದರೂ ಮೂಲ ಮಾಲೀಕರು ಅಥವಾ ಅವರ ವಾರಸುದಾರರು ಎಸಿ ಕೋರ್ಟ್ನಲ್ಲಿ ದೂರು ನೀಡಿ ಜಮೀನನ್ನು ವಾಪಸ್ ಪಡೆಯುವ ಅವಕಾಶವಿದೆ.
ಪ್ರಶ್ನೆ 2: ಜಮೀನು ಮಾರಾಟ ಮಾಡಲು ಸರ್ಕಾರದ ಅನುಮತಿ ಪಡೆಯುವುದು ಹೇಗೆ?
ಉತ್ತರ: ನಿಮ್ಮ ಕುಟುಂಬದ ಆರ್ಥಿಕ ಸಂಕಷ್ಟ, ಮದುವೆ ಅಥವಾ ಅನಾರೋಗ್ಯದ ಕಾರಣಗಳನ್ನು ನೀಡಿ, ಸಂಬಂಧಪಟ್ಟ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಸರ್ಕಾರವು ಎಲ್ಲಾ ಆಯಾಮಗಳಿಂದ ಪರಿಶೀಲಿಸಿ ಅನುಮತಿ ನೀಡಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಶಿವರಾಜ್ ಅವರು NeedsOfPublic.in ನಲ್ಲಿ ಸಾರ್ವಜನಿಕ, ಶೈಕ್ಷಣಿಕ ಮತ್ತು ಸ್ಥಳೀಯ ಸುದ್ದಿಗಳ ವಿಭಾಗದ ಹಿರಿಯ ಸಂಪಾದಕರಾಗಿದ್ದಾರೆ (Senior Editor). ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದರೂ, ಮಾಧ್ಯಮ ಕ್ಷೇತ್ರದ ಮೇಲಿರುವ ಅತೀವ ಆಸಕ್ತಿಯಿಂದಾಗಿ 2019 ರಲ್ಲಿ ಡಿಜಿಟಲ್ ಜಗತ್ತಿಗೆ ಕಾಲಿಟ್ಟರು. ಇವರು ಆರಂಭಿಸಿದ “Suddi No.1 Kannada” ಯೂಟ್ಯೂಬ್ ಚಾನೆಲ್ ಪ್ರಸ್ತುತ 300K ಗೂ ಹೆಚ್ಚು ಸಬ್ಸ್ಕ್ರೈಬರ್ಗಳನ್ನು ಹೊಂದುವ ಮೂಲಕ ಜನಪ್ರಿಯವಾಗಿದೆ. ಡಿಜಿಟಲ್ ಮಾಧ್ಯಮದಲ್ಲಿ ಉತ್ತಮ ಅನುಭವ ಹೊಂದಿರುವ ಇವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಕೀರ್ಣ ಯೋಜನೆಗಳನ್ನು ಹಾಗೂ ವಿದ್ಯಾರ್ಥಿವೇತನಗಳನ್ನು (Scholarships) ಸರಳವಾಗಿ ವಿಶ್ಲೇಷಿಸಿ, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತಲುಪಿಸುವಲ್ಲಿ ಎಕ್ಸ್ಪರ್ಟ್ ಆಗಿದ್ದಾರೆ. ಇದರ ಜೊತೆಗೆ ಪ್ರಮುಖ ಶೈಕ್ಷಣಿಕ ಅಪ್ಡೇಟ್ಗಳು ಮತ್ತು ನಿಖರ ಮಾಹಿತಿ ನೀಡುವ ವಿಡಿಯೋ ಕಂಟೆಂಟ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು ಇವರ ಬರವಣಿಗೆಯ ವಿಶಿಷ್ಟ ಶೈಲಿಯಾಗಿದೆ.


WhatsApp Group




Leave a Reply