ಹಿಂದೂ ಸಂಸ್ಕೃತಿಯಲ್ಲಿ ಶ್ರಾವಣ ಮಾಸವು ದೇವಿ ಆರಾಧನೆಯ ಮಹತ್ವಪೂರ್ಣ ಕಾಲಘಟ್ಟ. ಈ ಮಾಸದ ಮೂರನೇ ಶುಕ್ರವಾರ ಇರುವ ವರಮಹಾಲಕ್ಷ್ಮೀ ಹಬ್ಬ ಮಹಿಳೆಯರ ಆಧ್ಯಾತ್ಮಿಕ ಶ್ರದ್ಧೆಗೆ ಪ್ರತಿಬಿಂಬ. ದೇವಿಯ ಕೃಪೆಗಾಗಿ ಲಕ್ಷಾಂತರ ಮಹಿಳೆಯರು ಕುಂಕುಮ ಅರ್ಪಿಸಿ, ಕಳಶ ಪೂಜಿಸಿ, ಲಕ್ಷ್ಮೀ ದೇವಿಯ ಸ್ಮರಣೆ ಮಾಡುತ್ತಾರೆ. ಆದರೆ, ಈ ಹಬ್ಬ ಆಧ್ಯಾತ್ಮಿಕ ಪಥವಲ್ಲದೇ ಸಾಮಾಜಿಕ ಆಡಂಬರದ ಹಾದಿ ಹಿಡಿದಿರುವುದರ ಬಗ್ಗೆ ಇತ್ತೀಚೆಗೆ ಪರಮಪೂಜ್ಯ ವಿದ್ಯಾಶಂಕರ ಸರಸ್ವತಿ ಮಹಾಸ್ವಾಮೀಜಿ(Vidyashankar Saraswati Mahaswamiji) ಅವರು ಗಂಭೀರ ಎಚ್ಚರಿಕೆ ನೀಡಿದ್ದಾರೆ. ಹಾಗಿದ್ದರೆ ಪೂಜೆ ಕುರಿತು ಯಾವೆಲ್ಲ ಮಾಹಿತಿಗಳ್ಳನ್ನು ತಿಳಿಸಿದ್ದಾರೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, 2025ರ ವರಮಹಾಲಕ್ಷ್ಮೀ ವ್ರತವು ಆಗಸ್ಟ್ 8(August 8), ಶುಕ್ರವಾರ ದಿನ ಬರುತ್ತಿದ್ದು, ಇದು ಶ್ರಾವಣ ಮಾಸದ ಮೂರನೇ ಶುಕ್ರವಾರ. ಈ ದಿನ ಲಕ್ಷ್ಮೀ ದೇವಿಯನ್ನು ಮನೆಯಲ್ಲಿ ಆಚರಿಸುವ ಮಹಿಳೆಯರು ಶ್ರದ್ಧೆಯಿಂದ ತಯಾರಿ ಮಾಡಿಕೊಳ್ಳುತ್ತಾರೆ. ಆದರೆ ಪೂಜೆಯ ರೂಪ ಈಗ ಆಟದಂತಾಗಿ, ಆಡಂಬರದ ತಂತ್ರವಾಗಿ ಪರಿವರ್ತನೆಯಾಗುತ್ತಿರುವುದರ ಕುರಿತು ಶ್ರೀಮಹಾಸ್ವಾಮೀಜಿ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.
ವ್ರತವೋ? ಹಬ್ಬವೋ? ಲಕ್ಷ್ಮೀಪೂಜೆಯ ಮೂಲ ಉದ್ದೇಶವೇನು?:
“ಈಗ ವರಮಹಾಲಕ್ಷ್ಮೀ ವ್ರತವಲ್ಲ, ಹಬ್ಬವಾಗಿದೆ. ಧರ್ಮ, ಜಾತಿ ತಾರತಮ್ಯವಿಲ್ಲದೇ ಎಲ್ಲರೂ ಈ ಹಬ್ಬ ಆಚರಿಸಬಹುದು. ಆದರೆ ಭಕ್ತಿಯಲ್ಲಿ ಎಡವಟ್ಟಾದರೆ, ವರದ ಬದಲು ಜೀವನವೇ ಬೀದಿಗೆ ಬರಲಿದೆ ಎಂಬ ಎಚ್ಚರಿಕೆಯನ್ನ ನೀಡಿದ್ದಾರೆ.
ಪೂಜೆಯಲ್ಲಿ ತಪ್ಪಾದ ಕ್ರಮಗಳು – ಎಚ್ಚರಿಕೆ ಬೇಕು!:
ಸ್ವಾಮೀಜಿಯವರ ಪ್ರಕಾರ, ಇಂದಿನ ಪೂಜೆಯಲ್ಲಿ ಈ ಕೆಳಗಿನ ತಪ್ಪುಗಳು ಸಾಮಾನ್ಯವಾಗಿವೆ:
ಬಾಡಿಗೆ ಆಭರಣ ತಂದು ದೇವಿಗೆ ಅಲಂಕಾರ ಮಾಡುವುದು.
ಅತಿಯಾದ ಸಿಂಗಾರ – ಮುಖವನ್ನೂ ವಿಚಿತ್ರವಾಗಿ ಸಿಂಗರಿಸುವುದು, ಗಡಿಯಾರದಂತೆ ಸಿಂಗರಿಸಿ ದೇವಿಯನ್ನು ಆಕರ್ಷಿಸಲು ಯತ್ನಿಸುವುದು.
