ತಂತ್ರಜ್ಞಾನದಿಂದ ಬೆಳೆಗಳಿಗೆ ಜೀವ: ರೈತರಿಗೆ ಸಹಾಯ ನೀಡುತ್ತಿರುವ ‘ವಾಟರ್ ಡಿಟೆಕ್ಟರ್’ ಆಪ್
ಭಾರತದ ಕೃಷಿ ವ್ಯವಸ್ಥೆಯ (Agriculture system) ಭವಿಷ್ಯ ನೀರಿನ ಲಭ್ಯತೆಯ ಮೇಲೆ ನಿರ್ಧಾರವಾಗುತ್ತಿದೆ. ಇಂದಿನ ದಿನಗಳಲ್ಲಿ ಮುಂಗಾರು ಅವಲಂಬಿತ ಕೃಷಿ ಕ್ರಮೇಣ ನಾಶವಾಗುತ್ತಿದ್ದು, ಬದಲಿಗೆ ನೀರಾವರಿ ಆಧಾರಿತ ಕೃಷಿಯು ಮುಖ್ಯಸ್ಥಾನ ಪಡೆದಿದೆ. ಇದರಲ್ಲಿ ಮುಖ್ಯ ಪಾತ್ರವಹಿಸುತ್ತಿರುವುದು ಬೋರ್ ವೆಲ್ಗಳು(Borewel). ಆದರೆ ಬೋರ್ ವೆಲ್ ಕೊರೆಸುವುದು ಸುಲಭವಲ್ಲ. ಸಾವಿರಾರು ರೂಪಾಯಿ ವೆಚ್ಚ ಮಾಡುವುದರ ಜೊತೆಗೆ, ನೀರು ದೊರಕದೆ ಹೋದರೆ ಭಾರಿ ನಷ್ಟವಾಗಬಹುದು. ಈ ಸಮಸ್ಯೆಗೆ ಪರಿಹಾರವಾಗಿ ನವೀನ ತಂತ್ರಜ್ಞಾನ ಬಂದಿರುವುದು ರೈತರಿಗೆ ಆಶಾಕಿರಣವಾಗಿದೆ. ಹಾಗಿದ್ದರೆ ಆ ನವೀನ ತಂತ್ರಜ್ಞಾನ (New technology) ಯಾವುದು? ಅದು ಹೇಗೆ ಉಪಯೋಗಕ್ಕೆ ಬರುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಇಂದಿನ ದೈನಂದಿನ ಕೃಷಿಕ ಜೀವನದಲ್ಲಿ ತಂತ್ರಜ್ಞಾನ ಅತಿ ಮಹತ್ವದ ಪಾತ್ರವಹಿಸುತ್ತಿದ್ದು, ರೈತರ ಸಂಕಷ್ಟಗಳಿಗೆ ತಕ್ಷಣದ ಪರಿಹಾರ ಒದಗಿಸುತ್ತಿದೆ. ಈ ಹಿನ್ನೆಲೆಯಲ್ಲಿ, ‘ವಾಟರ್ ಡಿಟೆಕ್ಟರ್’ (Water dectater) ಎಂಬ ನೂತನ ಆಪ್ ಪರಿಚಯವಾಗಿದ್ದು, ಇದು ರೈತರ ಜಮೀನಿನಲ್ಲಿ ನೀರಿನ ಪಾಯಿಂಟ್ (ಪೊಟೆನ್ಷಿಯಲ್ ವಾಟರ್ ಲೊಕೇಶನ್) ಎಲ್ಲಿ ಇದೆ ಎಂಬುದನ್ನು ಗುರುತಿಸಲು ಸಹಾಯ ಮಾಡುತ್ತದೆ.
ಈ ಆಪ್ ಹೇಗೆ ಕಾರ್ಯನಿರ್ವಹಿಸುತ್ತದೆ?:
ವಾಟರ್ ಡಿಟೆಕ್ಟರ್’ ಆಪ್ (Water dectater app) ಒಂದು ಭೂಮಿಯ ಉಪಗ್ರಹ ಆಧಾರಿತ ಮಾಹಿತಿ ಮತ್ತು ಭೌಗೋಳಿಕ ಮಾದರಿಗಳನ್ನು ಬಳಸುತ್ತದೆ. ಈ ಆಪ್ ಮೂಲಕ, ರೈತರು ತಮ್ಮ ಜಮೀನಿನ ನಿರ್ದಿಷ್ಟ ಸ್ಥಳವನ್ನು ನಕ್ಷೆ ಮೇಲೆ ಗುರುತಿಸಿ, ಆ ಪ್ರದೇಶದಲ್ಲಿ ಭೂಗರ್ಭ ಜಲದ ಲಭ್ಯತೆ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಆಪ್ ನಲ್ಲಿ ಲಭ್ಯವಿರುವ ತಂತ್ರಜ್ಞಾನ ಭೂಮಿಯ ಉಷ್ಣತಾಪಮಾನ, ಮಣ್ಣು ಒತ್ತಡ, ಭೂಪಾತಳ ಮಾಹಿತಿ ಮುಂತಾದ ಅಂಶಗಳನ್ನು ವಿಶ್ಲೇಷಿಸಿ ನೀರಿನ ಲಭ್ಯತೆ ಇರುವ ಸಾಧ್ಯತೆಯ ಸ್ಥಳಗಳನ್ನು ಸೂಚಿಸುತ್ತದೆ.
