ಬೇಸಿಗೆಯ ಈ ಸೆಕೆಯ ಸಂಕಟದಲ್ಲಿ ಇನ್ನೊಂದು ಸಂಕಟ ಉಂಟಾಗಿದೆ. ಅದೇನೆಂದರೆ, ತರಕಾರಿ ಹಾಗೂ ಸೊಪ್ಪಿನ ಬೆಲೆ ಏರಿಕೆ(vegetables price hike)ಯಾಗುತ್ತಿದೆ. ಪೂರೈಕೆ ಕೊರತೆ ಮತ್ತು ತರಕಾರಿಗಳ ಗುಣಮಟ್ಟದಲ್ಲಿನ ತ್ವರಿತ ಕ್ಷೀಣತೆಯೂ ಕಂಡುಬರುತ್ತಿದೆ. ಸಗಟು ಮಾರುಕಟ್ಟೆಗಳಲ್ಲಿ ಬೆಲೆ ಸ್ವಲ್ಪ ಏರಿಕೆ ಕಂಡಿದ್ದರೆ, ಚಿಲ್ಲರೆ ಅಂಗಡಿಗಳಲ್ಲಿ ಬೆಲೆಗಳು ದುಪ್ಪಟ್ಟಾಗಿದೆ. ಈ ಬೆಲೆ ಏರಿಕೆಯ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ವರದಿಯ ಮೂಲಕ ತಿಳಿಸಿಕೊಡಲಾಗಿದೆ, ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಬಿಸಿಲಿನ ತಾಪದಿಂದ ಏರಿಕೆಯಾದ ತರಕಾರಿ ಬೆಲೆ :
ಏರುತ್ತಿರುವ ತಾಪಮಾನ ಮತ್ತು ಕಳಪೆ ಮಳೆಯಿಂದಾಗಿ ತರಕಾರಿ ಬೆಲೆಯಲ್ಲಿ ತೀವ್ರ ಏರಿಕೆಯಾಗಿದೆ. ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಮದುವೆ ಹಾಗೂ ಜಾತ್ರೆಯ ಸಮಾರಂಭ(functions)ಗಳು ಹೆಚ್ಚಾಗಿರುವುದರ ಕಾರಣ ಸಮಾರಂಭಗಳಿಗೆ ತರಕಾರಿ ಹಾಗೂ ಸೊಪ್ಪಿನ ಪೂರೈಕೆಗಳನ್ನು ಮಾಡುವುದು ಕಷ್ಟವಾಗುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಹಲವಾರು ತರಕಾರಿಗಳು ಮತ್ತು ಸೊಪ್ಪಿನ ಬೆಲೆಗಳು ಸುಮಾರು ಎರಡು ಪಟ್ಟು ಹೆಚ್ಚಾಗಿದೆ. ಈಗ ಒಂದು ಕಿಲೋ ಬೀನ್ಸ್ ಅಥವಾ ಕ್ಯಾರೆಟ್ 100 ರೂಪಾಯಿ ದಾಟಿದೆ.
ಕಳೆದ ವಾರದಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆಯಾಗಿದ್ದರೂ, ತಾಪಮಾನ ಹೆಚ್ಚಿದೆ. ಬಿಸಿಲ ತಾಪಕ್ಕೆ ತರಕಾರಿ ಗಿಡಗಳಲ್ಲಿ ಹೂಗಳು ಬಾಡಿ ಹೋಗಿದ್ದು, ಇಳುವರಿ ಕಡಿಮೆಯಾಗಿ ಬೆಲೆ ಏರಿಕೆಯಾಗಿದೆ.
ಯಾವಾಗ ತರಕಾರಿ ಬೆಲೆ ಕಡಿಮೆ ಆಗುತ್ತೆ :
ನೆಲದಿಂದ ಸಾಕಷ್ಟು ಶಾಖ ಹೊರಹೊಮ್ಮುವುದರಿಂದ ಮತ್ತು ಮಳೆಯಿಲ್ಲದ ಕಾರಣ, ರೈತರು ಇಳುವರಿಯನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ಇದರಿಂದಾಗಿ ಮಾರುಕಟ್ಟೆಯಲ್ಲಿ ಪೂರೈಕೆಯ ಕೊರತೆಯಿದೆ. ಇನ್ನೆರಡು ತಿಂಗಳಲ್ಲಿ ಉತ್ತಮ ಮಳೆಯಾಗುವವರೆಗೆ ಬೆಲೆ ಹೆಚ್ಚಲಿದೆ ಎಂದು ಬೆಂಗಳೂರಿನ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಹೇಳುತ್ತಿದ್ದಾರೆ.
ಕಲಾಸಿಪಾಳ್ಯ ಮಾರುಕಟ್ಟೆ, ಕೆಆರ್ ಮಾರುಕಟ್ಟೆಯಂತಹ ಸಗಟು ಮಾರುಕಟ್ಟೆಗಳಲ್ಲಿ ಬೀನ್ಸ್ ಬೆಲೆ ಕೆ.ಜಿ.ಗೆ ₹ 50ರಿಂದ ₹ 60 ಇದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ₹ 80ರಿಂದ ₹ 120 ಇದೆ. ಹಾಪ್ಕಾಮ್ಸ್ನಲ್ಲಿಯೂ ಶುಕ್ರವಾರ ಕೆಜಿಗೆ ₹80 ಇತ್ತು. ಅದೇ ರೀತಿ ಸಗಟು ಮಾರುಕಟ್ಟೆಯಲ್ಲಿ ಕ್ಯಾರೆಟ್ಗೆ ಕೆಜಿಗೆ ₹40ರಿಂದ ₹50 ಇದ್ದು, ಚಿಲ್ಲರೆ ಅಂಗಡಿಗಳಲ್ಲಿ ₹60ರಿಂದ ₹80ಕ್ಕೆ ಮಾರಾಟವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲೂ ಊಟಿ ಕ್ಯಾರೆಟ್ ಬೆಲೆ ₹100ರ ಗಡಿ ದಾಟಿದೆ.
ಸೊಪ್ಪಿ ನ ಖರೀದಿಗೂ ಬಂತು ಆಪತ್ತು:
ಶಾಖದ ಹಾನಿಯಿಂದಾಗಿ, ಹಸಿರು ಎಲೆಗಳ ತರಕಾರಿಗಳ ಲಭ್ಯತೆಯೂ ಮಾರುಕಟ್ಟೆಗಳಲ್ಲಿ ಕಡಿಮೆಯಾಗಿದೆ. ನಗರದ ಹೊರವಲಯದಲ್ಲಿ ದಿನನಿತ್ಯದ ಅಗತ್ಯ ವಸ್ತುಗಳಾದ ತಾಜಾ ಕೊತ್ತಂಬರಿ ಸೊಪ್ಪು, ಪುದೀನಾ ಸಿಗುವುದು ಕೂಡ ಸಮಸ್ಯೆಯಾಗಿ ಪರಿಣಮಿಸಿದೆ. ಒಂದು ಕಟ್ಟು ಸೊಪ್ಪಿನ ಬೆಲೆ ಮೊದಲಿಗಿಂತ ಐದು ರೂಪಾಯಿಗಳ ಹೆಚ್ಚುವರಿಯನ್ನು ಕಂಡಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