ಕಂತೆಕಂತೆ ನೋಟುಗಳು – ಲಕ್ಷ್ಮೀ ದೇವಿಗೆ ಹಣ ತುಂಬಿದ ಡಬ್ಬ ಇಡುವುದು, ಇವೆಲ್ಲ ದೃಷ್ಟಿಯಗಲು ಕಾರಣವಾಗಬಹುದು.
ಅಜ್ಞಾನದ ಆಧಾರಿತ ನಂಬಿಕೆಗಳು – ದೇವಿ ಕೂರಿಸಿ, ಅವಳಿಗೆ ಕೈ ಕೂರಿಸಬೇಕು, ಇಲ್ಲದಿದ್ದರೆ ದೇವಿ ಮನೆ ಬಿಡ್ತಾಳೆ ಎಂಬ ಅಂಧನಂಬಿಕೆ.
“ಲಕ್ಷ್ಮೀ ದೇವಿಗೆ ನೋಟು ಇಡೋದು ಪುಣ್ಯವಲ್ಲ. ದೇವಿಯನ್ನು ಮನಸ್ಸಿನಿಂದ ಪ್ರೀತಿಸಬೇಕು, ಹಣದಿಂದ ಅಲ್ಲ,” ಎಂದು ಹೇಳಿದ್ದಾರೆ.
ಪೂಜೆಯ ಶ್ರೇಷ್ಠ ಸಮಯ ಯಾವುದು?:
ಸ್ವಾಮೀಜಿಯವರ ಮಾರ್ಗದರ್ಶನದಂತೆ, ಪೂಜೆಯ ಸಮಯವೂ ಅತ್ಯಂತ ಪ್ರಮುಖವಾಗಿದೆ:
ಸಂಜೆಯ ಗೋಧೂಳಿ ಸಮಯ- ಸೂರ್ಯಾಸ್ತದ ಮುನ್ನ ಅಥವಾ ಸಮಯದಲ್ಲಿ ಪೂಜೆ ಮಾಡುವುದು.
ಬೆಳಗಿನ ತಡರಾತ್ರಿ ಪೂಜೆ ತಪ್ಪು – ಮುಂಜಾನೆ 3 ಗಂಟೆಗೆ ಪೂಜೆ ಮಾಡುವುದು ಅರ್ಥಹೀನವಾಗಿದೆ.
ಪರಿಷ್ಕೃತ ಉಪವಾಸ – ಶುದ್ಧ ಮನಸ್ಸಿನಿಂದ ಉಪವಾಸದಿಂದ ಹಬ್ಬ ಆಚರಿಸಬೇಕು.
ಪೂಜೆಯ ಸಮಯ ಏನು ಮಾಡಬೇಕು?:
“ಕಳಶ ಪೂಜೆ ಮೂಲ,” ಎಂದು ಶ್ರೀಮಹಾಸ್ವಾಮೀಜಿ ಸೂಚಿಸುತ್ತಾರೆ. ತಾಮ್ರದ ಕೊಡದಲ್ಲಿ ಕಳಶ ಇಟ್ಟು, ಸಾತ್ವಿಕ ಮನೋಭಾವದಿಂದ ದೇವಿಯನ್ನು ಆಹ್ವಾನಿಸಬೇಕು.
ಬೆಳ್ಳಿ-ಬಂಗಾರದ ಆಕೃತಿಯಲ್ಲ, ಆಸ್ತಿಕ ನಂಬಿಕೆ, ಭಕ್ತಿಯ ಪ್ರಾರ್ಥನೆ ಮುಖ್ಯ.
“ಅಮ್ಮಾ ಮಹಾಲಕ್ಷ್ಮೀ, ನನ್ನ ಕಷ್ಟ ಪರಿಹಾರ ಮಾಡು” ಎಂಬ ಸಾತ್ವಿಕ ಬುದ್ಧಿಯಿಂದ ದೇವಿಯನ್ನು ಮೆಚ್ಚಿಸಬಹುದು.
ಒಟ್ಟಾರೆಯಾಗಿ, ವರಮಹಾಲಕ್ಷ್ಮೀ ಪೂಜೆ ಕೇವಲ ಆಚರಣೆಯಲ್ಲ, ಅದು ಆತ್ಮೀಯತೆ, ನೈತಿಕ ಶುದ್ಧತೆ ಮತ್ತು ಧರ್ಮಾಚರಣೆಯ ಸಂಕೇತ. ಆದ್ದರಿಂದ ಈ ಹಬ್ಬದಲ್ಲಿ ಪ್ರದರ್ಶನವಲ್ಲ, ಪರಿಶುದ್ಧ ಪ್ರಾರ್ಥನೆ ಮುಖ್ಯ. ಪರಮಪೂಜ್ಯ ವಿದ್ಯಾಶಂಕರ ಸರಸ್ವತಿ ಮಹಾಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಇಡೀ ಸಮಾಜ ದಾರಿತಪ್ಪದ ಹಾದಿಯಲ್ಲಿ ನಡೆಯಲಿ ಎಂಬುದು ಸಂದೇಶವಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.