ಯಾಕೆ ಈ ಆಪ್ ಬಳಸಬೇಕು?:
ಎಲ್ಲಿ ಬೋರ್ ಕೊರೆಸಬೇಕೆಂದು ನಿರ್ಧರಿಸುವಲ್ಲಿ ಈ ಆಪ್ ಸಹಾಯಮಾಡುತ್ತದೆ, ಅವೈಜ್ಞಾನಿಕ ಪ್ರಯೋಗಗಳಿಂದ (From an experiment) ತಪ್ಪಿಸಿಕೊಳ್ಳಬಹುದು.
ಭೂ ವಿಜ್ಞಾನಿಗಳ ನೆರವಿನ ಅಗತ್ಯವಿಲ್ಲದೇ, ತಂತ್ರಜ್ಞಾನ ಆಧಾರಿತ ವಿಶ್ಲೇಷಣೆಯ ಮೂಲಕ ನಿರ್ಧಾರ ತೆಗೆದುಕೊಳ್ಳಬಹುದು.
ಹಲವಾರು ನೀರಿನ ಪಾಯಿಂಟ್ಗಳನ್ನು(Water point) ತೋರಿಸುವ ಮೂಲಕ ರೈತರು ಉತ್ತಮವಾದ ಸ್ಥಳವನ್ನು ಆಯ್ಕೆಮಾಡಲು ಅವಕಾಶ ನೀಡುತ್ತದೆ.
ಇನ್ನು, ಈ ಆಪ್ ಸರ್ಕಾರದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲ್ಪಟ್ಟಿದ್ದು, ಕೃಷಿಕರಿಗೆ ಮುಕ್ತವಾಗಿ ಲಭ್ಯವಿದೆ. ಕೃಷಿ ಇಲಾಖೆಯೊಂದಿಗೆ (Agriculture Department) ಒಡನಾಡಿಯಾಗಿ ಈ ಆಪ್ ವಿವಿಧ ರಾಜ್ಯಗಳಲ್ಲಿ ರೈತರಿಗೆ ಪರಿಚಿತವಾಗುತ್ತಿದೆ. ನೀರಿನ ಕೊರತೆಯಿಂದ ಬೆಳೆ ನಾಶವಾಗದಂತೆ ತಡೆಗಟ್ಟಲು ಇದು ಉತ್ತಮ ಉಪಾಯವಾಗಿದೆ.
ನೀರಿಲ್ಲದೆ ಕೃಷಿ ಅಸಾಧ್ಯ. ಆದರೆ ನೀರಿಲ್ಲದ ಸ್ಥಳದಲ್ಲಿ ಬೋರ್ ಕೊರೆಸುವುದು ಹೆಚ್ಚು ನಷ್ಟಕಾರಕ. ಈ ಹಿನ್ನೆಲೆಯಲ್ಲಿ, ವಾಟರ್ ಡಿಟೆಕ್ಟರ್ ಆಪ್ (Water Dectater app) ರೈತರಿಗಾಗಿ ತಂತ್ರಜ್ಞಾನ ಬಳಸಬಹುದಾದ ಉಪಯುಕ್ತ ಸಾಧನವಾಗಿದೆ. ರೈತರು ಇದನ್ನು ಬಳಸಿಕೊಂಡು ವಿಜ್ಞಾನಬದ್ಧವಾಗಿ ತಮ್ಮ ಜಮೀನಿನಲ್ಲಿ ನೀರಿನ ಲಭ್ಯತೆಯಿರುವ ಸ್ಥಳಗಳನ್ನು ಗುರುತಿಸಿ ಬೋರ್ ವೆಲ್ಗಳನ್ನು ಕೊರೆಸಬಹುದಾದ ಸ್ಥಳವನ್ನು ಆಯ್ಕೆಮಾಡಿಕೊಳ್ಳಬಹುದು. ಇದು ಖಂಡಿತವಾಗಿಯೂ ಮುಂದಿನ ಪೀಳಿಗೆಗೆ ಕೃಷಿ ಸುಸ್ಥಿರವಾಗಿಸಲು ಸಹಾಯಕವಾಗಲಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




